Traffic awareness: ಸಂಚಾರ ಜಾಗೃತಿಗೆ ನಗರದಲ್ಲಿ ರಸ್ತೆಗಿಳಿದ ಯಮ, ಚಿತ್ರಗುಪ್ತ!
Team Udayavani, Jan 15, 2024, 11:18 AM IST
ಬೆಂಗಳೂರು: ಉಪ್ಪಾರಪೇಟೆ ಸಂಚಾರ ಠಾಣೆ ಪೊಲೀಸರು ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಅಂಗವಾಗಿ ಯಮರಾಜ ಹಾಗೂ ಆತನ ಸಹಾಯಕ ಚಿತ್ರಗುಪ್ತ ವೇಷ ಧಾರಿಗಳ ಮೂಲಕ ಭಾನುವಾರ ನಗರ ದಲ್ಲಿ ಸಂಚಾರ ನಿಯಮಗಳ ಬಗ್ಗೆ ವಾಹನ ಸವಾರರಿಗೆ ಜಾಗೃತಿ ಮೂಡಿಸಿದರು.
ಮೈಸೂರು ಬ್ಯಾಂಕ್ ವೃತ್ತದಲ್ಲಿ ರಂಗಭೂಮಿ ಕಲಾವಿದರಾದ ನಾಗೇಂದ್ರ ಮತ್ತು ರಂಗನಾಥ್ ಅವರು ಯಮರಾಜ ಮತ್ತು ಚಿತ್ರಗುಪ್ತ ವೇಷ ಧರಿಸಿ ಸಂಚಾರ ನಿಯಮಗಳ ಬಗ್ಗೆ ನಾಟಕದ ಶೈಲಿಯಲ್ಲಿ ಡೈಲಾಗ್ ಹೇಳುತ್ತಾ ಅರಿವು ಮೂಡಿಸಿದರು.
“ಅತೀವೇಗ, ತಿಥಿ ಬೇಗ, ನಿಮಗಾಗಿ ಮನೆಯವರು ಕಾಯುತ್ತಿರುತ್ತಾರೆ. ಸಂಚಾರ ನಿಯಮ ಪಾಲಿಸಿದರೆ ಮನೆಗೆ ಹೋಗು ತ್ತೀರಿ. ಇಲ್ಲವಾದರೆ, ಯಮಲೋಕಕ್ಕೆ ಹೋಗುತ್ತೀರಾ’. “ವಾಹನ ಚಲಾಯಿಸುತ್ತಾ ಮೊಬೈಲ್ನಲ್ಲಿ ಕರೆ ಮಾಡಿದರೆ, ನೀವು ಯಮ ಲೋಕಕ್ಕೆ ಸಂಪರ್ಕ ಸಾಧಿಸುವಿರಿ’. ಎಂಬಿತ್ಯಾದಿ ನಾಟಕೀಯ ಶೈಲಿಯಲ್ಲಿ ಸಂಭಾಷಣೆ ಹೇಳುತ್ತಾ ವಾಹನ ಸವಾರರಿಗೆ ಸಂಚಾರ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಿದರು. ಜತೆಗೆ ಅರ್ಧ ಹೆಲ್ಮೆಟ್ ಧರಿಸಬೇಡಿ, ಐಎಸ್ಐ ಮುದ್ರೆ ಇರುವ ಹೆಲ್ಮೆಟ್ ಧರಿಸಿ ಎಂದು ಸಂಚಾರ ಪೊಲೀ ಸರು ದ್ವಿಚಕ್ರ ವಾಹನ ಸವಾರರಿಗೆ ಗುಲಾಬಿ ಹೂ ನೀಡಿ ಜಾಗೃತಿ ಮೂಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Goa: ಶ್ರೀ ಲಯಿರಾಯಿ ದೇವಿಯ ಜಾತ್ರಾ ಮಹೋತ್ಸವದಲ್ಲಿ ಗೋಬಿ ಮಂಚೂರಿ ಮಾರಾಟಕ್ಕೆ ನಿಷೇಧ
Charmady: ಕತ್ತಲಾಗ್ತಿದ್ದಂತೆ ಹೆದ್ದಾರಿಗೆ ಬಂದು ನಿಲ್ಲುವ ಕಾಡಾನೆ… ಜೀವ ಭಯದಲ್ಲಿ ಸವಾರರು
Day Care Center: ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಡೇ ಕೇರ್ ಕೇಂದ್ರ
Bengaluru: ವಿಪತ್ತು ನಿರ್ವಹಣೆಗೆ 10 ಕೋಟಿ ರೂ.: ತುಷಾರ್
Mumbai: ಸಲ್ಮಾನ್ ಖಾನ್ ಮನೆ ಮೇಲೆ ಗುಂಡಿನ ದಾಳಿ ಪ್ರಕರಣ: ಹರ್ಯಾಣದಲ್ಲಿ ಆರನೇ ಆರೋಪಿ ಬಂಧನ