ನೋಟು ಅಮಾನ್ಯದಿಂದ ದೇಶದ ಅಭಿವೃದ್ಧಿ ಋಣಾತ್ಮಕ
Team Udayavani, Jan 23, 2017, 3:45 AM IST
ಬೆಂಗಳೂರು: ಕಪ್ಪುಹಣ ಮತ್ತು ಭ್ರಷ್ಟಾಚಾರ ಎನ್ನುವುದು ದೇಶದ ಮುಂದಿರುವ ದೊಡ್ಡ ಸಮಸ್ಯೆಗಳು ಎಂಬುದು ನಿಜ. ಆದರೆ, ಅವುಗಳನ್ನು ನಿಯಂತ್ರಿಸಲು ನೋಟು ಅಮಾನ್ಯ ಮಾಡುವ ದಾರಿ ಮಾತ್ರವಿತ್ತೇ? ಎಂದು ಪ್ರಶ್ನಿಸಿರುವ ಸುಪ್ರೀಂ ಕೋರ್ಟ್ ಹಿರಿಯ ವಕೀಲ ಪ್ರಶಾಂತ್ ಭೂಷಣ್, ಕೇಂದ್ರದ ಈ ಕ್ರಮದಿಂದ ದೇಶದ ಅಭಿವೃದ್ಧಿ ಋಣಾತ್ಮಕವಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಭಾನುವಾರ ನಗರದ ಸೆಂಟ್ರಲ್ ಕಾಲೇಜಿನ ಸೆನೆಟ್ ಹಾಲ್ನಲ್ಲಿ ಕರ್ನಾಟಕ ಜನಶಕ್ತಿ, ದಲಿತ ಸಂಘರ್ಷ ಸಮಿತಿ ಮತ್ತು ಸ್ವರಾಜ್ ಅಭಿಯಾನ ಸಹಯೋಗದಲ್ಲಿ ಹಮ್ಮಿಕೊಂಡಿದ್ದ “ನೋಟು ರದ್ದತಿಯ ವಾಸ್ತವ ಹಾಗೂ ಸಾಧಕಧಿಭಾದಕಗಳು’ ವಿಷಯ ಕುರಿತ ಮುಕ್ತ ಸಂವಾದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಕಪ್ಪು$ಹಣ ಚಲಾವಣೆ, ಭಯೋತ್ಪಾದನೆ ಮತ್ತು ಭ್ರಷ್ಟಾಚಾರ ನಿಗ್ರಹಕ್ಕೆ ನೋಟು ರದ್ದತಿ ಮಾಡುವುದಾಗಿ ಹೇಳಿದರು. ಆದರೆ, ನೋಟು ರದ್ದತಿ ಹಿಂದಿನ ಉದ್ದೇಶ ಇದೇ ಆಗಿತ್ತೇ? ಎಂಬುದರಲ್ಲಿ ಸಂಶಯವಿದೆ. ನೋಟು ರದ್ದತಿಯ ನಂತರ ಉತ್ಪಾದನಾ ಕ್ಷೇತ್ರದಲ್ಲಿ ಶೇ.35 ಉದ್ಯೋಗ ನಷ್ಟವಾಗಿದ್ದು, ಜನರ ಬದುಕು ಮತ್ತು ಹಣ ಎಲ್ಲವನ್ನೂ ಬೀದಿಗೆಸೆದಿದೆ ಎಂದು ಆರೋಪಿಸಿದರು.
