Bengaluru Kambala: ಐಟಿ ಸಿಟಿಯಲ್ಲಿ ಕಂಬಳ

ಕರಾವಳಿ ಗ್ರಾಮೀಣ ನೆಲದ ಕ್ರೀಡೆಗೆ ಸಾಕ್ಷಿಯಾಗಲಿದೆ ಅರಮನೆ ಮೈದಾನ

Team Udayavani, Nov 20, 2023, 10:56 AM IST

TDY-4

ಕಂಬಳ’ ಹೆಸರು ಕೇಳಿದಾಕ್ಷಣ ತುಳುನಾಡಿನ ಜನರಲ್ಲಿ ಅದೇನೋ ಒಂದು ತೆರನಾದ ನವೋಲ್ಲಾಸ, ಹುರುಪು, ಸಂಭ್ರಮ. ಕಂಬಳ ಧಾರ್ಮಿಕ ಆಚರಣೆ, ಪ್ರತಿಷ್ಠೆಯ ಸಂಕೇತವೂ ಹೌದು. ಶತಮಾನದ ಇತಿಹಾಸವಿರುವ ಕಂಬಳ ಅಪ್ಪಟ ಕರಾವಳಿ ಗ್ರಾಮೀಣ ನೆಲದ ಕ್ರೀಡೆ. ಮೊದಲ ಬಾರಿಗೆ ಸಿಲಿಕಾನ್‌ ಸಿಟಿಯಲ್ಲಿ ಆಯೋಜಿಸಲಾಗುತ್ತಿದೆ. ಮೂಲಕ ರಾಜ್ಯ ಹಾಗೂ ರಾಷ್ಟ್ರದಿಂದ ಬಂದ ಬೆಂಗಳೂರಿನಲ್ಲಿ ನೆಲೆಸಿದವರಿಗೆ ಕರಾವಳಿ ಗ್ರಾಮೀಣ ಕ್ರೀಡೆ ಪರಿಚಯಿಸಲು ಸಿದ್ಧತೆ ಮಾಡಿಕೊಂಡಿದೆ. ಕಂಬಳದ ತಯಾರಿ ಹೇಗಿದೆ? ಬನ್ನಿ ಒಂದು ಸುತ್ತು ಹಾಕಿ ಬರೋಣ.

ಕರಾವಳಿಯ ಕೆಸರು ಗದ್ದೆಯಲ್ಲಿ ಬಿರುಸಿನಿಂದ ಓಡಿ ವಿಜಯ ಪತಾಕೆ ಹಾರಿಸುತ್ತಿದ್ದ ಕಂಬಳದ ಕೋಣಗಳು ನಿಧಾನವಾಗಿ ಸಿಲಿಕಾನ್‌ ಸಿಟಿಯತ್ತ ಹೆಜ್ಜೆ ಹಾಕಲಾರಂಭಿಸಿವೆ. ಕಡಲತಡಿಯ ಜನರಿಗೆ ಸೀಮಿತವಾಗಿದ್ದ “ಕಂಬಳ’ ಎಂಬ ಸಂಸ್ಕೃತಿಯನ್ನು ನಾನಾ ಭಾಗದ ಜನರಿರುವ ಬೆಂಗಳೂರಿಗೆ ಪರಿಚಯಿಸುವುದರ ಜತೆಗೆ, ಇಲ್ಲಿ ನೆಲೆಸಿರುವ ಕರಾವಳಿಗರಿಗೂ ರಸಗವಳದ ಸವಿ ನೀಡಲಿದೆ.

