ಪಾಂಡುರಂಗ ಮೂರ್ತಿ ಪ್ರತಿಷ್ಠಾಪನೆ
Team Udayavani, May 12, 2019, 1:26 PM IST
ಲೋಕಾಪುರ: ಪಾಂಡುರಂಗ ಹಾಗೂ ರುಕ್ಮಾಯಿದೇವರ ನೂತನ ಮೂರ್ತಿಗಳ ಪುರಪ್ರವೇಶ ಹಾಗೂ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಿತು.
ಎಪಿಎಂಸಿಯಿಂದ ಆರಂಭಗೊಂಡ ಮೆರವಣಿಗೆಗೆ ಜ್ಞಾನೇಶ್ವರ ಮಠದ ಪೀಠಾಧಿಕಾರಿ ಶ್ರೀ ಬ್ರಹ್ಮಾನಂದ ಸ್ವಾಮೀಜಿ ಚಾಲನೆ ನೀಡಿದರು.
ಭಕ್ತರು ದೀವಟಿಗೆ ಹಾಗೂ ಮಹಿಳೆಯರ ಪೂರ್ಣಕುಂಭ ಕಲಶಗಳೊಂದಿಗೆ ಪಾಲ್ಗೊಂಡು ಸೇವೆ ಸಲ್ಲಿಸಿದರು. ಪಲ್ಲಕ್ಕಿಯೊಂದಿಗೆ ವಿವಿಧ ತಾಳ ಮೇಳಗಳೊಂದಿಗೆ ಸಾಗಿ ಬಂದರು. ಮೃತ್ಯುಂಜಯ ಹೋಮ, ಪ್ರತಿಷ್ಠಾಪನಾ ಹೋಮ ಹಾಗೂ ವಾಸ್ತುಶಾಂತಿ ಹೋಮ ಸೇರಿದಂತೆ ನಾನಾ ಆವಾಸಗಳ ಮೂಲಕ ಮೂರ್ತಿ ಪೂಜೆ ನೆರವೇರಿಸಲಾಯಿತು. ಹೊಳಬಸು ಹೂಗಾರ, ವೆಂಕಣ್ಣ ಕಲಬಸಪ್ಪಗೋಳ, ನಾಗಪ್ಪಗುರಾಣಿ, ಸಿದ್ದಪ್ಪ ರಾಮದುರ್ಗ, ಅಣ್ಣಪ್ಪ ಒಂಟಗೋಡಿ, ತುಕಾರಾಮ ಹೂಗಾರ, ಹೊಳಬಸು ಬಡಿಗೇರ, ಮೋಹನ ಶಿಂಧೆ, ಶಿವಪ್ಪ ಭಟ್ಟಂಗಿ, ಹಣಮಂತ ಕಲಬಸಪ್ಪಗೋಳ, ವೆಂಕಣ್ಣ ಹೂಗಾರ, ವಿಠuಲ ಗಸ್ತಿ, ಲಕ್ಷ್ಮಣ ಹೂಗಾರ, ಲೋಕಾಪುರ, ಲಕ್ಷಾನಟ್ಟಿ, ಅರಳಿಕಟ್ಟಿ, ಠಾಣಿಕೇರಿ, ನಾಗಣಾಪುರ, ಜಾಲಿಕಟ್ಟಿ, ವೆಂಕಟಾಪುರ ಸಂತರು ಇದ್ದರು.