ಕೆಸಿಸಿ ಟಿ10 ಲೀಗ್ಗೆ ಆಟಗಾರರ ಆಯ್ಕೆ
Team Udayavani, Mar 17, 2018, 11:27 AM IST
ಬೆಂಗಳೂರು: ಸುದೀಪ್ ನೇತೃತ್ವದಲ್ಲಿ ಶುರುವಾಗಿರುವ “ಕೆಸಿಸಿ ಟಿ-10′ (ಕರ್ನಾಟಕ ಚಲನಚಿತ್ರ ಕ್ರಿಕೆಟ್ ಕಪ್) ಕ್ರಿಕೆಟ್ ಲೀಗ್ಗೆ ಶುಕ್ರವಾರ ಆರು ತಂಡಗಳಿಗೆ ಆಟಗಾರರ ಆಯ್ಕೆ ಮಾಡಲಾಯಿತು. ಅರಮನೆ ಮೈದಾನದಲ್ಲಿ ಲಕ್ಕಿ ಡ್ರಾ ಮೂಲಕ ಆಟಗಾರರನ್ನು ಆಯ್ಕೆ ಮಾಡಿದ್ದು ವಿಶೇಷ.
ಆರು ತಂಡಗಳಿಗೂ ಕೆಪಿಎಲ್ ಮತ್ತು ಸಿಸಿಎಲ್ ಆಟಗಾರರನ್ನೂ ಲಕ್ಕಿ ಡ್ರಾ ಮೂಲಕ ಆಯ್ಕೆ ಮಾಡಲಾಗಿದೆ. ಗೌತಮ್, ನಿಹಾಲ್ ಉಲ್ಲಾಳ್, ರೋಹಿತ್ ಗೌಡ, ಸ್ಟಾಲಿನ್, ಶರತ್, ರಕ್ಷಿತ್, ಕೆ.ಸಿ.ಕರಿಯಪ್ಪ, ರಿತೇಶ್ ಭಟ್ಕಳ್, ಶಬನ್ ಹೆಗ್ಡೆ, ಕಿಶೋರ್ ಕಾಮತ್, ರಜತ್ ಹೆಗಡೆ ಮತ್ತು ಪ್ರಶಾಂತ್ ಇವರು “ಕೆಸಿಸಿ ಟಿ-10′ ಲೀಗ್ ಪಂದ್ಯಗಳಿಗೆ ಆಯ್ಕೆಯಾಗಿದ್ದಾರೆ.
ಇವರೊಂದಿಗೆ ಆರು ತಂಡದಲ್ಲೂ ಒಬ್ಬೊಬ್ಬ ಸ್ಟಾರ್ ನಟರು ಆಡುತ್ತಿರುವುದು ವಿಶೇಷ. ಈ ಆರು ತಂಡಗಳಲ್ಲಿ ಪುನೀತ್ರಾಜ್ಕುಮಾರ್, ಶಿವರಾಜಕುಮಾರ್, ಸುದೀಪ್, ರಕ್ಷಿತ್ಶೆಟ್ಟಿ, ಯಶ್, ದಿಗಂತ್ ಅವರುಗಳು ಆಯ್ಕೆಯಾಗಿದ್ದಾರೆ. ಈ ಸ್ಟಾರ್ ನಟರನ್ನು ಸಹ ಲಕ್ಕಿ ಡ್ರಾ ಮೂಲಕ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಅನಿಲ್ಕುಂಬ್ಳೆ ಅವರು ಆಯ್ಕೆ ಮಾಡಿ, ಶುಭಹಾರೈಸಿದರು.
ಈ ಕ್ರಿಕೆಟ್ಲೀಗ್ನ ಆರು ತಂಡಗಳಿಗೆ ಇಂದ್ರಜಿತ್ ಲಂಕೇಶ್, ಜಾಕ್ಮಂಜು, ನಂದಕಿಶೋರ್, ಸದಾಶಿವ ಶೆಣೈ, ಕೆ.ಪಿ.ಶ್ರೀಕಾಂತ್, ಕೃಷ್ಣ ನಾಯಕರಾಗಿದ್ದು, ಈ ತಂಡದಲ್ಲಿ ಚಿತ್ರರಂಗದ ಎಲ್ಲಾ ವಿಭಾಗದಲ್ಲೂ ಕೆಲಸ ಮಾಡುತ್ತಿರುವ ಅದರಲ್ಲೂ ಕ್ರಿಕೆಟ್ನಲ್ಲಿ ಆಸಕ್ತಿ ಇರುವವರು ಆಟವಾಡಲಿದ್ದಾರೆ. ಈ ಕ್ರಿಕೆಟ್ ಲೀಗ್ಗೆ ನಡೆದ ಆಯ್ಕೆ ವೇಳೆ ಕನ್ನಡ ಚಿತ್ರರಂಗದ ನಿರ್ದೇಶಕ, ನಿರ್ಮಾಪಕ ಹಾಗು ಕಲಾವಿದರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದು ವಿಶೇಷ. ಇದೇ ವೇಳೆ ತಂಡಗಳ ಜೆರ್ಸಿ ಕೂಡ ಬಿಡುಗಡೆ ಮಾಡಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!
Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ
Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ
Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !
Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು