Namma Metro: ಮೆಟ್ರೋದಲ್ಲಿ ಉಸಿರುಗಟ್ಟಿಸುವ ರೀತಿ ಜನ!


Team Udayavani, Jul 5, 2023, 2:09 PM IST

ಮೆಟ್ರೋದಲ್ಲಿ ಉಸಿರುಗಟ್ಟಿಸುವ ರೀತಿ ಜನ!

ಬೆಂಗಳೂರು: ಸಿಗ್ನಲಿಂಗ್‌ ಅಳವಡಿಕೆ ಮತ್ತಿತರ ತಾಂತ್ರಿಕ ಕಾರಣಗಳಿಂದ “ನಮ್ಮ ಮೆಟ್ರೋ’ ಸಕಾಲದಲ್ಲಿ ಬಾರದೆ ಕೈಕೊಟ್ಟಿದ್ದರಿಂದ ಮಂಗಳವಾರ ಸಾವಿರಾರು ಪ್ರಯಾಣಿಕರು ಪರದಾಡುವಂ ತಾಯಿತು. ಕೆಲಸಕ್ಕೆ ತೆರಳುವ ಧಾವಂತದೊಂದಿಗೆ ಆಗಮಿಸುವ ಜನರನ್ನು ತಡವಾಗಿ ಬಂದ ರೈಲಿನಲ್ಲಿ ತುಂಬುತ್ತಿದ್ದರಿಂದ ಬೋಗಿಗಳು ಅಕ್ಷರಶಃ ಕುರಿದೊಡ್ಡಿಗಳಾಗಿದ್ದವು. ಬಿಎಂಆರ್‌ಸಿಎಲ್‌ಗೆ ಹಿಡಿಶಾಪ ಹಾಕುತ್ತಿರುವುದು ಕಂಡುಬಂತು.

ನೇರಳೆ ಮಾರ್ಗವಾದ ಬೈಯಪ್ಪನಹಳ್ಳಿ- ಕೆಂಗೇರಿ ನಡುವೆ ಸಂಚರಿಸುವ ಪ್ರಯಾಣಿಕರಿಗೆ ಈ ತಾಂತ್ರಿಕ ಸಮಸ್ಯೆಯ ಬಿಸಿ ತುಸು ಜೋರಾಗಿ ತಟ್ಟಿತು. “ಪೀಕ್‌ ಅವರ್‌’ (ದಟ್ಟಣೆ ಅವಧಿ)ನಲ್ಲಿ 5 ನಿಮಿಷಕ್ಕೊಂದು ಮೆಟ್ರೋ ರೈಲು ಸೇವೆ ಇರುತ್ತದೆ. ಆದರೆ, ಉದ್ದೇಶಿತ ಮಾರ್ಗದಲ್ಲಿನ ಬಹುತೇಕ ಎಲ್ಲ ನಿಲ್ದಾಣಗಳಲ್ಲಿ 10-15 ನಿಮಿಷಗಳಾದರೂ ರೈಲುಗಳು ಬರಲಿಲ್ಲ. ಹಾಗಾಗಿ, ಕಾಯುವ ಪ್ರಯಾಣಿಕರ ಸಂಖ್ಯೆ ಎರಡು-ಮೂರುಪಟ್ಟು ಆಗಿತ್ತು. ಇದು ದಟ್ಟಣೆಗೆ ಎಡೆಮಾಡಿಕೊಟ್ಟಿತು.

ಸಾಮಾನ್ಯವಾಗಿ ಬೆಳಗಿನ ಜಾವ 5 ಗಂಟೆಗೆ ಆರಂಭವಾಗಬೇಕಾದ ರೈಲು ಸೇವೆಯು ಸುಮಾರು 45 ನಿಮಿಷ ತಡವಾಗಿ ಕಾರ್ಯಾಚರಣೆ ಆರಂಭಿಸಿತು. ಅಷ್ಟೇ ಅಲ್ಲ, ಅಲ್ಲಲ್ಲಿ ತುಸು ನಿಧಾನಗತಿಯಲ್ಲಿ ಸಾಗಿತು. ಇದರಿಂದ ಎರಡು ರೈಲುಗಳ ನಡುವಿನ ಸಂಚಾರ ಅವಧಿ ಕೂಡ ಹೆಚ್ಚಿತು. ಪರಿಣಾಮ ಪ್ಲಾಟ್‌ ಫಾರಂಗಳಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚುತ್ತಲೇ ಇತ್ತು. ತಡವಾಗಿ ಬರುವ ರೈಲುಗಳೂ ಭರ್ತಿಯಾಗಿರುತ್ತಿದ್ದವು. ಅದರ ಮಧ್ಯೆಯೇ ಮತ್ತಷ್ಟು ಜನ ರೈಲಿಗೆ ಮುಗಿಬೀಳುತ್ತಿದ್ದರು.

