Bangalore: ಕುಡಿದು ಗಲಾಟೆ ಮಾಡುತ್ತಿದ್ದ ಪುತ್ರಿ ಮೇಲೆ ದೂರು
Team Udayavani, Jan 6, 2024, 11:01 AM IST
ಬೆಂಗಳೂರು: ಮದ್ಯಪಾನ ಮಾಡಿಕೊಂಡು ಬಂದು ಪಾಲಕರಿಗೆ ಹಲ್ಲೆ ನಡೆಸಿದ ಮಗಳ ವಿರುದ್ಧ ತಾಯಿಯೇ ಗಿರಿನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮುನೇಶ್ವರ ಬ್ಲಾಕ್ನ ನಿವಾಸಿ ಗೀತಾರಾಣಿ (65) ಕೊಟ್ಟ ದೂರಿನ ಆಧಾರದ ಮೇಲೆ ಇವರ ಪುತ್ರಿ ಧಾತ್ರಿ ಎಂಬಾಕೆಯ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಗೀತಾರಾಣಿ ನಿವೃತ್ತ ಸರ್ಕಾರಿ ನೌಕರರಾಗಿದ್ದು, ಇವರ ಪತಿಗೂ ಮಾನಸಿಕ ಆರೋಗ್ಯ ಸರಿ ಇಲ್ಲದೇ ಸಾಕಷ್ಟು ನೊಂದಿದ್ದರು. ಜ.3ರಂದು ಮಧ್ಯಾಹ್ನ 12.45ರಲ್ಲಿ ಮಗಳು ಧಾತ್ರಿ ಕುಡಿದು ಬಂದು ಗಲಾಟೆ ಮಾಡಿ ನನಗೆ ದೊಣ್ಣೆಯಲ್ಲಿ ಹೊಡೆದಿದ್ದಾಳೆ. ಇವಳಿಗೆ ಗಂಡ ಇಲ್ಲದ ಕಾರಣ ನಮ್ಮ ಮೇಲಿನ ಮನೆಯಲ್ಲಿಯೇ ವಾಸಿಸುತ್ತಿದ್ದಾಳೆ. ಆಗಾಗ ಕುಡಿದು ಗಲಾಟೆಗಳನ್ನು ಮಾಡುತ್ತಾಳೆ ಎಂದು ಎಫ್ಐಆರ್ನಲ್ಲಿ ಗೀತಾರಾಣಿ ಆರೋಪಿಸಿದ್ದಾರೆ.
ಮಗಳ ವಿರುದ್ಧ ಕ್ರಮ ಕೈಗೊಳ್ಳಿ ಎಂದ ಪಾಲಕರು: ಈ ಹಿಂದೆಯೂ ಧಾತ್ರಿ ಮೇಲೆ ಪೊಲೀಸ್ ಕೇಸ್ ಆಗಿದ್ದು, ಇದೀಗ ಮತ್ತೆ ಹಳೆ ಚಾಳಿ ಶುರು ಮಾಡಿಕೊಂಡಿದ್ದಾಳೆ. ಮನೆಯನ್ನು ಅವಳ ಹೆಸರಿಗೆ ನೋಂದಣಿ ಮಾಡಿ ಕೊಡಲು ಒತ್ತಾಯಿಸುತ್ತಾಳೆ. ಇಲ್ಲದಿದ್ದರೆ ಕೊಲೆ ಮಾಡುವುದಾಗಿ ಬೆದರಿಸಿ, ಚಿತ್ರಹಿಂಸೆ ನೀಡುತ್ತಿದ್ದಾಳೆ. ಪೊಲೀಸರಿಗೆ ಕರೆ ಮಾಡಿ ವಿಚಾರ ತಿಳಿಸಿದಾಗ ಅವರು ಮನೆಗೆ ಬಂದು ವಿಚಾರಿಸಿದ್ದಾರೆ. ಆದರೆ, ಹುಡುಗಿ ಮದ್ಯಪಾನ ಮಾಡಿರುವ ಹಿನ್ನೆಲೆಯಲ್ಲಿ ಠಾಣೆಗೆ ಕರೆದುಕೊಂಡು ಹೋಗಲು ಬರುವುದಿಲ್ಲ ಎಂದು ಹೇಳಿದರು.
ನಾನು ಮಾಡಿದ ತಪ್ಪಿಗೆ ಅವಳಿಂದ ಏಟು ತಿಂದು ಠಾಣೆಗೆ ಬಂದು ದೂರು ನೀಡುತ್ತಿದ್ದೇನೆ. ನನಗೆ ಹಾಗೂ ನನ್ನ ಪತಿ ಮೇಲೆ ಹಲ್ಲೆ ಮಾಡಿ ಬೆದರಿಕೆ ಹಾಕಿರುವ ಧಾತ್ರಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಗೀತಾರಾಣಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ
Pramod, Pruthvi Ambaar: ಪೋಸ್ಟ್ ಪ್ರೊಡಕ್ಷನ್ನಲ್ಲಿ ‘ಭುವನಂ ಗಗನಂ’
Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ
Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!
LS Polls: ರಾಷ್ಟ್ರ ಪ್ರೇಮ ಬಿಜೆಪಿಯವರಿಂದ ಕಲಿಯಬೇಕಾಗಿಲ್ಲ: ಮಂಜುನಾಥ್ ಭಂಡಾರಿ