ಇಂದಿನಿಂದ ಜ.1ರವರೆಗೆ ಬೃಹತ್‌ ಕೇಕ್‌ ಶೋ


Team Udayavani, Dec 14, 2018, 11:24 AM IST

indininda.jpg

ಬೆಂಗಳೂರು: ಕ್ರಿಸ್‌ಮಸ್‌ ಹಾಗೂ ಹೊಸ ವರ್ಷ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ನಗರದ ಯುಬಿ ಸಿಟಿ ಮುಂಭಾಗದ ಸೇಂಟ್‌ ಜೋಸೆಫ್ ಶಾಲೆಯ ಆವರಣದಲ್ಲಿ ಡಿ.14ರಿಂದ ಬೃಹತ್‌ ಕೇಕ್‌ ಶೋ ಆರಂಭವಾಗುತ್ತಿದೆ.

ಕಳೆದ 43 ವರ್ಷಗಳಿಂದ ಇಲ್ಲಿ ಕೇಕ್‌ ಶೋ ನಡೆಯುತ್ತಿದ್ದು, ಪ್ರತಿ ವರ್ಷದಂತೆ ಈ ಬಾರಿಯೂ ಬಗೆ ಬಗೆಯ ವಿಶೇಷ ಕೇಕ್‌ಗಳು ಪ್ರದರ್ಶನದಲ್ಲಿವೆ. “ಕೆಂಪುಕೋಟೆ’ ಮಾದರಿಯಲ್ಲಿ ವಿನ್ಯಾಸ ಪಡಿಸಿರುವ 12 ಅಡಿ ಎತ್ತರ, 20 ಅಡಿ ಉದ್ದ, 8 ಅಡಿ ಅಗಲ, 1,600 ಕೆ.ಜಿ ತೂಕದ ಕೇಕ್‌, ಪ್ರದರ್ಶನದ ಆಕರ್ಷಣೆಯಾಗಿದೆ.

ಇದರ ಜತೆಗೆ 500 ಕೆ.ಜಿ ತೂಕದ ಹಿಮದ ಮೇಲಿನ ಪೆಂಗ್ವಿನ್‌ಗಳ ಕೇಕ್‌, 140 ಕೆ.ಜಿ ತೂಕದ ಕಾಲ್ಪನಿಕ ಕತೆಗಳ “ಜೀನಿ’ ಮಾದರಿ ಕೇಕ್‌, 65 ಕೆ.ಜಿ ತೂಕದ ಚೈನೀಸ್‌ ವಾಸ್ತು ಶಿಲ್ಪ ಪ್ರತಿನಿಧಿಸುವ ಪಗೋಡಾ ಮಾದರಿ ಕೇಕ್‌, 70 ಕೆ.ಜಿ ತೂಕದ ಮಕ್ಕಳ ಕತೆಯಲ್ಲಿ ಬರುವ ಯಕ್ಷಿಣಿ ಚಿಟ್ಟೆಗೊಂಬೆ ಕೇಕ್‌, ದರ್ಜಿಗಳಿಗೆ ಸಮರ್ಪಿಸಿರುವ 120 ಕೆ.ಜಿ ತೂಕದ ಹೊಲಿಗೆ ಯಂತ್ರ ಮಾದರಿ ಕೇಕ್‌ ಆಕರ್ಷಿಣೀಯವಾಗಿವೆ.

