ಇಷ್ಟಾರ್ಥ ನೆರವೇರಿಸುವ ಬಯಲು ಬಸವ

ಕಿವಿಯಲ್ಲಿ ಹೇಳಿದರೆ ಕೋರಿಕೆ ಈಡೇರುತ್ತೆ „ ಕಾರ್ತಿಕ ಮಾಸದ ಕಡೇ ಸೋಮವಾರ ಕಡ್ಲೆಕಾಯಿ ಪರಿಷೆ

Team Udayavani, Nov 10, 2021, 11:42 AM IST

In the ear the request is fulfilled.

ವಿಜಯಪುರ: ಪಟ್ಟಣದ ಪುರಾತನ ದೇವಾಲಯ ಶ್ರೀ ಬಯಲು ಬಸವೇಶ್ವರ ಸ್ವಾಮಿ ದೇಗುಲ. ಈ ಸ್ಥಳದಲ್ಲಿ ಜನ ವಾಸ ಮಾಡಲು ಆರಂಭಿಸಿದಾಗಿಂದ ಇಲ್ಲಿನ ಬಯಲೊಂದರಲ್ಲಿ ಕಾಣಿಸಿಕೊಂಡ ಬಸವನ ವಿಗ್ರಹವಿದು. ಜನ ಇದಕ್ಕೆ ಪೂಜಿಸುತ್ತಾ, ಕೈಮುಗಿಯುತ್ತಾ ಬಸವಣ್ಣನ ಕಿವಿಯಲ್ಲಿ ಗುಟ್ಟಾಗಿ ಕೇಳಿದ ಕೋರಿಕೆ ಸದ್ದಿಲ್ಲದೇ ಈಡೇರುತ್ತದೆ ಎಂಬ ನಂಬಿಕೆ ಇಲ್ಲಿನ ಜನರದ್ದು.

ಬಸವಣ್ಣನಿಗೆ ಆಶ್ರಯ: ಮುಂದಿನ ದಿನಗಳಲ್ಲಿ ಜನ ನಮ್ಮನ್ನು ಕಾಯುವ ದೇವರು ಬಯಲಲ್ಲಿ ಇದ್ದಾನೆ ಎಂದು ಒಂದು ಸೂರು ಕಟ್ಟಿದರು. ಅದಾದ ನಂತರ ಗುಡಿ ಭದ್ರವಾಗಿರಲೆಂದು ಬಾಗಿಲು ಇಡಲಾಯಿತು. ಆದರೆ ಮರುದಿನ ಬೆಳಗ್ಗೆ ನೋಡುವಷ್ಟರಲ್ಲಿ ಇರಿಸಿದ ಬಾಗಿಲು ಪಕ್ಕದಲ್ಲಿ ಇದ್ದ ಕಲ್ಯಾಣಿಯ ನೀರಿನಲ್ಲಿ ಬಿದ್ದಿರುತ್ತಿತ್ತು.

ಇದನ್ನೂ ಓದಿ:- ಚಲಿಸುತ್ತಿದ್ದ ರೈಲಿನಿಂದ ಆಯತಪ್ಪಿ ಬಿದ್ದ ಮಹಿಳೆ :ಪೊಲೀಸರ ಸಮಯ ಪ್ರಜ್ಞೆಯಿಂದ ತಪ್ಪಿದ ಅನಾಹುತ

ರಾತ್ರೋ ರಾತ್ರಿ ಆಗುವ ಈ ವಿಚಿತ್ರ ಭಕ್ತರಿಗೆ ಯಕ್ಷಪ್ರಶ್ನೆಯಾಯಿತು. ಮತ್ತೆ ಮತ್ತೆ ಗರ್ಭಗುಡಿಗೆ ಬಾಗಿಲಿನ ವ್ಯವಸ್ಥೆ ಮಾಡಲಾಯಿತು. ಆದರೆ, ಪ್ರತಿಸಲವೂ ಬಾಗಿಲು ಕಳಚಿ ಬೀಳುತ್ತಿತ್ತು. ಕೊನೆಗೆ ಭಕ್ತಾದಿಗಳು, ಊರಿನ ಜನರು ಬಯಲು ಬಸವೇಶ್ವರನಿಗೆ ಬಾಗಿಲು ಹಾಕಿ ಬಂಧನ ಮಾಡಬಾರದೆಂಬ ತೀರ್ಮಾನಕ್ಕೆ ಬಂದು ಗರ್ಭಗುಡಿ ಮಾತ್ರವೇ ಇರುವಂತೆ ವ್ಯವಸ್ಥೆ ಮಾಡಲಾಯಿತು.

