![1-24-saturday](https://www.udayavani.com/wp-content/uploads/2024/07/1-24-saturday-2-415x249.jpg)
ನಿರುಪಯುಕ್ತ ಜಾಗ ಈಗ ಉದ್ಯಾನ
ಹಸಿರು ಕಂಗೊಳಿಸುವ ಉದ್ಯಾನ ನಿರ್ಮಾಣ•ಖಾಸಗಿ ವಾಹನಗಳ ಮಾಲೀಕರ ಕಾರ್ಯ
Team Udayavani, May 15, 2019, 11:18 AM IST
![BAGALKOTE-tdy-3..](https://www.udayavani.com/wp-content/uploads/2019/05/BAGALKOTE-tdy-3..-620x448.jpg)
ತೇರದಾಳ: ಪಟ್ಟಣದ ಬಸ್ ನಿಲ್ದಾಣ ಬಳಿ ಖಾಸಗಿ ವಾಹನಗಳ ಚಾಲಕರು ಹಾಗೂ ಮಾಲೀಕರು ನಿರ್ಮಿಸಿದ ಉದ್ಯಾನವನ.
ತೇರದಾಳ: ಪಟ್ಟಣದ ಬಸ್ ನಿಲ್ದಾಣ ಬಳಿಯ ಮಹಾತ್ಮ ಗಾಂಧಿ ಕ್ರೀಡಾಂಗಣದ ಕಾಂಪೌಂಡ್ಗೆ ಹೊಂದಿಕೊಂಡಿದ್ದ ನಿರುಪಯುಕ್ತ ಜಾಗ ಈಗ ಉದ್ಯಾನವನವಾಗಿ ಮಾರ್ಪಟ್ಟಿದೆ.
ಖಾಸಗಿ ವಾಹನಗಳ ಚಾಲಕರು ಉದ್ಯಾನವನ ನಿರ್ಮಿಸಿ ಸಾಮಾಜಿಕ ಕಾರ್ಯ ಕೈಗೊಂಡಿದ್ದಾರೆ. ಮೂತ್ರವಿಸರ್ಜನೆ, ಸತ್ತ ಪ್ರಾಣಿ ಸೇರಿದಂತೆ ಗಲೀಜು ತಂದು ಹಾಕಿ ಜಾಗವನ್ನು ದುರುಪಯೋಗ ಪಡಿಸಿಕೊಳ್ಳಲಾಗಿತ್ತು. ಇದನ್ನು ಕಂಡ ಆಟೋ ರಿಕ್ಷಾ, ಮ್ಯಾಕ್ಸಿಕ್ಯಾಬ್ ವಾಹನಗಳ ಮಾಲೀಕರು ಮತ್ತು ಚಾಲಕರ ಸಂಘದವರು ಪರಿಸರ ಸ್ವಚ್ಛಗೊಳಿಸುವ ಕಾರ್ಯ ಕೈಗೊಂಡು ಪ್ರಶಂಸೆಗೆ ಪಾತ್ರರಾಗಿದ್ದಾರೆ.
ತಮ್ಮ ಸ್ವಂತ ಹಣದಲ್ಲಿಯೇ ಸುಮಾರು ಅರ್ಧ ಕಿ.ಮೀ ದೂರದವರೆಗೆ ಪೈಪ್ಲೈನ್ ಅಳವಡಿಸಿ ನೀರಿನ ಅನುಕೂಲ ಮಾಡಿಕೊಂಡ ಚಾಲಕರು ಹಾಗೂ ಮಾಲೀಕರು ಶ್ರಮದಾನದಿಂದ ಸ್ಥಳ ಶುಚಿಗೊಳಿಸಿದರು. ಸಸಿ ನೆಡಲು ಗುಂಡಿತೋಡಿ, ಗೊಬ್ಬರ ಹಾಕಿ ಭೂಮಿ ಸಿದ್ಧಪಡಿಸಿಕೊಂಡರು. ಗೋವಾ, ಬೆಂಗಳೂರು, ಸಾಂಗಲಿ ಸೇರಿದಂತೆ ವಿವಿಧ ಕಡೆಗಳಿಂದ ಮಾವು, ತೆಂಗು, ತುಳಸಿ, ಬೇವು, ಬದಾಮ, ಸಾಗವಾನಿ, ವಿವಿಧ ತೆರನಾದ ಹೂ-ಬಳ್ಳಿ ಸೇರಿದಂತೆ ಅನೇಕ ಸಸಿಗಳನ್ನು ತಂದು ನಾಟಿ ಮಾಡಿದ್ದಾರೆ. ದಿನಂಪ್ರತಿ ಎಲ್ಲರೂ ಸರದಿಯಂತೆ ನೀರುಣಿಸಿದ್ದಾರೆ. ಬೇಸಿಗೆಯಾಗಿದ್ದರಿಂದ ಕೆರೆಯಿಂದ ನೀರು ತಂದು ಹಾಕಿ, ಸಸಿಗಳ ರಕ್ಷಣೆಗೆ ಸ್ವಂತ ಖರ್ಚಿನಿಂದ ತಂತಿ ಜಾಳಿಗೆ ಅಳವಡಿಸಿ ಪೋಷಣೆ ಮಾಡುತ್ತಿದ್ದಾರೆ. ಆಗಾಗ್ಗೆ ಕಳೆ-ಕಸ ತೆಗೆದು ಸ್ವಚ್ಛ ಕಾರ್ಯ ಕೈಗೊಂಡಿದ್ದಾರೆ. ಅನೇಕ ಹೂ, ಗಿಡ, ಬಳ್ಳಿಗಳು ಬೆಳೆದು ನೋಡುಗರನ್ನು ಕೈಬೀಸಿ ಕರೆಯುತ್ತಿವೆ. ಕಲ್ಲಿನ ಆಸನ ನಿರ್ಮಿಸಿದ್ದು, ಬಿಸಿಲಿನ ತಾಪಕ್ಕೆ ಬಸವಳಿದವರಿಗೆ ವಿಶ್ರಾಂತಿಗೆ ಆಹ್ವಾನಿಸುವ ಸುಂದರ ತಾಣವಾಗಿದೆ.