ಇನ್ನು ಕ್ರೈಸ್ತರ ಮದುವೆಯ ಪಿಯೋನಿ ಕೇಕ್‌, ಪ್ರಕೃತಿ ವಿಕೋಪದ ಬಗ್ಗೆ ಹೇಳುವ ಕೇಕ್‌, ಬಿಸ್ಕತ್‌ ಮೇಲೆ ಕುಂತಿರುವ ಚೇಳಿನ ಮಾದರಿ ಕೇಕ್‌, ಜೋಕರ್‌ ಮಾದರಿಯ ಕೇಕ್‌, ಕ್ರಿಸ್‌ಮಸ್‌ ಹಿಮದ ಮನುಷ್ಯ ಮಾದರಿ ಕೇಕ್‌, ಸಿನಿಮಾದಲ್ಲಿ ಬರುವ ಆದಿವಾಸಿ ಮಗಳಾದ ಮೋನ ಪಾತ್ರ ಮಾದರಿಯ ಕೇಕ್‌, ದೊಡ್ಡ ಚಾಕೊಲೇಟ್‌ ಮೊಟ್ಟೆ ಮಾದರಿಯ ಕೇಕ್‌,

ಯೂರೋಪಿಯನ್‌ ಜನಪದದಲ್ಲಿ ಬರುವ ಇಷ್ಟಾರ್ಥ ಸಿದ್ಧಿ ಬಾವಿ ಮಾದರಿ ಕೇಕ್‌, ಬುದ್ಧನ ಪ್ರತಿಕೃತಿ, ಬ್ರೆಜಿಲ್‌ನ ರಿಯೋ ಡಿ ಜನೇರೀಯೊದಲ್ಲಿರುವ ಕ್ರಿಸ್ತನ ಮೂರ್ತಿ ಮಾದರಿ ಕೇಕ್‌, ಕ್ರಿಸ್‌ಮಸ್‌ ಆಚರಿಸುತ್ತಿರುವ ಸಮುದಾಯ ಸೇರಿದಂತೆ ಹಲವು ಮಾದರಿ ಕೇಕ್‌ಗಳು ಶೋನಲ್ಲಿದ್ದು ಕೇಕ್‌ ಪ್ರಿಯರನ್ನು ಆಕರ್ಷಿಸಲಿವೆ.

ಕೇಕ್‌ ಪರಿಣಿತ ರಾಮಚಂದ್ರ ಅವರ ಮಾರ್ಗದರ್ಶನಲ್ಲಿ, ರಿಚ್‌ಮಂಡ್‌ ವೃತ್ತದ ಬಳಿಯ ಬೇಕಿಂಗ್‌ ಮತ್ತು ಕೇಕ್‌ ಆರ್ಟ್‌ ಸಂಸ್ಥೆಯ ಕಲಿಕಾರ್ಥಿಗಳನ್ನು ಒಳಗೊಂಡ 40 ಜನರ ತಂಡ ಈ ಎಲ್ಲಾ ಮಾದರಿಯ ಕೇಕ್‌ಗಳನ್ನು ಸಿದ್ಧಪಡಿಸಿದೆ. ಪ್ರಮುಖವಾಗಿ ಕೇಕ್‌ ವಿನ್ಯಾಸಕರಾದ ಅಮೃತಾ ಮತ್ತು ಪ್ರೀತಿ ಎಂಬುವವರು “ಪರಿಸರ ವಿಪತ್ತಿನ’ ಕುರಿತಾದ ಕೇಕ್‌ ವಿನ್ಯಾಸ ಪಡಿಸಿದ್ದಾರೆ.

ಈ ಎಲ್ಲಾ ಕೇಕ್‌ಗಳನ್ನು ಐಸಿಂಗ್‌ ಷುಗರ್‌, ಜಲಿಟಿನ್‌, ಅಕ್ಕಿ ಹಿಟ್ಟು ಹಾಗೂ ಮೊಟ್ಟೆಯ ಬಿಳಿ ಭಾಗ ಬಳಸಿ ಮಾಡಲಾಗಿದೆ. ಒಟ್ಟಾರೆ ಈ ಬಾರಿಯ ಕೇಕ್‌ ಪ್ರದರ್ಶನ “ಪ್ರಕೃತಿ, ಕ್ರಿಸ್ತ ಹಾಗೂ ಬುದ್ಧ’ನ ಕರುಣೆಯ ಕಲ್ಪನೆಯ ಸಮ್ಮಿಲನವಾಗಿದೆ ಎಂದು ಕೇಕ್‌ ಪರಿಣಿತ ಸಿ.ರಾಮಚಂದ್ರ ತಿಳಿಸಿದರು.

