ನಾರಾಯಣ ನೇತ್ರಾಲಯಕ್ಕೆ ಐಎಸ್ಒ ಮಾನ್ಯತೆ
Team Udayavani, Mar 20, 2019, 6:35 AM IST
ಬೆಂಗಳೂರು: ನಗರದ ನಾರಾಯಣ ನೇತ್ರಾಲಯ ಕ್ವಾಲಿಟಿ ಆ್ಯಂಡ್ ಅಕ್ರೆಡಿಟೇಷನ್ ಇನ್ಸ್ಟಿಟ್ಯೂಟ್ನಿಂದ ನಾರಾಯಣ ನೇತ್ರಾಲಯ ಡಯಾಗ್ನೊಸ್ಟಿಕ್ ಲ್ಯಾಬೊರೇಟರಿ ಮತ್ತು ಮಾಲಿಕ್ಯುಲರ್ ಡಯಾಗ್ನೊಸ್ಟಿಕ್ ಲ್ಯಾಬೊರೇಟರಿ (ನಾರಾಯಣ ನೇತ್ರಾಲಯ ಇನ್ಸ್ಟಿಟ್ಯೂಟ್ ಆಫ್ ಮಾಲಿಕ್ಯುಲರ್ ಡಯಾಗ್ನೊಸ್ಟಿಕ್ಸ್ ಆ್ಯಂಡ್ ಲ್ಯಾಬೊರೇಟರಿ ಸರ್ವೀಸಸ್)ಗಳಿಗೆ ಐಎಸ್ಒ 15189: 2012 ಮಾನ್ಯತೆ ದೊರೆತಿದೆ.
ಈ ಮಾನ್ಯತೆ ಕುರಿತು ಸಂತೋಷ ವ್ಯಕ್ತಪಡಿಸಿ ಮಾತನಾಡಿದ ನಾರಾಯಣ ನೇತ್ರಾಲಯದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಾ. ಕೆ. ಭುಜಂಗ ಶೆಟ್ಟಿ, ನಾರಾಯಣ ನೇತ್ರಾಲಯದ ಮಾಲಿಕ್ಯುಲರ್ ಡಯಾಗ್ನೊಸಿಸ್ ಲ್ಯಾಬ್ಸ್ನಲ್ಲಿ ಅತ್ಯಾಧುನಿಕ ಸೌಲಭ್ಯಗಳನ್ನು ಹಾಗೂ ಉನ್ನತ ತರಬೇತಿ ಪಡೆದ ತಜ್ಞರಿದ್ದಾರೆ. ಎಚ್1ಎನ್1 ಪರೀಕ್ಷೆ ಮಾಡುವ ಕೆಲವೇ ಲ್ಯಾಬ್ಗಳಲ್ಲಿ ಇದು ಒಂದಾಗಿದೆ. ಅಲ್ಲದೆ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಅನುಮೋದನೆ ಪಡೆದಿದೆ.
ಐಎಸ್ಒ ಮಾನ್ಯತೆ ಪಡೆಯುವುದು ಗುಣಮಟ್ಟದ ಆರೋಗ್ಯ ಸೇವೆಯಲ್ಲಿ ನಮ್ಮ ದೃಢೀಕೃತ ಗುಣಮಟ್ಟಕ್ಕೆ ಮಾನ್ಯತೆಯಾಗಿದೆ. ನಾವು ಗುಣಮಟ್ಟದಲ್ಲಿ ಅತ್ಯುತ್ತಮ ಮಾನದಂಡಗಳನ್ನು ಕಾಪಾಡಿಕೊಳ್ಳುವುದನ್ನು ಮತ್ತು ಪೂರೈಸುವುದನ್ನು ಮುಂದುವರೆಸುತ್ತೇವೆ. ಐಎಸ್ಒ ಮಾನ್ಯತೆ ಪಡೆದ ಬೆಂಗಳೂರಿನ ಪ್ರಥಮ ಕಣ್ಣಿನ ಆಸ್ಪತ್ರೆ ನಮ್ಮದು ಎಂದರು.
ಬೆಂಗಳೂರು ನಗರದ ವಿಶ್ರಾಂತ ಡೈರೆಕ್ಟರ್ ಜನರಲ್ ಆಫ್ ಪೊಲೀಸ್ ಕೆ.ಆರ್. ಠಾಗೂರ್, ಕ್ವಾಲಿಟಿ ಅಂಡ್ ಅಕ್ರೆಡಿಟೇಷನ್ ಇನ್ಸ್ಟಿಟ್ಯೂಟ್(ಕ್ಯೂಎಐ), ಭಾರತದ ಲೀಡ್ ಮ್ಯಾನ್ ಡಾ.ಭೂಪೇಂದ್ರ ಕುಮಾರ್ ರಾಣಾ, ಫೌಂಡೇಷನ್ ಫಾರ್ ಕ್ವಾಲಿಟಿ ಇಂಡಿಯಾ (ಎಫ್ಕ್ಯೂಐ) ಸಿಇಒ ಡಾ. ವೆಂಕಟೇಶ್ ತುಪ್ಪಿಲ್ ಅವರು ಡಾ. ಭುಜಂಗಶೆಟ್ಟಿ ಅವರಿಗೆ ಮಾನ್ಯತಾ ಪತ್ರ ಪ್ರದಾನ ಮಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ
Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!
Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ
Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ
Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !