ಖಾಸಗಿ ಬಸ್ ಸಿಬ್ಬಂದಿ ವಿರುದ್ಧ ಅಪಹರಣ ದೂರು
Team Udayavani, May 12, 2019, 3:00 AM IST
ಬೆಂಗಳೂರು: ವೇಗವಾಗಿ ಬಂದಿದ್ದನ್ನು ಪ್ರಶ್ನಿಸಿದಕ್ಕೆ ಖಾಸಗಿ ಬಸ್ ಚಾಲಕ ಸೇರಿ ಮೂರು ಮಂದಿ ತಮ್ಮ ಮೇಲೆ ಹಲ್ಲೆ ನಡೆಸಿ, ಅಪಹರಣ ಮಾಡಿದ್ದಾರೆ ಎಂದು ಆರೋಪಿಸಿ ಕ್ಯಾಬ್ ಚಾಲಕ, ಪೀಣ್ಯ ಪೊಲೀಸರಿಗೆ ದೂರು ನೀಡಿದ್ದಾನೆ. ನಾಗಸಂದ್ರ ನಿವಾಸಿ ರಘು (22) ನೀಡಿದ ದೂರಿನಂತೆ ಪೀಣ್ಯ ಪೊಲೀಸರು, ಖಾಸಗಿ ಬಸ್ ಚಾಲಕ ಹರೀಶ್ ಹಾಗೂ ಕ್ಲಿನರ್ ಅಭಿಲಾಷ್ ಹಾಗೂ ಮತ್ತೂಬ್ಬನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕ್ಯಾಬ್ ಚಾಲಕ ರಘು, ಶುಕ್ರವಾರ ರಾತ್ರಿ 9 ಗಂಟೆಗೆ ಶರತ್ ಎಂಬವರಿಂದ ಹಣ ಪಡೆಯಲು ಸ್ನೇಹಿತ ಮಂಜುನಾಥ್ ಎಂಬವರ ಜತೆ ಬೈಕ್ನಲ್ಲಿ ನವರಂಗ್ನಿಂದ ತುಮಕೂರು ರಸ್ತೆಯ ನವಯುಗ ಟೋಲ್ಗೇಟ್ ಬಳಿ ಹೋಗಿದ್ದರು. ವಾಪಸ್ ಬರುವಾಗ ಟೋಲ್ ಗೇಟ್ ಬಳಿ ಖಾಸಗಿ ಬಸ್ ಒಂದು, ರಘು ಅವರ ಬೈಕ್ಗೆ ಡಿಕ್ಕಿ ಹೊಡೆಯುವಂತೆ ಬಂದಿದೆ.
ಆತಂಕಗೊಂಡ ರಘು, ನಿಧಾನವಾಗಿ ಚಾಲನೆ ಮಾಡುವಂತೆ ಚಾಲಕನಿಗೆ ಸೂಚಿಸಿದ್ದರು. ಇದರಿಂದ ಕೋಪಗೊಂಡ ಬಸ್ ಕ್ಲೀನರ್ ಅಭಿಲಾಷ್ ಹಾಗೂ ಚಾಲಕ ಹರೀಶ್, ರಘು ಮತ್ತು ಮಂಜುನಾಥ್ನನ್ನು ಬೈಕ್ನಿಂದ ತಳ್ಳಿ, ಇಬ್ಬರ ಮೇಲೆ ಹಲ್ಲೆ ನಡೆಸಿದ್ದಾರೆ. ನಂತರ ಬಲವಂತವಾಗಿ ರಘು ಅವರನ್ನು ಬಸ್ನೊಳಗೆ ಎಳೆದೊಯ್ದು, ರಾಡ್ನಿಂದ ಒಡೆದು, ಅಪಹರಣ ಮಾಡಿದ್ದಾರೆ.
ಶನಿವಾರ ಮುಂಜಾನೆ 4 ಗಂಟೆಗೆ ಸಕಲೇಶಪುರದಲ್ಲಿ ಬಸ್ ನಿಲ್ಲಿಸಿದಾಗ ಚ್ಚರಗೊಂಡ ರಘು, ಬಸ್ನಿಂದ ಇಳಿದು ತಪ್ಪಿಸಿಕೊಂಡು ನಗರಕ್ಕೆ ಬಂದಿದ್ದಾರೆ. ಈ ಸಂಬಂಧ ರಘು ದೂರು ನೀಡಿದ್ದು, ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸುವುದಾಗಿ ಪೊಲೀಸರು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Fraud: ರೈಸ್ ಪುಲ್ಲಿಂಗ್ ಹೆಸರಿನಲ್ಲಿ ವಂಚನೆಗೆ ಯತ್ನ; 3 ಸೆರೆ, 69.79 ಲಕ್ಷ ವಶ
Crime: ಸ್ನೇಹಿತನನ್ನೇ ಕೊಲೆ ಮಾಡಿದ್ದ ನಾಲ್ವರು ಆರೋಪಿಗಳ ಸೆರೆ
Bengaluru: ನಕಲಿ ಭೂ ದಾಖಲೆಗಳ ಸಲ್ಲಿಸಿ 22 ಬ್ಯಾಂಕಲ್ಲಿ 10 ಕೋಟಿ ಸಾಲ!
Glanders infection: ಗ್ಲ್ಯಾಂಡರ್ಸ್ ಸೋಂಕು; ಬೆಂಗಳೂರು ತೊರೆದ ಕುದುರೆ ಮಾಲೀಕ, ಸವಾರ
Chain theft: ಒಂಟಿ ಮಹಿಳೆಯರ ಸರ ಕದಿಯುತ್ತಿದ್ದ 5 ಬಂಧನ; 10.82 ಲಕ್ಷದ ವಸ್ತು ಜಪ್ತಿ
MUST WATCH
ಹೊಸ ಸೇರ್ಪಡೆ
Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ ಸಾವು
Udupi: ನಿಟ್ಟೂರಿನಲ್ಲಿ ಬಸ್ ಢಿಕ್ಕಿಯಾಗಿ ಬೈಕ್ ಸವಾರ ದಾರುಣ ಸಾವು
Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ
Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ
ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್