ಸರದಿಯಲ್ಲಿ ನಿಂತು ಕಸರತ್ತು ಮಾಡಿ ರೈಲುಗಳಲ್ಲಿ ನುಗ್ಗಿದರೂ ಒಳಗಡೆ ಉಸಿರುಗಟ್ಟುವ ವಾತಾವರಣ ಇತ್ತು. ತಳ್ಳಾಟದಲ್ಲೇ ಪ್ರಯಾಣ ಬೆಳೆಸುತ್ತಿದ್ದರು. ಆದರೆ, ಇಳಿಯುವಾಗ ಮತ್ತೂಂದು ಸುತ್ತಿನ ಸರ್ಕಸ್‌ ಮಾಡಬೇಕಾಗಿತ್ತು. ನಡುವೆ ಸಿಲುಕಿದ ಜನ, ನಿರ್ಗಮನ ದ್ವಾರದ ಕಡೆ ಬರುವಷ್ಟರಲ್ಲಿ ಹೈರಾಣಾಗುತ್ತಿದ್ದರು. ಕೆಲವರು ಇಳಿಯಲಾಗದೆ ಮುಂದಿನ ನಿಲ್ದಾಣಕ್ಕೆ ಇಳಿದು ಹಿಂತಿರುಗಿದ ಪ್ರಸಂಗವೂ ನಡೆಯಿತು. ಈ ವೇಳೆ ಪ್ರಯಾಣಿಕರು, ಬಿಎಂಆರ್‌ಸಿಎಲ್‌ಗೆ ಹಿಡಿಶಾಪ ಹಾಕಿದರು. “ವ್ಯತ್ಯಯದ ಬಗ್ಗೆ ಮುಂಚಿತವಾಗಿಯೇ ತಿಳಿಸಬಹು ದಿತ್ತು. ಆಗ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುತ್ತಿ ದ್ದರು. ಹೀಗೆ ಏಕಾಏಕಿ ಅವ್ಯವಸ್ಥೆ ಮಾಡಿದರೆ ಹೇಗೆ?’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇನ್ನು ನೂಕುನುಗ್ಗಲಿನಲ್ಲಿ ತೂರಿಕೊಳ್ಳಲಾಗದ ಕೆಲವರು ಮುಂದಿನ ರೈಲಿಗಾಗಿ ಕಾಯಬೇಕಾಯಿತು. ಕೆಲವರು ಅನಿವಾರ್ಯವಾಗಿ ರ್ಯಾಪಿಡೊ, ಆಟೋ, ಆ್ಯಪ್‌ ಆಧಾರಿತ ಕ್ಯಾಬ್‌ ಸೇವೆಗಳ ಮೊರೆ ಹೋದರು. ಈ ನಡುವೆ ರೈಲಿನ ಒಳಗೆ ತಡವಾಗಿಯಾದರೂ ಮೆಟ್ರೋ ರೈಲುಗಳಲ್ಲೇ ಪ್ರಯಾಣ ಬೆಳೆಸಿದವರು, ಕಚೇರಿಗಳಿಗೆ ಸಕಾಲದಲ್ಲಿ ತಲುಪಲು ಸಾಧ್ಯವಾಗಲಿಲ್ಲ. ವ್ಯತ್ಯಯದ ಪರಿಣಾಮವನ್ನು ಕಡಿಮೆಗೊಳಿಸಲು ಬಿಎಂಆರ್‌ಸಿಎಲ್‌ ಅಧಿಕಾರಿಗಳು ಇನ್ನಿಲ್ಲದ ಕಸರತ್ತು ನಡೆಸಿದರು. ಇಂದಿರಾನಗರ, ಮೆಜೆಸ್ಟಿಕ್‌ ಸೇರಿದಂತೆ ಕೆಲವು ನಿಲ್ದಾಣಗಳಿಂದಲೇ ರೈಲುಗಳ ವ್ಯವಸ್ಥೆ ಮಾಡಿದ್ದರು. ಇದರಿಂದ ತುಸು ಅನುಕೂಲವೂ ಆಯಿತು.

12ರವರೆಗೆ ಮುಂದುವರಿದ ಸಮಸ್ಯೆ: ಬೆಳಗಿನಜಾವದಿಂದ ಮಧ್ಯಾಹ್ನ 12ರವರೆಗೂ ಈ ವ್ಯತ್ಯಯದ ಬಿಸಿ ಪ್ರಯಾಣಿಕರಿಗೆ ತಟ್ಟಿತು. 12.08ಕ್ಕೆ ಸಮಸ್ಯೆಯನ್ನು ಸರಿಪಡಿಸಲಾಯಿತು. ಇದರಿಂದ ಎಂದಿನಂತೆ ಸೇವೆ ಪುನಾರಂಭ ವಾಯಿತು ಎಂದು ನಿಗಮದ ಸಾರ್ವಜನಿಕ ಸಂಪರ್ಕಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

