ಇಲಾಖಾವಾರು ಅನುದಾನ ಹಂಚಿಕೆ ವ್ಯತ್ಯಯ
Team Udayavani, Jul 6, 2018, 11:57 AM IST
ಬೆಂಗಳೂರು: ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಮಂಡಿಸಿದ ಬಜೆಟ್ಅನ್ನು ಪರಿಷ್ಕರಣೆ ಮಾಡಿ ಮಂಡಿಸಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಕೆಲವು ಇಲಾಖೆಗಳಿಗೆ ಅನುದಾನ ಕಡಿತಗೊಳಿಸಿದರೆ ಇನ್ನು ಕೆಲವು ಇಲಾಖೆಗಳ ಅನುದಾನ ಹೆಚ್ಚಳ ಮಾಡಿದ್ದಾರೆ.
2,18,488 ಕೋಟಿ ರೂ. ಮೊತ್ತದ ಪರಿಷ್ಕೃತ ಬಜೆಟ್ ಮಂಡಿಸಿರುವ ಮುಖ್ಯಮಂತ್ರಿ ಕುಮಾರಸ್ವಾಮಿ, ಸಿದ್ದರಾಮಯ್ಯ ಮಂಡಿಸಿದ್ದ ಬಜೆಟ್ ಗಾತ್ರವನ್ನು 9307 ಕೋಟಿ ರೂ.ನಷ್ಟು ಹಿಗ್ಗಿಸಿದ್ದಾರೆ. ಮುಖ್ಯವಾಗಿ ಇತರೆ ಇಲಾಖೆಗಳಿಗೆ ನೀಡಿರುವ ಅನುದಾನದಲ್ಲಿ 7115 ಕೋಟಿ ರೂ. ಹೆಚ್ಚಳ ಮಾಡಲಾಗಿದ್ದರೆ, ಸಚಿವ ಎಚ್.ಡಿ.ರೇವಣ್ಣ ಅವರು ಹೊಂದಿರುವ ಲೋಕೋಪಯೋಗಿ ಇಲಾಖೆಗೆ 929 ಕೋಟಿ ರೂ. ಹೆಚ್ಚುವರಿಯಾಗಿ ಒದಗಿಸಲಾಗಿದೆ.
ಅದೇ ರೀತಿ ಸಚಿವ ಆರ್.ವಿ.ದೇಶಪಾಂಡೆ ಹೊಂದಿರುವ ಕಂದಾಯ ಇಲಾಖೆಗೆ 538 ಕೋಟಿ ರೂ. ಮೊತ್ತ ಹೆಚ್ಚು ಮಾಡಲಾಗಿದೆ. ಇನ್ನು ಶಿಕ್ಷಣ ಇಲಾಖೆಗೆ 283 ಕೋಟಿ ರೂ., ಒಳಾಡಳಿತ ಮತ್ತು ಸಾರಿಗೆ ಇಲಾಖೆಗೆ 862 ಕೋಟಿ ರೂ., ಸಮಾಜ ಕಲ್ಯಾಣ ಇಲಾಖೆಗೆ 33 ಕೋಟಿ ರೂ. ಕಡಿಮೆ ಮಾಡಲಾಗಿದೆ.
ಇಲಾಖೆ ಕುಮಾರಸ್ವಾಮಿ ಸಿದ್ದರಾಮಯ್ಯ ವ್ಯತ್ಯಾಸ
ಶಿಕ್ಷಣ 26,581 ಕೋಟಿ ರೂ. 26,864 ಕೋಟಿ ರೂ. 283 ಕೋಟಿ ರೂ. ಕಡಿಮೆ
ಜಲ ಸಂಪನ್ಮೂಲ 18,142 ಕೋಟಿ ರೂ 18,112 ಕೋಟಿ ರೂ. 30 ಕೋಟಿ ರೂ. ಹೆಚ್ಚು
ನಗರಾಭಿವೃದ್ಧಿ 17,727 ಕೋಟಿ ರೂ. 17,196 ಕೋಟಿ ರೂ. 531 ಕೋಟಿ ರೂ. ಹೆಚ್ಚು
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ 14,449 ಕೋಟಿ ರೂ. 14,268 ಕೋಟಿ ರೂ. 181 ಕೋಟಿ ರೂ. ಹೆಚ್ಚು
ಇಂಧನ 14,123 ಕೋಟಿ ರೂ. 14,136 13 ಕೋಟಿ ರೂ. ಕಡಿಮೆ
ಸಮಾಜ ಕಲ್ಯಾಣ 11,788 ಕೋಟಿ ರೂ. 11,821 ಕೋಟಿ ರೂ. 33 ಕೋಟಿ ರೂ. ಕಡಿಮೆ
ಲೋಕೋಪಯೋಗಿ 10,200 ಕೋಟಿ ರೂ. 9,271 ಕೋಟಿ ರೂ. 929 ಕೋಟಿ ರೂ. ಹೆಚ್ಚು
