ಶರಾವತಿ ಹಿನ್ನೀರಿನ ಕಾಷ್ಠಶಿಲ್ಪ ಅನಾವರಣ


Team Udayavani, Apr 25, 2019, 4:03 AM IST

Udayavani Kannada Newspaper

ಬೆಂಗಳೂರು: ಶರಾವತಿ ಹಿನ್ನೀರಿನ ಕಾಷ್ಠಶಿಲ್ಪ ಕಲೆ ಉದ್ಯಾನನಗರಿಯಲ್ಲಿ ಅನಾವರಣಗೊಂಡಿದೆ. ಕರ್ನಾಟಕ ಚಿತ್ರಕಲಾ ಪರಿಷತ್‌ನಲ್ಲಿ ಬುಧವಾರ ಆರಂಭವಾದ, ಏ.30ರವರೆಗೆ ನಡೆಯುವ “ದಿ ವರ್ಲ್ಡ್ ಆ್ಯಫ್ಟರ್‌ ನ್ಯೂಕ್ಲಿಯರ್‌ ವಾರ್‌’ ಛಾಯಾಚಿತ್ರ ಪ್ರದರ್ಶನದಲ್ಲಿ ಮರದ ತುಂಡುಗಳ ರಂಗೋಲಿ ಕಣ್ಮನ ಸೆಳೆಯುತ್ತಿದೆ.

ಶ್ರೀಧರ್‌ ತುಮರಿ ಅವರ ಕ್ಯಾಮೆರಾಗಳಲ್ಲಿ ಸೆರೆಯಾದ ನೀರು, ಒಣಗಿದ ಭೂಮಿ, ಒಣಗಿದ ಮರದ ತುಂಡುಗಳು ಪಶ್ಚಿಮ ಘಟ್ಟದ ಅಳಿವಿನ ಬಗ್ಗೆ ಎಚ್ಚರಿಕೆ ನೀಡುತ್ತಿವೆ. ಸೂರ್ಯಾಸ್ತದ ಕೆಂಬಣ್ಣ ತುಂಬಿಕೊಂಡು ನಿಂತ ಮರದ ಚೆಕ್ಕೆ ಭವಿಷ್ಯದ ಅಪಾಯವನ್ನು ತೆರೆದಿಟ್ಟರೆ, ನೀರಿನೊಳಗೆ ಮತ್ತೆ ಚಿಗುರಲು ಪ್ರಯತ್ನಿಸುತ್ತಿರುವ ದಿಮ್ಮಿಯೊಳಗಿನ ಹಸಿರು, ಭವಿಷ್ಯದ ಭರವಸೆ ಮೂಡಿಸುವಂತಿದೆ.

ಹಿರೋಶಿಮಾ ನಾಗಸಾಕಿಯಲ್ಲಿ ಅಣುಬಾಂಬ್‌ ದಾಳಿಯಾದಾಗ ಮನುಷ್ಯನ ತಲೆ ಬುರುಡೆಯೊಂದೆ ಮರಳುಗಾಡಿನಲ್ಲಿ ಬಿದ್ದಂತೆ ಕಾಣುವ ಮರದ ದಿಮ್ಮಿಯ ಚಿತ್ರ, ಅಲಂಕಾರಿಕ ಸಾಮಗ್ರಿ, ನೃತ್ಯದ ಭಂಗಿಗಳಂತೆ ಕಾಣುವ ಒಣಗಿದ ಮರದ ಪೊಟರೆಗಳ ಚಿತ್ರಗಳು ಗಮನ ಸೆಳೆಯುತ್ತಿವೆ.

ಕಲಾವಿದರ ಕುಂಚದಲ್ಲಿ ಮೂಡುವಂತಹ ಅಮೂರ್ತ (ಅಬ್‌ಸ್ಟ್ರಾಕ್ಟ್) ಚಿತ್ರಗಳ ರಚನೆಯನ್ನು ಶ್ರೀಧರ್‌, ಕ್ಯಾಮೆರಾ ಕಣ್ಣಲ್ಲಿ ಮಾಡಿದ್ದಾರೆ. ಒಣಗಿ ಬಿರುಕು ಬಿಟ್ಟ ಧರೆ, ಒಣಗಿದ ಮರದ ಚಿತ್ರ ಜೀವ ಸಂಕುಲದ ಕೊನೇ ಹಂತ ಸೂಚಿಸಿದರೆ, ಉದಯಿಸುತ್ತಿರುವ ಸೂರ್ಯನೆದುರು ನಿಂತ ಮರದ ತುಂಡಿನ ಚಿತ್ರ ಬದುಕಿನ ಆಶಾಕಿರಣದ ಸಂಕೇತದಂತಿದೆ.

