ಕಳಸಾ ತಡೆಗೋಡೆ ಒಡೆದಿದೆ: ಪಾಲೇಕರ್
Team Udayavani, Jan 29, 2018, 6:30 AM IST
ಪಣಜಿ: ನ್ಯಾಯಾಧಿಕರಣದಲ್ಲಿ ತಮಗೆ ತೊಂದರೆಯುಂಟಾಗಲಿದೆ ಎಂದು ತಿಳಿದುಕೊಂಡು ಕರ್ನಾಟಕ ತಾನೇ ಕಳಸಾ- ಬಂಡೂರಿ ನಾಲೆಗೆ ಕಟ್ಟಿದ್ದ ತಡೆಗೋಡೆಯನ್ನು ಒಡೆದು ಹಾಕಿದೆ ಎಂದು ಗೋವಾ ಜಲಸಂಪನ್ಮೂಲ ಸಚಿವ ವಿನೋದ ಪಾಲೇಕರ್ ಆರೋಪಿಸಿದ್ದಾರೆ.
ಭಾನುವಾರ ಸುದ್ದಿಗಾರರ ಜೊತೆ ಮಾತನಾಡಿ, ಮಹದಾಯಿ ಹೋರಾಟದಲ್ಲಿ ಗೋವಾದ ಪರಿಸರ ವಾದಿ ಗಳ ಹೋರಾಟ ಯೋಗ್ಯ ರೀತಿಯಲ್ಲಿ ಸಾಗುತ್ತಿದೆ. ಸರ್ಕಾರ ನೇಮಕ ಮಾಡಿರುವ ವಿಶೇಷ ಸಮಿತಿ ಕೂಡ ಕಳಸಾ-ಬಂಡೂರಿ ನಾಲೆಯ ಪರಿಶೀಲನೆ ನಡೆಸುತ್ತಿದೆ.
ಮಹದಾಯಿ ನದಿ ನೀರನ್ನು ಉಳಿಸಿಕೊಳ್ಳಲು ಗೋವಾದಲ್ಲಿ ನಡೆದಿರುವ ಹೋರಾಟ ಕಂಡು ಕರ್ನಾಟಕವು ನ್ಯಾಯಾಧಿಕರಣದಲ್ಲಿ ತನ್ನ ಪಾಲಿಗೆ ಈ ವಿಷಯವೇ ಮುಳುವಾಗಲಿದೆ ಎಂದು ಅರಿತು ಸ್ವತಃ ಕಳಸಾ- ಬಂಡೂರಿ ನಾಲೆಗೆ ನಿರ್ಮಿಸಿದ್ದ ತಡೆಗೋಡೆಯನ್ನು ಒಡೆದು ಹಾಕಿದೆ. ಮಹದಾಯಿ ನದಿ ನೀರನ್ನು ತಡೆಹಿಡಿದು ತಿರುಗಿಸಿಕೊಳ್ಳಲು ಕರ್ನಾಟಕ ನಡೆಸಿರುವ ಪ್ರಯತ್ನ ಯಶಸ್ವಿಯಾಗುವುದಿಲ್ಲ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Belagavi; ಕುಂದಾನಗರಿಯಲ್ಲಿ ಮೋದಿ ಸಮಾವೇಶ: ಹರಿದು ಬಂದ ಜನಸಾಗರ
T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ
Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ
Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ
Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