ಮಹಾಲಿಂಗಪುರ: ವಿವಿಧೆಡೆ ಸಂಭ್ರಮ ಗಣರಾಜ್ಯೋತ್ಸವ
Team Udayavani, Jan 27, 2019, 5:00 AM IST
ಮಹಾಲಿಂಗಪುರ: ಪಟ್ಟಣದ ಹಲವೆಡೆ ಸಂಭ್ರಮ ಸಡಗರದಿಂದ ಗಣರಾಜ್ಯೋತ್ಸವ ಆಚರಿಸಲಾಯಿತು. ಪುರಸಭೆ ಮುಖ್ಯಾಧಿಕಾರಿ ಎ.ಬಿ. ಕಲಾಲ ಧ್ವಜಾರೋಹಣ ನೆರವೇರಿಸಿದರು. ಸಾಹಿತಿ ಸಿದ್ದರಾಜ ಪೂಜಾರಿ, ಠಾಣಾಧಿಕಾರಿ ರವಿಕುಮಾರ ಧರ್ಮಟ್ಟಿ ಮಾತನಾಡಿದರು. ಮುಖ್ಯಾಧಿಕಾರಿ ಎ.ಬಿ. ಕಲಾಲ ಮತ್ತು ಠಾಣಾಧಿಕಾರಿ ರವಿಕುಮಾರ ಧರ್ಮಟ್ಟಿ ಧ್ವಜವಂದನೆ ಸ್ವೀಕರಿಸಿದರು.
ಅಭಿಯಂತರ ಆರ್.ಎಸ್.ಚವಾಣ್, ಕಂದಾಯ ಅಧಿಕಾರಿ ಎ.ಎಚ್.ಮುಜಾವರ, ಬಿ.ವೈ. ಮರದಿ, ವಿ.ಜಿ.ಕುಲಕರ್ಣಿ, ಎಸ್.ಎನ್. ಪಾಟೀಲ, ರಾಜು ಹಾಗಾರ, ಇರ್ಪಾನ್ ಜಾರೆ, ರವಿ ಹಲಸಪ್ಪಗೋಳ, ಮಹಾಲಿಂಗ ಗಸ್ತಿ, ರಾಮು ಮಾಂಗ ಇದ್ದರು.
ಪಿಕೆಪಿಎಸ್ನಲ್ಲಿ ಅಧ್ಯಕ್ಷ ಬಸನಗೌಡ ಪಾಟೀಲ ಧ್ವಜಾರೋಹಣ ನೆರವೇರಿಸಿದರು. ಉಪಾಧ್ಯಕ್ಷೆ ಸಾಯಂವ್ವ ಸಂಶಿ, ನಿರ್ದೇಶಕರಾದ ಈರಪ್ಪ ದಿನ್ನಿಮನಿ, ಶಿವಲಿಂಗ ಘಂಟಿ, ವಿಷ್ಣುಗೌಡ ಪಾಟೀಲ, ಸಂಗಪ್ಪ ಡೋಣಿ, ಮಲ್ಲಿಕಾರ್ಜುನ ಕುಳ್ಳೋಳ್ಳಿ, ಹನಮಂತ ಬುರುಡ, ಬಸವರಾಜ ಅರಳಿಕಟ್ಟಿ, ಮುಖಂಡರಾದ ಅಶೋಕಗೌಡ ಪಾಟೀಲ, ಚನಬಸು ಹುರಕಡ್ಲಿ, ಮಹಾಲಿಂಗ ಕೌಜಲಗಿ, ಜಿ.ಎಸ್.ಗೊಂಬಿ, ಭೀಮಸಿ ಗೌಂಡಿ, ಶಂಕರಗೌಡ ಪಾಟೀಲ, ಮಹೇಶ ಬಡಿಗೇರ ಇದ್ದರು.
ಪ್ರಭುಲಿಂಗೇಶ್ವರ ಸೊಸೈಟಿಯಲ್ಲಿ ಸಿದ್ದು ಕೊಣ್ಣುರ ಧ್ವಜಾರೋಹಣ ನೇರವೇರಿಸಿದರು. ಮಹಾಂತೇಶ ಹಿಟ್ಟಿನಮಠ ಧ್ವಜಾರೋಹಣ, ಶಾಂತವೀರಯ್ಯ ಮನ್ನಯ್ಯನವರಮಠ, ಶಿವಾನಂದ ಕೋಳಿಗುಡ್ಡ, ಬಸವರಾಜ ಹಿಟ್ಟಿನಮಠ, ಶಿವಲಿಂಗ ಘಂಟಿ, ಜಿ.ಎಸ್.ಗೊಂಬಿ, ವಿರೇಶ ಶಿರೋಳ ಇದ್ದರು.
