“ಮೋಡದ ಮರೆ’ಯಲ್ಲಿ ಮರೆಯಾದ ಮನ ಮೆಚ್ಚಿದ ನಿರ್ದೇಶಕ


Team Udayavani, Oct 30, 2018, 6:00 AM IST

v-21.jpg

ಬೆಂಗಳೂರು: ನಿರ್ದೇಶಕ ಎಂ.ಎಸ್‌.ರಾಜಶೇಖರ್‌ ಅಂದಾಕ್ಷಣ, ಥಟ್ಟನೆ ನೆನಪಾಗೋದು ನಟ ಶಿವರಾಜಕುಮಾರ್‌. ಅದಕ್ಕೆ ಕಾರಣ,
ಶಿವರಾಜಕುಮಾರ್‌ ಅವರಿಗಾಗಿಯೇ ಅತೀ ಹೆಚ್ಚು ಅಂದರೆ, 14 ಚಿತ್ರಗಳನ್ನು ನಿರ್ದೇಶಿಸಿದ ಹೆಗ್ಗಳಿಕೆ ಎಂ.ಎಸ್‌.ರಾಜಶೇಖರ್‌ ಅವರದ್ದಾಗಿತ್ತು. ಅಷ್ಟೇ ಅಲ್ಲ, ಡಾ.ರಾಜ ಕುಮಾರ್‌ ಸೇರಿ ಅವರ ಪುತ್ರರಾದ ಶಿವರಾಜಕುಮಾರ್‌ ಮತ್ತು ರಾಘವೇಂದ್ರ ರಾಜ 
ಕುಮಾರ್‌ ಚಿತ್ರಗಳನ್ನು ನಿರ್ದೇಶಿಸಿದ ಹೆಮ್ಮೆಯೂ ಅವರದು. 1985 ರಲ್ಲಿ ನಿರ್ದೇಶಕರಾಗಿ ಗುರುತಿಸಿಕೊಂಡ ಎಂ.ಎಸ್‌.ರಾಜಶೇಖರ್‌, 2006 ರವರೆಗೂ ಕನ್ನಡ ಚಿತ್ರರಂಗದಲ್ಲಿದ್ದುಕೊಂಡು ಸಿನಿಮಾ ನಿರ್ದೇಶಿಸಿದ್ದು ವಿಶೇಷ. ಡಾ.ರಾಜಕುಮಾರ್‌ ಅಭಿನಯದ “ಧ್ರುವತಾರೆ’ ಅವರ ಮೊದಲ ಚಿತ್ರವಾದರೆ, ರವಿಚಂದ್ರನ್‌ ನಟಿಸಿದ “ರವಿಶಾಸ್ತ್ರಿ’ ಅವರ ಕೊನೆಯ ಚಿತ್ರವಾಗಿತ್ತು. ಅವರ ನಿರ್ದೇಶನದ ಪಟ್ಟಿಯಲ್ಲಿ ಸುಮಾರು 35ಕ್ಕೂ ಹೆಚ್ಚು ಚಿತ್ರಗಳಿವೆ. ಈ ಪೈಕಿ ಡಾ.ರಾಜಕುಮಾರ್‌ ಅವರಿಗೆ 1985 ರಲ್ಲಿ “ಧ್ರುವತಾರೆ’ ಮತ್ತು 1986 ರಲ್ಲಿ “ಅನುರಾಗ ಅರಳಿತು’ ಚಿತ್ರ ನಿರ್ದೇಶಿಸಿದ್ದರು. ರಾಘವೇಂದ್ರ ರಾಜಕುಮಾರ್‌ ಅವರಿಗೆ ನಾಲ್ಕು ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಅವರ ನಿರ್ದೇಶನದಲ್ಲಿ ಎಂಟು ಕಾದಂಬರಿ ಆಧಾರಿತ ಚಿತ್ರಗಳಿವೆ ಎಂಬುದು ಮತ್ತೂಂದು ವಿಶೇಷ.

ಅಣ್ಣಾವ್ರಿಗೆ 2 ಕಾದಂಬರಿ ಚಿತ್ರ: ಎಂ.ಎಸ್‌.ರಾಜಶೇಖರ್‌ 1985ರಲ್ಲಿ ಡಾ.ರಾಜಕುಮಾರ್‌ ಅಭಿನಯದ “ಧ್ರುವತಾರೆ’ ಚಿತ್ರ ನಿರ್ದೇಶಿಸುವ ಮೂಲಕ ನಿರ್ದೇಶಕರಾ ದರು. “ಧ್ರುವತಾರೆ’ ವಿಜಯ ಸಾಸನೂರು ಅವರ “ಅಪರಂಜಿ’ ಕಾದಂಬರಿ ಆಧರಿತ ಚಿತ್ರ. ಅದು ಅದ್ಭುತ ಯಶಸ್ಸು ಕಂಡಿತ್ತು. ನಂತರ ರಾಜಶೇಖರ್‌ 1986ರಲ್ಲಿ ಅವರು ಪುನಃ ಡಾ.ರಾಜ ಕುಮಾರ್‌ ಅವರಿಗೆ “ಅನುರಾಗ ಅರಳಿತು’ ಚಿತ್ರ ನಿರ್ದೇಶಿಸಿದರು. ಅದೂ ಸಹ, ಎಚ್‌.ಜಿ.ರಾಧಾದೇವಿ ಅವರು ಬರೆದ “ಅನುರಾಗದ ಅಂತಃಪುರ’ ಕಾದಂಬರಿ ಆಧರಿಸಿದ ಚಿತ್ರವಾಗಿತ್ತು. 1986 ರಲ್ಲಿ ಶಿವರಾಜಕುಮಾರ್‌ಗೆ “ರಥಸಪ್ತಮಿ’ ಚಿತ್ರ ನಿರ್ದೇಶಿಸಿದರು. ಅದು ವಿದ್ಯಾಲತಾ ಬರೆದ “ರಥಸಪ್ತಮಿ’ ಕಾದಂಬರಿ ಆಧರಿಸಿತ್ತು. 1987 ರಲ್ಲಿ ಕುಂ.ವೀರಭದ್ರಪ್ಪ ಅವರ “ಬೇಟೆ’ ಕಾದಂಬರಿ ಇಟ್ಟುಕೊಂಡು “ಮನ ಮೆಚ್ಚಿದ ಹುಡುಗಿ’ ಚಿತ್ರ ನಿರ್ದೇಶಿಸಿದರು. ಅದು ಅದ್ಭುತ ಯಶಸ್ಸು ಪಡೆಯಿತು. 1992 ರಲ್ಲಿ ಸಾಯಿಸುತೆ ಅವರು ಬರೆದ ಕಾದಂಬರಿ “ಮಿಡಿದ ಶ್ರುತಿ’ ಚಿತ್ರ ವಾಯ್ತು. 1993 ಸಾಯಿಸುತೆ ಬರೆದ ಚಿರಬಾಂಧವ್ಯ ಕಾದಂಬರಿ ಅದೇ ಹೆಸರಿನ 
ಚಿತ್ರವಾಯಿತು. 1995 ರಲ್ಲಿ ವಿಜಯ್‌ ಸಾಸನೂರು ಬರೆದ “ಸವ್ಯಸಾಚಿ’, ಸಾಯಿಸುತೆ ಅವರ ಕಾದಂಬರಿ ಆಧರಿಸಿದ “ಮನ ಮಿಡಿಯಿತು’ ಚಿತ್ರವನ್ನು ನಿರ್ದೇಶಿಸಿದರು.

ಇವುಗಳೊಂದಿಗೆ 1991 ಮತ್ತು 1992 ರಲ್ಲಿ ಅಂಬರೀಷ್‌ ಅವರಿಗೆ ವಂಶಿ ಬರೆದ “ಹಿಮದ ಹೂವು’ ಕಾದಂಬರಿ ಆಧರಿಸಿ, “ಹೃದಯ ಹಾಡಿತು’ ಮತ್ತು “ಮಣ್ಣಿನ ದೋಣಿ’ ಚಿತ್ರ ನಿರ್ದೇಶಿಸಿದ್ದಾರೆ. 1993ರಲ್ಲಿ ಬಿಡುಗಡೆಯಾದ ಶಶಿಕುಮಾರ್‌, ಮಾಲಾಶ್ರೀ ಅಭಿನಯದ “ಕಲ್ಯಾಣ ರೇಖೆ’ ಚಿತ್ರ ಕೂಡ ಸಾಯಿಸುತೆ ಅವರ ಕಾದಂಬರಿ ಆಧರಿಸಿದ್ದು ಎಂಬುದು ವಿಶೇಷ. 

