ಸೈನಿಕರ ನಾಡು ಕೊಡಗು ಈಗ ನೀರ ಮೇಲಿನ ಹಡಗು!


Team Udayavani, Aug 20, 2018, 6:15 AM IST

groundwater-level-kodagu.jpg

ಬೆಂಗಳೂರು: ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಅಂತರ್ಜಲಮಟ್ಟ ಪಾತಾಳಕ್ಕೆ ಕುಸಿದಿದ್ದರಿಂದ ಆ ಭಾಗಗಳಲ್ಲಿ ಹಾಹಾಕಾರ ಸೃಷ್ಟಿಸಿದೆ. ಆದರೆ, ಅದೇ ಅಂತರ್ಜಲವು ಭೂಮಿಯ ಮೇಲ್ಭಾಗವನ್ನು ತಲುಪಿ, ಇಡೀ ಮಂಜಿನ ನಗರಿ ಕೊಡಗನ್ನು ಬುಡಮೇಲು ಮಾಡುತ್ತಿದೆ!

ಹೌದು, ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಕೊಡಗಿನ ಅಂತರ್ಜಲಮಟ್ಟ ಗಣನೀಯವಾಗಿ ಏರಿಕೆಯಾಗಿದೆ. ಇದರಿಂದ ಭೂಮಿಯ ಒಡಲು ಸಂಪೂರ್ಣವಾಗಿ ತೇವಗೊಂಡಿದ್ದು, ಅದರ ಮೇಲೆ ಎಡಬಿಡದೆ ಮಳೆಯಾಗುತ್ತಿದೆ. ಹೀಗೆ ನಿರಂತರವಾಗಿ ನೆನೆದ ಮಣ್ಣು ಸಡಿಲಗೊಂಡು ಗುಡ್ಡಗಳ ಕುಸಿತಕ್ಕೆ ಕಾರಣವಾಗುತ್ತಿದೆ ಎಂದು ಭೂವಿಜ್ಞಾನಿಗಳು ಅಭಿಪ್ರಾಯಪಡುತ್ತಾರೆ.

ಇದಕ್ಕೆ ಪೂರಕವಾಗಿ ಜುಲೈ ಅಂತ್ಯಕ್ಕೆ ರಾಜ್ಯ ಅಂತರ್ಜಲ ನಿರ್ದೇಶನಾಲಯವು ಕೊಡಗಿನ 35 ಅಂತರ್ಜಲ ಮಾಪನ ಕೇಂದ್ರಗಳಲ್ಲಿ ನಡೆಸಿದ ಸಮೀಕ್ಷೆಯಲ್ಲಿ ದಾಖಲಾದ ಅಂತರ್ಜಲ ಮಟ್ಟದ ಫ‌ಲಿತಾಂಶ ಕೂಡ ಪುಷ್ಟಿ ನೀಡುತ್ತದೆ. 35 ಕೇಂದ್ರಗಳ ಪೈಕಿ 25 ಕಡೆಗಳಲ್ಲಿ ಅಂತರ್ಜಲ ಮಟ್ಟ 10 ಮೀಟರ್‌ಗಿಂತ ಕಡಿಮೆ ಇದ್ದು, ಈ ಪೈಕಿ 15 ಪ್ರದೇಶಗಳಲ್ಲಿ ಕೇವಲ 5 ಮೀಟರ್‌ ಒಳಗೇ ಇದೆ. ಆಗಸ್ಟ್‌ನಲ್ಲಿ ಇದು ಶೂನ್ಯ ತಲುಪಿರುವ ಸಾಧ್ಯತೆಗಳಿವೆ ಎಂದು ಅಧಿಕಾರಿಗಳು ತಿಳಿಸುತ್ತಾರೆ.

ಕೊಡಗು- ನೀರಿನ ಮೇಲಿನ ಹಡಗು!
ಬೇರೆ ಪ್ರದೇಶಗಳಂತೆ ಕೊಡಗು ಮೇಲ್ನೋಟಕ್ಕೆ ಭೂಮಿಯ ಮೇಲೆ ನಿಂತಂತೆ ಕಾಣುತ್ತಿದೆ. ಆದರೆ, ತಾಂತ್ರಿಕವಾಗಿ ಸಮುದ್ರದ ಮೇಲಿನ ಹಡಗಿನಂತೆ ತೇಲುತ್ತಿದೆ. ಆ ಹಡಗಿನ ಮೇಲೆ ಮಳೆಯ ರುದ್ರನರ್ತನ ಆಗುತ್ತಿದೆ ಎಂದು ವಿಶ್ಲೇಷಿಸುತ್ತಾರೆ ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಉಸ್ತುವಾರಿ ಕೇಂದ್ರದ ನಿರ್ದೇಶಕ ಹಾಗೂ ಭೂವಿಜ್ಞಾನಿ ಡಾ.ಶ್ರೀನಿವಾಸ ರೆಡ್ಡಿ.

ಭೂಮಿಯ ಒಳಭಾಗ ಕೂಡ ಒಂದು ಜಲಾಶಯ ಇದ್ದಂತೆ. ಅದರಲ್ಲೂ ನೀರು ಶೇಖರಣೆ ಆಗುತ್ತದೆ. ಆದರೆ, ಆ ಸಂಗ್ರಹ ಸಾಮರ್ಥ್ಯ ಅಂತಿಮ ಹಂತ ತಲುಪಿದಾಗ, ಓವರ್‌ಫ್ಲೋ ಆಗುತ್ತದೆ. ಹೀಗೆ ತೇವದಿಂದ ನೆನೆದ ಗುಡ್ಡದ ತಳಭಾಗದ ಮಣ್ಣು ಸಡಿಲಗೊಳ್ಳುತ್ತದೆ. ಅಂತಿಮವಾಗಿ ಕುಸಿತದಲ್ಲಿ ಪರಿಣಮಿಸುತ್ತದೆ. ಕೊಡಗಿನಲ್ಲೂ ಇದೇ ಆಗುತ್ತಿದೆ. ಅಲ್ಲಿ ಬಿದ್ದ ಪ್ರತಿಯೊಂದು ಹನಿಯೂ ಇಂಗಲು ಜಾಗವಿಲ್ಲದೆ ಹರಿದುಹೋಗುತ್ತಿದೆ ಎಂದು ಅವರು ಹೇಳುತ್ತಾರೆ.

ಫ‌Åಯಾಟಿಕ್‌ ಝೋನ್‌ನಲ್ಲಿ ನೀರು
ಅಂತರ್ಜಲದಲ್ಲಿ “ಫ‌Åಯಾಟಿಕ್‌ ಝೋನ್‌’ (ಮಣ್ಣಿನ ಪದರದಲ್ಲಿರುವ ನೀರು) ಇರುತ್ತದೆ. ಅದರಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು ಸಂಗ್ರಹಣೆಯಾಗಿ, ಮಣ್ಣು ಸಡಿಲಗೊಂಡು ಜಾರುತ್ತದೆ. ಆಗ, ಇಳಿಜಾರು ಯಾವ ಕಡೆ ಇರುತ್ತದೆಯೋ ಅತ್ತ ಗುಡ್ಡ ವಾಲುತ್ತದೆ. ಇನ್ನು ಗುಡ್ಡಗಳು ಸಂಪೂರ್ಣ ಶಿಲೆಗಳಿಂದ ಕೂಡಿರುವುದಿಲ್ಲ. ಮಣ್ಣಿನಿಂದಲೂ ಆವೃತವಾಗಿರುತ್ತದೆ ಎಂದು ಕೊಡಗು ಜಿಲ್ಲೆಯ ಅಂತರ್ಜಲ ಕಚೇರಿ ಹಿರಿಯ ಭೂವಿಜ್ಞಾನಿ ಕೆ.ಜಿ. ಸೌಮ್ಯ ಅಭಿಪ್ರಾಯಪಡುತ್ತಾರೆ.

ಜಿಲ್ಲೆಯಲ್ಲಿ ನಿರಂತರವಾಗಿ ಮಳೆಯೊಂದಿಗೆ ಹಸಿರಿನ ಪದರು ಕೂಡ ಕಿತ್ತುಹೋಗಿದೆ. ಕೊನೆಪಕ್ಷ ಮರಗಳು ಇದ್ದರೆ, ನೀರನ್ನು ಸಾಧ್ಯವಾದಷ್ಟು ಹಿಡಿದಿಡುತ್ತಿದ್ದವು. ಈಗ ಒಂದು ಮರ ಧರೆಗುರುಳುತ್ತಿದ್ದಂತೆ, ಆ ಜಾಗದಲ್ಲಿ ನೀರು ತುಂಬಿಕೊಳ್ಳುತ್ತಿದೆ. ಇದು ಅನಾಹುತದ ಪ್ರಮಾಣ ಹೆಚ್ಚಳಕ್ಕೆ ಕಾರಣವಾಗುತ್ತಿದೆ. ಸಾಮಾನ್ಯವಾಗಿ ಮಳೆ ಬಿದ್ದಾಗ, ಶೇ. 5ರಷ್ಟು ಭೂಮಿಗಿಳಿದರೆ, ಉಳಿದದ್ದು ಹರಿದುಹೋಗುತ್ತದೆ. ಆದರೆ, ಕೊಡಗು ಸಂಪೂರ್ಣ ನೀರಿನಿಂದ ಆವೃತವಾಗಿರುವುದರಿಂದ ನೀರಿನ ಹರಿವು ಅಧಕ್ಕರ್ಧ ಕುಸಿದಿದೆ ಎಂದೂ ಸೌಮ್ಯ ಹೇಳಿದ್ದಾರೆ.

ಹಲವು ಕಾರಣ ಇರಬಹುದು; ಜಿಎಸ್‌ಐ ಗುಡ್ಡಗಳ ಕುಸಿತಕ್ಕೆ ಹಲವು ಕಾರಣಗಳಿರುತ್ತವೆ. ಅದರಲ್ಲಿ ಮುಖ್ಯವಾಗಿ ನೀರು ಒಳಗೆ ನುಸುಳುವುದು, ಆ ಭಾಗದ ಭೂಮಿಯಲ್ಲಿನ ಶಿಲೆಗಳ ಗುಣಲಕ್ಷಣಗಳು, ಪ್ರಕೃತಿಯಲ್ಲಿ ಮನುಷ್ಯನ ಹಸ್ತಕ್ಷೇಪ ಅಂದರೆ ಇಳಿಜಾರುಗಳಲ್ಲಿ ಮನೆಗಳನ್ನು ನಿರ್ಮಿಸುವುದು, ರಸ್ತೆಗಳನ್ನು ನಿರ್ಮಿಸಿದ ಕೆಳಭಾಗದಲ್ಲಿ ನದಿ ಹರಿಯುತ್ತಿರಬಹುದು. ಹಾಗಾಗಿ, ಇಂತಹದ್ದೇ ಕಾರಣವೆಂದು ಈಗಲೇ ನಿರ್ಧಾರಕ್ಕೆ ಬರುವುದು ಕಷ್ಟ ಎಂದು ಭಾರತೀಯ ಭೂಸರ್ವೇಕ್ಷಣೆ (ಜಿಎಸ್‌ಐ) ನಿರ್ದೇಶಕ ಕೆ.ವಿ. ಮಾರುತಿ ಸ್ಪಷ್ಟಪಡಿಸುತ್ತಾರೆ.

– ವಿಜಯಕುಮಾರ್‌ ಚಂದರಗಿ

ಟಾಪ್ ನ್ಯೂಸ್

1-assam

UNESCO ವಿಶ್ವ ಪಾರಂಪರಿಕ ತಾಣ ಪಟ್ಟಿಗೆ ‘ದಿಬ್ಬ ಸಮಾಧಿಗಳು’: ಏನಿದು ಮೊಯಿಡಮ್ಸ್‌?

New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್‌ ಗ್ಯಾಂಗ್‌’

New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್‌ ಗ್ಯಾಂಗ್‌’

1-kanwar-msid

Uttara Khand; ಕನ್ವರ್‌ ಯಾತ್ರೆ: ಮಸೀದಿಗೇ ಪರದೆ ಹಾಕಿದ ಹರಿದ್ವಾರ ಆಡಳಿತ!

court

Court; ದೇಶಾದ್ಯಂತ 5 ಕೋಟಿ ಕೇಸು ಇತ್ಯರ್ಥಕ್ಕೆ ಬಾಕಿ: ಉ.ಪ್ರ.ದಲ್ಲೇ ಹೆಚ್ಚು!

robbers

Note!;ಕಳ್ಳತನಕ್ಕೆಂದು ಬಂದವ ತಾನೇ 20 ರೂಪಾಯಿ ನೋಟು ಇಟ್ಟು ಹೋದ!

