ಚಿನ್ನಾಭರಣ ಮಳಿಗೆಯಲ್ಲಿ ಕಳವಿಗೆ ಬಂದು ಸಿಕ್ಕಿಬಿದ್ದ ಕಳ್ಳಿಯರು!


Team Udayavani, Jan 16, 2017, 11:41 AM IST

gold-thefts.jpg

ಬೆಂಗಳೂರು: ಬಸವನಗುಡಿಯಲ್ಲಿರುವ ಶ್ರೀ ಸಾಯಿಗೋಲ್ಡ್‌ ಪ್ಯಾಲೇಸ್‌ನ ಚಿನ್ನಾಭರಣ ಮಳಿಗೆಯಲ್ಲಿ ಕಳವು ಮಾಡಲು ಬಂದಿದ್ದ ಆಂಧ್ರ ಮೂಲದ ಮೂವರು ಮಹಿಳೆಯರನ್ನು ಭಾನುವಾರ ಮಳಿಗೆಯ ಸಿಬ್ಬಂದಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಆಂಧ್ರಪ್ರದೇಶದ ಕುಪ್ಪಂ ಮೂಲದ ಕಲಾವತಿ, ಲಲಿತಾ, ರತ್ನಾ ಬಂಧಿತರು. ಈ ಮೂವರು ಕಳೆದ ಅಕ್ಟೋಬರ್‌ನಲ್ಲಿ ಚಿನ್ನಾಭರಣ ಮಳಿಗೆಗೆ ಗ್ರಾಹಕರ ಸೋಗಿನಲ್ಲಿ ಬಂದು ಓಲೆ ಕಳವು ಮಾಡಿಕೊಂಡು ಹೋಗಿದ್ದರು. ಈ ಸಂಬಂಧ ಮಳಿಗೆ ಮಾಲಿಕರು ಬಸವನಗುಡಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಭಾನುವಾರ ಪುನಃ ಕಳುವಿಗೆ ಬಂದಿದ್ದಾಗ ಸಿಬ್ಬಂದಿ ಕೈಗೆ ಸಿಕ್ಕಿಬಿದ್ದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಲಾವತಿ, ಲಲಿತಾ ಮತ್ತು ರತ್ನಾ ಅವರು ಭಾನುವಾರ ಮಧ್ಯಾಹ್ನ ಗ್ರಾಹಕರ ಸೋಗಿನಲ್ಲಿ ಮಳಿಗೆಯ ಕೌಂಟರ್‌ಗೆ ತೆರಳಿ ಗಜೇಂದ್ರ ಎಂಬ ಸೇಲ್ಸ್‌ಮ್ಯಾನ್‌ ಬಳಿ ಚಿನ್ನಾರಣ ತೋರಿಸುವಂತೆ ಕೇಳಿದ್ದಾರೆ. ಹಲವು ಚಿನ್ನಾಭರಣವನ್ನು ತೆಗೆಸಿರುವ ಮಹಿಳೆಯರು ಯಾವ ಒಡವೆಯನ್ನೂ ಆಯ್ಕೆ ಮಾಡಲಿಲ್ಲ. ಬಳಿಕ ಮತ್ತಷ್ಟು ಒಡವೆ ತೆಗೆಯುವಂತೆ ಕೇಳಿದ್ದಾರೆ.

ಮಹಿಳೆಯರ ನಡವಳಿಕೆ ಗಮನಿಸಿದ ಸೇಲ್ಸ್‌ಮ್ಯಾನ್‌ ಕಳೆದ ಬಾರಿ ಮಳಿಗೆಗೆ ಬಂದು ಕಳವು ಮಾಡಿದ್ದ ಮಹಿಳೆಯರೇ ಇವರಿರಬಹುದು ಎಂದು ಅನುಮಾನಗೊಂಡು ಇತರೆ ಸಿಬ್ಬಂದಿಯ ನೆರವಿನೊಂದಿಗೆ ಅವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಬಳಿಕ ಕಳೆದ ಅಕ್ಟೋಬರ್‌ನಲ್ಲಿ ನಡೆದಿದ್ದ ಕಳವು ಪ್ರಕರಣದ ಸಿಸಿವಿಟಿ ದೃಶ್ಯಾವಳಿ ಪರಿಶೀಲನೆ ನಡೆಸಿದಾಗ ಕಳವಿಗೆ ಬಂದಿದ್ದು ಇದೇ ಮಹಿಳೆಯರು ಎಂಬುದು ಖಚಿತವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.  