19 ರೈಲುಗಳಲ್ಲಿ ಸಂಚರಿಸುವ ಜನ 15 ರೈಲುಗಳಲ್ಲಿ! : ನಿತ್ಯ ಬೆಳಗ್ಗೆ 5ರಿಂದ ಮಧ್ಯಾಹ್ನ 12ರವರೆಗೆ ಅಂದಾಜು 15 ಮೆಟ್ರೋ ರೈಲುಗಳು ಕಾರ್ಯಾಚರಣೆ ಮಾಡಿದ್ದು, 1.30 ಲಕ್ಷ ಜನ ಪ್ರಯಾಣಿಸಿದ್ದಾರೆ. ಸಾಮಾನ್ಯವಾಗಿ ಉಳಿದ ದಿನಗಳಲ್ಲಿ ಇದೇ ಅವಧಿಯಲ್ಲಿ 19 ರೈಲುಗಳು ಸಂಚರಿಸುತ್ತವೆ. 1.35 ಲಕ್ಷ ಜನ ಪ್ರಯಾಣಿಸುತ್ತಾರೆ. ಅಂದರೆ ಪ್ರಯಾಣಿಕರ ಸಂಖ್ಯೆಯಲ್ಲಿ ಕೇವಲ 5 ಸಾವಿರ ವ್ಯತ್ಯಾಸ ಆಗಿದೆ. ಇದಕ್ಕಿಂತ ಹೆಚ್ಚಾಗಿ 19 ರೈಲುಗಳಲ್ಲಿ ಸಂಚರಿಸುವ ಜನ, 15 ರೈಲುಗಳಲ್ಲೇ ಪ್ರಯಾಣಿಸಿದ್ದಾರೆ. ಇದರಿಂದ ಪ್ರಯಾಣಿಕರು ಹೈರಾಣಾದರು ಎನ್ನಲಾಗಿದೆ.

ಸಂಪರ್ಕ ಕಲ್ಪಿಸಲು ಹೋಗಿ ಸೇವೆ ವ್ಯತ್ಯಯ!: ಬೈಯಪ್ಪನಹಳ್ಳಿ- ಕೆ.ಆರ್‌. ಪುರ ನಡುವೆ ಮೆಟ್ರೋ ಸಂಪರ್ಕ ಕಲ್ಪಿಸಲು ಸಿಗ್ನಲ್‌ಗ‌ಳ ವೈರಿಂಗ್‌, ವಿದ್ಯುದ್ದೀಕರಣ ಮತ್ತಿತರ ತಾಂತ್ರಿಕ ಕಾರ್ಯಗಳನ್ನು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ ಸಿಎಲ್‌) ಕೈಗೆತ್ತಿಕೊಂಡಿದೆ. ಈ ನಿರ್ವಹಣಾ ಕಾರ್ಯ ಸಾಮಾನ್ಯವಾಗಿ ತಡರಾತ್ರಿಯಿಂದ ಬೆಳಗಿನಜಾವ 4.30ರವರೆಗೆ ನಡೆಯುತ್ತದೆ. ಆದರೆ, ಮಂಗಳವಾರ ಈ ಕಾರ್ಯ ತುಸು ತಡವಾಗಿ ಮುಗಿಯಿತು. ಇದು ಕಾರ್ಯಾಚರಣೆ ವ್ಯತ್ಯಯದ ರೂಪದಲ್ಲಿ ಪರಿಣಮಿಸಿತು ಎಂದು ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.

ಟಾಪ್ ನ್ಯೂಸ್

priyanka gandhi (2)

Modi ಮದುವೆ ಮನೆಯಲ್ಲಿ ಕೂತ ಮಾವ ಇದ್ದಂತೆ: ಪ್ರಿಯಾಂಕಾ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಬೂತ್‌ನಲ್ಲಿ ಕುಸಿದ ಮಹಿಳೆಗೆ ಜೀವದಾನ

Bengaluru: ಬೂತ್‌ನಲ್ಲಿ ಕುಸಿದ ಮಹಿಳೆಗೆ ಜೀವದಾನ

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

4

ವಿಚ್ಛೇದನ ನೀಡದಿದ್ದರೆ ತಲೆಯನ್ನು ಕಡಿದು ಕುಕ್ಕರ್‌ನಲ್ಲಿ ಬೇಯಿಸುವೆ ಎಂದ ಪತಿ ವಿರುದ್ಧ FIR

Bangalore: ಕೇಸರಿ ಶರ್ಟ್‌ ಧರಿಸಿದ್ದಕ್ಕೆ ಯುವಕನಿಗೆ ಹಲ್ಲೆ; ಆರೋಪ

Bangalore: ಕೇಸರಿ ಶರ್ಟ್‌ ಧರಿಸಿದ್ದಕ್ಕೆ ಯುವಕನಿಗೆ ಹಲ್ಲೆ; ಆರೋಪ

Voting: ರಾಜಧಾನಿಯಲ್ಲಿ ಶಾಂತಿಯುತ ಮತದಾನ; ಬಿ.ದಯಾನಂದ್‌

Voting: ರಾಜಧಾನಿಯಲ್ಲಿ ಶಾಂತಿಯುತ ಮತದಾನ; ಬಿ.ದಯಾನಂದ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

priyanka gandhi (2)

Modi ಮದುವೆ ಮನೆಯಲ್ಲಿ ಕೂತ ಮಾವ ಇದ್ದಂತೆ: ಪ್ರಿಯಾಂಕಾ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.