ಒಳ ಉಡುಪಿನಲ್ಲಿ ಮೊಬೈಲ್ ಇಟ್ಟು ಜೈಲಿನೊಳಗೆ ಸಾಗಾಟ!
Team Udayavani, Jul 29, 2023, 2:33 PM IST
ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಸಿಬ್ಬಂದಿಯೇ ಕೈದಿಗಳಿಗೆ ಮೊಬೈಲ್, ಗಾಂಜಾ ಪೂರೈಸುತ್ತಿರುವ ಆರೋಪ ಕೇಳಿ ಬರುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಒಳಉಡುಪಿನಲ್ಲಿ ಮೊಬೈಲ್ ಇಟ್ಟು ಜೈಲಿನೊಳಗೆ ಸಾಗಿಸುತ್ತಿದ್ದ ಡಿ-ದರ್ಜೆ ನೌಕರ ಸಿಕ್ಕಿಬಿದ್ದಿದ್ದಾನೆ.
ಭಾನುಪ್ರಕಾಶ್ (52) ಸಿಕ್ಕಿಬಿದ್ದ ಜೈಲು ಸಿಬ್ಬಂದಿ.
ಡಿ-ದರ್ಜೆ ನೌಕರ ಭಾನುಪ್ರಕಾಶ್ ಪೊಲೀಸ್ ವಾಹನಗಳನ್ನು ಸ್ವತ್ಛ ಮಾಡುತ್ತಿದ್ದ. ಜು.25ರಂದು ಜೈಲಿನೊಳಗೆ ಪ್ರವೇಶಿಸುವಾಗ ಭದ್ರತಾ ತಪಾಸಣಾ ವೇಳೆ ಒಳ ಉಡುಪಿನಲ್ಲಿ ಮೊಬೈಲ್ ಇಟ್ಟುಕೊಂಡಿರುವುದು ಪತ್ತೆಯಾಗಿತ್ತು. ಪೊಲೀಸರು ಆತನನ್ನು ವಿಚಾರಿಸಿದಾಗ ಕಡಿಮೆ ಬೆಲೆಯ ಬೇಸಿಕ್ ಸೆಟ್ ಮೊಬೈಲ್ ಖರೀದಿಸಿ ಮರೆತು ಒಳಉಡುಪಿನಲ್ಲಿ ಇಟ್ಟಿರುವುದಾಗಿ ಗೊಂದಲದ ಹೇಳಿಕೆ ನೀಡಿದ್ದ. ಕೈದಿಗಳೊಂದಿಗೆ ಭಾನುಪ್ರಕಾಶ್ ಸಂಪರ್ಕ ಹೊಂದಿರುವ ಶಂಕೆ ವ್ಯಕ್ತವಾಗಿದ್ದು, ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಜೈಲಿನ ಅಧೀಕಕ್ಷ ಮಲ್ಲಿಕಾರ್ಜುನ ನೀಡಿದ ದೂರಿನ ಆಧಾರದ ಮೇರೆಗೆ ಬಂಧಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು
Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ
LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ
Pramod, Pruthvi Ambaar: ಪೋಸ್ಟ್ ಪ್ರೊಡಕ್ಷನ್ನಲ್ಲಿ ‘ಭುವನಂ ಗಗನಂ’
Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