ಬಂಧಿತ‌ ಆರೋಪಿಗಳು ಬೇರೆ ಮಳಿಗೆಗಳಲ್ಲೂ ಕಳವು ಮಾಡಿರುವ ಶಂಕೆ ಇದ್ದು, ಆ ಕುರಿತು ವಿಚಾರಣೆ ನಡೆಸಲಾಗುತ್ತಿದೆ. ಕುಪ್ಪುಂನಲ್ಲಿರುವ ಲಕ್ಷಿ ಎಂಬಾಕೆ ನಕಲಿ ಚಿನ್ನಾಭರಣಗಳನ್ನು ತಯಾರಿಸಿ, ಮಹಿಳೆಯರಿಗೆ ಕೊಟ್ಟು ಅದನ್ನು ಚಿನ್ನಾಭರಣ ಮಳಿಗೆಯಲ್ಲಿಟ್ಟು ಅಸಲಿ ಚಿನ್ನಾಭರಣ ಕದಿಯುವಂತೆ ಸೂಚಿಸುತ್ತಿದ್ದಳು ಎಂಬುದು ತನಿಖೆ ವೇಳೆ ತಿಳಿದುಬಂದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಹಬ್ಬದ ದಿನಗಳಲ್ಲಿ ಹೆಚ್ಚು ಗ್ರಾಹಕರಿರುತ್ತಾರೆ, ಸುಲಭವಾಗಿ ಕಳವು ಮಾಡಬಹುದೆಂದು ಹಬ್ಬದ ದಿನಗಳಲ್ಲಿ ಕಳವಿಗೆ ಬಂದಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಕದ್ದು ಪುನಃ ಮಳಿಗೆಗೆ ಬಂದಿದ್ರು!
ಇದೇ ಮೂವರು ಮಹಿಳೆಯರು 2016ರ ಅ. 31ರಂದು ಶ್ರೀಸಾಯಿಗೋಲ್ಡ್‌ ಪ್ಯಾಲೇಸ್‌ಗೆ ಗ್ರಾಹಕರ ಸೋಗಿನಲ್ಲಿ ಬಂದಿದ್ದರು. ಮಳಿಗೆಯಲ್ಲಿದ್ದ ಸೇಲ್ಸ್‌ಗರ್ಲ್ಸ್ಗೆ ಚಿನ್ನಾಭರಣ ತೋರಿಸುವಂತೆ ಹೇಳಿದ್ದರು.  ಕೆಲವು ಒಡವೆಗಳನ್ನು ಪಡೆದಿದ್ದ ಮಹಿಳೆಯರು ಅವುಗಳನ್ನು ಪರಿಶೀಲಿಸುತ್ತಿದ್ದರು.

ಈ ವೇಳೆ ಮತ್ತಷ್ಟು ಒಡವೆಗಳನ್ನು ತೋರಿಸುವಂತೆ ಹೇಳಿದ್ದು, ಸೇಲ್ಸ್‌ಗರ್ಲ್ ಹಿಂದಿರುಗಿ ಬೇರೆ ಚಿನ್ನಾಭರಣ ತೋರಿಸುವಷ್ಟರಲ್ಲಿ ಓರ್ವ ಮಹಿಳೆ ಅಸಲಿ ಚಿನ್ನಾಭರಣಗಳನ್ನು ತಮ್ಮ ಬ್ಯಾಗ್‌ಗೆ ಹಾಕಿಕೊಂಡಿದ್ದು, ಇನ್ನಿಬ್ಬರು ನಕಲಿ ಒಡವೆಗಳನ್ನು ಮಳಿಗೆಯ ಬಾಕ್ಸ್‌ನಲ್ಲಿ ಇಟ್ಟು ಬಳಿಕ ಸ್ಥಳದಿಂದ ಪರಾರಿಯಾಗಿದ್ದರು.

ಅನುಮಾನದಿಂದ ಮಳಿಗೆಯ ಸಿಸಿಟಿವಿಗಳನ್ನು ಪರಿಶೀಲನೆ ನಡೆಸಿದಾಗ ಮೂವರು ಮಹಿಳೆಯರ ಕೈಚಳಕ ಬಯಲಾಗಿತ್ತು. ಈ ಬಾರಿಯೂ ಮೂವರು ಮಹಿಳೆಯರು ಬಂದು ಹಿಂದಿನಂತೆಯೇ ವರ್ತಿಸಿದ್ದು ಮಳಿಗೆ ಸಿಬ್ಬಂದಿಯ ಅನುಮಾನಕ್ಕೆ ಕಾರಣವಾಗಿ ಕಳ್ಳರು ಸಿಕ್ಕಿಬೀಳುವಂತಾಯಿತು.

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಬ್ರೇಕ್‌ ಬದಲು ಆ್ಯಕ್ಸಿಲೇಟರ್‌ ಒತ್ತಿದ ಆ್ಯಂಬುಲೆನ್ಸ್‌ ಚಾಲಕ: ಸರಣಿ ಅಪಘಾತ

Bengaluru: ಬ್ರೇಕ್‌ ಬದಲು ಆ್ಯಕ್ಸಿಲೇಟರ್‌ ಒತ್ತಿದ ಆ್ಯಂಬುಲೆನ್ಸ್‌ ಚಾಲಕ: ಸರಣಿ ಅಪಘಾತ

2

Bengaluru: ಬಿಸಿಲು; ಹೋಟೆಲ್‌ ವ್ಯಾಪಾರ ಶೇ.30 ಕುಸಿತ

Bengaluru: ನಗರದಲ್ಲಿ ಕಸದ ಬ್ಲಾಕ್‌ ಸ್ಪಾಟ್‌ ಹೆಚ್ಚಳ

Bengaluru: ನಗರದಲ್ಲಿ ಕಸದ ಬ್ಲಾಕ್‌ ಸ್ಪಾಟ್‌ ಹೆಚ್ಚಳ

Bengaluru: ಬೂತ್‌ನಲ್ಲಿ ಕುಸಿದ ಮಹಿಳೆಗೆ ಜೀವದಾನ

Bengaluru: ಬೂತ್‌ನಲ್ಲಿ ಕುಸಿದ ಮಹಿಳೆಗೆ ಜೀವದಾನ

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.