ಪ್ರಧಾನಿಯವರ ಭವ್ಯ ಭಾರತದ ಕನಸನ್ನು ನನಸು ಮಾಡೋಣ
Team Udayavani, Apr 29, 2018, 11:49 AM IST
ಕೆಂಗೇರಿ: ಯಶವಂತಪುರ ವಿಧಾನ ಸಭಾ ಕ್ಷೇತ್ರ ಬಿ.ಜೆ.ಪಿ. ಅಭ್ಯರ್ಥಿ ಜಗ್ಗೇಶ್ ರವರು ಕ್ಷೇತ್ರ ವ್ಯಾಪ್ತಿಯ ಅಗರ, ತಾತಗುಣಿ, ಲಕ್ಷ್ಮೀಪುರ, ಕಗ್ಗಲಿಪುರ, ಉತ್ತಿರಿ, ಸೋಮನಹಳ್ಳಿ ಹಾಗೂ ಮುಂತಾದ ಕಡೆಗಳಲ್ಲಿ ಬಿ.ಜೆ.ಪಿ. ನಾಯಕರುಗಳ ಮನೆಗಳಿಗೆ ತೆರಳಿ ಶಕ್ತಿ ಕೇಂದ್ರಗಳ ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸಿ ಮಾತನಾಡುತ್ತಾ ಪ್ರಧಾನಿ ಮೋದಿಯವರ ಭವ್ಯ ಭಾರತದ ಕನಸನ್ನು ನನಸು ಮಾಡುವ ಅವಕಾಶ ಇದೀಗ ಕರ್ನಾಟಕಕ್ಕೆ ಸಿಕ್ಕಿದೆ.
ಬೂತ್ ಮಟ್ಟಗಳಲ್ಲಿ ಹೆಚ್ಚಿನ ಮತದಾರರನ್ನು ಸೆಳೆದು, ಮತದಾನ ಮಾಡಿಸಿದಲ್ಲಿ ಕರ್ನಾಟಕ ರಾಜ್ಯದ ಅಧಿಕಾರದ ಚುಕ್ಕಾಣಿಯನ್ನು ಬಿ.ಜೆ.ಪಿ. ಹಿಡಿಯುವುದರಲ್ಲಿ ಯಾವುದೇ ಸಂಶಯವಿಲ್ಲ ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರು ಬಲಿಷ್ಠವಾಗಿದ್ದರೆ ಪಕ್ಷದ ಅಭ್ಯರ್ಥಿ ಭಯಪಡಬೇಕಾಗಿಲ್ಲ ಈ ಕ್ಷೇತ್ರದಲ್ಲಿ ನಾನು ನಿಮ್ಮ ಸಹಕಾರದಿಂದ ಜಯಗಳಿಸುತ್ತೇನೆ ಎಂಬ ಸಂಪೂರ್ಣ ನಂಬಿಕೆ ಇದೆ.
ಆಧುನಿಕ ಅವಿಷ್ಕಾರವನ್ನು ಉಪಯೋಗಿಸಿಕೊಂಡು ಕ್ಷಣಾರ್ಧದಲ್ಲಿ ಕಾರ್ಯಕರ್ತರೊಂದಿಗೆ ಸಮನ್ವಯ ಸಾಧಿಸಬೇಕು. ಆಗ ಕಾರ್ಯಕರ್ತರು ಹಾಗೂ ಮುಖಂಡರ ನಡುವೆ ಆತ್ಮವಿಶ್ವಾಸ ಹೆಚ್ಚುತ್ತದೆ ಇದನ್ನೆ ಉಪಯೋಗಿಸಿಕೊಂಡು ತ್ರಿಪುರ ರಾಜ್ಯದಲ್ಲಿ ಬಿ.ಜೆ.ಪಿ ಅಧಿಕಾರಕ್ಕೆ ಬಂದಿದೆ ಎಂದು ಹೇಳಿದರು.
ಈ ಸಂಧರ್ಭದಲ್ಲಿ ಬಿ.ಬಿ.ಎಂ.ಪಿ. ಸದಸ್ಯ ವಿ.ವಿ. ಸತ್ಯನಾರಾಯಣ್, ಕ್ಷೇತ್ರದ ಅಧ್ಯಕ್ಷ ಮಾರೇಗೌಡ, ಬಿ.ಜೆ.ಪಿ. ಮುಖಂಡರಾದ ರ.ಆಂಜಿನಪ್ಪ, ವೆಂಕಟಪ್ಪ, ಕಗ್ಗಲಿಪುರ ಶಿವಕುಮಾರ್, ಜೆ. ರಮೇಶ್, ಗಿರಿಯಪ್ಪ, ಪಿ. ನಾಗರಾಜು, ನಝೀರ್, ರಾಮಕೃಷ್ಣಪ್ಪ ಹಾಗೂ ನೂರಾರು ಬಿ,ಜೆ.ಪಿ. ಕಾರ್ಯಕರ್ತರು ಉಪಸ್ಥಿತರಿದ್ದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್
Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್ ಕೋಡ್ ಅಂಟಿಸಿದ್ದ ಉದ್ಯಮಿ ಸೆರೆ
Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್ ನೀಚ ಕೃತ್ಯ
ಚಾಕೋಲೆಟ್ ಕೊಡ್ತೇನೆಂದು ಮನೆಗೆ ಕರೆದು ಬಾಲಕಿಗೆ ಲೈಂಗಿಕ ದೌರ್ಜನ್ಯ: ಇಬ್ಬರು ಬಂಧನ
Bengaluru: ಚೆಕ್ ದುರ್ಬಳಕೆ; ಕ್ಯಾಷಿಯರ್, ಎಲ್ಐಸಿ ಏಜೆಂಟ್ಗೆ ಜೈಲು