ಗುಡಿ ಮೇಲೆ ಬಿದ್ದ ಫಲಕ
Team Udayavani, May 22, 2017, 12:42 PM IST
ಮಹದೇವಪುರ: ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಗೆ ವೈಟ್ಫೀಲ್ಡ್ ಹಾಗೂ ಬಿದರಹಳ್ಳಿ ಭಾಗ ತತ್ತರಸಿ ಹೋಗಿದೆ. ವರ್ತೂರು ಕೋಡಿ ಬಳಿ ನೊರೆ ತಡೆಯಲೆಂದು ಬಿಡಿಎ ನಿರ್ಮಿಸಿದ್ದ ಕಬ್ಬಿಣದ ಮೆಷ್ ಇತ್ತೀಚೆಗಷ್ಟೇ ಬಿರುಗಾಳಿಗೆ ಕುಸಿದು ಬಿದ್ದಿತ್ತು.
ಅದರ ಮುಂದುವರಿದ ಭಾಗವಾಗಿ ಮಳೆಗೆ ಈ ಭಾಗದಲ್ಲಿ ಸಾಕಷ್ಟು ಹಾನಿಯಾಗಿದೆ. ಶನಿವಾರ ರಾತ್ರಿ ಬಿರುಗಾಳಿ ಮಳೆಗೆ ವೈಟ್ಪೀಲ್ಡ್ ಮುಖ್ಯರಸ್ತೆ ಬದಿಯ ವಿದ್ಯುತ್ ಕಂಬದ ಮೇಲೆ ಬಾರಿ ಗಾತ್ರದ ಮರಗಳು ಉರುಳಿ ಬಿದ್ದವು. ಹೀಗಾಗಿ ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ಕಡಿತಗೊಂಡು ಕತ್ತಲಾವರಿಸಿತು.
ರಾಷ್ಟ್ರೀಯ ಹೆದ್ದಾರಿ 75 ರ ಅವಲಹಳ್ಳಿ ಸಮೀಪದ ಶನಿಮಹಾತ್ಮ ದೇವಸ್ಥಾನ ಮೇಲೆ ಬೃಹತ್ ಗಾತ್ರದ ಜಾಹಿರಾತು ಪಲಕ ಉರಳಿಬಿದ್ದು, ದೇವಸ್ಥಾನ ಸೇರಿದಂತೆ, ಪಕ್ಕದ ಮನೆಗಳ ಛಾವಣಿಗಳಿಗೆ ಹಾನಿಗೊಳಗಾದವು.
ಜಾಹಿರಾತು ಪಲಕ ತೆರವುಗೊಳಿಸಲು ಸಂಜೆವರೆಗೂ ಕ್ರೆ„ನ್ ಮೂಲಕ ಕಾರ್ಯಾಚರಣೆ ನಡೆಸಲಾಯಿತು. ಹೊಸಕೋಟೆ ಮತ್ತು ಕಾಡುಗುಡಿ ಮುಖ್ಯರಸ್ತೆಯ ಗೊರವಿಗೆರೆ ಗೇಟ್ ಸಮೀಪ ಬೃಹತ್ ಜಾಹಿರಾತು ಪಲಕ ರಸ್ತೆಗೆ ಉರಳಿಬಿತ್ತು. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ.
ರೈತರ ಮೊಗದಲ್ಲಿ ಮಂದಹಾಸ
ಈ ನಡುವೆ ಮಳೆ ಇಲ್ಲಿನ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಸತತ ಬರದಿಂದಾಗಿ ಇಲ್ಲಿನವರು ಬೆಳೆ ಬೆಳೆಯಲು ಮುಂದಾಗಿರಲಿಲ್ಲ. ಸತತ ಮೂರು ದಿನ ಉತ್ತಮವಾಗಿ ಮಳೆ ಸುರಿದಿರುವುದರಿಂದ ರೈತರು ಕೃಷಿ ಚಟುವಟಿಕೆ ಆರಂಭಿಸಿದ್ದಾರೆ. ಬತ್ತಿ ಹೋಗಿದ್ದ ಬೋರ್ವೆಲ್ಗಳಲ್ಲಿ ಅಲ್ಪಸ್ವಲ್ಪ ನೀರು ಕಾಣಿಸಿಕೊಂಡಿರುವುದು ರೈತರ ಸಂತಸವನ್ನು ಇಮ್ಮಡಿಗೊಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ
ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್
Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ
Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ
BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