ತಮ್ಮದೇ ಸಂಸ್ಕೃತಿಯನ್ನು ತಾವಿರುವಲ್ಲೇ ಆಚರಿಸುವ ಸಡಗರದೊಂದಿಗೆ ಕಡಲೂರ ಮಕ್ಕಳು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಕರಾವಳಿ ಭಾಗದಲ್ಲಿ ಕಂಬಳವನ್ನು ಉತ್ಸವದ ರೀತಿಯಲ್ಲಿ ಆಚರಿಸುತ್ತಾರೆ. ಅದೇ ಸಡಗರ ಹಾಗೂ ಉತ್ಸಾಹವನ್ನು ಬೆಂಗಳೂರಿನಲ್ಲಿ ಸಹ ಕಾಣಬಹುದಾಗಿದೆ. ಕೆಸರುಗದ್ದೆಯ ಪರಿಮಳ, ಕಂಬಳದ ವಾದ್ಯ, ಕಹಳೆ, ಡೋಲುಗಳ ನಾದಗಳ ವೈಭೋಗಕ್ಕೆ ಬೆಂಗಳೂರು ಕಂಬಳ ಸಾಕ್ಷಿಯಾಗಲಿದೆ.

ವಿಶಾಲವಾದ 70 ಎಕರೆ ಸ್ಥಳವಿರುವ ಅರಮನೆ ಮೈದಾನದ ಗೇಟ್‌ 5ರಲ್ಲಿ ಕಂಬಳ ಕ್ರೀಡಾಕೂಟ ನಡೆಯಲಿದೆ. ನ.25ರಂದು ಕಂಬಳಕ್ಕೆ ಚಾಲನೆ ಸಿಗಲಿದೆ. ಅಂದು ಬೆಳಗ್ಗೆ 10.30ರಿಂದ ನ.26ರ ಸಂಜೆವರೆಗೆ ನಿರಂತರವಾಗಿ ಕಂಬಳ ನಡೆಯಲಿದೆ.

ದಾಖಲೆ ನಿರ್ಮಿಸಿದ ಕಣ:

ಪ್ರಸ್ತುತ ಬೆಂಗಳೂರಿನ ಅರಮನೆ ಮೈದಾನದ 70 ಸ್ಥಳದಲ್ಲಿ ಕಂಬಳವನ್ನು ಆಯೋಜಿಸಲಾಗಿದೆ. 155 ಮೀಟರ್‌ನ ಕೆರೆ (ಕಣ) ನಿರ್ಮಿಸುವ ಮೂಲಕ ಅತೀ ದೊಡ್ಡ ಕೆರೆ ಎನ್ನುವ ಇತಿಹಾಸ ಸೃಷ್ಟಿ ಮಾಡಿದೆ. ಸಾಮಾನ್ಯ ಕರಾವಳಿ ಕಂಬಳದಲ್ಲಿ ಕೆರೆ 147 ಮೀಟರ್‌ ಇರುತ್ತದೆ. ಕೆರೆಯಲ್ಲಿ ಏಕಕಾಲಕ್ಕೆ ಎರಡು ಜೋಡು ಕೋಣಗಳು ಓಡಲು ಅವಕಾಶ ಕಲ್ಪಿಸಲಾಗಿದೆ.

ಕಣದ ವಿಶೇಷತೆ:

ಹಸನಾದ ಮಣ್ಣು ಜಿಗುಟಾಗದಿರಲು ಮರಳು ಸೇರಿಸಿ ನೀರು ನಿಲ್ಲಿಸಿ ಕೃತಕವಾಗಿ ಕೆಸರ ಗದ್ದೆ ನಿರ್ಮಾಣ ಮಾಡಲಾಗಿದೆ. ಕಣವು ಒಂದು ಬದಿಯಿಂದ ಇಳಿಜಾರಾಗಿ ಕಣದೊಳಕ್ಕೆ ಕೋಣಗಳನ್ನು ಇಳಿಸಲು ದಾರಿ ನಿರ್ಮಿಸಲಾಗಿದೆ. ಮುಕ್ತಾಯದ ಕೊನೆಯಲ್ಲಿ ಕಣದಿಂದ ಏರಿಯೊಂದನ್ನು ರಚಿಸಿರುತ್ತಾರೆ. ವೇಗವಾಗಿ ಓಡಿ ಬಂದ ಕೋಣಗಳ ವೇಗಕ್ಕೆ ಈ ಏರಿಯು ಕಡಿವಾಣ ಹಾಕುತ್ತದೆ.