ಚಾಲಕರು ಹಾಗೂ ಮಾಲೀಕರು ಪುರಸಭೆಯವರಿಂದ ನಲ್ಲಿ ಜೋಡಣೆ ಪಡೆದು ವಿವಿಧ ಕಡೆ ಹೋಗಿ ಅನೇಕ ಸಸಿಗಳನ್ನು ಹಾಗೂ ಮಾರ್ಗದರ್ಶನ ಪಡೆದು ಕೈ ದೋಟ ನಿರ್ಮಿಸಿದ್ದಾರೆ.
ಟಾಪ್ ನ್ಯೂಸ್
![1-24-saturday](https://www.udayavani.com/wp-content/uploads/2024/07/1-24-saturday-2-415x249.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![Rain: ಬಾಗಲಕೋಟೆಯ ಜಿಲ್ಲೆಯ ನಾಲ್ಕು ತಾಲೂಕಿನ ಶಾಲೆಗಳಿಗೆ ಇಂದು (ಜುಲೈ 26) ರಜೆ](https://www.udayavani.com/wp-content/uploads/2024/07/bagalakote-150x90.jpg)
Heavy Rain: ಬಾಗಲಕೋಟೆ ಜಿಲ್ಲೆಯ ನಾಲ್ಕು ತಾಲೂಕಿನ ಶಾಲೆಗಳಿಗೆ ಇಂದು (ಜುಲೈ 26) ರಜೆ
![ರಬಕವಿ-ಬನಹಟ್ಟಿ: ಭೋರ್ಗರೆಯುತ್ತಿರುವ ಕೃಷ್ಣೆ… ಪ್ರವಾಹ ಭೀತಿಯಲ್ಲಿ ಜನತೆ](https://www.udayavani.com/wp-content/uploads/2024/07/rabakavi-1-150x84.jpg)
ರಬಕವಿ-ಬನಹಟ್ಟಿ: ಭೋರ್ಗರೆಯುತ್ತಿರುವ ಕೃಷ್ಣೆ… ಪ್ರವಾಹ ಭೀತಿಯಲ್ಲಿ ಜನತೆ
![Fetoside](https://www.udayavani.com/wp-content/uploads/2024/07/Fetoside-150x90.jpg)
Bagalakote: ಸರಕಾರಿ ವೈದ್ಯೆಯಿಂದಲೇ ಭ್ರೂಣಹತ್ಯೆ!
![Mudhol ಸಾವಿರ ಶ್ರೀಗಂಧ ಸಸಿಗಳ ಸರದಾರ; ಅರಣ್ಯ ಕೃಷಿಯಲ್ಲಿ ಖುಷಿ ಜೀವನ ಕಂಡ ನಾಗಪ್ಪ](https://www.udayavani.com/wp-content/uploads/2024/07/sandalwood-150x77.jpg)
Mudhol ಸಾವಿರ ಶ್ರೀಗಂಧ ಸಸಿಗಳ ಸರದಾರ; ಅರಣ್ಯ ಕೃಷಿಯಲ್ಲಿ ಖುಷಿ ಜೀವನ ಕಂಡ ನಾಗಪ್ಪ
![4-](https://www.udayavani.com/wp-content/uploads/2024/07/4--150x90.jpg)
Mahalingpur: ಘಟಪ್ರಭಾ ನದಿಗೆ ಹೆಚ್ಚಿದ ನೀರು: ಮೂರು ಸೇತುವೆಗಳು ಜಲಾವೃತ
MUST WATCH
ಹೊಸ ಸೇರ್ಪಡೆ
![1-24-saturday](https://www.udayavani.com/wp-content/uploads/2024/07/1-24-saturday-2-150x90.jpg)
Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ
![CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?](https://www.udayavani.com/wp-content/uploads/2024/07/cm-7-150x91.jpg)
CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?
![Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ](https://www.udayavani.com/wp-content/uploads/2024/07/Vidhana-Soudha-24-150x100.jpg)
Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ
![Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ](https://www.udayavani.com/wp-content/uploads/2024/07/cm-g-150x100.jpg)
Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ
![Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!](https://www.udayavani.com/wp-content/uploads/2024/07/Pilikula-Biological-150x91.jpg)
Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.