ಪರಿಸ್ಥಿತಿಗೆ ಪೂರಕವಾಗಿ ಪಿಸ್ತೂಲ್ ಬಳಸಿ
Team Udayavani, Feb 23, 2018, 6:55 AM IST
ವಿಧಾನ ಪರಿಷತ್ತು: ಸ್ವಯಂ ಆತ್ಮರಕ್ಷಣೆ ಹಾಗೂ ಜನರ ಪ್ರಾಣ ರಕ್ಷಣೆಗೆ ಬಳಸಲೆಂದೇ ಸಬ್ಇನ್ಸ್ಪೆಕ್ಟರ್ ಮತ್ತು
ಅವರಿಗಿಂತ ಮೇಲ್ಮಟ್ಟದ ಅಧಿಕಾರಿಗಳಿಗೆ ಪಿಸ್ತೂಲ್ ನೀಡಲಾಗಿದ್ದು, ಅಗತ್ಯವಿದ್ದಾಗ ಬಳಸಿ ರೌಡಿ ಚಟುವಟಿಕೆ
ಸೇರಿ ಅಪರಾಧ ಕೃತ್ಯಗಳನ್ನು ನಿಯಂತ್ರಿಸಬೇಕು ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ಬಿಜೆಪಿಯ ಎಸ್.ವಿ.ಸಂಕನೂರ ಪ್ರಶ್ನೆಗೆ ಉಪ ಪ್ರಶ್ನೆ ಕೇಳಿದ ಬಿಜೆಪಿಯ ಪ್ರದೀಪ್ ಶೆಟ್ಟರ್ ಹುಬ್ಬಳ್ಳಿಯಲ್ಲಿ
ರೌಡಿಗಳ ಹಾವಳಿ ಹೆಚ್ಚಾಗಿದ್ದು, ಹಾಡಹಗಲೇ ಕೊಲೆ, ಸುಲಿಗೆ ನಡೆದಿದೆ. ಕೆಲವರ ಮೇಲೆ ಗುಂಡು ಹಾರಿಸಿದರೆ
ರೌಡಿಗಳಿಗೂ ಭಯ ಬರಲಿದೆ ಎಂಬ ಮಾತಿಗೆ ಸಚಿವರು ಉತ್ತರಿಸಿದರು.
ಹುಬ್ಬಳ್ಳಿಯಲ್ಲಿ ರೌಡಿ ಚಟುವಟಿಕೆ ಹೆಚ್ಚಾಗಿದೆ ಎಂಬ ಮಾತು ಕೇಳಿಬಂದ ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನ ಕ್ರಮ
ಕೈಗೊಳ್ಳುವಂತೆ ಹುಬ್ಬಳ್ಳಿ ಪೊಲೀಸ್ ಆಯುಕ್ತರಿಗೆ ಸೂಚನೆ ನೀಡಿದ್ದೇನೆ. ರೌಡಿ ಚಟುವಟಿಕೆ ನಿಯಂತ್ರಣಕ್ಕಾಗಿಯೇ ಗೂಂಡಾ ಕಾಯ್ದೆ, ಗಡಿಪಾರು ಮಾಡುವ ಅವಕಾಶ ಕಲ್ಪಿಸಲಾಗಿದೆ. ಇದನ್ನು ಪೊಲೀಸರು ಬಳಸಿಕೊಳ್ಳಬೇಕು.
ಕೆಲವೆಡೆ ರೌಡಿಗಳ ಗಡಿಪಾರಿಗೆ ಎಸ್ಪಿ ಶಿಫಾರಸು ಮಾಡಿದ್ದರೂ ಜಿಲ್ಲಾಧಿಕಾರಿಗಳು ಏಳೆಂಟು ತಿಂಗಳು ವಿಳಂಬ
ಮಾಡಿರುವುದು ಕಂಡುಬಂದಿದೆ ಎಂದು ಹೇಳಿದರು.
ಎಸ್ಐ ಮತ್ತು ಅವರ ಮೇಲ್ಮಟ್ಟದ ಅಧಿಕಾರಿಗಳಿಗೆ ಪಿಸ್ತೂಲ್ ನೀಡಲಾಗಿದ್ದು, ಆತ್ಮರಕ್ಷಣೆ ಸಂದರ್ಭ ಸೇರಿ ಸಾರ್ವಜನಿಕವಾಗಿ ದಾಂಧಲೆ, ಗಲಭೆ ನಡೆಸುವವರ ಮೇಲೆ ಪ್ರಯೋಗಿಸಬಹುದು. ಆದರೆ ಸಂದರ್ಭ,ಸನ್ನಿವೇಶ ನೋಡಿಕೊಂಡು ಎಚ್ಚರಿಕೆಯಿಂದ ಬಳಸಬೇಕು. ಇಲ್ಲದಿದ್ದರೆ ನಕಲಿ ಎನ್ಕೌಂಟರ್ ಎಂಬಂತಾಗಿ ದೇಶದಲ್ಲಿ ಏನೆಲ್ಲಾ ನಡೆಯುತ್ತಿದೆ ಎಂಬುದನ್ನು ನೆನಪಿಟ್ಟುಕೊಳ್ಳಬೇಕು ಎಂದು ಮಾರ್ಮಿಕವಾಗಿ ನುಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ
LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ
Pramod, Pruthvi Ambaar: ಪೋಸ್ಟ್ ಪ್ರೊಡಕ್ಷನ್ನಲ್ಲಿ ‘ಭುವನಂ ಗಗನಂ’
Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ
Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!