200 ಕೋಣಗಳು ಆಗಮನ!:  

ಉಡುಪಿ, ಮಂಗಳೂರು ಭಾಗದಿಂದ 200ಕ್ಕೂ ಅಧಿಕ ಕೋಣಗಳ ಮಾಲೀಕರು ಕಂಬಳದಲ್ಲಿ ಭಾಗವಹಿಸಲು ನೋಂದಾಯಿಸಿಕೊಂಡಿದ್ದಾರೆ. 13 ಸೆಕೆಂಡಿನಲ್ಲಿ ಓಟ ಮುಗಿಸುವ ಕೋಣಗಳಿಗೆ ಮೊದಲ ಪ್ರಾಶಸ್ತ್ಯ ನೀಡಲಾಗಿದೆ. ನ.23ರಂದು ಉಪ್ಪಿನಂಗಡಿಯಿಂದ ಲಾರಿ ಮೂಲಕ ಬೆಂಗಳೂರಿಗೆ ಹೊರಡಲಿವೆ. ಅಷ್ಟೂ ಕೋಣಗಳನ್ನು ಹಾಸನ ಹಾಗೂ ನೆಲಮಂಗಲದಲ್ಲಿ ಅದ್ಧೂರಿಯಾಗಿ ಸ್ವಾಗತಿಸಲಾಗುತ್ತದೆ. ಕೋಣಗಳಿಗೆ ಈಜಾಡಲು ಹಾಗೂ ವಿಶ್ರಾಂತಿ ತೆಗೆದುಕೊಳ್ಳಲು ಅರಮನೆ ಮೈದಾನದ ಕೆರೆಯನ್ನು ಬಳಸಿಕೊಳ್ಳಲಾಗುತ್ತಿದೆ.

ತಾರೆಯ ದಂಡು!

ಕಂಬಳಕ್ಕೆ ಬಾಲಿವುಡ್‌ ನಟಿ ಐಶ್ವರ್ಯಾ ರೈ, ಕರಾವಳಿ ಬೆಡಗಿ ಅನುಷ್ಕಾ ಶೆಟ್ಟಿ , ಯಶ್‌, ದರ್ಶನ್‌, ಸುನೀಲ್‌ ಶೆಟ್ಟಿ ಸೇರಿದಂತೆ ಚಿತ್ರರಂಗದಲ್ಲಿ ಇರುವ ಕರಾವಳಿ ಮೂಲದ ಸಿನಿಮಾತಾರೆಯರು ಆಗಮಿಸಲಿದ್ದಾರೆ. ಇನ್ನೂ ಕ್ರಿಕೆಟಿಗ ಕೆ.ಎಲ್‌. ರಾಹುಲ್‌, ಮೊಹಮ್ಮದ್‌ ಶಮಿ ಸೇರಿದಂತೆ ವಿವಿಧ ಕ್ಷೇತ್ರದ ಸಾಧಕರು ಕಂಬಳದ ಮೆರಗು ಹೆಚ್ಚಿಸಲಿದ್ದಾರೆ.

ಪ್ರತಿಷ್ಠೆಯ ಸಂಕೇತ:

ಕಂಬಳದ ಕೋಣವನ್ನು ಸಾಕುವುದೆಂದರೆ ಅದು ಸಾಮಾನ್ಯವಲ್ಲ. ಒಳ್ಳೆಯ ಜಾತಿಯ ಕೋಣವನ್ನು ಆರಿಸಿ ಆರೈಕೆ ಮಾಡಿ, ಕಂಬಳಕ್ಕೆ ಸಜ್ಜುಗೊಳಿಸುವುದರ ಜತೆಗೆ ಅಂತಹ ಕೋಣಗಳನ್ನು ಓಡಿಸಲು ಬೇಕಾದ ಜನವನ್ನು ತಯಾರಿ ಮಾಡುವುದೂ ಕೋಣದ ಯಜಮಾನನಿಗೆ ಅಗತ್ಯ. ಇದು ಖರ್ಚಿನ ಬಾಬ್ತೂ  ಹೌದು, ಆ ಕಾರಣಕ್ಕಾಗಿ ಪ್ರತಿಷ್ಠೆಯ ಸಂಕೇತವೂ ಹೌದು.

8 ಲಕ್ಷ ಜನರ ನಿರೀಕ್ಷೆ: 

ಮೊದಲ ಬಾರಿಗೆ ಸಿಲಿಕಾನ್‌ ಸಿಟಿಯಲ್ಲಿ ಕಂಬಳ ನಡೆಯುತ್ತಿರುವ ಹಿನ್ನೆಲೆಯಲ್ಲಿ 5 ರಿಂದ 8 ಲಕ್ಷ ಜನರು ಬರುವ ನಿರೀಕ್ಷೆ ಇದೆ. ಕರಾವಳಿಯಿಂದ ಉದ್ಯೋಗ ಅರಿಸಿಕೊಂಡ ಬಂದವರು ಹಾಗೂ ಕಂಬಳ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲಿದ್ದಾರೆ. ಬಂದವರಿಗೆ ಕಂಬಳ ವೀಕ್ಷಣೆಗೆ ಬೇಕಾದ ವಿವಿಐಪಿಗಳಿಗೆ 10,000 ಆಸನದ ವ್ಯವಸ್ಥೆಯನ್ನು ಸಹ ಕಲ್ಪಿಸಲಿದ್ದಾರೆ. ಜತೆಗೆ ಸಾರ್ವಜನಿಕರು ಕಂಬಳವನ್ನು ಕರಾವಳಿ ಗ್ರಾಮೀಣ ಭಾಗದಲ್ಲಿ ವೀಕ್ಷಿಸುವ ಶೈಲಿಯಲ್ಲಿ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ.

ಬಹುಮಾನ ಘೋಷಣೆ ಹೇಗೆ?:

ವಿವಿಧ ಭಾಗದಲ್ಲಿ ಕಂಬಳ ನಡೆಯಲಿದ್ದು, ಅದರ ವಿಜಯಶಾಲಿಗಳ ಆಯ್ಕೆ ಭಿನ್ನವಾಗಿರಲಿದೆ. ಹಗ್ಗ, ನೇಗಿಲು, ಹಲಗೆ ಓಟಗಳಲ್ಲಿ ವೇಗ ಮುಖ್ಯವಾಗಿರುತ್ತದೆ. ಯಾವ ಜೋಡಿ ವೇಗವಾಗಿ ಓಟ ಮುಗಿಸುತ್ತವೆಯೋ ಅವು ವಿಜಯೀ ಜೋಡಿಗಳು. ಕೆನೆ ಹಲಗೆ ಓಟ ಸ್ವಲ್ಪ ಭಿನ್ನ, ಓಟದ ಗದ್ದೆಯ ಮಧ್ಯೆ ಅಡ್ಡ ಹಾಯುವಂತೆ ನಿಗದಿತ ಎತ್ತರದಲ್ಲಿ ಮೇಲೆ ಕಟ್ಟಲಾದ ಬಟ್ಟೆಗೆ ತಾಗುವಂತೆ ಕೆನೆ ಹಲಗೆಯ ಮೂಲಕ ಕೆಸರು ನೀರು ಚಿಮ್ಮಿಸಬೇಕು. ಯಾವ ಜೋಡಿ ಅತೀ ಎತ್ತರಕ್ಕೆ ಕೆಸರು ನೀರನ್ನು ಚಿಮ್ಮಿಸುತ್ತವೆಯೋ ಅವು ವಿಜಯಿಯಾಗುತ್ತವೆ. ಹೆಚ್ಚಾಗಿ 7.50 ಕೋಲು ಎತ್ತರದಿಂದ ಈ ಸ್ಪರ್ಧೆ ಆರಂಭವಾಗುತ್ತದೆ. ಈ ಪ್ರತಿಯೊಂದು ವಿಧದಲ್ಲೂ ಕಿರಿಯ ಮತ್ತು ಹಿರಿಯ ವಿಭಾಗಗಳಿರುತ್ತವೆ.

ಯಾವಾಗ ಕಂಬಳ?

ನ.25, 26ರಂದು

8000:  ಕಾರು ಹಾಗೂ ಬೈಕ್‌ ಪಾರ್ಕಿಂಗ್‌

600:  ವಿಐಪಿ ಕಾರು ಪಾರ್ಕಿಂಗ್‌

200:  ಲಾರಿಗಳಿಗೆ ಪ್ರತ್ಯೇಕ ವ್ಯವಸ್ಥಿತ ಪಾರ್ಕಿಂಗ್‌

ಗೆದ್ದವರಿಗೆ ಚಿನ್ನ!:

ಕರಾವಳಿಯಲ್ಲಿ ನಡೆಯುವ ಕಂಬಳದಲ್ಲಿ ಗೆದ್ದ ಜೋಡಿ ಕೋಣಗಳಿಗೆ 1 ಪವನ್‌ (8 ಗ್ರಾಂ) ಚಿನ್ನ ಹಾಗೂ 50,000 ನಗದು ಪುರಸ್ಕಾರ ನಿಗದಿಯಾಗಿರುತ್ತದೆ. ಆದರೆ, ಬೆಂಗಳೂರು ಕಂಬಳದಲ್ಲಿ ಪ್ರಥಮ ಬಹುಮಾನ ಪಡೆದ ಜೋಡಿಗೆ 2 ಪವನ್‌ (16 ಗ್ರಾಂ) ಚಿನ್ನ ಹಾಗೂ 1 ಲಕ್ಷ ನಗದು, ದ್ವಿತೀಯ ಬಹುಮಾನ 1 ಪವನ್‌ ಚಿನ್ನ ಹಾಗೂ 50 ಸಾವಿರ ನಗದು, 3ನೇ ಬಹುಮಾನ 25,000 ರೂ. ನಗದು ಬಹುಮಾನವಿದೆ.

170 ಸ್ಟಾಲ್‌- ಕರಾವಳಿ ಖಾದ್ಯ:

ಕಂಬಳದಲ್ಲಿ 170 ಮಳಿಗೆಗಳು ಕರಾವಳಿಯ ಖಾದ್ಯಗಳನ್ನು ಉಣಬಡಿಸಲಿವೆ. ಪುಂಡಿ ಗಸಿ, ನೀರು ದೋಸೆ, ಚಿಕನ್‌ ಸುಕ್ಕಾ, ಕೊಟ್ಟೆ ಕಡಬು, ಮಂಗಳೂರು ಬನ್ಸ್‌, ಸುಕ್ಕಿನ ಉಂಡೆ, ಗೋಳಿ ಬಜೆ, ಪತ್ರೊಡೆ, ಫಿಶ್‌ ಫ್ರೈ, ಮೀನ್‌ ಸಾರು, ಹಾಲು ಬಾಯಿ, ಚಟ್ನಿ ಸಾರು, ಮರ ಗೆಣಸು ಸೇರಿದಂತೆ ಖಾದ್ಯಗಳು ಇರಲಿವೆ.

ಯಾವ ಓಟಗಳಿವೆ?:

ಬೆಂಗಳೂರು ಕಂಬಳದಲ್ಲಿ ಕಿರಿಯ ಹಾಗೂ ಹಿರಿಯ ವಿಭಾಗದಲ್ಲಿ ಕಂಬಳ ಕ್ರೀಡಾಕೂಟ ನಡೆಯಲಿದೆ. ಹಗ್ಗದ ಓಟ :

ಎರಡು ಕೋಣಗಳ ಕುತ್ತಿಗೆಗೆ ಕಟ್ಟಿದ ನೊಗದ ಮಧ್ಯೆ ಹಗ್ಗವೊಂದನ್ನು ಕಟ್ಟಿ, ಆ ಹಗ್ಗವನ್ನು ಹಿಡಿದು ಕೋಣಗಳನ್ನು ಓಡಿಸುವುದು.

ನೇಗಿಲು ಓಟ:

ಕೋಣಗಳ ಕುತ್ತಿಗೆಗೆ ಕಟ್ಟಿದ ನೊಗವೊಂದರ ಮಧ್ಯೆ ಮರದ ದಂಡವನ್ನು ಕಟ್ಟಿ, ಆ ದಂಡದ ಕೊನೆಗೆ ಸಣ್ಣ ನೇಗಿಲಿನಾಕಾರದ ಮರದ ತುಂಡೊಂದನ್ನು ಜೋಡಿಸಿ, ಆ ನೇಗಿಲನ್ನು ಹಿಡಿದು ಕೋಣಗಳನ್ನು ಓಡಿಸುವುದು.

ಅಡ್ಡ ಹಲಗೆ ಓಟ:

ನೊಗದ ಮಧ್ಯೆ ಉದ್ದನೆಯ ದಂಡು ಇರುವ ಅಡ್ಡ ಹಲಗೆಯನ್ನು ಕಟ್ಟಿ, ಆ ಹಲಗೆಯ ಮೇಲೆ ನಿಂತು ಕೋಣಗಳನ್ನು ಓಡಿಸುವುದು. ಈ ತರಹದ ಹಲಗೆಯನ್ನು ಉತ್ತ ಗದ್ದೆಯ ಮಣ್ಣನ್ನು ಸಮನಾಗಿ ಹರಡಲು ಉಪಯೋಗಿಸುತ್ತಾರೆ.

ಕೆನೆ ಹಲಗೆ ಓಟ:

ನೊಗದ ಮಧ್ಯೆ ಉದ್ದನೆಯ ದಂಡು ಇರುವ ದಪ್ಪನೆಯ ಮರದ ತುಂಡಿನಿಂದ ಮಾಡಿದ ಕೆನೆ ಹಲಗೆಯನ್ನು ಕಟ್ಟಿ ಅದರ ಮೇಲೆ ಒಂದು ಕಾಲನ್ನಿಟ್ಟು ಕೋಣಗಳನ್ನು ಓಡಿಸುವುದು. ಇದರಲ್ಲಿ ಕೆನೆ ಹಲಗೆಯಿಂದ ಮೇಲಕ್ಕೆ ಕೆಸರು ನೀರು ಚಿಮ್ಮಿಸುವುದು ಮುಖ್ಯ

ತೃಪ್ತಿ ಕುಮ್ರಗೋಡು

ಟಾಪ್ ನ್ಯೂಸ್

Veerappa Moily ಯುಪಿಎ ಬರ ಪರಿಹಾರ ಬಾಕಿ ಇಟ್ಟಿರಲಿಲ್ಲ

Veerappa Moily ಯುಪಿಎ ಬರ ಪರಿಹಾರ ಬಾಕಿ ಇಟ್ಟಿರಲಿಲ್ಲ

Dakshina Kannada ಚೆಕ್‌ಪೋಸ್ಟ್‌ ಕಾರ್ಯ ನಿರ್ವಹಣೆಗೆ ಡಿಸಿ ಸೂಚನೆ

Modi (2)

