ಕಂಡೋರ ಕಾರು ಮಾರಿ ಜೂಜಾಡುತ್ತಿದ್ದವನ ಸೆರೆ
Team Udayavani, Nov 10, 2018, 11:48 AM IST
ಬೆಂಗಳೂರು: ಕಾರು ಬದಲಾಯಿಸಲು ಬಂದ ಗ್ರಾಹಕರನ್ನು ಪರಿಚಯಿಸಿಕೊಂಡು ಅವರಿಂದ ಕಾರು ಪಡೆದು ಮತ್ತೂಬ್ಬರಿಗೆ ಮಾರಾಟ ಮಾಡಿ ಗೋವಾದಲ್ಲಿ ಜೂಜಾಟ ಆಡುವ ಹವ್ಯಾಸ ಬೆಳೆಸಿಕೊಂಡಿದ್ದ ಡಿಪ್ಲೊಮಾ ಪದವೀಧರನನ್ನು ವಿದ್ಯಾರಣ್ಯಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಸಲಿಂಗಪ್ಪ ಲೇಔಟ್ನ ಶ್ರೀನಾಥ್(30) ಬಂಧಿತ. ಕಾರು ಮಾರಾಟ ಶೋ ರೂಂನಲ್ಲಿ ಕೆಲಸ ಮಾಡುತ್ತಿದ್ದ ಶ್ರೀನಾಥ್, ತಮ್ಮ ಕಾರನ್ನು ಬದಲಾಯಿಸಿಕೊಂಡು ಬೇರೆ ಕಾರನ್ನು ಕೊಳ್ಳಲು ಶೂ ರೂಂಗೆ ಬರುತ್ತಿದ್ದ ಗ್ರಾಹಕರನ್ನು ಪರಿಚಯಿಸಿಕೊಂಡು ಹೆಚ್ಚಿನ ಬೆಲೆಗೆ ಮಾರಾಟ ಮಾಡಿಕೊಡುತ್ತೇನೆ ಎಂದು ಹೇಳಿ ಪಡೆದುಕೊಳ್ಳುತ್ತಿದ್ದ.
ಬಳಿಕ ಅದೇ ಕಾರುಗಳನ್ನು ಬೇರೊಬ್ಬರಿಗೆ ಮಾರಾಟ ಮಾಡಿ ಬಂದ ಹಣದಲ್ಲಿ ಗೋವಾಗೆ ತೆರಳಿ ಕ್ಯಾಸಿನೋ (ಜೂಜಾಟ) ಆಡುತ್ತಿದ್ದ. ಮತ್ತೂಬ್ಬರ ಕಾರುಗಳನ್ನು ಮಾರಾಟ ಮಾಡಿ ಹಣ ಮಾಡುತ್ತಿದ್ದ ಆರೋಪಿ ಶ್ರೀನಾಥ್, ಕ್ಯಾಸಿನೋ ಆಡುತ್ತಿದ್ದ ಒಂದು ವೇಳೆ ಲಾಭ ಬಂದರೆ ಅದೇ ಹಣದಲ್ಲಿ ಕಾರು ಮಾಲೀಕರಿಗೆ ಹಣ ನೀಡುತ್ತಿದ್ದ.
ಇದುವರೆಗೂ, 12 ಮಂದಿಗೆ ಈ ರೀತಿ ಹಣ ವಾಪಾಸ್ ನೀಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಕೆಲ ದಿನಗಳ ಹಿಂದೆ ಈತನ ಮಾತನ್ನು ನಂಬಿದ 3 ಮಂದಿ ಗ್ರಾಹಕರಿಂದ ಕಾರು ಪಡೆದಿದ್ದ ಶ್ರೀನಾಥ್, ಮಾಲೀಕರಿಗೆ ಯಾವುದೇ ಮಾಹಿತಿ ನೀಡಿರಲಿಲ್ಲ.
ಮಾಲೀಕರು ಶೋ ರೂಂಗೆ ಬಂದು ವಿಚಾರಿಸಿದಾಗ ವಂಚನೆ ನಡೆದಿರುವುದು ಗೊತ್ತಾಗಿತ್ತು. ಹೀಗಾಗಿ ಶೋ ರೂಂ ಮಾಲೀಕರು ಆತನನ್ನು ಕೆಲಸದಿಂದ ತೆಗೆದು ಹಾಕಿದ್ದರು. ಪ್ರಕರಣ ಸಂಬಂಧ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದು, 15 ಲಕ್ಷ ರೂ. ಮೌಲ್ಯದ ಮೂರು ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Ramanagara: ಬಿರುಗಾಳಿ ಮಳೆಯ ಅವಾಂತರ… ನೂರಾರು ಮರಗಳು ಧರೆಗೆ, ಹಾರಿ ಹೋದ ಮನೆಯ ಮೇಲ್ಛಾವಣಿ
Madikeri ಮೇಲುಸೇತುವೆ ಕಾಮಗಾರಿ ಪೂರ್ಣ; ಇನ್ನು ಪ್ರವಾಹದ ಭೀತಿ ಇಲ್ಲ
Horoscope: ಈ ರಾಶಿಯವರ ಉದ್ಯೋಗ ಸ್ಥಾನದಲ್ಲಿ ಹಿತಶತ್ರುಗಳಿಂದ ತೊಂದರೆಯಾಗಲಿದೆ
ಗುಡುಗು-ಸಿಡಿಲಿನಿಂದ ಅಪಾಯ ತಗ್ಗಿಸಲು ಮುನ್ನೆಚ್ಚರಿಕೆ ಸೂತ್ರ
Sugar ಕಾರ್ಖಾನೆಗಳಿಗೆ ಈಗ ಕಬ್ಬು “ಬರ’! ನೀರಿನ ಕೊರತೆಯಿಂದ ಬೆಳೆಯದ ಕಬ್ಬು