ಒಳಾಡಳಿತ ಮತ್ತು ಸಾರಿಗೆ 7,993 ಕೋಟಿ ರೂ. 8,855 ಕೋಟಿ ರೂ. 862 ಕೋಟಿ ರೂ. ಕಡಿಮೆ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ 9,317 ಕೋಟಿ ರೂ. 8,822 ಕೋಟಿ ರೂ. 495 ಕೋಟಿ ರೂ. ಹೆಚ್ಚು
ಕೃಷಿ ಮತ್ತು ತೋಟಗಾರಿಕೆ 7,642 ಕೋಟಿ ರೂ. 7,301 ಕೋಟಿ ರೂ. 339 ಕೋಟಿ ರೂ. ಹೆಚ್ಚು
ಕಂದಾಯ 7,180 ಕೋಟಿ ರೂ. 6,642 ಕೋಟಿ ರೂ. 538 ಕೋಟಿ ರೂ. ಹೆಚ್ಚು
ಮಹಿಳಾ ಮತ್ತು ಮಕ್ಕಳ ಕಲ್ಯಾಣ 5,725 ಕೋಟಿ ರೂ. 5,371 ಕೋಟಿ ರೂ. 354 ಕೋಟಿ ರೂ. ಹೆಚ್ಚು
ವಸತಿ 3,942 ಕೋಟಿ ರೂ. 3,942 ಕೋಟಿ ರೂ. ಬದಲಾವಣೆ ಇಲ್ಲ
ಆಹಾರ ಮತ್ತು ನಾಗರಿಕ ಸರಬರಾಜು 3,866 ಕೋಟಿ ರೂ. 3,882 ಕೋಟಿ ರೂ. 16 ಕೋಟಿ ರೂ. ಕಡಿಮೆ
ಇತರೆ 82,196 ಕೋಟಿ ರೂ 75,081 ಕೋಟಿ ರೂ. 7115 ಕೋಟಿ ರೂ. ಹೆಚ್ಚು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Reporters: ಪತ್ರಿಕಾ ವರದಿಗಾರನ ಮೇಲೆ ನಾಲ್ವರಿಂದ ಹಲ್ಲೆ; ಆರೋಪ
Bengaluru: ಬಕ್ರೀದ್ ನಿಮಿತ್ತ ನಾಳೆ ಹಲವೆಡೆ ಸಂಚಾರ ನಿರ್ಬಂಧ
Bengaluru City: ಬೆಂಗಳೂರು ವಿಭಜನೆ ಅಲ್ಲ, ವಿಸ್ತಾರಕ್ಕೆ ಶಿಫಾರಸು
Bengaluru Parks: ಪಾರ್ಕ್ಗಳಿಗೆ ಕ್ಯಾಮೆರಾ ಭದ್ರತೆ ಒದಗಿಸಲು ಆಗ್ರಹ
Annapurneshwari Police station: ಠಾಣೆಗೆ ಶಾಮಿಯಾನ ಹಾಕಿರುವ ಕುರಿತು ಸಾರ್ವಜನಿಕರ ಆಕ್ರೋಶ
MUST WATCH
ಹೊಸ ಸೇರ್ಪಡೆ
ICC T20 World Cup: ಇನ್ನು ಸೂಪರ್ 8 ಕದನ; ಇಲ್ಲಿದೆ ಭಾರತದ ಪಂದ್ಯಗಳ ವಿವರ
Sulya: ಶಾಲಾ ಆವರಣದಲ್ಲಿ ಕೊಲೆಗೈದ ಸ್ಥಿತಿಯಲ್ಲಿ ಯುವಕನ ಮೃತದೇಹ ಪತ್ತೆ
Train Mishap: ಕಾಂಚನಜುಂಗಾ ಎಕ್ಸ್ಪ್ರೆಸ್ಗೆ ಡಿಕ್ಕಿ ಹೊಡೆದ ಗೂಡ್ಸ್ ರೈಲು, ಹಲವರಿಗೆ ಗಾಯ
Udupi: ಮುಗಿದ ಗಡುವು; ಸಿಟಿ ಬಸ್ಸುಗಳ ಕರ್ಕಶ ಹಾರ್ನ್ ತೆರವುಗೊಳಿಸಿದ ಟ್ರಾಫಿಕ್ ಪೊಲೀಸರು
Dandeli: ಪಂಪ್ ಹೌಸ್ ಬಳಿ ಅಕ್ರಮವಾಗಿ ಕಟ್ಟಿಹಾಕಿದ್ದ 22 ಜಾನುವಾರುಗಳ ರಕ್ಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.