ಬದಲಾವಣೆಗೆ ರಾಜ್ಯದ ಜನರ ಸ್ಪಂದನೆ


Team Udayavani, Jul 2, 2017, 3:45 AM IST

GST-01-20147.jpg

ಕೇಂದ್ರ ಹಾಗೂ ರಾಜ್ಯ ಸರ್ಕಾರದ ತೆರಿಗೆಗಳೆಲ್ಲಾ ಜಿಎಸ್‌ಟಿಯಲ್ಲಿ ವಿಲೀನವಾಗಿವೆ. ಈ ಕುರಿತು ಉದಯವಾಣಿ, ರಾಜ್ಯ ವಾಣಿಜ್ಯ ತೆರಿಗೆ ಇಲಾಖೆ ಜಂಟಿ ಆಯುಕ್ತರನ್ನು ಮಾತನಾಡಿಸಿದ್ದು, ಅವರ ವಿವರ ಇಲ್ಲಿದೆ.

ಜಿಎಸ್‌ಟಿ ಮೊದಲ ದಿನ ಹೇಗಿತ್ತು?
ಜಿಎಸ್‌ಟಿ ಬಗ್ಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಹರಿಯಾಣದ ಡಾಬಾದಲ್ಲಿ ಜಿಎಸ್‌ಟಿ ಅಳವಡಿಸಿಕೊಂಡಿದ್ದಾರೆ. ಪ್ರತಿಷ್ಠಿತ ಮಾಲ್‌ಗ‌ಳು, ಹೋಟೆಲ್‌ಗ‌ಳು, ಎಲೆಕ್ಟ್ರಾನಿಕ್‌ ಮಳಿಗೆಗಳು ಕೂಡ ಜಿಎಸ್‌ಟಿಗೆ ಸ್ಪಂದಿಸಿ ಅಳವಡಿಸಿಕೊಂಡಿವೆ. ಬದಲಾವಣೆಗೆ ರಾಜ್ಯದ ಜನರು ಸ್ಪಂದಿಸುತ್ತಿದ್ದಾರೆ. ಇದು ದೇಶದಲ್ಲೇ ಬಹುದೊಡ್ಡ ಮೈಲುಗಲ್ಲು.

ಎಸ್‌ಜಿಎಸ್‌ಟಿ- ಸಿಜಿಎಸ್‌ಟಿ ಬಗ್ಗೆ ಗೊಂದಲವಿದೆಯಲ್ಲ? ಬಿಲ್ಲಿಂಗ್‌ನಲ್ಲಿ ವಿಂಗಡಣೆ ಅಗತ್ಯವಾ?
ಕೇಂದ್ರ ಹಾಗೂ ರಾಜ್ಯ ಸರ್ಕಾರದ ತೆರಿಗೆಗಳೆಲ್ಲಾ ಜಿಎಸ್‌ಟಿಯಲ್ಲಿ ವಿಲೀನವಾಗಿವೆ. ಹಾಗಾಗಿ, ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುವ ತೆರಿಗೆಗಳನ್ನು ಸೆಂಟ್ರಲ್‌ ಜಿಎಸ್‌ಟಿ ಹಾಗೂ ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರುವ ತೆರಿಗೆಗಳನ್ನು ಎಸ್‌ಜಿಎಸ್‌ಟಿ ಎಂಬ ವಿಂಗಡಣೆಯಡಿ ಸಂಗ್ರಹಿಸಲಾಗುತ್ತದೆ. ಉದಾಹರಣೆಗೆ, ಮೋಟಾರ್‌ ವಾಹನಕ್ಕೆ ಶೇ.28 ತೆರಿಗೆ ಇದೆ. ಇದರಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ತಲಾ ಶೇ.14ರಷ್ಟು ತೆರಿಗೆ ಪಡೆಯಲಿವೆ. ಇಡೀ ದೇಶಾದ್ಯಂತ ಇದೇ ತೆರಿಗೆ ಇರಲಿದ್ದು, ಜನರು ವ್ಯವಹರಿಸಲು ಅನುಕೂಲವಾಗಲಿದೆ.

