ಕುಳಗೇರಿ ಕ್ರಾಸ್ : ಧಾರಾಕಾರ ಮಳೆ; ಮನೆ ಕುಸಿತದಿಂದ ಭೀತಿಯಲ್ಲಿ ಜನ ಜೀವನ
Team Udayavani, Jul 12, 2022, 8:07 PM IST
ಕುಳಗೇರಿ ಕ್ರಾಸ್ (ಬಾಗಲಕೋಟೆ) : ಹಗಲು-ರಾತ್ರಿ ಎನ್ನದೆ ಸತತ ಸುರಿಯುತ್ತಿರುವ ಜಿಟಿ ಜಿಟಿ ಮಳೆಗೆ ಗ್ರಾಮೀಣ ಭಾಗದ ಜನತೆಯಲ್ಲಿ ಭಯ ಶುರುವಾಗಿದೆ. ಮಳೆಯಿಂದ ಹೊರಗೆ ಬಾರದ ಪರಿಸ್ಥಿತಿ ನಿರ್ಮಾಣವಾಗಿದೆ. ಇತ್ತ ಗ್ರಾಮಗಳಲ್ಲಿನ ಮಣ್ಣಿನ ಮನೆಗಳು ಕುಸಿಯುತ್ತಿರುವ ಪರಿಣಾಮ ಆತಂಕದಲ್ಲಿ ಜನರು ತಮ್ಮ ನಿತ್ಯ ಜೀವನ ದೂಡುತ್ತಿದ್ದಾರೆ.
ಚಿಮ್ಮನಕಟ್ಟಿ ಗ್ರಾಮದ ಲಾಲಸಾಬ ಡಂಗಿ, ದ್ಯಾಮನಗೌಡ ಪಾಟೀಲ ಎಂಬುವರ ಎರೆಡು ಮಣ್ಣಿನ ಮನೆಗಳ ಮೇಲ್ಛಾವಣಿಯು ಮದ್ಯಭಾಗದಲ್ಲೇ ಕುಸಿದಿದ್ದರ ಪರಿಣಾಮ ಬಾರಿ ತೊಂದರೆ ಜೊತೆಗೆ ನಷ್ಟ ಉಂಟಾಗಿದೆ. ಇನ್ನು ನರಸಾಪೂರ ಗ್ರಾಮದಲ್ಲೂ ಎರಡು ಮನೆಗಳು, ಮುಷ್ಟಿಗೇರಿ ಗ್ರಾಮದಲ್ಲಿ ಎರೆಡು ಮನೆಗಳು, ಮತ್ತಲಗೇರಿ ಗ್ರಾಮದಲ್ಲಿ ಒಂದು ಮನೆ ಬಿದ್ದ ವರದಿಯಾಗಿದೆ.
ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಹಳ್ಳಿಗಳಲ್ಲಿನ ಕಲ್ಲು-ಮಣ್ಣಿನ ಮಣೆಗಳ ಮೇಲ್ಚಾವಣಿ ಮತ್ತು ಗೋಡೆ ಕುಸಿಯುವುದು ಮುಂದುವರೆದಿದೆ. ಮನೆಗಳ ಕುಸಿತದಿಂದಾಗಿ ಕೆಲವರಿಗೆ ಆಶ್ರಯ ಇಲ್ಲದಂತಾಗಿದೆ. ಈ ವರೆಗೂ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಸ್ಥಳಕ್ಕೆ ಕಂದಾಯ ನಿರೀಕ್ಷಕ ಎ ಡಿ ಸಾರವಾಡ ಸೇರಿದಂತೆ ಗ್ರಾಮಲೆಕ್ಕಾಧಿಕಾರಿಗಳಾದ ಎಸ್ ಜೆ ದ್ಯಾಪೂರ, ಜಿ ಎಸ್ ಹಂಪಿಹೊಳಿ, ಲಕ್ಷ್ಮಣ ತಳವಾರ, ಹನಮಂತ ಮಡಿವಾಳ, ಸರಳಾ ಸೊಪ್ಪಿನ ಸೇರಿದಂತೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ
Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!
LS Polls: ರಾಷ್ಟ್ರ ಪ್ರೇಮ ಬಿಜೆಪಿಯವರಿಂದ ಕಲಿಯಬೇಕಾಗಿಲ್ಲ: ಮಂಜುನಾಥ್ ಭಂಡಾರಿ
Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ
Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು