ದೇವರೊಡನೆ ಹಳ್ಳಿ ಭಾಷೆ ಮಾತು


Team Udayavani, Mar 5, 2018, 12:03 PM IST

devarodane.jpg

ಬೆಂಗಳೂರು: ಕನ್ನಡ ಕೀರ್ತನೆಗಳನ್ನು ದೇವಸ್ಥಾನಗಳಲ್ಲಿ ಹಾಡುವ ಪದ್ಧತಿ ವ್ಯಾಸರಾಯರು ತಂದರು. ಬೇಂದ್ರೆ, ಕುವೆಂಪುರಂತಹವರು ಹಳ್ಳಿಗನ್ನಡದಲ್ಲಿ ದೇವರೊಂದಿಗೆ ಮಾತನಾಡಿದರು ಎಂದು ಹಿರಿಯ ಕವಿ ಡಾ. ಎಚ್‌.ಎಸ್‌.ವೆಂಕಟೇಶಮೂರ್ತಿ ಹೇಳಿದರು.

ಇಂಡಿಯನ್‌ ಇನ್ಸ್‌ಟಿಟ್ಯೂಟ್‌ ಆಫ್‌ ವರ್ಲ್ಡ್ ಕಲ್ಚರ್‌ನ ವಾಡಿಯಾ ಸಭಾಂಗಣದಲ್ಲಿ ಭಾನುವಾರ ಅಂಕಿತ ಪುಸ್ತಕ ಆಯೋಜಿಸಿದ್ದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲಿ, ಎಲ್‌.ಎಸ್‌.ಶೇಷಗಿರಿ ರಾವ್‌ ಅವರ ಇಂಗ್ಲಿಷ್‌ ಕವನಗಳ “ಕಾವ್ಯೋದ್ಯಾನ,’  ಎಚ್‌.ಡುಂಡಿರಾಜ್‌ ಅವರ ಲಘು ಧಾಟಿಯ ಪ್ರಬಂಧ “ನೊಣಾನುಬಂಧ’, ಡಾ.ವ್ಯಾಸರಾವ್‌ ನಿಂಜೂರ್‌ ಅವರ ಕಾದಂಬರಿ “ಶ್ರೀ ಚಾಮುಂಡೇಶ್ವರಿ ಭವನ’, ಹಿರೇಮಗಳೂರು ಕಣ್ಣನ್‌ ಅವರ “ನುಡಿಪೂಜೆ’ ಬಿಡುಗಡೆಗೊಳಿಸಿ ಮಾತನಾಡಿದರು. 

ಹಿಂದೆ ದೇವರೊಂದಿಗೆ ಸಂಸ್ಕೃತದಲ್ಲಿ ಮಾತನಾಡಬೇಕಿತ್ತು.12ನೇ ಶತಮಾನದಲ್ಲಿ ವಚನಕಾರರು ಧೈರ್ಯದಲ್ಲೇ ದೇವರೊಂದಿಗೆ ಕನ್ನಡದಲ್ಲಿ ಮಾತನಾಡಿದರು.ಕನ್ನಡದಲ್ಲೇ ಹರಿಬರೆಯುವನು ಎಂಬ ಕುವೆಂಪುರವರ ಮಾತಿಗೆ ವಿಶೇಷ ಅರ್ಥವಿದೆ. ಕನ್ನಡ ಕೀರ್ತನೆಗಳನ್ನು ದೇವಸ್ಥಾನಗಳಲ್ಲಿ ಹಾಡುವುದನ್ನು ವ್ಯಾಸರಾಯರು ತಂದರು. ಬೇಂದ್ರೆ, ಕುವೆಂಪುರಂತಹವರು ಹಳ್ಳಿಗನ್ನಡದಲ್ಲಿ ದೇವರೊಂದಿಗೆ ಮಾತನಾಡಿದರು ಎಂದರು.  

