ವಿಧಾನಸಭೆಯಲ್ಲಿ ಸಜ್ಜನಿಕೆ ರಾಜಕಾರಣಿ ಬಣಕಾರ ಗುಣಗಾನ


Team Udayavani, Feb 9, 2018, 6:15 AM IST

180208kpn84.jpg

ಬೆಂಗಳೂರು : ಹಿರಿಯ ಮುತ್ಸದ್ದಿ ರಾಜಕಾರಣಿ, ಗಾಂಧಿವಾದಿ, ವಿಧಾನಸಭೆಯ ಮಾಜಿ ಅಧ್ಯಕ್ಷ ಬಿ.ಜಿ.ಬಣಕಾರ ಅಗಲಿಕೆಗೆ ಸಂತಾಪ ಸೂಚಕ ನಿರ್ಣಯ ಅಂಗೀಕರಿಸಿ ಸಜ್ಜನ ರಾಜಕಾರಣಿಯಾಗಿ ಅವರು ನಾಡಿಗೆ ಸಲ್ಲಿಸಿದ ಸೇವೆ ಸ್ಮರಿಸಲಾಯಿತು.

ಕಲಾಪದ ಆರಂಭದಲ್ಲಿ ಸ್ಪೀಕರ್‌ ಕೋಳಿವಾಡ ಅವರು ಸಂತಾಪ ಸೂಚಕ ನಿರ್ಣಯ ಮಂಡಿಸಿ, ಹಿರೇಕೆರೂರು ಕ್ಷೇತ್ರದ ಶಾಸಕರಾಗಿ, ಸಚಿವರಾಗಿ,ವಿಧಾನಸಭೆಯ ಅಧ್ಯಕ್ಷರಾಗಿ ಸಲ್ಲಿಸಿದ ಸೇವೆ ಬಗ್ಗೆ ಮಾಹಿತಿ ನೀಡಿದರು.

ಪ್ರತಿಪಕ್ಷ ನಾಯಕ ಜಗದೀಶ್‌ ಶೆಟ್ಟರ್‌ ಸಂತಾಪ ಸೂಚಕ ನಿರ್ಣಯ ಪರವಾಗಿ ಮಾತನಾಡಿ ಅವರೊಬ್ಬ ಆದರ್ಶ ಶಾಸಕರಾಗಿದ್ದರು.ಉತ್ತಮ ಸಭಾಧ್ಯಕ್ಷರೂ ಆಗಿದ್ದರು.ಈಗಿನ ಎಲ್ಲಾ ಶಾಸಕರಿಗೂ ಅವರು ಮಾದರಿಯಾಗಿದ್ದಾರೆ. ಶಾಸಕರಲ್ಲದ ವೇಳೆಯಲ್ಲಿಯೂ ಸದನದಲ್ಲಿನ ಪ್ರಶ್ನೋತ್ತರ ಕಲಾಪದ ಮಾಹಿತಿ,ಚುಕ್ಕೆ ಗುರುತಿನ ಪ್ರಶ್ನೆ, ಚುಕ್ಕೆ ಗುರುತಿಲ್ಲದ ಪ್ರಶ್ನೆಗಳ ಉತ್ತರ ಪ್ರತಿಗಳನ್ನು ತರಿಸಿಕೊಂಡು ಲೇಖನ ಬರೆಯುತ್ತಿದ್ದರು.ಸಾಕಷ್ಟು ಅಧ್ಯಯನಶೀಲರಾಗಿದ್ದರು ಹಿರೇಕೆರೂರಿನಲ್ಲಿ ತಮ್ಮದೇ ಆದ ವೋಟ್‌ ಬ್ಯಾಂಕನ್ನು ಹೊಂದಿದ್ದರೆಂದು ತಿಳಿಸಿದರು.

ತಾವು ಮೊದಲ ಬಾರಿಗೆ ಪ್ರತಿಪಕ್ಷದ ನಾಯಕರಾಗಿದ್ದಾಗ, ಅದು ಬಹಳ ಜವಾಬ್ದಾರಿಯುತ ಸ್ಥಾನವಾಗಿದೆ. ಆ ಹುದ್ದೆ ಶಾಡೊ ಸಿಎಂ ಇದ್ದಹಾಗೆ ಎಂದು ತಿಳಿಸಿ ಪ್ರತಿ  ಹಂತದಲ್ಲಿಯೂ ತಮಗೆ ಸಲಹೆ ನೀಡುತ್ತಿದ್ದರು ಅಧಿಕಾರಕ್ಕಾಗಿ ಎಂದೂ ಅವರು ಇಂದಿನ ರಾಜಕಾರಣಿಗಳ ತರಹ ಹಾತೊರಿಯಲಿಲ್ಲವೆಂದು ತಿಳಿಸಿದರು.ಅವರ ಅಗಲಿಕೆ ರಾಜಕಾರಣಕ್ಕೆ, ಸಮಾಜಕ್ಕೆ ನಷ್ಟವಾಗಿದೆ ಆವರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಪುತ್ರರಾದ ಶಾಸಕ ಯು.ಬಿ.ಬಣಕಾರ ಸೇರಿದಂತೆ ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ದೊರೆಯಲಿ ಎಂದು ಆಶಿಸಿದರು.

ಸಮಾಜಕಲ್ಯಾಣ ಸಚಿವ ಆಂಜನೇಯ ಅವರು ಸರ್ಕಾರದ ಪರವಾಗಿ ಮಾತನಾಡಿ ಬಣಕಾರ್‌ಅವರು ಶ್ರೇಷ್ಠ ರಾಜಕಾರಣಿಯಾಗಿದ್ದರೆಂದು ಗುಣಗಾನ ಮಾಡಿದರು. ಸರಳತೆ ಮೈಗೂಡಿಸಿಕೊಂಡ ಅಪರೂಪದ ವ್ಯಕ್ತಿ.ಗಾಂಧಿವಾದಿಯಾಗಿ ಕಾಂಗ್ರೆಸ್‌ ಪಕ್ಷದಿಂದ ಮೊದಲ ಬಾರಿ 1972 ರಲ್ಲಿ ಶಾಸಕರಾಗಿದ್ದರು.ಸಾಮಾಜಿಕ ನ್ಯಾಯದ ಪರವಾಗಿದ್ದ ಅವರು ದೇವರಾಜ್‌ ಅರಸ್‌ ಸಂಪುಟದಲ್ಲಿ ಪಶುಸಂಗೋಪನೆ ಸಚಿವರಾಗಿದ್ದರು.ನಂತರ ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿಯಾದಾಗ ಸ್ಪೀಕರ್‌ ಆಗಿದ್ದರು. ಆ ಸಂದರ್ಭದಲ್ಲಿ ನಾನು ಗ್ಯಾಲರಿಯಲ್ಲಿ ಕುಳಿತು ಸದನದ ಕಲಾಪ ವೀಕ್ಷಿಸುತ್ತಿದ್ದಾಗ ಪ್ರತಿಪಕ್ಷ ನಾಯಕರಾಗಿದ್ದ ವೀರಪ್ಪ ಮೊಯಿಲಿಯವರಿಗೆ ಬಣಕಾರ್‌ ಅವರು ಮೊಯಲಿ ವೀರಪ್ಪ , ಮೊಯಲಿ ವೀರಪ್ಪ ಎಂದು ಕರೆದ ಕ್ಷಣಕ್ಕೆ ನಾನು ಸಾಕ್ಷಿಯಾಗಿದ್ದೆ ಎಂದರು. ಶಾಸನ ಸಭೆ, ಸಹಕಾರ ಸಂಘಗಳು, ಪಂಚಾಯತ್‌ ರಾಜ್‌ ಕುರಿತು ಅವರು ಬಹಳಷ್ಟು ಲೇಖನ ಬರೆದಿದ್ದಾರೆ.ಅವರದು ಬಹಳ ವಿರಳವಾದ ವ್ಯಕ್ತಿತ್ವವಾಗಿದೆ. ನಾಡಿಗೆ ಅವರ ಕೊಡುಗೆ ಅವಿಸ್ಮರಣೀಯವೆಂದು ಬಣ್ಣಿಸಿದರು.

ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಅಪರೂಪದ ವ್ಯಕಿತ್ವ ಅವರದಾಗಿತ್ತು.ರಾಜಕೀಯದಲ್ಲಿ ಹಿರಿತನವಿತ್ತು.ಅವರನ್ನ ನಾನು ಬಹಳ ಹತ್ತಿರದಿಂದ ನೋಡಿದ್ದೇನೆ.ಮಾಜಿ ಶಾಸಕರಾಗಿದ್ದಾಗ ಬೆಂಗಳೂರಿಗೆ ಆಗಮಿಸಿದ್ದಾಗ  ಶಾಸಕ ಭವನದ ತಮ್ಮ ಕೊಠಡಿಯಲ್ಲೇ ವಾಸವಾಗಿರುತ್ತಿದ್ದರು. ಆ ಸಂದರ್ಭದಲ್ಲಿ  ಪ್ರಶ್ನೋತ್ತರ ಪ್ರತಿಗಳನ್ನು ತರಿಸಿಕೊಂಡು ಅದ್ಯಯನ ನಡೆಸಿ ಪತ್ರಿಕೆಗಳಿಗೆ ಲೇಖನ ಬರೆಯುತ್ತಿದ್ದರು.ನಮಗೆಲ್ಲಾ ಬಣಕಾರ್‌ ಅವರು ಸ್ಫೂರ್ತಿ ನೀಡುವ ವ್ಯಕ್ತಿತ್ವ ಹೊಂದಿದ್ದರೆಂದು ಹೇಳಿದರು.