ಪಟ್ಟಣದ ಕೆಎಲ್ಇ ಎಸ್ಸಿಪಿ ಸಂಸ್ಥೆಯ ಅಂಗಸಂಸ್ಥೆಗಳಲ್ಲಿ ನಡೆದ ಗಣರಾಜ್ಯೋತ್ಸವದಲ್ಲಿ ಆಡಳಿತ ಮಂಡಳಿ ಸ್ಥಾನಿಕ ಸದಸ್ಯ ಬಿ.ಎ. ಬಂತಿ ಧ್ವಜಾರೋಹಣ ನೆರವೇರಿಸಿದರು. ಪದವಿ ಕಾಲೇಜಿನ ಪ್ರಾಚಾರ್ಯ ಬಿ.ಎಂ.ಪಾಟೀಲ, ಪ.ಪೂ ಕಾಲೇಜಿನ ಪ್ರಾಚಾರ್ಯ ಬಿ.ಎಂ. ಪಾಟೀಲ, ಪ್ರೌಢಶಾಲೆ ಉಪಪ್ರಾಚಾರ್ಯ ಆರ್.ಎ. ಸೂರ್ಯವಂಶಿ, ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕಿ ಆರ್.ಎ. ಬನ್ನೂರ, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಪೂಜಾ ಕಲ್ಯಾಣಶೆಟ್ಟಿ, ಸ್ಥಾನಿಕ ಆಡಳಿತ ಆಡಳಿತ ಮಂಡಳಿ ಸದಸ್ಯರಾದ ಸಂತೋಷ ಹುದ್ದಾರ, ಅಶೋಕ ಅಂಗಡಿ ಇದ್ದರು.
ಕೆಎಲ್ಇ ಪಾಲಿಟೆಕ್ನಿಕ್ನಲ್ಲಿ ಪ್ರಾಚಾರ್ಯ ಎಸ್.ಐ.ಕುಂದಗೋಳ ಧ್ವಜಾರೋಹಣ ನೆರವೇರಿಸಿದರು. ಉಮೇಶ ಹಾದಿಮನಿ, ಉಪನ್ಯಾಸಕರಾದ ಚೈತ್ರಾ ಹನಸಿ, ಸುಪ್ರಿಯಾ ಹಾಲಭಾವಿ, ಸುಭಾಸ ಮೂಸಿ, ವಂದನಾ ಪಸಾರ, ಪ್ರಕಾಶ ಬಡಿಗೇರ, ಗೀತಾ ಉಪಾಸೆ ಇದ್ದರು.
ಅಷ್ಟಗಿ ಚಿತ್ರಮಂದಿರದಲ್ಲಿ ಬಸನಗೌಡ ಪಾಟೀಲ ಧ್ವಜಾರೋಹಣ ನೆರವೇರಿಸಿದರು. ಚಂದ್ರಶೇಖರ ಅಷ್ಟಗಿ, ಈರಪ್ಪ ಜಾನಕನೂರ, ಅಶೋಕಗೌಡ ಪಾಟೀಲ, ಈರಪ್ಪ ದಿನ್ನಿಮನಿ,
ಶ್ರೀಮಂತ ಹಳ್ಳಿ, ಶಿವಲಿಂಗ ಘಂಟಿ, ಶಿವಬಸು ಗೌಂಡಿ, ಭೀಮಸಿ ಗೌಂಡಿ, ಬಸವರಾಜ ಚಮಕೇರಿ ಇದ್ದರು.ಮಾರುತಿ ಚಿತ್ರಮಂದಿರದಲ್ಲಿ ಶ್ರೀಶೈಲ ಕೋಳಿಗುಡ್ಡ ಧ್ವಜಾರೋಹಣ ನೇರವೇರಿಸಿದರು. ಪ್ರಕಾಶ ಮೋರೆ, ಪಪ್ಪು ಹುರಕಡ್ಲಿ, ಪ್ರಕಾಶ ತಟ್ಟಿಮನಿ, ಶಿವಾನಂದ ಕೋಳಿಗುಡ್ಡ, ಪತ್ರಕರ್ತ ಚಂದ್ರಶೇಖರ ಮೋರೆ ಇದ್ದರು. ಸಾರ್ವಜನಿಕ ಗ್ರಂಥಾಲಯದಲ್ಲಿ ಕಸಾಪ ಅಧ್ಯಕ್ಷ ವೀರೇಶ ಆಸಂಗಿ ಧ್ವಜಾರೋಹಣ ನೇರವೇರಿಸಿದರು. ಎಸ್.ವಿ.ಕೆಂಪಲಿಂಗನ್ನವರ, ಜಿ.ಎಚ್.ಪಾಟೀಲ, ಮಹಾಲಿಂಗ ಭಜಂತ್ರಿ ಇದ್ದರು.
