ಆಟೋ ಕದಿಯುತ್ತಿದ್ದ ಇಬ್ಬರ ಬಂಧನ
Team Udayavani, Apr 4, 2019, 3:00 AM IST
ಬೆಂಗಳೂರು: ಮನೆಮುಂದೆ ನಿಲ್ಲಿಸುತ್ತಿದ್ದ ಆಟೋಗಳನ್ನು ಕಳವು ಮಾಡಿಕೊಂಡು ಹೋಗುತ್ತಿದ್ದ ಫೈನಾನ್ಸ್ ಕಂಪನಿಯ ಇಬ್ಬರು ಉದ್ಯೋಗಿಗಳನ್ನು ಶ್ರೀರಾಮಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಶ್ರೀನಿವಾಸನಗರದ ರಾಜು ಹಾಗೂ ಬಸವೇಶ್ವರ ನಗರದ ಹೇಮಂತಕುಮಾರ ಬಂಧಿತರು. ಆರೋಪಿಗಳಿಂದ 13.20 ಲಕ್ಷ ರೂ. ಮೌಲ್ಯದ 12 ಆಟೋಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ. ತಲೆಮರೆಸಿಕೊಂಡಿರುವ ಮತ್ತೂಬ್ಬ ಆರೋಪಿ ರಮೇಶ್ರಾಮು ಎಂಬಾತನ ಬಂಧನಕ್ಕೆ ಬಲೆಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರಮೇಶ್ ರಾಮು ನಡೆಸುತ್ತಿದ್ದ ಎಸ್.ಆರ್ ಕನ್ಸಲ್ಟೆಂಟ್ನಲ್ಲಿ ರಾಜು ಹಾಗೂ ಹೇಮಂತ್ ಕೆಲಸಮಾಡುತ್ತಿದ್ದರು. ರಮೇಶ್ ರಾಮು ಕಂಪನಿ ಮೂಲಕ ಆಟೋ ಖರೀದಿಸುವವರಿಗೆ ಫೈನಾನ್ಸ್ ನೀಡುತ್ತಿದ್ದ. ಹಣ ಕಟ್ಟದ ಆಟೋ ಚಾಲಕರಿಂದ ಆಟೋ ಜಪ್ತಿ ಮಾಡಿಕೊಂಡು ಬರುವ ಕೆಲಸವನ್ನು ಉಳಿದ ಇಬ್ಬರು ಆರೋಪಿಗಳಿಗೆ ವಹಿಸಿದ್ದರು.
ಆದರೆ ಮೂವರು ಆರೋಪಿಗಳು ಆಟೋ ಸೀಜ್ ಮಾಡುವ ಬದಲು ಆಟೋಗಳನ್ನೇ ಕಳವು ಮಾಡಿ ಮತ್ತೂಬ್ಬರಿಗೆ ಬಾಡಿಗೆಗೆ ನೀಡುತ್ತಿದ್ದರು. ಕಳೆದ ವರ್ಷ ನವೆಂಬರ್ನಲ್ಲಿ ಅಫ್ಜಲ್ ಖಾನ್ ಎಂಬುವವರು ಮನೆ ಮುಂದೆ ನಿಲ್ಲಿಸಿದ್ದ ಆಟೋ ರಾತ್ರಿ ವೇಳೆ ಕಳ್ಳತನವಾಗಿತ್ತು. ಈ ಕುರಿತು ಅಫ್ಜಲ್ ನೀಡಿದ್ದ ದೂರು ಆಧರಿಸಿ ತನಿಖೆ ನಡೆಸಿದಾಗ ಮೂವರು ಆರೋಪಿಗಳ ಪಾತ್ರ ಬಯಲಿಗೆ ಬಂದಿತು ಎಂದು ಪೊಲೀಸರು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!
Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ
Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ
Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !
Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು