ನಕಲಿ ಪೊಲೀಸ್‌ ದರೋಡೆಕೋರರ ಸೆರೆ


Team Udayavani, Nov 19, 2017, 11:25 AM IST

duplicate-police.jpg

ಬೆಂಗಳೂರು: ವಿಶೇಷ ಪೊಲೀಸ್‌ ಪಡೆ ಸಿಬ್ಬಂದಿ ಎಂದು ಹೇಳಿಕೊಂಡು ನಗರದ ಹೊರವಲಯದಲ್ಲಿ ನಿಂತು ಅಮಾಯಕರನ್ನು ಸುಲಿಗೆ ಮಾಡುತ್ತಿದ್ದ ಶಿಕ್ಷಕ ಸೇರಿ ಮೂವರನ್ನು ದಕ್ಷಿಣ ವಿಭಾಗದ ತಲ್ಲಘಟ್ಟಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ರಾಮನಗರ ಮೂಲದ ರಘು (34) ಆನೇಕಲ್‌ನ ದೊಡ್ಡಯ್ಯ (48) ತಮಿಳುನಾಡಿನ ಹರೀಶ (31) ಬಂಧಿತರು. ಇವರಿಂದ 14 ಸುಲಿಗೆ ಪ್ರಕರಣಗಳು ಪತ್ತೆಯಾಗಿದ್ದು, 15 ಲಕ್ಷ ರೂ. ಮೌಲ್ಯದ ಚಿನ್ನಾಭರಣ, 4 ಲಕ್ಷ ರೂ. ನಗದು, ಬೊಲೆರೋ ವಾಹನ, 1 ನಕಲಿ ಪಿಸ್ತೂಲ್‌, ಪೊಲೀಸ್‌ ಸ್ಟಿಕ್ಕರ್‌ ಮತ್ತು ಸರ್ಕಾರಿ  ಜೀಪ್‌ಗೆ ಅಳವಡಿಸುವ “ಜಿ’ ಅಕ್ಷರವುಳ್ಳ ನಕಲಿ ನಂಬರ್‌ ಪ್ಲೇಟ್‌ ಇತರೆ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

ಬಂಧಿತರ ಪೈಕಿ ಈ ಮೊದಲು ಗೃಹ ರಕ್ಷಕ ದಳದ ಸಿಬ್ಬಂದಿಯಾಗಿದ್ದ ರಘು ಪೊಲೀಸರ ವೇಷ ಧರಿಸಿ ಹಣ ಸಲುಗೆ ಮಾಡಲು ಸಂಚು ರೂಪಿಸಿದ್ದ. ಇದಕ್ಕಾಗಿ ಮುತ್ತೂಟ್‌ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ದೊಡ್ಡಯ್ಯ ಮತ್ತು ಶಿಕ್ಷಕ ಹರೀಶ್‌ ಸಹಾಯ ಪಡೆದು ಕೃತ್ಯವೆಸಗಿದ್ದಾನೆ ಎಂದು ಹೆಚ್ಚುವರಿ ಪೊಲೀಸ್‌ ಆಯುಕ್ತೆ ಮಾಲಿನಿ ಕೃಷ್ಣಮೂರ್ತಿ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಈ ಹಿಂದೆ ಗೃಹ ರಕ್ಷಕ ದಳದಲ್ಲಿದ್ದ ರಘು, ಚನ್ನಪಟ್ಟಣದಲ್ಲಿ ಹೊಲಿಸಿಕೊಂಡಿದ್ದ ಡಬಲ್‌ ಸ್ಟಾರ್‌ ಪೊಲೀಸ್‌ ಅಧಿಕಾರಿ ಸಮವಸ್ತ್ರ ಧರಿಸುತ್ತಿದ್ದ. ಸಹಚರ ದೊಡ್ಡಯ್ಯನಿಗೆ ಸಫಾರಿ ಡ್ರಸ್‌ ತೊಡಿಸಿ ಸ್ಪೆಷಲ್‌ ಸ್ಕ್ವಾಡ್‌ ಬಟ್ಟೆ ಧರಿಸಿ, ಶಿಕ್ಷಕ ಹರೀಶ್‌ ಜತೆ ಕೃತ್ಯಕ್ಕೆ ಇಳಿಯುತ್ತಿದ್ದರು. ಇದಕ್ಕೆಂದೇ ಬೊಲೆರೋ ಜೀಪ್‌ ಖರೀದಿಸಿ, ಸರ್ಕಾರಿ ವಾಹನಗಳಿಗೆ ಬಳಸುವ “ಜಿ’ ಅಕ್ಷರವುಳ್ಳ ನಂಬರ್‌ ಪ್ಲೇಟ್‌ ಅಳವಡಿಸಿದ್ದರು.

