ವಾರ್ಡ್ಗಳಲ್ಲಿ ಕಸ ವಿಂಗಡಣೆ ಶೋಚನೀಯ
ಕಸ ವಿಂಗಡಣೆ ಪ್ರಮಾಣದ ಬಗ್ಗೆ ಪಾರದರ್ಶಕ ಮಾಹಿತಿ
Team Udayavani, Sep 15, 2020, 11:51 AM IST
ಸಾಂದರ್ಭಿಕ ಚಿತ್ರ
ಬೆಂಗಳೂರು: ಪಾಲಿಕೆ ವ್ಯಾಪ್ತಿಯ 85ಕ್ಕೂ ಹೆಚ್ಚು ವಾರ್ಡ್ಗಳಲ್ಲಿ ಉತ್ಪತ್ತಿಯಾಗುವ ಒಟ್ಟಾರೆ ಕಸದಲ್ಲಿ ಶೇ. 1 ಪ್ರಮಾಣದಷ್ಟು ಕಸವನ್ನು ಮಾತ್ರ ಹಸಿ ಮತ್ತು ಒಣಕಸ ಎಂದು ವಿಂಗಡಣೆ ಮಾಡಲಾಗುತ್ತಿದೆ.
ಕಸ ವಿಂಗಡಣೆ ಪ್ರಮಾಣ (ಸ್ಕೋರ್) ಈ ವಾರ್ಡ್ ಗಳಲ್ಲಿ ಕೇವಲ ಒಂದು ಪ್ರಮಾಣಕ್ಕೆ ಇಳಿದಿರುವುದು ನಗರದಲ್ಲಿ ಕಸ ವಿಂಗಡಣೆ ಪ್ರಮಾಣ ಇಳಿಜಾರಿಗೆ ಇಳಿದಿರುವುದು ಸಾಬೀತು ಮಾಡಿದೆ. ಈ ಹಿನ್ನೆಲೆಯಲ್ಲಿ ಕಸವಿಂಗಡಣೆಗೆ ಆದ್ಯತೆ ನೀಡದ ಅಧಿಕಾರಿಗಳಿಗೆ ಚುರುಕು ಮುಟ್ಟಿಸಲು ಪಾಲಿಕೆ ಮುಂದಾಗಿದೆ. ನಗರದಲ್ಲಿ ಕಸ ವಿಂಗಡಣೆ ಪ್ರಮಾಣ ಹಾಗೂ ಪಾಲಿಕೆಯ ಹಸಿಕಸ ಸಂಸ್ಕರಣಾ ಘಟಕಗಳಿಗೆ ಎಷ್ಟು ತ್ಯಾಜ್ಯ ಹೋಗುತ್ತಿದೆ ಎಂದು ಪ್ರಗತಿ ಪರಿಶೀಲನೆ ಮಾಡಲಾಗಿದ್ದು, ಜುಲೈ ತಿಂಗಳಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿನ ಎಲ್ಲ ವಾರ್ಡ್ಗಳಲ್ಲಿ ಸಂಗ್ರಹವಾದಕಸದ ಪ್ರಮಾಣ, ಕಸ ವಿಂಗಡಣೆ, ಕಸ ವಿಲೇವಾರಿ ನಿಯಮ ಉಲ್ಲಂಘನೆ ಪ್ರಕರಣಗಳು ಹಾಗೂ ದಂಡಪ್ರಮಾಣ ಎಲ್ಲವನ್ನೂ ಪರಿಶೀಲನೆ ಮಾಡಿ ಎಲ್ಲ ವಾರ್ಡ್ ಗಳಿಗೂ ರ್ಯಾಂಕ್ ನೀಡಲಾಗಿದೆ. ಇದರಲ್ಲಿ ಹಲವು ವಾರ್ಡ್ಗಳಲ್ಲಿ ಕಸ ವಿಂಗಡಣೆ ಪ್ರಮಾಣ ಶೋಚನೀಯ ಸ್ಥಿತಿಗೆ ತಲುಪಿರುವುದು ಸ್ಪಷ್ಟವಾಗಿದೆ.
ನಗರದ 35ವಾರ್ಡ್ಗಳಲ್ಲಿ ಕಸ ವಿಂಗಡಣೆ ಶೂನ್ಯಪ್ರಮಾಣಕ್ಕೆ ಇಳಿದಿದ್ದು, 80ಕ್ಕೂ ಹೆಚ್ಚು ವಾರ್ಡ್ಗಳಲ್ಲಿ ಶೇ..1 ಪ್ರಮಾಣಕ್ಕೆ,32 ವಾರ್ಡ್ಗಳಲ್ಲಿ ಶೇ.1 ಪ್ರತಿಶತಕಸವಿಂಗಡಣೆ ಹಾಗೂ 11 ವಾರ್ಡ್ಗಳಲ್ಲಿ ಶೇ. 2 ಪ್ರತಿಶತ ಕಸ ವಿಂಗಡಣೆಯಾಗುತ್ತಿದೆ. ಇನ್ನು ಹಲವು ವಾರ್ಡ್ಗಳು ಕಸ ವಿಂಗಡಣೆಯಲ್ಲಿ ಶೇ.10ಕ್ಕಿಂತ ಹೆಚ್ಚು ಮುಂದಕ್ಕೆ ಹೋಗಿಲ್ಲ.
