ಕೆಎಸ್ಆರ್ಟಿಸಿಯಿಂದ ನೆರೆರಾಜ್ಯಗಳಿಗೆ ಹೆಚ್ಚುವರಿ ಬಸ್
Team Udayavani, May 1, 2017, 1:40 PM IST
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಪ್ರಯಾಣಿಕರ ಅನುಕೂಲಕ್ಕಾಗಿ ಮೇ 5ರಿಂದ ಬೆಂಗಳೂರಿನಿಂದ ಸಿರೂರು, ಹೈದರಾಬಾದ್ ಮತ್ತು ಚೆನ್ನೈಗೆ ವಿವಿಧ ಮಾದರಿಯ ಬಸ್ಗಳ ಸೇವೆ ಆರಂಭಿಸಲಿದೆ. ಬೆಂಗಳೂರು-ಸಿರೂರು ನಡುವೆ ನಾನ್ ಎಸಿ ಸ್ಲೀಪರ್, ಬೆಂಗಳೂರು-ಹೈದರಾಬಾದ್ ಮಲ್ಟಿ ಆ್ಯಕ್ಸೆಲ್ ಹಾಗೂ ಬೆಂಗಳೂರು-ಚೆನ್ನೈ ಮಧ್ಯೆ ವೋಲ್ವೊ ಬಸ್ ಸೇವೆ ಆರಂಭಿಸಲಿದೆ.
ಬೆಂಗಳೂರಿನಿಂದ ರಾತ್ರಿ 9ಕ್ಕೆ ಹೊರಡುವ ನಾನ್ ಎಸಿ ಸ್ಲೀಪರ್ ಬಸ್, ಬೆಳಗ್ಗೆ 8.30ಕ್ಕೆ ಸಿರೂರು ತಲುಪಲಿದೆ. ಅನಂತರ ಸಿರೂರಿನಿಂದ ರಾತ್ರಿ 9.15ಕ್ಕೆ ಹೊರಟು, ಬೆಳಗ್ಗೆ 8.45ಕ್ಕೆ ಬೆಂಗಳೂರಿಗೆ ಬರಲಿದೆ. ಟಿಕೆಟ್ ದರ 775 ರೂ. ನಿಗದಿಪಡಿಸಲಾಗಿದೆ. ಬೆಂಗಳೂರಿನಿಂದ ಸಂಜೆ 6.30ಕ್ಕೆ ಹೊರಡುವ ಮಲ್ಟಿ ಆ್ಯಕ್ಸೆಲ್ ಬಸ್, ಮುಂಜಾವ 4.30ಕ್ಕೆ ಹೈದರಾಬಾದ್ ತಲುಪುತ್ತದೆ. ಸಂಜೆ 7.15ಕ್ಕೆ ಹೈದರಾಬಾದ್ನಿಂದ ಹೊರಟು ಮುಂಜಾವ 5.15ಕ್ಕೆ ಬೆಂಗಳೂರು ತಲುಪುತ್ತದೆ. ಟಿಕೆಟ್ ದರ 890 ರೂ. ಇರುತ್ತದೆ. ಬೆಂಗಳೂರಿನಿಂದ ರಾತ್ರಿ 10.15ಕ್ಕೆ ಹೊರಡುವ ವೋಲ್ವೊ ಬಸ್, ಮುಂಜಾವ 5.30ಕ್ಕೆ ಚೆನ್ನೈ ತಲುಪಲಿದ್ದು, ಚೆನ್ನೈಯಿಂದ ರಾತ್ರಿ 10.15ಕ್ಕೆ ಹೊರಟು ಮುಂಜಾವ 5.30ಕ್ಕೆ ಬೆಂಗಳೂರಿಗೆ ಬರಲಿದೆ. ಟಿಕೆಟ್ ದರ 590 ರೂ. ನಿಗದಿಪಡಿಸಲಾಗಿದೆ ಎಂದು ಪ್ರಕಟನೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Drought Relief: ಕಾಂಗ್ರೆಸ್-ಬಿಜೆಪಿ ಬರ ಪರಿಹಾರ ಜಟಾಪಟಿ
Drought Relief: ಎಕ್ಸ್ (ಟ್ವಿಟರ್)ನಲ್ಲೂ ಕಾಂಗ್ರೆಸ್-ಬಿಜೆಪಿ ವಾಕ್ಸಮರ
Congress Govt “ಕನ್ನಡಿಗರ ತೆರಿಗೆ ಹಣದಲ್ಲಿ ಕಲೆಕ್ಷನ್ ಏಜೆಂಟ್ ಟ್ರಿಫ್’: ಬಿಜೆಪಿ ಆರೋಪ
HDK ಪೆನ್ಡ್ರೈವ್ನಲ್ಲಿ ಏನಿತ್ತು ಎಂಬುದು ಈಗ ಬಯಲಾಗಿದೆ: ಡಿಕೆಶಿ
Lok Sabha Election; 2ನೇ ಹಂತದಲ್ಲಿ ಸಕ್ರಿಯ: ಎಚ್.ಡಿ. ಕುಮಾರಸ್ವಾಮಿ