ಪಾಲಿಕೆಗೆ 19.85 ಕೋಟಿ ರೂ. ನಷ್ಟ
Team Udayavani, Aug 19, 2018, 11:59 AM IST
ಬೆಂಗಳೂರು: ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ಧಿ ಹಾಗೂ ಹಣಕಾಸು ಸಂಸ್ಥೆಯಿಂದ (ಕೆಯುಐಡಿಎಫ್ಸಿ) ಬಿಬಿಎಂಪಿ ಪಡೆದಿದ್ದ ಸಾಲವನ್ನು ನಿಗದಿತ ಅವಧಿಯಲ್ಲಿ ಮರುಪಾವತಿಸದ ಹಿನ್ನೆಲೆಯಲ್ಲಿ ಹೆಚ್ಚುವರಿಯಾಗಿ 19.85 ಕೋಟಿ ರೂ. ಬಡ್ಡಿ ಪಾವತಿಸಿರುವುದು ಲೆಕ್ಕಪರಿಶೋಧನಾ ವರದಿಯಿಂದ ಬೆಳಕಿಗೆ ಬಂದಿದೆ.
ಕೆಯುಐಡಿಎಫ್ಸಿಯಿಂದ ಪಾಲಿಕೆಯು ರಸ್ತೆ ಹಾಗೂ ಪಾದಚಾರಿ ಮಾರ್ಗಗಳ ಅಭಿವೃದ್ಧಿಗಾಗಿ 73.40 ಕೋಟಿ ರೂ. ಸಾಲ ಪಡೆದಿತ್ತು. ಅದರಂತೆ 2005-06ರಿಂದ 2009-10ರ ಅವಧಿಯಲ್ಲಿ 19 ಕಂತುಗಳಲ್ಲಿ ಸಾಲ ಮರುಪಾವತಿಸಬೇಕಿತ್ತು. ಆದರೆ, ಪಾಲಿಕೆಯಿಂದ ನಿಗದಿತ ಅವಧಿಯಲ್ಲಿ ಸಾಲ ಮರುಪಾವತಿಸಿಲ್ಲ.
ಸಾಲ ಮರುಪಾವತಿಸುವಂತೆ ಕೆಯುಐಡಿಎಫ್ಸಿ 22 ಬಾರಿ ಪಾಲಿಕೆಗೆ ಡಿಮ್ಯಾಂಡ್ ನೋಟಿಸ್ ಜಾರಿಗೊಳಿಸಿದೆ. ಆದರೂ ಪಾಲಿಕೆ ಅಧಿಕಾರಿಗಳು ಸಾಲ ಮರುಪಾವತಿಸಿಲ್ಲ. ಇದರಿಂದಾಗಿ ಕೆಯುಐಡಿಎಫ್ಸಿಯು ಬಾಕಿ ಸಾಲಕ್ಕೆ 19.85 ಕೋಟಿ ರೂ. ಬಡ್ಡಿ ವಿಧಿಸಿದೆ. ಪಾಲಿಕೆ ಅಧಿಕಾರಿಗಳ ಹೊಣೆಗೇಡಿತನದಿಂದಾಗಿ ತೆರಿಗೆದಾರರ ಹಣ ಪೋಲಾಗಿದೆ ಎಂದು ಪ್ರತಿಪಕ್ಷ ನಾಯಕ ಪದ್ಮನಾಭ ರೆಡ್ಡಿ ಆರೋಪಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ
Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ
Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ
Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್ ಪಂತ್
Amruthapura: ಅಮೃತಪುರವೆಂಬ ಅದ್ಭುತ ತಾಣ