ಅನರ್ಹತೆ-“ಪರಿಚ್ಛೇದ 10′; ಪ್ರಶ್ನೆ ಹತ್ತಾರು


Team Udayavani, Nov 14, 2019, 3:07 AM IST

Supreme-Court

ಬೆಂಗಳೂರು: ಇಡೀ ದೇಶದ ಗಮನ ಸೆಳೆದಿದ್ದ ಹಾಗೂ ರಾಜ್ಯದ ರಾಜಕೀಯ ವಿದ್ಯಮಾನಗಳು ರೋಚಕ ತಿರುವು ಪಡೆದುಕೊಳ್ಳಲು ಕಾರಣವಾಗಿದ್ದ ಕಾಂಗ್ರೆಸ್‌-ಜೆಡಿಎಸ್‌ನ 17 ಮಂದಿ ಶಾಸಕರ ರಾಜೀನಾಮೆ ಪ್ರಹಸನ ಹಾಗೂ ಅದರ ಮೇಲಿನ ಸ್ಪೀಕರ್‌ ಆದೇಶಕ್ಕೆ ಸಂಬಂಧಿಸಿದ ಸುಪ್ರೀಂಕೋರ್ಟ್‌ ತೀರ್ಪು ಹೊರಬಿದ್ದಿದೆ. ಶಾಸಕರನ್ನು ಅನರ್ಹಗೊಳಿಸಿದ ಸ್ಪೀಕರ್‌ ಆದೇಶವನ್ನು ಸುಪ್ರೀಂಕೋರ್ಟ್‌ ಮಾನ್ಯ ಮಾಡಿದೆ. ಆದರೆ, 2023ರವರೆಗೆ ಅನರ್ಹಗೊಳಿಸಿದ್ದನ್ನು ಒಪ್ಪಿಲ್ಲ. ಹಾಗಾಗಿ, ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಅನರ್ಹತೆಗೊಂಡಿದ್ದ ಶಾಸಕರಿಗೆ ಅವಕಾಶ ಸಿಕ್ಕಿದೆ.

ಈ ಮೂಲಕ ಸುಪ್ರೀಂ ಸ್ಪೀಕರ್‌ ತೀರ್ಪನ್ನು ಭಾಗಶಃ ಎತ್ತಿಹಿಡಿದೆ. ಈ ಮಧ್ಯೆ, ಶಾಸಕರು ರಾಜೀನಾಮೆ, ಪಕ್ಷಾಂತರ ಹಾಗೂ ಅನರ್ಹತೆಯ ಪ್ರಹಸನದ ಮೂಲ ಬಿಂದು ಆಗಿದ್ದ ಸಂವಿಧಾನದ ಶೆಡ್ನೂಲ್‌ (ಪರಿಚ್ಛೇದ) 10 ಹಾಗೂ ಪಕ್ಷಾಂತರ ನಿಷೇಧ ಕಾಯ್ದೆಯ ವ್ಯಾಖ್ಯಾನ ಹಾಗೂ ವೈರುಧ್ಯಗಳ ಬಗ್ಗೆ ಈ ತೀರ್ಪು ಹತ್ತಾರು ಪ್ರಶ್ನೆಗಳನ್ನು ಮುನ್ನೆಲೆಗೆ ತಂದಿದೆ. ಸುಪ್ರೀಂಕೋರ್ಟ್‌ನ ಒಟ್ಟಾರೆ ತೀರ್ಪು ಮುಂದಿಟ್ಟುಕೊಂಡು, ಈ ವಿಷಯಗಳ ಬಗ್ಗೆ ಕಾನೂನು ತಜ್ಞರು ತಮ್ಮದೇ ವಿಶ್ಲೇಷಣೆ- ವಿಮರ್ಶೆಗೆ ಮುಂದಾಗಿದ್ದಾರೆ.

ಜತೆಗೆ ಐತಿಹಾಸಿಕ ಹಾಗೂ ಸಮತೋಲನ ಎಂದು ವಿಶ್ಲೇಷಿಸಲಾಗುತ್ತಿರುವ ಸುಪ್ರೀಂನ ಈ ತೀರ್ಪು ಸಂಸದೀಯ ವ್ಯವಸ್ಥೆಯ ನೈತಿಕತೆ, ಪಕ್ಷಗಳು ಮತ್ತು ಚುನಾಯಿತ ಜನಪ್ರತಿಧಿನಿಗಳ ನಡವಳಿಕೆಯ ಜತೆಗೆ ಮುಖ್ಯವಾಗಿ ಸ್ಪೀಕರ್‌ ಅವರ ಅಧಿಕಾರ ವ್ಯಾಪ್ತಿ ಮತ್ತು ಪಕ್ಷಾಂತರ ನಿಷೇಧ ಕಾಯ್ದೆ, ಸಂವಿಧಾನದ 10ನೇ ಶೆಡ್ನೂಲ್‌ನ ಕಾನೂನು ಸೂಕ್ಷತೆ ಹಾಗೂ ವ್ಯಾಖ್ಯಾನಗಳ ಕುರಿತ ಪರ-ವಿರೋಧ ಪರಾಮರ್ಶೆಗೆ ಹೊಸ ಬುನಾದಿ ಹಾಕಿಕೊಟ್ಟಿದೆ ಎನ್ನುತ್ತಾರೆ ತಜ್ಞರು.

ಏಕೆಂದರೆ, ಸಂವಿಧಾನದ 10ನೇ ಶೆಡ್ನೂಲ್‌ ಆಧರಿಸಿಯೇ ತಮ್ಮ ವಿವೇಚನಾ ಮತ್ತು ವಿಶೇಷಾಧಿಕಾರ ಬಳಿಸಿ ಸ್ಪೀಕರ್‌ 17 ಮಂದಿ ಶಾಸಕರನ್ನು ಅನರ್ಹಗೊಳಿಸಿದ್ದರು. ಆದರೆ, ಅನರ್ಹತೆಗೆ ಅವಧಿ ನಿಗದಿಪಡಿಸಿದ ಸ್ಪೀಕರ್‌ ಕ್ರಮ ಸರಿಯಿಲ್ಲ. ಸಂವಿಧಾನದ ಆಶಯಗಳಿಗೆ ತದ್ವಿರುದ್ಧವಾಗಿ ಸ್ಪೀಕರ್‌ಗಳು ನಡೆದುಕೊಳ್ಳುತ್ತಿರುವ ಪ್ರವೃತ್ತಿ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗುತ್ತಿದೆ ಎಂಬ ಸುಪ್ರೀಂಕೋರ್ಟ್‌ ಅಭಿಪ್ರಾಯವನ್ನು ಮುಂದಿಟ್ಟುಕೊಂಡು ಕಾನೂನು ತಜ್ಞರು ಶೆಡ್ನೂಲ್‌ 10ರ ಬಗ್ಗೆ ತಮ್ಮದೇ ವ್ಯಾಖ್ಯಾನಗಳನ್ನು ನೀಡುತ್ತಿದ್ದಾರೆ.

ಸ್ಪೀಕರ್‌ ನಿಸ್ಪಕ್ಷಪಾತತನ ವಿರಳ: “ಸಂವಿಧಾನದ 10ನೇ ಶೆಡ್ನೂಲನ್ನು ಬಲಪಡಿಸುವ ಬದಲು ಅನೇಕ ಹಂತಗಳಲ್ಲಿ ಚುನಾವಣಾ ಸುಧಾರಣೆಗಳು ಆಗಬೇಕಿದೆ. ಮುಖ್ಯವಾಗಿ ಶಾಸಕರನ್ನು ಅನರ್ಹಗೊಳಿಸುವ ಅಧಿಕಾರವನ್ನು ಸ್ಪೀಕರ್‌ ಅವರಿಂದ ಕಿತ್ತೂಗೆಯಬೇಕು. ಏಕೆಂದರೆ, ಸ್ಪೀಕರ್‌ ಆದವರು ಸ್ವತಂತ್ರವಾಗಿ ತೀರ್ಮಾನ ತೆಗೆದುಕೊಳ್ಳುವ ಮತ್ತು ನಿಷ್ಪಕ್ಷಪಾತವಾಗಿ ನಡೆದುಕೊಳ್ಳುವ ನಿದರ್ಶನಗಳು ಇತ್ತೀಚಿನ ವರ್ಷಗಳಲ್ಲಿ ತೀರಾ ವಿರಳ. ಈ ವಿಚಾರವನ್ನು ಸ್ವತಃ ಸುಪ್ರೀಂಕೋರ್ಟ್‌ ತನ್ನ ತೀರ್ಪಿನಲ್ಲಿ ಹೇಳಿದೆ ಎಂದು ಮಾಜಿ ಅಡ್ವೋಕೇಟ್‌ ಜನರಲ್‌ ಬಿ.ವಿ. ಆಚಾರ್ಯ ಹೇಳುತ್ತಾರೆ.

ಸ್ಪಷ್ಟತೆ ಸಿಕ್ಕಿದೆ: ಸುಪ್ರೀಂ ತೀರ್ಪಿನಿಂದ 10ನೇ ಶೆಡ್ನೂಲ್‌ ಬಗ್ಗೆ ಇನ್ನಷ್ಟು ಸ್ಪಷ್ಟತೆ ಸಿಕ್ಕಿದೆಯೇ ಅಥವಾ ಸಿಗಬೇಕೆದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮಾಜಿ ಅಡ್ವೋಕೇಟ್‌ ಜನರಲ್‌ ಅಶೋಕ್‌ ಹಾರನಹಳ್ಳಿ, “ನನಗೆ ಹಾಗೇನು ಅನಿಸುತ್ತಿಲ್ಲ. ಏಕೆಂದರೆ, ಸಂವಿಧಾನದಲ್ಲಿ ಮೊದಲೇ ಆ ರೀತಿ ಇದೆ. ಯಾವುದೇ ಒಬ್ಬ ಶಾಸಕ ಅನರ್ಹಗೊಂಡು ಅಥವಾ ರಾಜಿನಾಮೆ ಕೊಟ್ಟು ಅದೇ ಪಕ್ಷದ ಸದಸ್ಯನಾಗಿ ಮುಂದುವರಿಯಲು ಅವಕಾಶವಿಲ್ಲ. ಆದರೆ, ರಾಜಿನಾಮೆ ಕೊಟ್ಟು ಬೇರೆ ಪಕ್ಷಕ್ಕೆ ಹೋಗಲು ಅಥವಾ ಸ್ಪರ್ಧಿಸಿ ಗೆಲ್ಲಲು ಸಮಸ್ಯೆ ಇಲ್ಲ. ಹೀಗಿದ್ದಾಗಲೂ ರಮೇಶ್‌ ಕುಮಾರ್‌ ಅವರು ಸ್ವಲ್ಪ ಮುಂದುವರಿದಿದ್ದರು. ರಾಜೀನಾಮೆ ಮತ್ತು ಅನರ್ಹತೆ ವಿಚಾರ ಬಂದಾಗ ಏನು ಮಾಡಬೇಕು ಅನ್ನೊದಕ್ಕೆ ಸುಪ್ರೀಂ ಈ ತೀರ್ಪಿನಿಂದ ಸ್ಪಷ್ಟತೆ ಸಿಕ್ಕಂತಾಗಿದೆ ಎಂದು ಹೇಳಿದ್ದಾರೆ.

ಪಕ್ಷ ವಿರೋಧಿ ಪದವೇ ಇಲ್ಲ: ಪಕ್ಷ ವಿರೋಧಿ ಚಟುವಟಿಕೆ ನಡೆಸಿ ಅನರ್ಹಗೊಂಡವರಿಗೆ ಗರಿಷ್ಠ ಮಟ್ಟದ ಶಿಕ್ಷೆ ಆಗಬೇಕು ಅನ್ನುವುದು ಮತದಾರರು, ಸಾರ್ವಜನಿಕರ ಸಹಜ ಮತ್ತು ಸಾಮಾನ್ಯ ಬೇಡಿಕೆ. ಆದರೆ, 10ನೇ ಶೆಡ್ನೂಲ್‌ನಲ್ಲಿ ಅದಕ್ಕೆ ಪೂರಕವಾದ ಅವಕಾಶಗಳು ಇಲ್ಲ. ಅಲ್ಲಿ ಇರುವುದು ಸ್ವ ಇಚ್ಛೆಯಿಂದ ರಾಜೀನಾಮೆ ಎಂದಿದೆ. ಪಕ್ಷ ವಿರೋಧಿ ಎಂಬ ಪದವೇ ಇಲ್ಲ. ಹಾಗಾಗಿ, ಅರ್ಥ ಬಾರದ ಪದಗಳಿಗೆ ಕಳೆದ ಹತ್ತಾರು ವರ್ಷಗಳಿಂದ ಅರ್ಥ ಕೊಡುವ ಕೆಲಸವಾಗಿದೆ. ಅದು ಆಯಾ ಸಂದರ್ಭ, ಸನ್ನಿವೇಶ ಹಾಗೂ ಅನುಕೂಲಗಳಿಗೆ ತಕ್ಕಂತೆ ಆಗಿದೆ. ಹೀಗಾಗಿ, 10ನೇ ಶೆಡ್ನೂಲ್‌ಗೆ ಬಲ ನೀಡುವ ದಿಸೆಯಲ್ಲಿ ಶಾಸನ ರಚನಾ ಸಂಸ್ಥೆಗಳು ಅವಲೋಕನ ನಡೆಸಬೇಕಾಗಿದೆ ಎಂದು ಸುಪ್ರೀಂಕೋರ್ಟ್‌ ವಕೀಲ ಕೆ.ವಿ. ಧನಂಜಯ ಹೇಳುತ್ತಾರೆ.

ಈ ತೀರ್ಪು ಸಾಂವಿಧಾನಿಕ ತತ್ವಗಳ ಸಮರ್ಥನೆಯಾಗಿದೆ. ಜನಪ್ರತಿನಿಧಿಗಳು ತಮ್ಮ ವೈಯುಕ್ತಿಕ ಅಧಿಕಾರದಾಸೆಗೆ ಜನಮತವನ್ನು ನಿರ್ಲಕ್ಷ್ಯ ಸಾಧ್ಯವಿಲ್ಲ. ಅನರ್ಹ ಶಾಸಕರನ್ನು ಸೋಲಿಸುವ ಮೂಲಕ ಮತದಾರರು ಮತ್ತು ಜನತೆ ಸುಪ್ರೀಂಕೋರ್ಟ್‌ನ ಸಾಂವಿಧಾನಿಕ ತತ್ವಗಳನ್ನು ಮುಂದುವರಿಸಿಕೊಂಡು ಹೋಗುತ್ತಾರೆ ಎಂಬ ವಿಶ್ವಾಸ ನನಗಿದೆ. ಇಂತಹ ಪ್ರಕರಣಗಳಲ್ಲಿ ಚುನಾವಣೆಗೆ ಸ್ಪರ್ಧಿಸುವುದನ್ನು ನಿರ್ಬಂಧಿಸಲು ಕಾನೂನು ತಿದ್ದುಪಡಿ ತರುವ ಬಗ್ಗೆಯೂ ಸಂಸತ್ತು ಆಲೋಚಿಸಬೇಕು.
-ಎ.ಎಸ್‌. ಪೊನ್ನಣ್ಣ, ಮಾಜಿ ಹೆಚ್ಚುವರಿ ಅಡ್ವೋಕೇಟ್‌ ಜನರಲ್‌

ನಾನು ಅನರ್ಹತೆ ವ್ಯಾಪ್ತಿಗೆ ಬರುವುದಿಲ್ಲ: ಸುಧಾಕರ್‌
ಬೆಂಗಳೂರು: ಶಾಸಕರ ಅನರ್ಹತೆ ಪ್ರಕರಣದಲ್ಲಿ ಎಲ್ಲ ಶಾಸಕರಂತೆ ತಮ್ಮನ್ನೂ ಪರಿಗಣಿಸಿರುವುದು ಸರಿಯಿಲ್ಲ. ನಾನು ಅನರ್ಹತೆ ವ್ಯಾಪ್ತಿಗೆ ಬರುವುದಿಲ್ಲ ಎಂದು ಚಿಕ್ಕಬಳ್ಳಾಪುರ ಅನರ್ಹ ಶಾಸಕ ಡಾ.ಸುಧಾಕರ್‌ ಹೇಳಿದ್ದಾರೆ. ಸುಪ್ರೀಂ ಕೋರ್ಟ್‌ ತೀರ್ಪಿನ ಬಳಿಕ ಮಾತನಾಡಿ, ಸುಪ್ರೀಂ ಕೋರ್ಟ್‌ನಲ್ಲಿ ಕೆಲವು ವಿಷಯಗಳಲ್ಲಿ ನಮ್ಮ ಪರವಾಗಿ ಬಂದಿದ್ದು, ಸ್ಪೀಕರ್‌ ಅವರ ತೀರ್ಮಾನವನ್ನು ಭಾಗಶಃ ಒಪ್ಪಿದೆ.