ದಿಮ್ಮಿಗಳ ಮೇಲೆ ನೆರಳು ಬೆಳಕಿನಾಟದ ಚಿತ್ರಗಳು ಬಣ್ಣ ಬಣ್ಣದ ರಂಗೋಲಿ ಬಿಟ್ಟಂತೆ ಕಾಣುತ್ತವೆ. ಅಲ್ಲಿಯೂ ಇರಲಾರೆ ಇಲ್ಲಿಗೂ ಬರಲಾರೆ ಎಂದು ಬಿಂಬಿಸುವ ನೀರು ಮತ್ತು ನೆಲದ ಮೇಲಿರುವ ಮರದ ತುಂಡುಗಳ ಚಿತ್ರಗಳು ಮನಸೆಳೆಯುತ್ತಿವೆ. ಹಿನ್ನೀರಿನ ಮರದ ತುಂಡುಗಳು ತಮ್ಮ ಮೂಲಸ್ವರೂಪವನ್ನೇ ಬದಲಿಸಿಕೊಂಡು ವಿಕಾರಗೊಂಡು ಅಮೂರ್ತ ರೂಪ ತಾಳಿರುವುದನ್ನು ಸೆರೆಹಿಡಿದಿರುವುದು ಛಾಯಾಗ್ರಾಹಕರ ಅಭಿವ್ಯಕ್ತಿಗೆಗೆ ಕನ್ನಡಿಯಾಗಿದೆ.

ಸುಂದರವಾಗಿ ಕಾಣಿಸುವ ದೃಶ್ಯಗಳಲ್ಲಿ ನಾವು ಬಾಹ್ಯ ಸೌಂದರ್ಯವನ್ನಷ್ಟೇ ಸವಿಯಲು ಸಾಧ್ಯ. ವಸ್ತುವಿನ ಒಳತಿರುಳನ್ನು ಗ್ರಹಿಸುವ ಅಮೂರ್ತಕಲ್ಪನೆಗಳಿಗೆ ರೂಪುಕೊಟ್ಟು ಕೇವಲ ಬಾಹ್ಯ ಸೌಂದರ್ಯಕ್ಕೆ ಸೀಮಿತವಾಗಿರದೆ ವೈಚಾರಿಕ ಚಿಂತನೆಗೆ ನೂಕುವ ಪರಿಣಾಕಾರಿ ದೃಶ್ಯಗಳ ಕಲಾತ್ಮಕ ಪ್ರದರ್ಶನ ಇದಾಗಿದೆ.

ಟಾಪ್ ನ್ಯೂಸ್

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್‌

Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್‌

Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್‌ ಕೋಡ್‌ ಅಂಟಿಸಿದ್ದ ಉದ್ಯಮಿ ಸೆರೆ

Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್‌ ಕೋಡ್‌ ಅಂಟಿಸಿದ್ದ ಉದ್ಯಮಿ ಸೆರೆ

Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್‌ ನೀಚ ಕೃತ್ಯ

Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್‌ ನೀಚ ಕೃತ್ಯ

ಚಾಕೋಲೆಟ್‌ ಕೊಡ್ತೇನೆಂದು ಮನೆಗೆ ಕರೆದು ಬಾಲಕಿಗೆ ಲೈಂಗಿಕ ದೌರ್ಜನ್ಯ: ಇಬ್ಬರು ಬಂಧನ

ಚಾಕೋಲೆಟ್‌ ಕೊಡ್ತೇನೆಂದು ಮನೆಗೆ ಕರೆದು ಬಾಲಕಿಗೆ ಲೈಂಗಿಕ ದೌರ್ಜನ್ಯ: ಇಬ್ಬರು ಬಂಧನ

Bengaluru: ಚೆಕ್‌ ದುರ್ಬಳಕೆ; ಕ್ಯಾಷಿಯರ್‌, ಎಲ್‌ಐಸಿ ಏಜೆಂಟ್‌ಗೆ ಜೈಲು

Bengaluru: ಚೆಕ್‌ ದುರ್ಬಳಕೆ; ಕ್ಯಾಷಿಯರ್‌, ಎಲ್‌ಐಸಿ ಏಜೆಂಟ್‌ಗೆ ಜೈಲು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.