ಯಾವ ಭಯವೂ ಇಲ್ಲ: ರಾಘವೇಶ್ವರ ಶ್ರೀ
Team Udayavani, Sep 26, 2018, 12:41 PM IST
ಬೆಂಗಳೂರು: ಆತ್ಮಶುದ್ಧಿ ಇರುವುದರಿಂದ ನಮಗೆ ಯಾವುದರ ಭಯವೂ ಇಲ್ಲ, ಸಮಾಜ ಪರಿವರ್ತನೆಯಲ್ಲಿ ತೊಡಗಿಕೊಂಡವರು ವಿಷಕಂಠರಾಗಿ ಎಲ್ಲವನ್ನೂ ಎದುರಿಸಲು ಸಿದ್ಧರಾಗಿರಬೇಕಾಗುತ್ತದೆ ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ ಹೇಳಿದ್ದಾರೆ.
ಗಿರಿನಗರದ ಶಾಖಾಮಠದಲ್ಲಿ ತಮ್ಮ 25ನೇ ಚಾತುರ್ಮಾಸ್ಯ ವ್ರತ ಸಮಾಪ್ತಿಯ ಸೀಮೋಲ್ಲಂಘನದ ಧಾರ್ಮಿಕ ಸಭೆಯಲ್ಲಿ ಮಂಗಳವಾರ ಮಾತನಾಡಿದ ಅವರು, ರಾಮಚಂದ್ರಾಪುರ ಮಠವೆಂಬ ಶಂಕರಾಚಾರ್ಯ ಸ್ಥಾಪಿತ ಸಂಸ್ಥೆಯನ್ನು ಯಾರು ಏನು ಮಾಡಲು ಪ್ರಯತ್ನಪಟ್ಟರೂ ಏನೂ ಆಗದು ಎಂದು ತಿಳಿಸಿದರು.
ಚಾತುರ್ಮಾಸ್ಯ ವ್ರತಕ್ಕೆ ತೊಂದರೆ ನೀಡುವ ಪರಂಪರೆ ಆರಂಭವಾಗಿದೆ. ನಾವು ಚಾತುರ್ಮಾಸ್ಯ ಮಾಡುವಾಗ ಮಠದ ಶತ್ರುಗಳು ಚಾತುರ್ಮಾಸ್ಯ ಮಾಡುತ್ತಾರೆ. ನಾವು ರಾಮ ಸ್ಮರಣೆಯಲ್ಲಿದ್ದರೆ, ಅವರು ನಮ್ಮದೇ ಸ್ಮರಣೆಯಲ್ಲಿ ಇರುತ್ತಾರೆ. ನೈತಿಕವಾಗಿ ಹಾಗೂ ಕಾನೂನಾತ್ಮಕವಾಗಿ ಮಠದಲ್ಲಿ ಯಾವ ಲೋಪವೂ ಇಲ್ಲ.
ಮಠಮಾನ್ಯಗಳಿಗೆ ರಕ್ಷಣೆ ಕೊಡಬೇಕಾದವರೇ ಭಕ್ಷಣೆಗೆ ಮುಂದಾಗಿದ್ದಾರೆ. ಚಾತುರ್ಮಾಸ್ಯ ವ್ರತ ಭಂಗಕ್ಕೆ ವ್ಯಯಿಸಿದ ಶಕ್ತಿ, ಹಣ, ಶ್ರಮಗಳನ್ನು ಉತ್ತಮ ಕಾರ್ಯಗಳಿಗೆ ಬಳಸಿದ್ದರೆ ಜಗತ್ತಿಗೆ ಒಳಿತಾಗುತ್ತಿತ್ತು ಎಂದರು. ಶಿಕ್ಷಣ ತಜ್ಞೆ ಡಾ. ಶಾರದಾ ಜಯಗೋವಿಂದ ಅವರಿಗೆ ಚಾತುರ್ಮಾಸ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್
ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ
ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