ಬಸವಣ್ಣನಿಂದ ಸಿಗುವ ಹೂ ಪ್ರಸಾದ: ತಮ್ಮ ಕಾರ್ಯಸಿದ್ಧಿ ಆಗುವ ಬಗ್ಗೆ ದೇವರ ಬಳಿ ಹೂ ಪ್ರಸಾದ ಕೇಳಬಹುದು. ದೇವರು ಬಲದಿಂದ ಹೂ ಬೀಳಿಸಿದರೆ ಕಾರ್ಯ ಶೀಘ್ರ ಫ‌ಲ ನೀಡುತ್ತದೆ ಎಂದು ಅರ್ಥ. ಎಡ ಭಾಗದಿಂದ ಪ್ರಸಾದ ನೀಡಿದರೆ ಕಾರ್ಯ ತಡವಾಗುತ್ತದೆ ಎಂದು ಅರ್ಥ.

ಕಿವಿಯಲ್ಲಿ ಹೇಳುವ ಕೋರಿಕೆ: ಯಾವ ಜಾತಿ ಮತ ಬೇಧವೂ ಇಲ್ಲದೇ ಯಾರೂ ಬೇಕಾದರೂ ಗರ್ಭಗುಡಿಯ ಬಸವಣ್ಣನಿಗೆ ತಮ್ಮ ಕೋರಿಕೆಯನ್ನು ಕಿವಿಯಲ್ಲಿ ಹೇಳಿಕೊಳ್ಳಬಹುದು. ಕೋರಿಕೆ ಈಡೇರಿದ ಮೇಲೆ ಭಕ್ತರು ಬಂದು ಹರಕೆ ತೀರಿಸುತ್ತಾರೆ. ಬಹಳಷ್ಟು ಭಕ್ತಾದಿಗಳಿಗೆ ಈ ಅನುಭವವಾಗಿದ್ದು, ಹೆಚ್ಚು ಪ್ರಚುರತೆ ಪಡೆಯುತ್ತಿದೆ.

ಅಭಿವೃದ್ಧಿ ಸಮಿತಿ ಕಾರ್ಯಕ್ಕೆ ಶ್ಲಾಘನೆ: ದೇಗುಲದಲ್ಲಿ ಪೂಜೆ ಪುರಸ್ಕಾರಗಳು ನಿರಂತರವಾಗಿ ನಡೆಯುವಂತೆ ಮತ್ತು ಅಭಿವೃದ್ಧಿ ಕೆಲಸದ ಹೊಣೆಹೊತ್ತ ಬಸವರಾಜ್‌ ಒಡೆಯರ್‌ ಅರ್ಚಕರ ಕುಟುಂಬ ದೇವಾಲಯದ ಸಂಪೂರ್ಣ ಜವಾಬ್ದಾರಿ ಹೊತ್ತಿದೆ. ದೂರದ ಊರಿ ನಿಂದ ಬರುವ ಭಕ್ತಾದಿಗಳಿಗೆ ಮೂಲ ಸೌಕರ್ಯಗಳ ವ್ಯವಸ್ಥೆ ಕಲ್ಪಿಸಿದೆ. ಸರಳ ಮದುವೆ, ನಾಮಕರಣ, ಹೂ ಮುಡಿಸುವ ಶಾಸ್ತ್ರ ಹೀಗೆ ಭಕ್ತಾದಿಗಳ ಅನುಕೂಲಕ್ಕೆ ಅಣಿಮಾಡಿಕೊಡಲಾಗುತ್ತದೆ.