ಲೇಖಕ ಎಲ್‌.ಎಸ್‌.ಶೇಷಗಿರಿ ರಾವ್‌ ಅವರ ಸಾಹಿತ್ಯದ ಗುಣಗಾನ ಮಾಡಿದ ಹೆಚ್‌.ಎಸ್‌. ವೆಂಕಟೇಶ ಮಾರ್ತಿ, ಇಂಗ್ಲಿಷ್‌ ಸಾಹಿತ್ಯದ ತಳಸ್ಪರ್ಶಿ ಅನುಭವ ಪಡೆದ ವಿದ್ವಾಂಸ ರಸಿಕರಾಗಿದ್ದಾರೆ ಎಂದು ಬಣ್ಣಸಿದರು. ಡುಂಡಿರಾಜ್‌ಗೆ ಸಮನಾಗಿ ನಿಲ್ಲುವ ಲೇಖಕರು ಇರಬಹುದು. ಆದರೆ ಡುಂಡಿರಾಜ್‌ ಮೀರಿಸುವ ಲೇಖಕರು ಬಹಳ ಕಡಿಮೆ ಎಂದು ನುಡಿದರು. ಹಾಸ್ಯ ಭಾಷಣಕಾರ ವೈ.ವಿ.ಗುಂಡೂರಾವ್‌, ಲೇಖಕ ಜೋಗಿ, ಭಾರತಿ ಶೇಷಗಿರಿ ರಾವ್‌, ಅಂಕಿತ ಪ್ರಕಾಶನದ ಪ್ರಕಾಶ್‌ ಕಂಬತ್ತಳ್ಳಿ ಸೇರಿದಂತೆ ಮತ್ತಿತರರಿದ್ದರು.
  
ಜೀವನದ ಘಟನೆಗಳ “ನೊಣಾನುಬಂಧ’: ಪ್ರಧಾನಿ ನರೇಂದ್ರ ಮೋದಿ ಅವರು ನವೆಂಬರ್‌ 8ರ ರಾತ್ರಿ 8ಕ್ಕೆ ಟೀವಿ ಮುಂದೆ “ಮೇರೆ ಪ್ಯಾರೇ ದೇಶ್‌ವಾಸಿಯೋ ಎಂದಾಗಲೇ ಗೊತ್ತಾಗಿದು, ನಾವಿಟ್ಟಿದ್ದೆಲ್ಲಾ ಹೋಯ್ತು ಎಂದು. ಸ್ವಲ್ಪವೂ ಸುಳಿವಿಲ್ಲದೆ ಸಾವಿರ ಮತ್ತು ಐನೂರರ ನೋಟುಗಳನ್ನು ರದ್ದು ಮಾಡಿದರು. ಈ ಗುಟ್ಟು ರಟ್ಟಾಗದಿರಲು ಕಾರಣ, ಅವರ ಮನೆಯಲ್ಲಿ ಇಲ್ಲ ಮಡದಿ’ ಎಂದು ಹೇಳಿ ಹನಿಗವಿ ಡುಂಡಿರಾಜ್‌ ನೆರೆದವರನ್ನು ನಗೆಗಡಲಲ್ಲಿ ತೇಲಿಸಿದರು. ಜೀವನದ ಘಟನೆಗಳನ್ನೇ ಆಧರಿಸಿ “ನೊಣಾನುಬಂಧ’ ಪುಸ್ತಕ ಹೊರಬಂದಿದೆ ಎಂದರು.

ರಾಜಕಾರಣಿಗಳ ಬಾಯಲ್ಲಿಂದು ಕನ್ನಡ ಏಕವಚನದಲ್ಲಿ ಕೆಟ್ಟುಹೋಗುತ್ತಿದೆ. ಇದರ ಬಗ್ಗೆ ಲೇಖಕರು ದನಿ ಎತ್ತಬೇಕು.
-ಹಿರೇಮಗಳೂರು ಕಣ್ಣನ್‌, ಲೇಖಕ

ಟಾಪ್ ನ್ಯೂಸ್

1-aade

Archery ವಿಶ್ವಕಪ್‌: ಜ್ಯೋತಿಗೆ ಹ್ಯಾಟ್ರಿಕ್‌ ಚಿನ್ನ

KSRTC ಬಸ್‌ -ಆಟೋರಿಕ್ಷಾ ನಡುವೆ ಅಪಘಾತ; ಚಾಲಕ ಸಾವು

KSRTC ಬಸ್‌ -ಆಟೋರಿಕ್ಷಾ ನಡುವೆ ಅಪಘಾತ; ಚಾಲಕ ಸಾವು

Kundapura ಮಿನಿ ಗೂಡ್ಸ್‌ ವಾಹನ ಢಿಕ್ಕಿ; ಪಾದಚಾರಿ ಸಾವು

Kundapura ಮಿನಿ ಗೂಡ್ಸ್‌ ವಾಹನ ಢಿಕ್ಕಿ; ಪಾದಚಾರಿ ಸಾವು

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

Kasaragod ರೈಲು ಗಾಡಿಗೆ ಕಲ್ಲೆಸೆತ: ಬಾಲಕಿಗೆ ಗಾಯ

Kasaragod ರೈಲು ಗಾಡಿಗೆ ಕಲ್ಲೆಸೆತ: ಬಾಲಕಿಗೆ ಗಾಯ

Uppinangady ಬೆಂಕಿ ಅವಘಡ: ಭಾರೀ ನಷ್ಟ

Uppinangady ಮನೆಗೆ ಆಕಸ್ಮಿಕ ಬೆಂಕಿ: ಭಾರೀ ನಷ್ಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಬೂತ್‌ನಲ್ಲಿ ಕುಸಿದ ಮಹಿಳೆಗೆ ಜೀವದಾನ

Bengaluru: ಬೂತ್‌ನಲ್ಲಿ ಕುಸಿದ ಮಹಿಳೆಗೆ ಜೀವದಾನ

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

4

ವಿಚ್ಛೇದನ ನೀಡದಿದ್ದರೆ ತಲೆಯನ್ನು ಕಡಿದು ಕುಕ್ಕರ್‌ನಲ್ಲಿ ಬೇಯಿಸುವೆ ಎಂದ ಪತಿ ವಿರುದ್ಧ FIR

Bangalore: ಕೇಸರಿ ಶರ್ಟ್‌ ಧರಿಸಿದ್ದಕ್ಕೆ ಯುವಕನಿಗೆ ಹಲ್ಲೆ; ಆರೋಪ

Bangalore: ಕೇಸರಿ ಶರ್ಟ್‌ ಧರಿಸಿದ್ದಕ್ಕೆ ಯುವಕನಿಗೆ ಹಲ್ಲೆ; ಆರೋಪ

Voting: ರಾಜಧಾನಿಯಲ್ಲಿ ಶಾಂತಿಯುತ ಮತದಾನ; ಬಿ.ದಯಾನಂದ್‌

Voting: ರಾಜಧಾನಿಯಲ್ಲಿ ಶಾಂತಿಯುತ ಮತದಾನ; ಬಿ.ದಯಾನಂದ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

badminton

Uber Cup ಬ್ಯಾಡ್ಮಿಂಟನ್‌: ಕೆನಡಾವನ್ನು ಮಣಿಸಿದ ಭಾರತ

1-aade

Archery ವಿಶ್ವಕಪ್‌: ಜ್ಯೋತಿಗೆ ಹ್ಯಾಟ್ರಿಕ್‌ ಚಿನ್ನ

KSRTC ಬಸ್‌ -ಆಟೋರಿಕ್ಷಾ ನಡುವೆ ಅಪಘಾತ; ಚಾಲಕ ಸಾವು

KSRTC ಬಸ್‌ -ಆಟೋರಿಕ್ಷಾ ನಡುವೆ ಅಪಘಾತ; ಚಾಲಕ ಸಾವು

Kundapura ಮಿನಿ ಗೂಡ್ಸ್‌ ವಾಹನ ಢಿಕ್ಕಿ; ಪಾದಚಾರಿ ಸಾವು

Kundapura ಮಿನಿ ಗೂಡ್ಸ್‌ ವಾಹನ ಢಿಕ್ಕಿ; ಪಾದಚಾರಿ ಸಾವು

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.