ಆಗಸ ಆವರಿಸಿದ ಮಂಜು: ವಿಮಾನಗಳ ಹಾರಾಟ ಸ್ಥಗಿತ
Team Udayavani, Nov 29, 2017, 11:34 AM IST
ದೇವನಹಳ್ಳಿ: ದೇವನಹಳ್ಳಿ ಹಾಗೂ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸುತ್ತ ಮಂಗಳವಾರ ಬೆಳಗ್ಗೆ ದಟ್ಟ ಮಂಜು ಆವರಿಸಿದ್ದ ಹಿನ್ನೆಲೆಯಲ್ಲಿ ಕೆಲ ಕಾಲ ವಿಮಾನಗಳ ಹಾರಾಟ ಸ್ಥಗಿತಗೊಂಡಿತ್ತು.
ನಸುಕಿನಲ್ಲೇ ದಟ್ಟ ಮಂಜು ಆವರಿಸಿದ್ದರಿಂದ ಮಂಗಳವಾರ ಮುಂಜಾನೆ 4.30ರಿಂದ 8 ಗಂಟೆವರೆಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಒಂದೂ ವಿಮಾನ ಹೊರಡಲಿಲ್ಲ. ಹೀಗಾಗಿ 20ಕ್ಕೂ ಅಧಿಕ ದೇಶಿಯ ವಿಮಾನಗಳ ಹಾರಾಟದಲ್ಲಿ ವ್ಯತ್ಯಾಯವಾಯಿತು.
ಇದೇ ವೇಳೆ ವಿದೇಶದಿಂದ ಬಂದ ಕುವೈತ್ ಏರ್ಲೈನ್ಸ್ 353, ಏರ್ ಮಾಷಿಸ್ 746, ಏರ್ ಇಂಡಿಯಾ 978 ವಿಮಾನಗಳ ಮಾರ್ಗ ಬದಲಾಯಿಸಿ ಚೈನ್ನೈ ವಿಮಾನ ನಿಲ್ದಾಣಕ್ಕೆ ಕಳಿಸಲಾಯಿತು. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿದಂತೆ ದೇವನಹಳ್ಳಿ ಸುತ್ತಮುತ್ತ ತಾಪಮಾನ ಕನಿಷ್ಠ ಮಟ್ಟಕ್ಕೆ ತಲುಪಿದ್ದು,
ವಿಮಾನ ನಿಲ್ದಾಣಕ್ಕೆ ಬರುವ ವಾಹನ ಸವಾರರಿಗೆ ರಸ್ತೆ ಕಾಣದಂತೆ ಮಂಜು ಆವರಿಸಿತ್ತು. ಸಮಯಕ್ಕೆ ಸರಿಯಾಗಿ ವಿಮಾನಗಳು ಹೊರಡದ ಕಾರಣ ನೂರಾರು ಪ್ರಯಾಣಿಕರು ಸುಮಾರು ಮೂರು ಗಂಟೆ ಕಾಲ ನಿಲ್ದಾಣದಲ್ಲೇ ಉಳಿದು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಬೆಳಗ್ಗೆ 8 ಗಂಟೆ ನಂತರ ವಿಮಾನ ನಿಲ್ದಾಣ ಎಂದಿನಂತೆ ಆರಂಭವಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್
Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್ ಕೋಡ್ ಅಂಟಿಸಿದ್ದ ಉದ್ಯಮಿ ಸೆರೆ
Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್ ನೀಚ ಕೃತ್ಯ
ಚಾಕೋಲೆಟ್ ಕೊಡ್ತೇನೆಂದು ಮನೆಗೆ ಕರೆದು ಬಾಲಕಿಗೆ ಲೈಂಗಿಕ ದೌರ್ಜನ್ಯ: ಇಬ್ಬರು ಬಂಧನ
Bengaluru: ಚೆಕ್ ದುರ್ಬಳಕೆ; ಕ್ಯಾಷಿಯರ್, ಎಲ್ಐಸಿ ಏಜೆಂಟ್ಗೆ ಜೈಲು