ಜತೆಗೆ “ಪೊಲೀಸ್‌’ ಸ್ಟಿಕರ್‌ ಅಂಟಿಸಿಕೊಂಡು ಸುಲಿಗೆ ಮಾಡುತ್ತಿದ್ದರು. ಪ್ರಮುಖವಾಗಿ ನೈಸ್‌ ರಸ್ತೆಯ ಸುತ್ತಮುತ್ತಲ ನಿರ್ಜನ ಪ್ರದೇಶಗಳಲ್ಲೇ ಇವರ ಕಾರ್ಯಾಚರಣೆ ನಡೆಯುತ್ತಿತ್ತು. ನವ ದಂಪತಿ, ಪ್ರೇಮಿಗಳನ್ನೇ ಇವರು ಟಾರ್ಗೆಟ್‌ ಮಾಡುತ್ತಿದ್ದರು ಎಂದು ಅವರು ತಿಳಿಸಿದ್ದಾರೆ.

ಸೂಪರ್‌ ಕಾಪ್‌ ಕನಸು: ಹಲವು ವರ್ಷಗಳಿಂದ ಹೋಂಗಾರ್ಡ್‌ ಆಗಿದ್ದ ರಘುಗೆ ಪೊಲೀಸ್‌ ಅಧಿಕಾರಿಯಾಗಬೇಕೆಂಬ ಹಂಬಲವಿತ್ತು. “ಹೋಂಗಾರ್ಡ್‌ ಡ್ರೆಸ್‌ ಧರಿಸಿದರೆ ಪೊಲೀಸ್‌ನಂತೆ ಕಾಣುತ್ತಿಯಾ’ ಎಂದು ಸಹದ್ಯೋಗಿಗಳು ಹೇಳುತ್ತಿದ್ದರು.

ಆದರೆ ಪೊಲೀಸ್‌ ಆಗುವ ನಿಟ್ಟಿನಲ್ಲಿ ಪ್ರಯತ್ನಿಸದ ರಘು, ಪೊಲೀಸ್‌ ಹೆಸರಿನಲ್ಲಿ ಸಣ್ಣ ಪುಟ್ಟ ಸುಲಿಗೆ ಶುರು ಮಾಡಿ, ಹಲವು ಬಾರಿ ಜೈಲು ಸೇರಿದ್ದ. ಜೈಲಿನಿಂದ ಹೊರ ಬರುತ್ತಿದ್ದಂಥೆ ಮತ್ತೆ ನಕಲಿ ಪೊಲೀಸ್‌ ಆಗುತ್ತಿದ್ದ. ನಂತರ ಜೈಲಿನಲ್ಲಿದ್ದ ದೊಡ್ಡಯ್ಯ ಹಾಗೂ ಸುಲಲಿತವಾಗಿ ಇಂಗ್ಲಿಷ್‌ ಮಾತನಾಡುತ್ತಿದ್ದ ಹರೀಶ್‌ನನ್ನು ತಂಡಕ್ಕೆ ಸೇರಿಸಿಕೊಂಡಿದ್ದ.

ಜೈಲಿನಲ್ಲೇ ಸ್ಕೇಚ್‌: ದರೋಡೆ ಪ್ರಕರಣವೊಂದರಲ್ಲಿ ಜೈಲು ಸೇರಿದ್ದ ರಘುಗೆ, ಪೊಕೊ ಪ್ರಕರಣದಲ್ಲಿ ಜೈಲಲ್ಲಿದ್ದ ದೊಡ್ಡಯ್ಯನ ಪರಿಚಯವಾಗಿದೆ. ಇಬ್ಬರೂ ಸೇರಿ ಪೊಲೀಸ್‌ ವೇಷದಲ್ಲಿ ಅಮಾಯಕರನ್ನು ಸುಲಿಯುವ ಸಂಚನ್ನು ಜೈಲಲ್ಲೇ ರೂಪಿಸಿದ್ದರು. ಇಂಗ್ಲಿಷ್‌ ಬಲ್ಲ ವ್ಯಕ್ತಿಯ ಹುಡುಕಾಟದಲ್ಲಿದ್ದಾಗ ಕೃಷ್ಣಗಿರಿಯ ಖಾಸಗಿ ಶಾಲೆ ಶಿಕ್ಷಕ ಹರೀಶ್‌ ಸಂಪರ್ಕಕ್ಕೆ ಬಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ನಿರ್ಜನ ಪ್ರದೇಶಗಳಲ್ಲಿ ಕೃತ್ಯ: ನಗರದ ಹೊರವಲಯಗಳಾದ ಬನ್ನೇರುಘಟ್ಟ ರಸ್ತೆ, ನೈಸ್‌ ರಸ್ತೆ, ಹೊಸೂರು ರಸ್ತೆಗಳ ಸುತ್ತಮುತ್ತಲ ಪ್ರದೇಶಗಳಲ್ಲಿ ಪೊಲೀಸ್‌ ವೇಷ ತೊಟ್ಟು ದರೋಡೆಗಿಳಿಯುತ್ತಿದ್ದರು. ನಿರ್ಜನ ಪ್ರದೇಶಗಳಲ್ಲಿ ಪ್ರೇಮಿಗಳಿರುವುದನ್ನು ಕಂಡು ದಾಳಿ ಮಾಡುತ್ತಿದ್ದರು. ಇಲ್ಲಿ ಏನು ಮಾಡುತ್ತಿದ್ದಿರಾ, ನಿಮ್ಮ ಪಾಲಕರಿಗೆ ಮಾಹಿತಿ ನೀಡುತ್ತೇವೆ,

ಸ್ಪೇಷನ್‌ಗೆ ನಡೆಯಿರಿ, ಕೇಸ್‌ ಹಾಕಿ ಜೈಲಿಗೆ ತಳ್ಳುತ್ತೀವಿ ಎಂದು ಅಸಲಿ ಪೊಲೀಸರ ಮಾದರಿಯಲ್ಲಿ ಧಮ್ಕಿ ಹಾಕುತ್ತಿದ್ದರು. ಇದರಿಂದ ಹೆದರಿದ ಪ್ರೇಮಿಗಳು ಸೇರಿದಂತೆ ಅಮಾಯಕರಿಂದ  ಆರೋಪಿಗಳು ಹಣ, ಚಿನ್ನಾಭರಣ, ಮೊಬೈಲ್‌ಗ‌ಳನ್ನು ಸುಲಿಗೆ ಮಾಡುತ್ತಿದ್ದರು. ಬಳಿಕ ಈ ಕಡೆ ಮತ್ತೂಮ್ಮೆ ಬರದಂತೆ ಎಚ್ಚರಿಕೆ ನೀಡಿ ಕಳುಹಿಸುತ್ತಿದ್ದರು.

ಬೊಲೆರೋದಲ್ಲಿ ರೌಂಡ್ಸ್‌: ಪೊಲೀಸ್‌ ಇಲಾಖೆಯಲ್ಲಿ ಹೆಚ್ಚು ಬಳಕೆ ಇರುವುದೇ ಬೊಲೆರೋ ವಾಹನಗಳು. ಹೀಗಾಗಿ ತಮ್ಮ ಕೃತ್ಯಕ್ಕೆ ಹೊಸ ಬೊಲೆರೋ ವಾಹನ ಖರೀದಿಸಿದ್ದರು. ಇದಕ್ಕೆ ಸರ್ಕಾರಿ ವಾಹನಗಳಿಗೆ ಬಳಸುವಂತೆ “ಜಿ’ ಅಕ್ಷರವುಳ್ಳ ನಂಬರ್‌ ಪ್ಲೇಟ್‌ ರೆಡಿ ಮಾಡಿಕೊಂಡಿದ್ದರು.

ಜತೆಗೆ ಪೊಲೀಸ್‌ ಸ್ಟಿಕ್ಕರ್‌ ಹಾಕಿಕೊಂಡು ರೌಂಡ್ಸ್‌ ಶುರುಮಾಡುತ್ತಿದ್ದರು. ಇದೇ ವಾಹನದಲ್ಲಿ ಪೊಲೀಸ್‌ ಸಬ್‌ಇನ್‌ಸ್ಪೆಕ್ಟರ್‌ ಧರಿಸುವ ಸಮವಸ್ತ್ರ ಹಾಗೂ ಪೊಲೀಸರು ಬಳಸುವ ಲಾಠಿ, ಕ್ಯಾಪ್‌ಗ್ಳನ್ನು ಹಾಕಿಕೊಳ್ಳುತ್ತಿದ್ದರು. ನಕಲಿ ಪಿಸ್ತೂಲ್‌ವೊಂದನ್ನು ಇಟ್ಟುಕೊಂಡಿದ್ದರು.

ಸಿಕ್ಕಿದ್ದು ಹೇಗೆ?: ಇತ್ತೀಚೆಗೆ ಬನ್ನೇರುಘಟ್ಟ ರಸ್ತೆಯಲ್ಲಿ ಪ್ರೇಮಿಗಳ ಮೇಲೆ ದಾಳಿ ನಡೆಸಿದ ಆರೋಪಿಗಳು ಬೆದರಿಸಿ ಹಣ ಹಾಗೂ ಎರಡು ಮೊಬೈಲ್‌ಗ‌ಳನ್ನು ಸುಲಿಗೆ ಮಾಡಿದ್ದರು. ಇವರ ವರ್ತನೆ ಬಗ್ಗೆ ಪ್ರೇಮಿಗಳಿಗೆ ಅನುಮಾನ ಬಂದಿತ್ತು. ಥೇಟ್‌ ಪೊಲೀಸರಂತೆ ಕಾಣುತ್ತಾರೆ.

ಆದರೆ ದರೋಡೆಕೋರರಂತೆ ಸುಲಿಗೆ ಮಾಡುತ್ತಾರೆ ಎಂಬ ಅನುಮಾನದೊಂದಿಗೆ ಯುವಕನೊಬ್ಬ ತಲಘಟ್ಟಪುರ ಠಾಣೆಯಲ್ಲಿ ದೂರು ನೀಡಿದ್ದ. ನಂತರ ಪ್ರೇಮಿಗಳಿಂದ ದರೋಡೆ ಮಾಡಿದ್ದ ಮೊಬೈಲ್‌ ನೆಟ್‌ವರ್ಕ್‌ ಜಾಡು ಹಿಡಿದು ಶೋಧ ಕಾರ್ಯ ನಡೆಸಿದಾಗ ಆರೋಪಿಗಳು ಸಿಕ್ಕಿ ಬಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಟಾಪ್ ನ್ಯೂಸ್

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಬ್ರೇಕ್‌ ಬದಲು ಆ್ಯಕ್ಸಿಲೇಟರ್‌ ಒತ್ತಿದ ಆ್ಯಂಬುಲೆನ್ಸ್‌ ಚಾಲಕ: ಸರಣಿ ಅಪಘಾತ

Bengaluru: ಬ್ರೇಕ್‌ ಬದಲು ಆ್ಯಕ್ಸಿಲೇಟರ್‌ ಒತ್ತಿದ ಆ್ಯಂಬುಲೆನ್ಸ್‌ ಚಾಲಕ: ಸರಣಿ ಅಪಘಾತ

2

Bengaluru: ಬಿಸಿಲು; ಹೋಟೆಲ್‌ ವ್ಯಾಪಾರ ಶೇ.30 ಕುಸಿತ

Bengaluru: ನಗರದಲ್ಲಿ ಕಸದ ಬ್ಲಾಕ್‌ ಸ್ಪಾಟ್‌ ಹೆಚ್ಚಳ

Bengaluru: ನಗರದಲ್ಲಿ ಕಸದ ಬ್ಲಾಕ್‌ ಸ್ಪಾಟ್‌ ಹೆಚ್ಚಳ

Bengaluru: ಬೂತ್‌ನಲ್ಲಿ ಕುಸಿದ ಮಹಿಳೆಗೆ ಜೀವದಾನ

Bengaluru: ಬೂತ್‌ನಲ್ಲಿ ಕುಸಿದ ಮಹಿಳೆಗೆ ಜೀವದಾನ

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ

1-qeeqwewqwqe

Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.