1-tatoo

Mumbai: 22 ಶತ್ರುಗಳ ಹೆಸರು ಟ್ಯಾಟೂ ಹಾಕಿಸಿಕೊಂಡಾತನ ಕೊಲೆ!

1-wewqewq

Mumbai; 2005ರ ಭೀಕರ ಪ್ರವಾಹ ನೆನಪಿಸಿದ ಮಳೆ!:19 ವರ್ಷ ಹಿಂದಿನ ಸ್ಥಿತಿ ಮರುಕಳಿಸಲಿದೆಯೇ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Heavy Rain 10 ಜಿಲ್ಲೆಗಳ 11 ನದಿಗಳಲ್ಲಿ  ಪ್ರವಾಹ ಭೀತಿ

Heavy Rain 10 ಜಿಲ್ಲೆಗಳ 11 ನದಿಗಳಲ್ಲಿ  ಪ್ರವಾಹ ಭೀತಿ

Shalini Rajneesh ನೂತನ ಸಿಎಸ್‌; ಪತಿ ರಜನೀಶ್‌ ಗೋಯಲ್‌ ನಿವೃತ್ತಿಯಿಂದ ತೆರವಾಗಲಿರುವ ಸ್ಥಾನ

Shalini Rajneesh ನೂತನ ಸಿಎಸ್‌; ಪತಿ ರಜನೀಶ್‌ ಗೋಯಲ್‌ ನಿವೃತ್ತಿಯಿಂದ ತೆರವಾಗಲಿರುವ ಸ್ಥಾನ

Eshwara Khandre ಏಕಬಳಕೆ ಪ್ಲಾಸ್ಟಿಕ್‌ ವಿರುದ್ಧ ಕಾರ್ಯಪಡೆ ರಚನೆ

Eshwara Khandre ಏಕಬಳಕೆ ಪ್ಲಾಸ್ಟಿಕ್‌ ವಿರುದ್ಧ ಕಾರ್ಯಪಡೆ ರಚನೆ

train-track

Landslides; ಮಂಗಳೂರು – ಬೆಂಗಳೂರು ರೈಲುಗಳ ಸಂಚಾರ ರದ್ದು

ಸದನದಲ್ಲಿ ಬಿಜೆಪಿ ನಡೆಗೆ ಲಿಂಬಾವಳಿ ಅಸಮಾಧಾನ

Karnataka ಸದನದಲ್ಲಿ ಬಿಜೆಪಿ ನಡೆಗೆ ಲಿಂಬಾವಳಿ ಅಸಮಾಧಾನ

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

1-assam

UNESCO ವಿಶ್ವ ಪಾರಂಪರಿಕ ತಾಣ ಪಟ್ಟಿಗೆ ‘ದಿಬ್ಬ ಸಮಾಧಿಗಳು’: ಏನಿದು ಮೊಯಿಡಮ್ಸ್‌?

New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್‌ ಗ್ಯಾಂಗ್‌’

New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್‌ ಗ್ಯಾಂಗ್‌’

1-kanwar-msid

Uttara Khand; ಕನ್ವರ್‌ ಯಾತ್ರೆ: ಮಸೀದಿಗೇ ಪರದೆ ಹಾಕಿದ ಹರಿದ್ವಾರ ಆಡಳಿತ!

court

Court; ದೇಶಾದ್ಯಂತ 5 ಕೋಟಿ ಕೇಸು ಇತ್ಯರ್ಥಕ್ಕೆ ಬಾಕಿ: ಉ.ಪ್ರ.ದಲ್ಲೇ ಹೆಚ್ಚು!

robbers

Note!;ಕಳ್ಳತನಕ್ಕೆಂದು ಬಂದವ ತಾನೇ 20 ರೂಪಾಯಿ ನೋಟು ಇಟ್ಟು ಹೋದ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.