ಪಾರದರ್ಶಕತೆ ಪ್ರದರ್ಶಿಸಿದ ಪಾಲಿಕೆ: ಬಿಬಿಎಂಪಿ ಇದೇ ಮೊದಲ ಬಾರಿಗೆ ನಗರದ ಯಾವ ವಾರ್ಡ್ ನಲ್ಲಿ ಎಷ್ಟು ಕಸ ಸಂಗ್ರಹವಾಗುತ್ತಿದೆ. ಎಷ್ಟು ಕಸ ಸಂಸ್ಕರಣೆ ಮಾಡುತ್ತಿದೆ. ಯಾವ ವಾರ್ಡ್ನಲ್ಲಿ ಶೂನ್ಯ ಪ್ರಮಾಣದ ಕಸ ವಿಂಗಡಣೆ ಆಗುತ್ತಿದೆ ಎಂಬ ಸಂಪೂರ್ಣ ಮಾಹಿತಿ ಪ್ರಕಟಿಸುವ ಮೂಲಕ ಪಾರದರ್ಶಕತೆ ಪ್ರದರ್ಶಿಸಿದೆ. ಈ ಮೂಲಕ ಸುಧಾರಣೆಗೆ ಮುಂದಾಗಿದೆ. ಆದರೆ, ಇದು ಯಾವ ಪ್ರಮಾಣದಲ್ಲಿಕಾರ್ಯರೂಪಕ್ಕೆ ಬರಲಿದೆ ಎನ್ನುವುದು ಮುಂದಿನ ದಿನಗಳಲ್ಲಿ ತಿಳಿಯಲಿದೆ.
38 ವಾರ್ಡ್ಗಳಲ್ಲಿ ಹೊಸ ಮಾದರಿ: ನಗರದ 38 ವಾರ್ಡ್ಗಳಲ್ಲಿ ಪ್ರತ್ಯೇಕ ಹಸಿಕಸ ಸಂಗ್ರಹಕ್ಕೆ ಈಗಾಗಲೇ ಟೆಂಡರ್ ನೀಡಲಾಗಿದ್ದು, ಸೆ.15ರ ಒಳಗೆ ಕೆಲಸಪ್ರಾರಂಭಿಸಲುಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈ ಭಾಗದಲ್ಲಿ ಒಣತ್ಯಾಜ್ಯ ಯಾರು ಸಂಗ್ರಹ ಮಾಡಬೇಕು ಎನ್ನುವ ಪಟ್ಟಿ ಇರುವುದರಿಂದ ಆ ಆಧಾರದ ಮೇಲೆ ಹಸಿ ಹಾಗೂ ಒಣಕಸ ವಿಂಗಡಣೆಶೀಘ್ರ ಪ್ರಾರಂಭವಾಗಲಿದೆ ಎಂದು ಮಾಹಿತಿ ನೀಡಿದರು.
ನಗರದಲ್ಲಿಕಸ ವಿಂಗಡಣೆ ಚಿತ್ರಣ : ನಗರದಲ್ಲಿ ಯಾವ ವಾರ್ಡ್ನಲ್ಲಿ ಎಷ್ಟು ಕಸ ವಿಂಗಡಣೆ ಆಗುತ್ತಿದೆ ಎಂಬ ಸ್ಪಷ್ಟ ಚಿತ್ರಣ ಸಿಕ್ಕಿದ್ದು,ಇದನ್ನು ಸರಿಪಡಿಸಲು ಯೋಜನೆ ರೂಪಿಸಿಕೊಳ್ಳಲಾಗುತ್ತಿದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ (ಘನತ್ಯಾಜ್ಯ ನಿರ್ವಹಣೆ) ರಂದೀಪ್ ತಿಳಿಸಿದರು. ನಗರದಲ್ಲಿ ಹಸಿಕಸ ಹಾಗೂ ಒಣಕಸ ವಿಂಗಡಣೆ ಪ್ರಮಾಣ ಹೆಚ್ಚಿಸಲು ಯೋಜನೆ ರೂಪಿಸಿಕೊಳ್ಳಲಾಗುತ್ತಿದೆ. ಕಸ ವಿಂಗಡಣೆ ಮೇಲ್ವಿಚಾರಣೆ ಲೋಪ ವೆಸಗುವ ಅಧಿಕಾರಿಗಳಿಗೆ ನೋಟಿಸ್ ನೀಡಲು ನಿರ್ಧರಿಸಲಾಗಿದೆ. ಸಾರ್ವಜನಿಕರಲ್ಲೂ ಈ ಬಗ್ಗೆ ಜಾಗೃತಿ ಮೂಡಿಸುತ್ತೇವೆ ಎಂದರು.