ರಾಜ್‌ ಕುಟುಂಬಕ್ಕೆ ಆಪ್ತ: ಶಿವರಾಜಕುಮಾರ್‌ ಅವರಿಗೆ “ರಥಸಪ್ತಮಿ’, “ಮನ ಮೆಚ್ಚಿದ ಹುಡುಗಿ’, “ಅದೇ ರಾಗ ಅದೇ ಹಾಡು’, “ಆಸೆಗೊಬ್ಬ ಮೀಸೆ ಗೊಬ್ಬ’, “ಮೋಡದ ಮರೆಯಲ್ಲಿ’, “ಮಿಡಿದ ಶ್ರುತಿ’, “ಪುರುಷೋತ್ತ ಮ’, “ಚಿರ ಬಾಂಧವ್ಯ’, “ಮುತ್ತಣ್ಣ’, “ಸವ್ಯ ಸಾಚಿ’, “ಮನ ಮಿಡಿಯಿತು’, “ಹೃದಯ ಹೃದಯ’, “ಸುಂದರ  ಕಾಂಡ’, “ಬಹಳ ಚೆನ್ನಾಗಿದೆ’ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ರಾಘವೇಂದ್ರ ರಾಜ ಕುಮಾರ್‌ಗೆ “ನಂಜುಂಡಿ ಕಲ್ಯಾಣ’, “ಗಜಪತಿ ಗರ್ವ ಭಂಗ’, “ಅನುಕೂಲಕ್ಕೊಬ್ಬ ಗಂಡ’, “ಪಕ್ಕದ್ಮನೆ ಹುಡುಗಿ’ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಈ ಮೂಲಕ ಡಾ.ರಾಜಕುಮಾರ್‌ ಕುಟುಂಬಕ್ಕೂ ರಾಜಶೇಖರ್‌ ಆಪ್ತರಾಗಿದ್ದರು ಎಂಬುದು ವಿಶೇಷ.

ರಾಜಶೇಖರ್‌ ಅವರಲ್ಲಿ ನಾನು ಇಷ್ಟಪಟ್ಟ ಗುಣ ಎಂದರೆ ಕಲಾವಿದರನ್ನು ಚೆನ್ನಾಗಿ ನಡೆಸಿಕೊಳ್ಳುವುದು. ಯಾರೇ ಕಲಾವಿದರಾಗಲಿ ಅವರನ್ನು ತುಂಬಾ ನೀಟಾಗಿ ಟ್ರೀಟ್‌ ಮಾಡುತ್ತಿದ್ದರು. ಅದಕ್ಕಿಂತ ಹೆಚ್ಚಾಗಿ ಅವರಿಗೆ ಒಳ್ಳೆಯ ಮನಸ್ಸಿತ್ತು. ಒಬ್ಬ ಒಳ್ಳೆಯ ವ್ಯಕ್ತಿ, ನಿರ್ದೇಶಕನನ್ನು ಇವತ್ತು ಕಳೆದುಕೊಂಡಿದ್ದೇವೆ.
● ಶಿವರಾಜಕುಮಾರ್‌, ನಟ

ತನ್ನ ಪ್ರತಿಭೆ, ಪರಿಶ್ರಮದಿಂದ ಚಿತ್ರರಂಗದಲ್ಲಿ ಎಷ್ಟು ದೊಡ್ಡ ನಿರ್ದೇಶಕರಾಗಬಹುದು ಎಂಬುದಕ್ಕೆ ರಾಜಶೇಖರ್‌ ಉದಾಹರಣೆ. ಅವರ ಸರಳತೆ, ವಿನಯ ಎಲ್ಲರಿಗೂ ಮಾದರಿ. ಚಿತ್ರರಂಗದಲ್ಲಿ ಎಲ್ಲರನ್ನೂ ಪ್ರೀತಿಸುವ ವ್ಯಕ್ತಿ ನಮ್ಮನ್ನು ಬಿಟ್ಟು ಹೋಗಿದ್ದು ನೋವು ತಂದಿದೆ.
● ಎಸ್‌.ಎ ಚಿನ್ನೇಗೌಡ, ಅಧ್ಯಕ್ಷರು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ

ಕನ್ನಡ ಚಿತ್ರಂಗಕ್ಕೆ ಅವರ ಕೊಡುಗೆ ಸಾಕಷ್ಟಿದೆ. ಇಂದು ಅವರು ನಮ್ಮನ್ನು ಬಿಟ್ಟು ಹೋದರೂ, ಅವರು ಚಿತ್ರರಂಗಕ್ಕೆ ಕೊಟ್ಟ ಕೊಡುಗೆ ಎಂದೆಂದಿಗೂ ಶಾಶ್ವತ. 
● ಸಾ.ರಾ. ಗೋವಿಂದು, ನಿರ್ಮಾಪಕ

ಟಾಪ್ ನ್ಯೂಸ್

1-kanwar-msid

Uttara Khand; ಕನ್ವರ್‌ ಯಾತ್ರೆ: ಮಸೀದಿಗೇ ಪರದೆ ಹಾಕಿದ ಹರಿದ್ವಾರ ಆಡಳಿತ!

court

Court; ದೇಶಾದ್ಯಂತ 5 ಕೋಟಿ ಕೇಸು ಇತ್ಯರ್ಥಕ್ಕೆ ಬಾಕಿ: ಉ.ಪ್ರ.ದಲ್ಲೇ ಹೆಚ್ಚು!

robbers

Note!;ಕಳ್ಳತನಕ್ಕೆಂದು ಬಂದವ ತಾನೇ 20 ರೂಪಾಯಿ ನೋಟು ಇಟ್ಟು ಹೋದ!

1-tatoo

Mumbai: 22 ಶತ್ರುಗಳ ಹೆಸರು ಟ್ಯಾಟೂ ಹಾಕಿಸಿಕೊಂಡಾತನ ಕೊಲೆ!

1-wewqewq

Mumbai; 2005ರ ಭೀಕರ ಪ್ರವಾಹ ನೆನಪಿಸಿದ ಮಳೆ!:19 ವರ್ಷ ಹಿಂದಿನ ಸ್ಥಿತಿ ಮರುಕಳಿಸಲಿದೆಯೇ?

rahul-Gandhi-Car

Defamation case; ಪ್ರಚಾರಕ್ಕಾಗಿ ನನ್ನ ವಿರುದ್ಧ ಮಾನಹಾನಿ ಕೇಸ್‌: ರಾಹುಲ್‌ ಆರೋಪ

1-dubey

Increase of Muslims; ಝಾರ್ಖಂಡ್‌,ಪಶ್ಚಿಮ ಬಂಗಾಲ ಕೇಂದ್ರಾಡಳಿತ ಪ್ರದೇಶವಾಗಿಸಿ: ದುಬೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Heavy Rain 10 ಜಿಲ್ಲೆಗಳ 11 ನದಿಗಳಲ್ಲಿ  ಪ್ರವಾಹ ಭೀತಿ

Heavy Rain 10 ಜಿಲ್ಲೆಗಳ 11 ನದಿಗಳಲ್ಲಿ  ಪ್ರವಾಹ ಭೀತಿ

Shalini Rajneesh ನೂತನ ಸಿಎಸ್‌; ಪತಿ ರಜನೀಶ್‌ ಗೋಯಲ್‌ ನಿವೃತ್ತಿಯಿಂದ ತೆರವಾಗಲಿರುವ ಸ್ಥಾನ

Shalini Rajneesh ನೂತನ ಸಿಎಸ್‌; ಪತಿ ರಜನೀಶ್‌ ಗೋಯಲ್‌ ನಿವೃತ್ತಿಯಿಂದ ತೆರವಾಗಲಿರುವ ಸ್ಥಾನ

Eshwara Khandre ಏಕಬಳಕೆ ಪ್ಲಾಸ್ಟಿಕ್‌ ವಿರುದ್ಧ ಕಾರ್ಯಪಡೆ ರಚನೆ

Eshwara Khandre ಏಕಬಳಕೆ ಪ್ಲಾಸ್ಟಿಕ್‌ ವಿರುದ್ಧ ಕಾರ್ಯಪಡೆ ರಚನೆ

train-track

Landslides; ಮಂಗಳೂರು – ಬೆಂಗಳೂರು ರೈಲುಗಳ ಸಂಚಾರ ರದ್ದು

ಸದನದಲ್ಲಿ ಬಿಜೆಪಿ ನಡೆಗೆ ಲಿಂಬಾವಳಿ ಅಸಮಾಧಾನ

Karnataka ಸದನದಲ್ಲಿ ಬಿಜೆಪಿ ನಡೆಗೆ ಲಿಂಬಾವಳಿ ಅಸಮಾಧಾನ

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

1-kanwar-msid

Uttara Khand; ಕನ್ವರ್‌ ಯಾತ್ರೆ: ಮಸೀದಿಗೇ ಪರದೆ ಹಾಕಿದ ಹರಿದ್ವಾರ ಆಡಳಿತ!

court

Court; ದೇಶಾದ್ಯಂತ 5 ಕೋಟಿ ಕೇಸು ಇತ್ಯರ್ಥಕ್ಕೆ ಬಾಕಿ: ಉ.ಪ್ರ.ದಲ್ಲೇ ಹೆಚ್ಚು!

robbers

Note!;ಕಳ್ಳತನಕ್ಕೆಂದು ಬಂದವ ತಾನೇ 20 ರೂಪಾಯಿ ನೋಟು ಇಟ್ಟು ಹೋದ!

Kohli IPL 2024

Champions Trophy; ಕೊಹ್ಲಿ ಪಾಕ್‌ನಲ್ಲಿ ಆಡಲಿ: ಯೂನಿಸ್‌ ಖಾನ್‌

1-tatoo

Mumbai: 22 ಶತ್ರುಗಳ ಹೆಸರು ಟ್ಯಾಟೂ ಹಾಕಿಸಿಕೊಂಡಾತನ ಕೊಲೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.