ಯುಗಾದಿಗೆ ಹಣ್ಣು-ಹೂವು ದರದ ಬರೆ
Team Udayavani, Apr 5, 2019, 12:19 PM IST
ಬೆಂಗಳೂರು: ಲೋಕಸಭೆಯ ಚುನಾವಣೆ ಕಾವು ಗೂ ಬಿಸಿಲಿನ ಝಳದೊಂದಿಗೆ ಯುಗಾದಿ ಸಡಗರ ನಗರ ಪ್ರವೇಶಸಿದೆ.
ಒಂದು ತಿಂಗಳ ನಿರಂತರ ಬಿಸಿಲಿನಿಂದಾಗಿ ಹೂವಿನ ಪೂರೈಕೆ ಕಡಿಮೆಯಾಗಿದೆ. ಸೇವಂತಿಗೆ, ಗುಲಾಬಿ ಹೂವುಗಳ ದರ ಹೆಚ್ಚಾಗಿದೆ. ಇದರೊಂದಿಗೆ ಈ ಮಯದಲ್ಲಿ ಮದುವೆ, ಗೃಹ ಪ್ರವೇಶದಂತಹ ಶುಭಾ ಸಮಾರಂಭಗಳು ಹೆಚ್ಚಾಗಿ ನಡೆಯುತ್ತಿದ್ದು, ಬೆಲೆ ಏರಿಕೆ ಬರೆ ಬಿದ್ದಿದೆ. ಹಣ್ಣು ಮತ್ತು ತರಕಾರಿಗಳ ಬೆಲೆ ಎರಡು ತಿಂಗಳಿನಿಂದ ಸ್ಥಿರವಾಗಿದ್ದು, ಹಬ್ಬದ ಹಿನ್ನೆಲೆಯಲ್ಲಿ ತುಸು ಏರಿಕೆ ಕಂಡು ಬಂದಿದೆ.
ಮಲ್ಲಿಗೆ, ಮಲ್ಲೆ, ಕಾಕಡ ಹೂವುಗಳ ಬೆಲೆ ಒಂದು ಕೆ.ಜಿ.ಗೆ 400 ರಿಂದ 500 ರೂ.ಗಳಾಗಿವೆ. ಒಂದು ಕೆ.ಜಿ. ಸೇವಂತಿಗೆ ಬೆಲೆ 300 ರಿಂದ 500 ರೂ. ಹಾಗೂ ಮಾರಿಗೋಲ್ಡ್ ಸೇವಂತಿಗೆ ಬೆಲೆ 300 ರಿಂದ 400 ರೂ.ಗಳಿಗೆ ಏರಿಕೆಯಾಗಿದೆ. ಅದೇ ರೀತಿ ಬಟನ್ಸ್ ರೋಸ್ ಕಾಲು ಕೆ.ಜಿ.ಗೆ 80 ರೂ.ಗಳಾಗಿದೆ.
ಕಿತ್ತಳೆ ಹಣ್ಣಿನ ಕಾಲ ಮುಗಿಯುತ್ತಿರುವುದರಿಂದ ಬೆಲೆ ಹೆಚ್ಚಾಗಿದ್ದು, ಕೆ.ಆರ್.ಮಾರುಕಟ್ಟೆಯಲ್ಲಿ ಒಂದು ಕೆ.ಜಿ. ಕಿತ್ತಳೆ 220 ರೂ.ಗೆ ಮಾರಾಟವಾಗುತ್ತಿದೆ. ಹಾಪ್ಕಾಮ್ಸ್ನಲ್ಲಿ ಸ್ಥಳೀಯ ಕಿತ್ತಳೆಗೆ 60 ರೂ., ಆಸ್ಟ್ರೇಲಿಯಾ ಕಿತ್ತಳೆಗೆ 160 ರೂ. ನಿಗದಿಪಡಿಸಲಾಗಿದೆ. ಮಲ್ಲಿಕಾ, ಬಾದಮಿ, ಸೆಂದಿ, ಸಕ್ಕರೆಗುತ್ತಿ, ನೀಲಂ, ರಸಪುರಿ, ತೊತಪುರಿ, ಕೇಸರ್, ಬೈಗಂಪಲ್ಲಿ ಸೇರಿದಂತೆ ವಿವಿಧ ತಳಿಯ ಮಾವಿನ ಹಣ್ಣುಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.
ಯುಗಾದಿ ಹಬ್ಬ ಎಂದರೆ ನೆನಪಿಗೆ ಬರುವುದೇ ಹೋಳಿಗೆ. ಹೀಗಾಗಿ ತೊಗರಿಬೇಳೆ, ಬೆಲ್ಲ, ಮೈದಾ, ಚಿರೋಟಿ ರವೆ ಇತ್ಯಾದಿಗಳ ಖರೀದಿದಾರರು ಹೆಚ್ಚಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು
RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ
China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ
Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