ಜಿಎಸ್‌ಟಿ ಅಳವಡಿಸಿ ಕೊಂಡರೂ ತೆರಿಗೆ ವಿವರ ಗಳನ್ನು ತಿರುಚಲು ಅವಕಾಶವಿರುವುದೇ?
ಒಂದು ಬಾರಿ ಜಿಎಸ್‌ ಟಿಯಡಿ ನೋಂದಣಿ ಮಾಡಿಕೊಂಡು ವ್ಯವಹಾರ ಆರಂಭಿಸಿದರೆ ನಂತರ ಯಾವ ಹಂತದಲ್ಲೂ ದಾಖಲೆಗಳನ್ನು ತಿರುಚಲು ಇಲ್ಲವೆ, ಇತರ ಅಕ್ರಮ ನಡೆಸಲು ಅವಕಾಶವಿಲ್ಲ.

ಕೆಲ ಹೋಟೆಲ್‌ಗ‌ಳು ದುಬಾರಿ ತೆರಿಗೆ ವಿಧಿಸುತ್ತಿರುವುದು ಗಮನಕ್ಕೆ ಬಂದಿದೆಯೇ?
ಈ ಹಿಂದೆ ಹೋಟೆಲ್‌ ಉದ್ಯಮಗಳಲ್ಲಿ ಒಂದು, ಎರಡು ಕೋಟಿ ರೂ.ವರೆಗೆ ವಹಿವಾಟು ನಡೆದರೂ ಕಾಂಪೋಸಿಷನ್‌ ತೆರಿಗೆಯಂತೆ ಶೇ.4ರಷ್ಟು ತೆರಿಗೆಯನ್ನಷ್ಟೇ ಪಾವತಿಸುತ್ತಿದ್ದರು. ಜಿಎಸ್‌ಟಿ ಅಡಿ ವಾರ್ಷಿಕ 75 ಲಕ್ಷ ರೂ.ವರೆಗೆ ಮಾತ್ರ ಕಾಂಪೋಸಿಷನ್‌ ತೆರಿಗೆಗೆ ಅವಕಾಶವಿದ್ದು, ಆ ಮಿತಿ ಮೀರಿದರೆ ಹವಾನಿಯಂತ್ರಣವಿಲ್ಲದ ಹೋಟೆಲ್‌ಗ‌ಳಲ್ಲಿ ಶೇ.12 ಹಾಗೂ ಹವಾನಿಯಂತ್ರಿತ ಹೋಟೆಲ್‌ಗ‌ಳಲ್ಲಿ ಶೇ.18ರಷ್ಟು ತೆರಿಗೆ ವಿಧಿಸಬೇಕಾಗುತ್ತದೆ. ಹಾಗಾಗಿ, ಬಿಲ್‌ನಲ್ಲಿ ತೆರಿಗೆ ವಿಂಗಡಣೆ ವಿವರ ನಮೂದಿಸಬೇಕಾಗುತ್ತದೆ. ಹೋಟೆಲ್‌ ಮಾಲೀಕರು ಕೆಲ ಸೇವಾ ಶುಲ್ಕ ಇಳಿಕೆ ಮಾಡಿದರೆ ದರ ಕಡಿಮೆಯಾಗಲಿದೆ.