ಕೆಂಗೇರಿಮಡ್ಡಿಯ ಮದರಸಾದಲ್ಲಿ ಬೀದರ ಶಿವಕುಮಾರ ಸ್ವಾಮೀಜಿ ಧ್ವಜಾರೋಹಣ ನೆರವೇರಿಸಿದರು. ಠಾಣಾಧಿಕಾರಿ ರವಿಕುಮಾರ ಧರ್ಮಟ್ಟಿ, ಇಬ್ರಾಹಿಂ ಸುತಾರ, ಸಜನಸಾಬ ಪೆಂಡಾರಿ, ನಬಿ ಯಕ್ಸಂಬಿ, ಹಾಸಿಂಪೀರ ಮಕಾನದಾರ, ಜಾವೇದ ಬಾಗವಾನ್, ಬಸೀರ್ ಸೌದಾಗರ್, ಜಮೀರ ಯಕ್ಸಂಬಿ ಇದ್ದರು.
ಕೆಂಗೇರಿಮಡ್ಡಿ ಪ್ರಾಥಮಿಕ ಶಾಲೆಯಲ್ಲಿ ಎಸ್ಡಿಎಂಸಿ ಅಧ್ಯಕ್ಷ ಬಸವರಾಜ ಹಿಪ್ಪರಗಿ ಧ್ವಜಾರೋಹಣ ಮಾಡಿದರು. ಪುರಸಭೆ ಸದಸ್ಯೆ ಸರಸ್ವತಿ ರಾಮೋಜಿ, ಪರಸಪ್ಪ ಬಂಡಿ, ಮುಖ್ಯಶಿಕ್ಷಕಿ ಎಂ.ಸಿ.ತೊರಲಿ, ಜಿ.ಎಸ್. ಹಳ್ಳದ, ಎಸ್.ಎಸ್. ಹಳ್ಳದ, ಕೆ.ಎಂ.ಕಾಳವ್ವಗೋಳ, ಕೆ.ಎಸ್.ಜಾಧವ, ಎ.ಎಂ.ರಾಠೊಡ ಇದ್ದರು.
ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಸಾರಿಗೆ ನಿಯಂತ್ರಕ ಎಸ್.ಆರ್. ದೇಸಾಯಿ, ಪಿ.ಎಂ. ಅಂಬಿ ಧ್ವಜಾರೋಹಣ ನೇರವೇರಿಸಿದರು. ಅಶೋಕ ಕಡಪಟ್ಟಿ, ವಿನಾಯಕ ಜಿರಲಿ, ಶಿವಾನಂದ ಮರೆಗುದ್ದಿ, ರಾಘವೇಂದ್ರ ಕಾಕಡೆ, ಚನ್ನವೀರ ಗಸ್ತಿ, ಪೂಜಾ ಜಕ್ಕನ್ನವರ, ಲಕ್ಷ್ಮೀ ಹರಿಜನ, ಭಾವನಾ ಜಕ್ಕನ್ನವರ, ಲಕ್ಷ್ಮೀ ಭಾರಕಿ ಇದ್ದರು.
ಕನಕದಾಸ ಸೊಸೈಟಿಯಲ್ಲಿ ಅಧ್ಯಕ್ಷ ಮಹಾಲಿಂಗ ಜಕ್ಕನ್ನವರ ಧ್ವಜಾರೋಹಣ ನೆರವೇರಿಸಿದರು. ಉಪಾಧ್ಯಕ್ಷ ಭೀಮಸಿ ತಿಮ್ಮಾಪುರ, ವ್ಯವಸ್ಥಾಪಕ ಪ್ರಭು ಹುಬ್ಬಳ್ಳಿ, ಬಾಬು ಹಾದಿಮನಿ, ಶ್ರೀಶೈಲ ಅವಟಿ, ಮಹಾಲಿಂಗ ಹುಬ್ಬಳ್ಳಿ, ಶಂಕರ ಮೇಟಿ, ಡಾ| ಎಸ್.ಆರ್.ಹಿಡಕಲ್, ದಾನೇಶ ಹೂಗಾರ ಇದ್ದರು.