ಇತ್ತೀಚಿನ ಕೆಲವು ಬೆಳವಣಿಗೆಗಳಿಂದ ಈ ರೀತಿಯ ತೀರ್ಪು ನೀಡಿದೆ. ನಾನು ಅನರ್ಹತೆ ಅಡಿಯಲ್ಲಿ ಬರುವುದಿಲ್ಲ. ಸುಪ್ರೀಂ ಕೋರ್ಟ್‌ ಬೇರೆಯವರ ಜತೆಗೆ ನನ್ನನ್ನೂ ಪರಿಗಣಿಸಿದೆ. ವಿಚಾರಣೆ ವೇಳೆ ನನ್ನ ಪ್ರಕರಣದ ಬಗ್ಗೆ ಹೆಚ್ಚಿನ ಚರ್ಚೆಯಾಗಿಲ್ಲ. ಸುಪ್ರೀಂ ಕೋರ್ಟ್‌ ತೀರ್ಪು ನೋವು ತಂದಿದ್ದು, ಈ ಬಗ್ಗೆ ಕಾನೂನು ಹೋರಾಟ ಮುಂದುವರಿಸಲು ತೀರ್ಮಾನಿಸಿದ್ದೇನೆ. ಈ ಬಗ್ಗೆ ಪುನರ್‌ ಪರಿಶೀಲನಾ ಅರ್ಜಿ ಸಲ್ಲಿಸುವ ಕುರಿತು ವಕೀಲರ ತಂಡದ ಜತೆಗೆ ಚರ್ಚಿಸುವುದಾಗಿ ಹೇಳಿದರು.

ಕಾಂಗ್ರೆಸ್‌ನಲ್ಲಿ ನನ್ನನ್ನು ಮುಗಿಸಲು ಹುನ್ನಾರ ನಡೆಸಲಾಗಿತ್ತು. 14 ತಿಂಗಳು ಸಾಕಷ್ಟು ಅಪಮಾನವಾಗಿತ್ತು. ನಮ್ಮ ಪಕ್ಷದ ಮಂತ್ರಿಗಳೇ ನನ್ನ ಕೆಲಸ ಮಾಡಿಕೊಡದಂತೆ ಮುಖ್ಯಮಂತ್ರಿಗೆ ಸಲಹೆ ನೀಡುತ್ತಿದ್ದರು. ಇದನ್ನು ಕುಮಾರಸ್ವಾಮಿಯವರೇ ಹೇಳಿದ್ದರು. ಚುನಾವಣೆಯಲ್ಲಿ ಅವರ ಬೆಂಬಲ ಕೋರಲು ಇನ್ನೂ ಸಮಯವಿದೆ. ನಮ್ಮನ್ನು ಮುಗಿಸುವುದು ಬೆಳೆಸುವುದು ಜನರ ಕೈಯಲ್ಲಿದೆ ಎಂದರು.

ಫ‌ಲಿತಾಂಶದ ಮೇಲೆ ಅನರ್ಹರ ಭವಿಷ್ಯ ನಿರ್ಧಾರ
ಬೆಂಗಳೂರು: ಅನರ್ಹ ಶಾಸಕರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಕಲ್ಪಿಸಿರುವ ಸುಪ್ರೀಂ ಕೋರ್ಟ್‌, ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸದೇ ಯಾವುದೇ ಸಾಂವಿಧಾನಿಕ ಹುದ್ದೆ ಹೊಂದುವಂತಿಲ್ಲ ಎಂದು ಹೇಳುವ ಮೂಲಕ ಅನರ್ಹರಿಗೆ ಶಾಕ್‌ ನೀಡಿದೆ. ಸ್ಪೀಕರ್‌ ರಮೇಶ್‌ ಕುಮಾರ್‌ ಅವರು ತಮ್ಮ ತೀರ್ಪಿನಲ್ಲಿ ಪ್ರಸಕ್ತ ವಿಧಾನಸಭೆಯ ಅವಧಿಗೆ ಅನರ್ಹರು ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನಿರಾಕರಿಸಿದ್ದರು.

ಅಲ್ಲದೇ ಚುನಾವಣೆಯಲ್ಲಿ ಗೆಲ್ಲದ ಹೊರತು ಅವರಿಗೆ ಸಾಂವಿಧಾನಿಕ ಹುದ್ದೆ ನೀಡುವಂತಿಲ್ಲ ಎಂದು ಆದೇಶದಲ್ಲಿ ತಿಳಿಸಿದ್ದರು. ಸುಪ್ರೀಂ ಕೋರ್ಟ್‌ ಕೂಡ ಅನರ್ಹತೆಯ ವಿಷಯದಲ್ಲಿ ಸ್ಪೀಕರ್‌ ನಿರ್ಧಾರವನ್ನು ಎತ್ತಿ ಹಿಡಿದಿದೆ. ಅನರ್ಹರು ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸದಿದ್ದರೆ, ಯಾವುದೇ ಸಾಂವಿಧಾನಿಕ ಹುದ್ದೆ ಪಡೆಯಲು ಅರ್ಹರಾಗುವುದಿಲ್ಲ ಎಂದು ಹೇಳಿರುವುದರಿಂದ ಅನರ್ಹ ಶಾಸಕರ ಭವಿಷ್ಯ ಚುನಾವಣೆಯ ಫ‌ಲಿತಾಂಶದ ಮೇಲೆ ನಿಂತಿದೆ.

ಬಿಜೆಪಿ, ಸರ್ಕಾರ ಉಳಿಸಿಕೊಳ್ಳಲು ಕನಿಷ್ಠ 7 ಜನ ಶಾಸಕರನ್ನು ಗೆಲ್ಲಿಸಿಕೊಂಡು ಬರುವ ಅನಿವಾರ್ಯತೆಗೆ ಸಿಲುಕಿದೆ. ಆದರೆ, ಅನರ್ಹರು ಗೆಲ್ಲುವು ಸಾಧಿಸದೇ ಹೋದರೆ, ಮಂತ್ರಿ ಹಾಗೂ ನಿಗಮ ಮಂಡಳಿ ಅಧ್ಯಕ್ಷ ಸ್ಥಾನದಿಂದಲೂ ವಂಚಿತರಾಗುವುದರಿಂದ ಈ ಚುನಾವಣೆಯಲ್ಲಿ ಅನರ್ಹರಿಗೆ ಗೆಲ್ಲಲೇಬೇಕಾದ ಅನಿವಾರ್ಯತೆ ಇದ್ದು, ಒಂದು ವೇಳೆ ಚುನಾವಣೆಯಲ್ಲಿ ಸೋಲುಂಡರೆ, ಅವರ ಬಂಡಾಯದ ಉದ್ದೇಶವೇ ವಿಫ‌ಲವಾದಂತಾಗುತ್ತದೆ.

ಟಾಪ್ ನ್ಯೂಸ್

ಎ. 20ರ ಭಾರೀ ಗಾಳಿ – ಮಳೆ: ರೈತರ 21 ಹೆಕ್ಟೇರ್‌ ಅಡಿಕೆ ತೋಟಕ್ಕೆ ಹಾನಿ

ಎ. 20ರ ಭಾರೀ ಗಾಳಿ – ಮಳೆ: ರೈತರ 21 ಹೆಕ್ಟೇರ್‌ ಅಡಿಕೆ ತೋಟಕ್ಕೆ ಹಾನಿ

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್‌

Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್‌

Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್‌ ಕೋಡ್‌ ಅಂಟಿಸಿದ್ದ ಉದ್ಯಮಿ ಸೆರೆ

Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್‌ ಕೋಡ್‌ ಅಂಟಿಸಿದ್ದ ಉದ್ಯಮಿ ಸೆರೆ

Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್‌ ನೀಚ ಕೃತ್ಯ

Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್‌ ನೀಚ ಕೃತ್ಯ

ಚಾಕೋಲೆಟ್‌ ಕೊಡ್ತೇನೆಂದು ಮನೆಗೆ ಕರೆದು ಬಾಲಕಿಗೆ ಲೈಂಗಿಕ ದೌರ್ಜನ್ಯ: ಇಬ್ಬರು ಬಂಧನ

ಚಾಕೋಲೆಟ್‌ ಕೊಡ್ತೇನೆಂದು ಮನೆಗೆ ಕರೆದು ಬಾಲಕಿಗೆ ಲೈಂಗಿಕ ದೌರ್ಜನ್ಯ: ಇಬ್ಬರು ಬಂಧನ

Bengaluru: ಚೆಕ್‌ ದುರ್ಬಳಕೆ; ಕ್ಯಾಷಿಯರ್‌, ಎಲ್‌ಐಸಿ ಏಜೆಂಟ್‌ಗೆ ಜೈಲು

Bengaluru: ಚೆಕ್‌ ದುರ್ಬಳಕೆ; ಕ್ಯಾಷಿಯರ್‌, ಎಲ್‌ಐಸಿ ಏಜೆಂಟ್‌ಗೆ ಜೈಲು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಎ. 20ರ ಭಾರೀ ಗಾಳಿ – ಮಳೆ: ರೈತರ 21 ಹೆಕ್ಟೇರ್‌ ಅಡಿಕೆ ತೋಟಕ್ಕೆ ಹಾನಿ

ಎ. 20ರ ಭಾರೀ ಗಾಳಿ – ಮಳೆ: ರೈತರ 21 ಹೆಕ್ಟೇರ್‌ ಅಡಿಕೆ ತೋಟಕ್ಕೆ ಹಾನಿ

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.