500 ಮತ್ತು 1000 ರೂ. ಮುಖಬೆಲೆಯ ನೋಟುಗಳ ನಿಷೇಧದಿಂದ ಕಪ್ಪುಹಣ ಅಥವಾ ಭ್ರಷ್ಟಾಚಾರ ನಿಯಂತ್ರಣವಾಗುವುದಿಲ್ಲ. ಮುಂದೆ ಈ ನೋಟುಗಳ ಬದಲು 2000ರ ನೋಟು ಬಳಕೆಯಾಗುತ್ತದೆ. ಎಲ್ಲಾ ಆರ್ಥಿಕ ವಹಿವಾಟುಗಳು ಬ್ಯಾಂಕಿಂಗ್ ವ್ಯವಸ್ಥೆಯಡಿ ಬಂದಾಗ ದೇಶ ಅಭಿವೃದ್ಧಿಯಾಗಲಿದೆ ಎಂದು ಹೇಳಲಾಗುತ್ತಿದೆ. ಆದರೆ, ದೇಶದಲ್ಲಿನ ಶೇ.50ರಷ್ಟು ಜನರಿಗೆ ಬ್ಯಾಂಕ್ ಖಾತೆ ಇಲ್ಲ. ದೊಡ್ಡ ಸಂಖ್ಯೆಯ ಜನರಿಗೆ ಶಿಕ್ಷಣವಿಲ್ಲ. ಇಂತಹ ಸಂದರ್ಭದಲ್ಲಿ ನಗದು ರಹಿತ ವಹಿವಾಟು ಮಾಡಬೇಕೆ? ಎಂದು ಪ್ರಶ್ನಿಸಿದರು.
ಮೋದಿ ಸರ್ಕಾರಕ್ಕೆ ಖಾಸಗಿ ಬಂಡವಾಳಶಾಹಿಗಳ ಲಾಭದ ಬಗ್ಗೆ ಕಾಳಜಿಯಿದೆಯೇ ಹೊರತು ಬಡವರ ಮೇಲಲ್ಲ. ಇದು ದೇಶದ ಇತಿಹಾಸದಲ್ಲೇ ಅತ್ಯಂತ ಸಂವೇದನಾಶೂನ್ಯ ಸರ್ಕಾರ ಎಂದೂ ಅವರು ಕಿಡಿ ಕಾರಿದರು.
ಲೋಕ್ಪಾಲ್ ಸಂಸ್ಥೆ ಅನಾಥವಾಗಿದೆ: ಲೋಕ್ಪಾಲ್ ಮಸೂದೆಗೆ 2013ರÇÉೇ ಸಂಸತ್ತಿನ ಅನುಮತಿ ಸಿಕ್ಕಿದೆ. ಮೋದಿ ಪ್ರಧಾನಿಯಾಗಿ ಇಷ್ಟು ಸಮಯ ಕಳೆದರೂ ಇನ್ನೂ ಆ ಬಗ್ಗೆ ಚರ್ಚೆಯಾಗಿಲ್ಲ. ಮುಖ್ಯಸ್ಥರನ್ನು ನೇಮಿಸದಿದ್ದಾಗ ಆ ಸಂಸ್ಥೆ ತಾನಾಗಿಯೇ ಸಾಯುತ್ತದೆ. ಇನ್ನೊಂದೆಡೆ ಭ್ರಷ್ಟಾಚಾರ ತಡೆಯುತ್ತಿದ್ದ ಎಲ್ಲಾ ಸಂಸ್ಥೆಗಳ ಸೊಂಟ ಮುರಿಯುವ ಸಾಮಥ್ಯವಿರುವ ಕರ್ನಾಟಕದ ಆರ್.ಕೆ.ದತ್ತಾ ಅವರನ್ನು ಸಿಬಿಐ ನಿರ್ದೇಶಕರಾಗಿ ನೇಮಿಸಲಿಲ್ಲ. ಈ ದೇಶದ ಎಲ್ಲಾ ಭ್ರಷ್ಟಾಚಾರ ನಿಗ್ರಹ ಸಂಸ್ಥೆಗಳನ್ನೂ ಒಂದುಕಡೆ ನಾಶ ಮಾಡಿ ಇನ್ನೊಂದೆಡೆ ಭ್ರಷ್ಟರಿಗೆ ಕುಮ್ಮಕ್ಕು ನೀಡಲಾಗುತ್ತಿದೆ ಎಂದು ಆರೋಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು
Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ
Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್
Lok Sabha Election: ಗ್ಯಾರಂಟಿಗೆ ಮೋಸ ಹೋಗದೆ ಬಿಜೆಪಿಗೆ ಮತ ನೀಡಿ: ಬಿವೈಆರ್
Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್
MUST WATCH
ಹೊಸ ಸೇರ್ಪಡೆ
ಬಿಗ್ಬಾಸ್ ವಿನ್ನರ್ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ
Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು
T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