ಶಾಸಕರಾದ ಸಿಟಿ ರವಿ,ಕೆಎನ್‌ ರಾಜಣ್ಣ,ವಿಯಕುಮಾರ್‌ ಸೊರಕೆ,ಜಿಟಿ ಪಾಟೀಲ್‌ ಮಾತನಾಡಿ ಬಿ.ಜಿ. ಬಣಕಾರ್‌ ಅವರ ವ್ಯಕ್ತಿತ್ವದ ಗುಣಗಾನ ಮಾಡಿದರು.

ಸ್ಪೀಕರ್‌ ಕೋಳಿವಾಡ ಅವರು ಮತನಾಡಿ ಬಣಕಾರ್‌ ಅವರು ಒಟ್ಟು 3800 ಲೇಖನ ಬರೆದಿದ್ದಾರೆ.ತುಂಗಾ ಮೇಲ್ದಂಡೆ ಯೋಜನೆ ಅನುಷ್ಟಾನದಲ್ಲಿ ಅವರ ಕೊಡುಗೆ ಮಹತ್ತರವಾಗಿದೆ. ನಾನು ಶಾಸಕನಾಗಿದ್ದಾಗ ಪಕ್ಕದ ಕ್ಷೇತ್ರದವರೇ ಆಗಿದ್ದ ಬಣಕಾರ್‌ ಅವರು ತುಂಗಾ ಮೇಲ್ದಂಡೆ ಯೋಜನೆ ಕುರಿತು ಸದನದಲ್ಲಿ ಮಾತನಾಡಲು ಪ್ರೇರೇಪಿಸುತ್ತಿದ್ದರೆಂದು ಸ್ಮರಿಸಿದರು.ಹಾವೇರಿ ಸಹಕಾರಿ ಸಕ್ಕರೆ ಕಾರ್ಖಾನೆ ಪ್ರಾರಂಭಿಸುವಲ್ಲಿಯೂ ಬಹಳಷ್ಟು ಹೋರಾಟವನ್ನ ಮಾಡಿದ್ದರೆಂದು ತಿಳಿಸಿದರು. ಬಣಕಾರ್‌ ಅವರ  ಗೌರವಾರ್ಥ ಸದನದ ಸದಸ್ಯರೆಲ್ಲಾ ಎದ್ದು ನಿಂತು ಮೌನಾಚರಣೆ ಮಾಡಿ ಆತ್ಮಕ್ಕೆ ಶಾಂತಿ ಕೋರಿದರು.

ಟಾಪ್ ನ್ಯೂಸ್

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Drought Relief: ಕಾಂಗ್ರೆಸ್‌-ಬಿಜೆಪಿ ಬರ ಪರಿಹಾರ ಜಟಾಪಟಿ

Drought Relief: ಕಾಂಗ್ರೆಸ್‌-ಬಿಜೆಪಿ ಬರ ಪರಿಹಾರ ಜಟಾಪಟಿ

Drought Relief: ಎಕ್ಸ್‌ (ಟ್ವಿಟರ್‌)ನಲ್ಲೂ ಕಾಂಗ್ರೆಸ್‌-ಬಿಜೆಪಿ ವಾಕ್ಸಮರ

Drought Relief: ಎಕ್ಸ್‌ (ಟ್ವಿಟರ್‌)ನಲ್ಲೂ ಕಾಂಗ್ರೆಸ್‌-ಬಿಜೆಪಿ ವಾಕ್ಸಮರ

Congress Govt “ಕನ್ನಡಿಗರ ತೆರಿಗೆ ಹಣದಲ್ಲಿ ಕಲೆಕ್ಷನ್‌ ಏಜೆಂಟ್‌ ಟ್ರಿಫ್’: ಬಿಜೆಪಿ ಆರೋಪ

Congress Govt “ಕನ್ನಡಿಗರ ತೆರಿಗೆ ಹಣದಲ್ಲಿ ಕಲೆಕ್ಷನ್‌ ಏಜೆಂಟ್‌ ಟ್ರಿಫ್’: ಬಿಜೆಪಿ ಆರೋಪ

HDK ಪೆನ್‌ಡ್ರೈವ್‌ನಲ್ಲಿ ಏನಿತ್ತು ಎಂಬುದು ಈಗ ಬಯಲಾಗಿದೆ: ಡಿಕೆಶಿ

HDK ಪೆನ್‌ಡ್ರೈವ್‌ನಲ್ಲಿ ಏನಿತ್ತು ಎಂಬುದು ಈಗ ಬಯಲಾಗಿದೆ: ಡಿಕೆಶಿ

Lok Sabha Election; 2ನೇ ಹಂತದಲ್ಲಿ ಸಕ್ರಿಯ: ಎಚ್‌.ಡಿ. ಕುಮಾರಸ್ವಾಮಿ

Lok Sabha Election; 2ನೇ ಹಂತದಲ್ಲಿ ಸಕ್ರಿಯ: ಎಚ್‌.ಡಿ. ಕುಮಾರಸ್ವಾಮಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.