ಕೇಕ್‌ ಪ್ರದರ್ಶನದಲ್ಲಿ ಶಾಪಿಂಗ್‌ ಮಳಿಗೆಗಳು, ಆಹಾರ ಮೇಳ ಕೂಡ ಇರುತ್ತದೆ. ಅದಕ್ಕಾಗಿ ಫ‌ುಡ್‌ಕೋರ್ಟ್‌ ತೆರೆಯಲಾಗಿದೆ. ಕಳೆದ ಬಾರಿ ಪ್ರದರ್ಶನಕ್ಕೆ 1 ಲಕ್ಷಕ್ಕೂ ಅಧಿಕ ಮಂದಿ ಭೇಟಿ ನೀಡಿದ್ದರು. ಈ ಬಾರಿ ಒಂದು ವಾರ ಮೊದಲೇ ಆಯೋಜಿಸಿರುವುದರಿಂದ ಒಂದೂವರೆ ಲಕ್ಷ ಮಂದಿ ಭೇಟಿ ನೀಡುವ ನಿರೀಕ್ಷೆ ಇದೆ ಎಂದು ಆಯೋಜಕರು ತಿಳಿಸಿದರು.

ಈ ಬೃಹತ್‌ ಕೇಕ್‌ ಶೋ ಡಿ.14ರಿಂದ ಜ.1ರವರೆಗೆ ನಡೆಯಲಿದ್ದು, ಬೆಳಗ್ಗೆ 11ರಿಂದ ರಾತ್ರಿ 9 ಗಂಟೆವರೆಗೂ ಸಾರ್ವಜನಿಕರು ಭೇಟಿ ನೀಡಬಹುದು. ವಯಸ್ಕರರಿಗೆ 70 ರೂ. ಪ್ರವೇಶ ಶುಲ್ಕವಿದ್ದು, 10 ವರ್ಷದೊಳಗಿನ ಮಕ್ಕಳಿಗೆ ಉಚಿತ ಪ್ರವೇಶವಿದೆ.

ಟಾಪ್ ನ್ಯೂಸ್

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್‌

Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್‌

Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್‌ ಕೋಡ್‌ ಅಂಟಿಸಿದ್ದ ಉದ್ಯಮಿ ಸೆರೆ

Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್‌ ಕೋಡ್‌ ಅಂಟಿಸಿದ್ದ ಉದ್ಯಮಿ ಸೆರೆ

Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್‌ ನೀಚ ಕೃತ್ಯ

Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್‌ ನೀಚ ಕೃತ್ಯ

ಚಾಕೋಲೆಟ್‌ ಕೊಡ್ತೇನೆಂದು ಮನೆಗೆ ಕರೆದು ಬಾಲಕಿಗೆ ಲೈಂಗಿಕ ದೌರ್ಜನ್ಯ: ಇಬ್ಬರು ಬಂಧನ

ಚಾಕೋಲೆಟ್‌ ಕೊಡ್ತೇನೆಂದು ಮನೆಗೆ ಕರೆದು ಬಾಲಕಿಗೆ ಲೈಂಗಿಕ ದೌರ್ಜನ್ಯ: ಇಬ್ಬರು ಬಂಧನ

Bengaluru: ಚೆಕ್‌ ದುರ್ಬಳಕೆ; ಕ್ಯಾಷಿಯರ್‌, ಎಲ್‌ಐಸಿ ಏಜೆಂಟ್‌ಗೆ ಜೈಲು

Bengaluru: ಚೆಕ್‌ ದುರ್ಬಳಕೆ; ಕ್ಯಾಷಿಯರ್‌, ಎಲ್‌ಐಸಿ ಏಜೆಂಟ್‌ಗೆ ಜೈಲು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.