PM Modi ಸ್ಪರ್ಧೆಗೆ ನಿರ್ಬಂಧ: ದಿಲ್ಲಿ ಹೈಕೋರ್ಟ್‌ ನಕಾರ

Ullal ಲೈಂಗಿಕ ಕಿರುಕುಳ: ಪೋಕ್ಸೋ ಪ್ರಕರಣ; ಇಬ್ಬರು ವಶಕ್ಕೆ

Ullal ಲೈಂಗಿಕ ಕಿರುಕುಳ: ಪೋಕ್ಸೋ ಪ್ರಕರಣ; ಇಬ್ಬರು ವಶಕ್ಕೆ

Kundapura: ಪಾದಚಾರಿಗೆ ಬೈಕ್‌ ಢಿಕ್ಕಿ

Kundapura: ಪಾದಚಾರಿಗೆ ಬೈಕ್‌ ಢಿಕ್ಕಿ

Mangaluru; ಪ್ರಯಾಣಿಕರ ಗಮನಕ್ಕೆ; ಹಲವು ರೈಲುಗಳ ಸೇವೆಯಲ್ಲಿ ವ್ಯತ್ಯಯ

Mangaluru; ಪ್ರಯಾಣಿಕರ ಗಮನಕ್ಕೆ; ಹಲವು ರೈಲುಗಳ ಸೇವೆಯಲ್ಲಿ ವ್ಯತ್ಯಯ

1-wewqwq-eqw

Amit Shah ನಕಲಿ ವೀಡಿಯೋ :ತೆಲಂಗಾಣ ಸಿಎಂಗೆ ಪೊಲೀಸ್‌ ಸಮನ್ಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್‌

Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್‌

Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್‌ ಕೋಡ್‌ ಅಂಟಿಸಿದ್ದ ಉದ್ಯಮಿ ಸೆರೆ

Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್‌ ಕೋಡ್‌ ಅಂಟಿಸಿದ್ದ ಉದ್ಯಮಿ ಸೆರೆ

Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್‌ ನೀಚ ಕೃತ್ಯ

Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್‌ ನೀಚ ಕೃತ್ಯ

ಚಾಕೋಲೆಟ್‌ ಕೊಡ್ತೇನೆಂದು ಮನೆಗೆ ಕರೆದು ಬಾಲಕಿಗೆ ಲೈಂಗಿಕ ದೌರ್ಜನ್ಯ: ಇಬ್ಬರು ಬಂಧನ

ಚಾಕೋಲೆಟ್‌ ಕೊಡ್ತೇನೆಂದು ಮನೆಗೆ ಕರೆದು ಬಾಲಕಿಗೆ ಲೈಂಗಿಕ ದೌರ್ಜನ್ಯ: ಇಬ್ಬರು ಬಂಧನ

Bengaluru: ಚೆಕ್‌ ದುರ್ಬಳಕೆ; ಕ್ಯಾಷಿಯರ್‌, ಎಲ್‌ಐಸಿ ಏಜೆಂಟ್‌ಗೆ ಜೈಲು

Bengaluru: ಚೆಕ್‌ ದುರ್ಬಳಕೆ; ಕ್ಯಾಷಿಯರ್‌, ಎಲ್‌ಐಸಿ ಏಜೆಂಟ್‌ಗೆ ಜೈಲು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Veerappa Moily ಯುಪಿಎ ಬರ ಪರಿಹಾರ ಬಾಕಿ ಇಟ್ಟಿರಲಿಲ್ಲ

Veerappa Moily ಯುಪಿಎ ಬರ ಪರಿಹಾರ ಬಾಕಿ ಇಟ್ಟಿರಲಿಲ್ಲ

anna 2

Hate speech: ಅಣ್ಣಾಮಲೈ ವಿಚಾರಣೆಗೆ ತಡೆ ವಿಸ್ತರಣೆ

“ಕೃಷಿ ರಕ್ಷಣೆಗಾಗಿ ಆಯುಧ ಹಿಂಪಡೆಯಿರಿ’: ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌

“ಕೃಷಿ ರಕ್ಷಣೆಗಾಗಿ ಆಯುಧ ಹಿಂಪಡೆಯಿರಿ’: ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌

UGC

UGC;ಉಪನ್ಯಾಸಕರ ಅರ್ಹತಾ ಪರೀಕ್ಷೆ ಜೂ.18ಕ್ಕೆ

drowned

Kenya; ಭಾರೀ ಮಳೆಗೆ ಒಡೆದ ಡ್ಯಾಮ್‌: ಕನಿಷ್ಠ 40 ಸಾವು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.