ಎಬಿವಿಪಿ ರಾಜ್ಯಾಧ್ಯಕ್ಷರಾಗಿ ಡಾ.ಅಲ್ಲಮ ಪ್ರಭು ಆಯ್ಕೆ
Team Udayavani, Feb 2, 2018, 6:15 AM IST
ಬೆಂಗಳೂರು : ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್ನ ನೂತನ ರಾಜ್ಯಾಧ್ಯಕ್ಷರಾಗಿ ಡಾ.ಅಲ್ಲಮಪ್ರಭು ಹಾಗೂ ರಾಜ್ಯ
ಕಾರ್ಯದರ್ಶಿಯಾಗಿ ಹರ್ಷ ನಾರಾಯಣ ಆಯ್ಕೆಯಾಗಿದ್ದಾರೆ.
ಬುಧವಾರ ಧಾರವಾಡದಲ್ಲಿ ನಡೆದ ಎಬಿವಿಪಿ ರಾಜ್ಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ 2018-19 ನೇ ಸಾಲಿನ ರಾಜ್ಯಾಧ್ಯಕ್ಷ
ಹಾಗೂ ಕಾರ್ಯದರ್ಶಿಯನ್ನು ಚುನಾವಣೆ ಮೂಲಕ ಆಯ್ಕೆ ಮಾಡಲಾಗಿದೆ. ಡಾ.ಅಲ್ಲಮಪ್ರಭು ಗುಡ್ಡದ ಅವರು ಕಲಬುರ್ಗಿ
ಜಿಲ್ಲೆಯವರಾಗಿದ್ದು, ಹಿಂಗುಲಾಬಿಂಕ ಆಯುರ್ವೇದ ಕಾಲೇಜು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಕಾರ್ಯದರ್ಶಿಯಾಗಿ ಆಯ್ಕೆಯಾಗಿರುವ ಹರ್ಷ ನಾರಾಯಣ ಬೆಂಗಳೂರಿನವರಾಗಿದ್ದು, ಬಿಎಂಎಸ್ ಕಾನೂನು ಮಹಾವಿದ್ಯಾಲಯದಲ್ಲಿ ಅಂತಿಮ ವರ್ಷದ ಕಾನೂನು ಪದವಿ ವ್ಯಾಸಂಗ ಮಾಡುತ್ತಿದ್ದಾರೆ ಎಂದು ಎಬಿವಿಪಿ ಪ್ರಕಟಣೆ ತಿಳಿಸಿದೆ.