 ಕಡಲೆಕಾಯಿ ಪರಿಷೆ

ಕಾರ್ತಿಕ ಮಾಸದ ಕಡೆಯ ಸೋಮವಾರ ದೇವಾಲಯದಲ್ಲಿ ಪ್ರತಿ ವರ್ಷ ಕಡಲೆ ಕಾಯಿ ಪರಿಷೆ ನಡೆಯುತ್ತದೆ. ಬಸವಣ್ಣನಿಗೆ ಪ್ರಿಯವಾದ ಕಡಲೆ ಕಾಯಿಯನ್ನು ಮೊದಲು ದೇವರಿಗೆ ನೈವೇದ್ಯ ಸಲ್ಲಿಸಿ ದೇವಾಲಯಕ್ಕೆ ಬಂದ ಭಕ್ತರಿಗೆ ಪ್ರಸಾದದ ರೂಪದಲ್ಲಿ ಹಂಚಲಾಗುತ್ತದೆ. ಭಕ್ತಾದಿಗಳು ತಮ್ಮ ಆರೋಗ್ಯ, ಅಭಿವೃದ್ಧಿ, ಯಶಸ್ಸು, ಐಶ್ವರ್ಯ, ಸುಖ, ಶಾಂತಿ ಬಯಸಿ ಬಯಲು ಬಸವೇಶ್ವರ ಸ್ವಾಮಿಯ ಮೊರೆ ಹೋಗುತ್ತಾರೆ, ಸಿದ್ಧಿ ಪಡೆಯುತ್ತಾರೆ.

ಕಾರ್ತಿಕ ಮಾಸದಲ್ಲಿ ವಿಶೇಷ ಪೂಜೆ

ಶ್ರೀಬಯಲು ಬಸವೇಶ್ವರ ಅನೇಕರಿಗೆ ಮನೆ ದೇವರಾಗಿ¨ªಾನೆ. ಕಾರ್ತಿಕ ಮಾಸದ ಸೋಮವಾರಗಳಲ್ಲಿ ಸ್ವಾಮಿಯ ಮೂಲ ವಿಗ್ರಹಕ್ಕೆ ರುದ್ರಾಭಿಷೇಕ, ವಿಶೇಷ ಬೆಣ್ಣೆ ಅಲಂಕಾರ, ಹೂವಿನ ಅಲಂಕಾರವಾಗುತ್ತದೆ. ಮೂಲವಿಗ್ರಹಕ್ಕೆ ಹೊಂದುವಂತಹ ಬೆಳ್ಳಿಯ ಕವಚ ಮಾಡಿಸಿದ್ದು, ವಿಶೇಷ ದಿನಗಳಂದು ದೇವರಿಗೆ ಬೆಳ್ಳಿಯ ಕವಚ ಧಾರಣೆ ಮಾಡುತ್ತಾರೆ.

ಗರ್ಭಗುಡಿಗೆ ಪ್ರವೇಶ

ವಿಶೇಷವಾಗಿ ಬೆಣ್ಣೆ ಮತ್ತು ಹೂವಿನ ಅಲಂಕಾರ ಮಾಡಿದ ದಿನಗಳನ್ನು ಹೊರತುಪಡಿಸಿ ಇತರೆ ಸಾಮಾನ್ಯ ದಿನಗಳಲ್ಲಿ ಗರ್ಭಗುಡಿಯ ಬಸವಣ್ಣನ ಪಾದ ಸ್ಪರ್ಶ ಮಾಡಿ ಕೋರಿಕೆ ಈಡೇರಿಸುವಂತೆ ಕೇಳಿಕೊಳ್ಳುವ ಅವಕಾಶವಿದೆ.

ಮೊದಲ ಆಹ್ವಾನ ಬಸವಣ್ಣನಿಗೆ

ಕೋರಿಕೆ ಈಡೇರಿದವರು ಹರಕೆ ತೀರಿಸಲು ಬರುತ್ತಾರೆ. ಹಣ್ಣು ಕಾಯಿ ಮಾಡಿಸುತ್ತಾರೆ. ಮದುವೆಯ ಕರೆಯೋಲೆಯನ್ನು ಮೊದಲು ದೇವರಿಗೆ ನೀಡಿ ಆಹ್ವಾನಿಸಿ ಹರಸು ಎಂದು ಕೈ ಮುಗಿಯುತ್ತಾರೆ.

 “ವೈದ್ಯನಾದರೂ ಪ್ರತಿ ಕಾಯಕವನ್ನು ಸಮರ್ಪಣಾ ಭಾವದಿಂದ ಶ್ರೀ ಬಯಲು ಬಸವೇಶ್ವರಸ್ವಾಮಿಗೆ ಅರ್ಪಿಸುತ್ತೇನೆ. ಎಷ್ಟೋ ಸಮಸ್ಯೆಗಳು ಆಶ್ಚರ್ಯಕರ ರೀತಿಯಲ್ಲಿ ಪರಿಹಾರವಾಗಿದೆ. ನಮ್ಮ ತಂದೆ ಈ ದೇವಾಲಯದ ಅರ್ಚಕರಾಗಿ ವರ್ಷಾನುಗಟ್ಟಲೇ ಸೇವೆ ಸಲ್ಲಿಸಿದ್ದು, ನಾವು ದೇವಾಲಯದ ಅಭಿವೃದ್ಧಿಗೆ ತನು ಮನ ಧನ ಅರ್ಪಿಸಿ ಸೇವೆ ಸಲ್ಲಿಸುತ್ತಿದ್ದೇವೆ.” – ಡಾ.ಬಿ.ವಿಜಯಕುಮಾರ್‌ ಆರಾಧ್ಯ, ಅರ್ಚಕ ಬಸವರಾಜ್‌ ಒಡೆಯರ್‌ ಪುತ್ರ

 “ಮನೆ, ಮಕ್ಕಳು, ಜೀವನ ಸಮೃದ್ಧಿಯಿಂದ ಇರಲು ಶ್ರೀ ಬಯಲು ಬಸವೇಶ್ವರ ಸ್ವಾಮಿಯ ಅನುಗ್ರಹವೇ ಕಾರಣ. ತಂತ್ರಜ್ಞಾನ ಎಷ್ಟೇ ಮುಂದುವರಿದರೂ ಕಣ್ಣಿಗೆ ಕಾಣದ ಶಕ್ತಿಯು ನಮ್ಮನ್ನು ಸದಾಕಾಲ ರಕ್ಷಿಸುತ್ತಿದೆ ಎಂದರೆ ಅದು ಭಗವಂತನ ಅನುಗ್ರಹ.” – ಸುಜಾತ, ಅಧ್ಯಕ್ಷೆ, ಶ್ರೀ ಬಯಲು ಬಸವೇಶ್ವರ ಸ್ವಾಮಿ ದೇಗುಲ ಅಭಿವೃದ್ಧಿ ಸಮಿತಿ

– ಅಕ್ಷಯ್‌ ವಿ.ವಿಜಯಪುರ

ಟಾಪ್ ನ್ಯೂಸ್

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8

Devanahalli: ಬೇಸಿಗೆ ಬಿಸಿ; ಹುರುಳಿಕಾಯಿ ದರ ದುಬಾರಿ

ಬೇಸಿಗೆ ಬಿಸಿಯೂಟ: 32,173 ಮಕ್ಕಳ ನೋಂದಣಿ

ಬೇಸಿಗೆ ಬಿಸಿಯೂಟ: 32,173 ಮಕ್ಕಳ ನೋಂದಣಿ

Devanahalli: ಬೇಸಿಗೆ ತಾಪಮಾನ ಹೆಚ್ಚಳ, ಇರಲಿ ಎಚ್ಚರ

Devanahalli: ಬೇಸಿಗೆ ತಾಪಮಾನ ಹೆಚ್ಚಳ, ಇರಲಿ ಎಚ್ಚರ

Doddaballapur: ಜಾತೀಯತೆಗೆ ಮಣೆ ಹಾಕದ ಕ್ಷೇತ್ರದ ‌ಮತದಾರರು

Doddaballapur: ಜಾತೀಯತೆಗೆ ಮಣೆ ಹಾಕದ ಕ್ಷೇತ್ರದ ‌ಮತದಾರರು

Lok Sabha polls: ಲೋಕಸಭೆ ಚುನಾವಣೆಯಲ್ಲಿ ಇಂದಿರಾಗಾಂಧಿ ನೆನಪು

Lok Sabha polls: ಲೋಕಸಭೆ ಚುನಾವಣೆಯಲ್ಲಿ ಇಂದಿರಾಗಾಂಧಿ ನೆನಪು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.