ಕೆಪೆಲ್‌ ಹಣ್ಣು ತಿಂದರೆ ವಾರ ಕಾಲ ದೇಹದಲ್ಲಿ ಸುವಾಸನೆ!


Team Udayavani, Feb 23, 2023, 2:51 PM IST

ಕೆಪೆಲ್‌ ಹಣ್ಣು ತಿಂದರೆ ವಾರ ಕಾಲ ದೇಹದಲ್ಲಿ ಸುವಾಸನೆ!

ಬೆಂಗಳೂರು: ನೀವು ಮೈಗೆ ಸೆಂಟ್‌ ಹಾಕಿಕೊಂಡರೆ ಹಲವು ತಾಸುಗಳ ಕಾಲ ಸುವಾಸನೆ ಬೀರಬಹುದು. ಆದರೆ, ಇಲ್ಲೊಂದು ಅಪರೂಪದ ಹಣ್ಣಿದೆ. ಆ ಹಣ್ಣನ್ನು ನೀವು ಸೇವಿಸಿದರೆ 8 ದಿನಗಳ ಕಾಲ ನಿಮ್ಮ ದೇಹದ ತುಂಬೆಲ್ಲ ಸೂವಾಸೆಯ ಘಮಲಿರಲಿದೆ!

ಥೈಯ್ಲೆಂಡ್‌ ಮೂಲದ “ಕೆಪೆಲ್‌’ ಜಾತಿಯ ಈ ಗಿಡವು ತೋಟಗಾರಿಕಾ ಮೇಳದಲ್ಲಿ ಆಕರ್ಷಣೆಯಾಗಿದೆ. ಮಹಮದ್‌ ಆದಿಲ್‌ ಅವರು ಈ ಗಿಡವನ್ನು ಪ್ರದರ್ಶನ ಮತ್ತು ಮಾರಾಟಕ್ಕೆ ಇರಿಸಿದ್ದಾರೆ. ಕರ್ನಾಟಕದ ರೈತರಿಗೆ ಕೆಪೆಲ್‌ ಗಿಡದ ಬಗ್ಗೆ ಅಷ್ಟೇನೂ ಮಾಹಿತಿಯಿಲ್ಲ. ಆ ಹಿನ್ನೆಲೆಯಲ್ಲಿ ಕರುನಾಡಿನ ರೈತರಿಗೆ ಈ ತಳಿಯನ್ನು ಪರಿಚಯಿತ್ತಿದ್ದೇನೆ. ಕೇರಳ ರೈತರು ಕೆಪೆಲ್‌ ಬೆಳೆ ಬೆಳೆಯುತ್ತಿದ್ದಾರೆ ಎಂದು ವ್ಯಾಪಾರಿ ಮಹಮದ್‌ ಅದಿಲ್‌ ಹೇಳುತ್ತಾರೆ.

ಈ ಹಣ್ಣು ತಿಂದರೆ ಮೈಯಲ್ಲ ಸುವಾಸನೆ ಬೀರಲಿದೆ. ಥೈಯ್ಲೆಂಡ್‌ ರಾಜಮನೆತನದವರು ಈ ಗಿಡವನ್ನು ಬೆಳೆಯುತ್ತಿದ್ದರು ಎಂದು ಹೇಳಲಾಗುತ್ತಿದೆ. ಇದೀಗ ಭಾರತಕ್ಕೂ ಪರಿಚಯಿಸುವ ಕೆಲಸ ನಡೆದಿದೆ ಎನ್ನುತ್ತಾರೆ. ಭೂಮಿಗೆ ಹಾಕಿದ ಐದು ವರ್ಷದಲ್ಲಿ ಬೆಳೆ ಬರಲು ಪ್ರಾರಂಭವಾಗಲಿದೆ. ಒಂದು ಗಿಡದಲ್ಲಿ 10ರಿಂದ 20 ಕಾಯಿಗಳು ಬಿಡಲಿವೆ. ಹೆಚ್ಚು ನೀರು ಕೂಡ ಈ ಬೆಳೆಗೆ ಬೇಕಾಗಿಲ್ಲ. ಸುಮಾರು 30 ಅಡಿಯ ವರೆಗೂ ಈ ಗಿಡ ಬೆಳೆಯಲಿದೆ. ವರ್ಷ ಕಳೆದಂತೆ ಗಿಡದಲ್ಲಿ ಫ‌ಲಗಳು ಹೆಚ್ಚಾಗಲಿವೆ. ಮಾರುಕಟ್ಟೆಯಲ್ಲಿ ಒಂದು ಕೆ.ಜಿ.ಗೆ ಸಾವಿರ ರೂ. ವರೆಗೂ ಕೆಪೆಲ್‌ ಹಣ್ಣು ಮಾರಾಟವಾಗಲಿದೆ ಎಂದು ಮಾಹಿತಿ ನೀಡುತ್ತಾರೆ.

ಕೆಪೆಲ್‌ನಲ್ಲಿ ಆರೋಗ್ಯಕ್ಕೂ ಅನುಕೂಲವಾಗಿರುವ ಅಂಶಗಳಿವೆ. ಕೇರಳದಲ್ಲಿ ಈಗಾಗಲೇ ಕೆಲವು ರೈತರು ಈ ಬೆಳೆಗಳನ್ನು ತಮ್ಮ ಹೊಲಕ್ಕೆ ಹಾಕಿದ್ದಾರೆ. ಹೊರ ದೇಶದಲ್ಲೂ ಕೂಡ ಇದಕ್ಕೆ ಬೇಡಿಕೆಯಿದೆ. ಆದರೆ ಜನರಿಗೆ ಇನ್ನೂ ಈ ಹಣ್ಣಿನ ಬಗ್ಗೆ ಮಾಹಿತಿಯಿಲ್ಲ. ಆದರೆ ಥೈಯ್ಲೆಂಡ್‌ನ‌ಲ್ಲಿ ಈ ಗಿಡದ ಬಗ್ಗೆ ಅರಿವಿದೆ. ಕೆಲವ ಪ್ರದರ್ಶನಕ್ಕೆ ಮಾತ್ರ ಇಲ್ಲಿ ಇರಿಸಲಾಗಿದೆ. ರೈತರು ಬೇಡಿಕೆ ಸಲ್ಲಿಸಿದರೆ ಕೇರಳದಿಂದ ಈ ಗಿಡವನ್ನು ತರಿಸಿಕೊಡುವುದಾಗಿ ಹೇಳುತ್ತಾರೆ. ಚಿಕ್ಕ ಗಾತ್ರದ ಕೆಪೆಲ್‌ ಗಿಡ 1,500 ರೂ.ಆಗಿದ್ದು, ಬೃಹತ್‌ ಗಾತ್ರದ ಗಿಡಕ್ಕೆ 5 ಸಾವಿರ ರೂ.ಆಗಿದೆ.

ಟಾಪ್ ನ್ಯೂಸ್

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

1-qweqweqw

Chennai ಅಪಾರ್ಟ್‌ಮೆಂಟ್‌ನ ಟಿನ್ ರೂಫ್‌ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ

1-weweqwe

Vande Bharat Metro ರೈಲು ಸೇವೆ ಜುಲೈಯಿಂದ ಶುರು? ವಿಶೇಷತೆಗಳೇನು?

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

Temperature; ಮುಂದಿನ 5 ದಿನ ಅರ್ಧ ರಾಜ್ಯಕ್ಕೆ ಉಷ್ಣ ಅಲೆ ಮುನ್ನೆಚ್ಚರಿಕೆ

Temperature; ಮುಂದಿನ 5 ದಿನ ಅರ್ಧ ರಾಜ್ಯಕ್ಕೆ ಉಷ್ಣ ಅಲೆ ಮುನ್ನೆಚ್ಚರಿಕೆ

1-weeeqwe

ಅಮೃತಶಿಲೆಯಲ್ಲಿ ಕೆತ್ತಿದ 18 ಅಡಿ ಕಾಳಿ ಮಾತೆ ಪ್ರತಿಮೆ ಇಂದು ಕೇರಳಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಬ್ರೇಕ್‌ ಬದಲು ಆ್ಯಕ್ಸಿಲೇಟರ್‌ ಒತ್ತಿದ ಆ್ಯಂಬುಲೆನ್ಸ್‌ ಚಾಲಕ: ಸರಣಿ ಅಪಘಾತ

Bengaluru: ಬ್ರೇಕ್‌ ಬದಲು ಆ್ಯಕ್ಸಿಲೇಟರ್‌ ಒತ್ತಿದ ಆ್ಯಂಬುಲೆನ್ಸ್‌ ಚಾಲಕ: ಸರಣಿ ಅಪಘಾತ

2

Bengaluru: ಬಿಸಿಲು; ಹೋಟೆಲ್‌ ವ್ಯಾಪಾರ ಶೇ.30 ಕುಸಿತ

Bengaluru: ನಗರದಲ್ಲಿ ಕಸದ ಬ್ಲಾಕ್‌ ಸ್ಪಾಟ್‌ ಹೆಚ್ಚಳ

Bengaluru: ನಗರದಲ್ಲಿ ಕಸದ ಬ್ಲಾಕ್‌ ಸ್ಪಾಟ್‌ ಹೆಚ್ಚಳ

Bengaluru: ಬೂತ್‌ನಲ್ಲಿ ಕುಸಿದ ಮಹಿಳೆಗೆ ಜೀವದಾನ

Bengaluru: ಬೂತ್‌ನಲ್ಲಿ ಕುಸಿದ ಮಹಿಳೆಗೆ ಜೀವದಾನ

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

1-qweqweqw

Chennai ಅಪಾರ್ಟ್‌ಮೆಂಟ್‌ನ ಟಿನ್ ರೂಫ್‌ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ

1-weweqwe

Vande Bharat Metro ರೈಲು ಸೇವೆ ಜುಲೈಯಿಂದ ಶುರು? ವಿಶೇಷತೆಗಳೇನು?

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.