ಪ್ರೇಮ ಪತ್ರಗಳ ಜಾಗ ಆವರಿಸಿದ ಫಾರ್ವರ್ಡ್ ಮೆಸೇಜ್ಗಳು
Team Udayavani, Feb 13, 2017, 12:15 PM IST
ಬೆಂಗಳೂರು: ಹಿಂದಿನ ಕಾಲದಲ್ಲಿ ಪ್ರೇಮಿಗಳು ಪತ್ರದ ಮೂಲಕ ಸ್ವಂತಿಕೆ ಬಳಸಿ ಪ್ರೇಮ ನಿವೇದನೆ ಮಾಡಿಕೊಳ್ಳುತ್ತಿದ್ದರು. ಆದರೆ, ಈಗಿನ ಪ್ರೇಮಿಗಳು ಸ್ವಂತಿಕೆ ಬಳಸದೆ ಕೇವಲ ಫಾರ್ವರ್ಡ್ ಸಂದೇಶಗಳನ್ನು ಕಳಿಸುತ್ತಾರೆ ಎಂದು ಪತ್ರಕರ್ತ ರವಿ ಬೆಳಗೆರೆ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಅಜ್ಜೀಪುರ ಪ್ರಕಾಶನದ, ರವಿ ಅಜ್ಜೀಪುರ ಅವರ “ಪ್ರೇಮಸೂತ್ರ’ ಪುಸ್ತಕ ಲೋಕಾರ್ಪಣೆ ಮಾಡಲಾಯಿತು. ನಂತರ ಮಾತನಾಡಿದ ರವಿ ಬೆಳಗೆರೆ, “ಈಗಿನದ್ದು ಮೊಬೈಲ್ನಲ್ಲಿ ಆರಂಭವಾಗಿ ಅದರಲ್ಲೇ ಮುಗಿದು ಹೋಗುವ ಪ್ರೀತಿ. ಬೆಳಿಗ್ಗೆ ಎಸ್ಎಂಎಸ್ ಕಳಿಸುವ ಮೂಲಕ ಪ್ರೀತಿ ಆರಂಭವಾಗಿ, ಸಂಜೆ ವೇಳೆಗೆ ಆ ಪ್ರೀತಿ ಅಂತ್ಯವಾಗಿರುತ್ತದೆ. ಹಿಂದೆ ಪತ್ರದ ಮೂಲಕ ಪ್ರೀತಿ ಆರಂಭವಾಗುತ್ತಿತ್ತು.
ಪತ್ರದಲ್ಲಿ ಪ್ರೇಮಿಗಳು ತಮ್ಮ ಸ್ವಂತಿಕೆ ಬಳಸಿ ಪ್ರೇಮ ನಿವೇದನೆ ಮಾಡಿಕೊಳ್ಳುತ್ತಿದ್ದರು. ಆದರೆ, ಈಗ ಎಸ್ಎಂಎಸ್ ಮೂಲಕ ಪ್ರೇಮ ನಿವೇದನೆ ನಡೆಯುತ್ತದೆ. ಮೊಬೈಲ್ ಪ್ರೀತಿಯಲ್ಲಿ ಸ್ವಂತಿಕೆ ಇರುವುದಿಲ್ಲ. ಏಕೆಂದರೆ, ಪ್ರೇಮ ಸಂದೇಶಗಳು “ಫಾರ್ವಡ್’ ಸಂದೇಶಗಳಾಗಿರುತ್ತವೆ. ಏನೇ ಆಗಲಿ ಪ್ರೀತಿ ಮಾಡಲು ತಾಳ್ಮೆ ಇರಬೇಕು,” ಎಂದರು.
ಶ್ವಾಸ ಸಂಸ್ಥೆಯ ವಚನಾನಂದ ಸ್ವಾಮೀಜಿ ಮಾತನಾಡಿ, “ಪ್ರತಿಯೊಬ್ಬ ಮನುಷ್ಯ ಪ್ರೀತಿ ಬಯಸುತ್ತಾನೆ. ಅದನ್ನು ಸರಿಯಾದ ದಾರಿಯಲ್ಲಿ ಪಡೆದರೆ ಮಾತ್ರ ಜೀವನ ಸುಂದರವಾಗುತ್ತದೆ. ಪ್ರೀತಿಗೆ ಲೌಕಿಕ ಜೀವನದಲ್ಲಷ್ಟೇ ಅಲ್ಲದೆ ಅಲೌಕಿಕ ಜೀವನದಲ್ಲೂ ಅಸ್ತಿತ್ವ ಇದೆ. ಮೀರಾಬಾಯಿ ಹಾಗೂ ತುಳಸೀದಾಸರು ಒಂದು ಹಂತದಲ್ಲಿ ದೇವರನ್ನೇ ಪ್ರೀತಿಸಲು ಆರಂಭಿಸಿದ್ದರು,” ಎಂದು ಉದಾಹರಣೆ ಕೊಟ್ಟರು.
ಪುಸ್ತಕದ ಕುರಿತು ಮಾತನಾಡಿದ ಚಿತ್ರನಿರ್ದೇಶಕ ಶಶಾಂಕ್, “ಸಿನಿಮಾಗಳಲ್ಲಿ ತೋರಿಸುವ ಪ್ರೀತಿ ಕಾಲ್ಪನಿಕ. ಆದರೆ, ಪುಸ್ತಕಗಳಲ್ಲಿ ಕತೆಗಳ ಮೂಲಕ ಹೇಳುವ ಪ್ರೀತಿ ವಾಸ್ತವವಾಗಿರುತ್ತದೆ. ಪ್ರೇಮಸೂತ್ರ ಪುಸ್ತಕ ಪ್ರೀತಿಯ ನಿಜವಾದ ಮುಖ ತೋರಿಸುವ ಮೂಲಕ ಸತ್ಯವನ್ನು ಬಿಚ್ಚಿಡುತ್ತದೆ,” ಎಂದರು. ಲೇಖಕ ರವಿ ಅಜ್ಜೀಪುರ ಸೇರಿದಂತೆ ಮತ್ತಿತರರು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್
Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್ ಕೋಡ್ ಅಂಟಿಸಿದ್ದ ಉದ್ಯಮಿ ಸೆರೆ
Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್ ನೀಚ ಕೃತ್ಯ
ಚಾಕೋಲೆಟ್ ಕೊಡ್ತೇನೆಂದು ಮನೆಗೆ ಕರೆದು ಬಾಲಕಿಗೆ ಲೈಂಗಿಕ ದೌರ್ಜನ್ಯ: ಇಬ್ಬರು ಬಂಧನ
Bengaluru: ಚೆಕ್ ದುರ್ಬಳಕೆ; ಕ್ಯಾಷಿಯರ್, ಎಲ್ಐಸಿ ಏಜೆಂಟ್ಗೆ ಜೈಲು
MUST WATCH
ಹೊಸ ಸೇರ್ಪಡೆ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