ಕೆಲ ಜವಳಿ, ಔಷಧಾಲಯ, ಎಲೆಕ್ಟ್ರಾನಿಕ್‌ ವಸ್ತುಗಳ ಮಾರಾಟ ಮಳಿಗೆ ಬಂದ್‌ ಆಗಿರುವ ಬಗ್ಗೆ ಏನು ಹೇಳುವಿರಿ?
ಜವಳಿ ಉತ್ಪನ್ನಕ್ಕೆ ತೆರಿಗೆ ವಿಧಿಸಿರುವುದು, ಸಿದಟಛಿ ಉಡುಪುಗಳ ಮೇಲೆ ಎರಡು ಬಗೆಯ ತೆರಿಗೆ ವಿಧಿಸಿರುವುದನ್ನು ವಿರೋಧಿಸಿ ಕೆಲವರು ವಹಿವಾಟು ಬಂದ್‌ ಮಾಡಿರಬಹುದು. ಕೆಲವೆಡೆ ತಾಂತ್ರಿಕ ಅಡಚಣೆ, ನೋಂದಣಿಯಾಗದಿರುವುದು, ಜಿಎಸ್‌ಟಿಗೆ ವರ್ಗಾವಣೆ ಮಾಡಿಕೊಳ್ಳದವರ ಪ್ರಮಾಣ ಶೇ.7ರಷ್ಟಿರಬಹುದು.

ಜಿಎಸ್‌ಟಿ ಬಗ್ಗೆ ಇನ್ನಷ್ಟು ಜಾಗೃತಿ ಅಗತ್ಯವಿದೆಯೇ?
ಜಿಎಸ್‌ಟಿ ಬಗ್ಗೆ ಮಾಹಿತಿ, ಗೊಂದಲ ನಿವಾರಣೆ, ಸ್ಪಷ್ಟತೆಗಾಗಿ ಇಲಾಖೆ ವತಿಯಿಂದ ಇನ್ನಷ್ಟು ಕಾಲ ಜಾಗೃತಿ ಕಾರ್ಯಾಗಾರಗಳನ್ನು ನಡೆಸಲಾಗುವುದು. ಬೆಂಗಳೂರು ಮಾತ್ರವಲ್ಲದೆ, ರಾಜ್ಯದ ಇತರ ಭಾಗಗಳಲ್ಲೂ ಕೋರಿಕೆಯ ಮೇರೆಗೆ ಮಾಹಿತಿ ಒದಗಿಸಲಾಗುವುದು.

ಹಳೆಯ ದಾಸ್ತಾನು ಮಾರಾಟಕ್ಕೆ ಅವಕಾಶವಿದೆಯೇ?
ಹಳೆಯ ದಾಸ್ತಾನು ಮಾರಾಟಕ್ಕೆ ಅವಕಾಶವಿದ್ದರೂ, ಅದನ್ನು ಹಳೆಯ ತೆರಿಗೆಯಲ್ಲಿ ಮಾರುವಂತಿಲ್ಲ. ಹೊಸ ಜಿಎಸ್‌ಟಿ ದರದಲ್ಲಿ ತೆರಿಗೆ ವಿಧಿಸಿ ಮಾರಲು ಅವಕಾಶವಿದೆ.

– ಡಾ.ಬಿ.ವಿ.ಮುರಳಿಕೃಷ್ಣ ,
ಜಂಟಿ ಆಯುಕ್ತ , ವಾಣಿಜ್ಯ
ತೆರಿಗೆ ಇಲಾಖೆ

ಟಾಪ್ ನ್ಯೂಸ್

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

laxmi-hebbalkar

Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ‌ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

laxmi-hebbalkar

Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ‌ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್

Lok Sabha Election: ಗ್ಯಾರಂಟಿಗೆ ಮೋಸ ಹೋಗದೆ ಬಿಜೆಪಿಗೆ ಮತ ನೀಡಿ: ಬಿವೈಆರ್‌

Lok Sabha Election: ಗ್ಯಾರಂಟಿಗೆ ಮೋಸ ಹೋಗದೆ ಬಿಜೆಪಿಗೆ ಮತ ನೀಡಿ: ಬಿವೈಆರ್‌

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

ನಾರಿಶಕ್ತಿ ವಿರೋಧಿಸುವ ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ

ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ

Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ

laxmi-hebbalkar

Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ‌ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್

Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್‌

Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್‌

Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್‌ ಕೋಡ್‌ ಅಂಟಿಸಿದ್ದ ಉದ್ಯಮಿ ಸೆರೆ

Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್‌ ಕೋಡ್‌ ಅಂಟಿಸಿದ್ದ ಉದ್ಯಮಿ ಸೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.