Dog bite: ತಿಂಗಳಲ್ಲೇ 500ಕ್ಕೂ ಹೆಚ್ಚು ಮಂದಿಗೆ ನಾಯಿ ಕಡಿತ
Team Udayavani, Nov 16, 2023, 4:30 PM IST
ದೊಡ್ಡಬಳ್ಳಾಪುರ: “ಬೀದಿ ನಾಯಿ ನನ್ನ ಕೈ ಕಚ್ಚಿದೆ. ಹೀಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ವೈದ್ಯರು ಚೀಟಿ ಬರೆದು ಕೊಟ್ಟಿದ್ದಾರೆ ಎಂದು ಒಬ್ಬರು ತಿಳಿಸಿದರೆ, ಮತ್ತೂಬ್ಬರು ಇದ್ದಕ್ಕಿದ್ದಂತೆ ನಾಯಿ ಎಗರಿ ಎದೆಗೆ ಕಚ್ಚಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದೇನೆ ಎನ್ನುತ್ತಾರೆ.
ಹಾಗೆಯೇ ನನ್ನ 4 ವರ್ಷದ ಮಗಳ ಮೇಲೆ ಬೀದಿನಾಯಿಗಳು ದಾಳಿ ನಡೆಸಿ ಕಚ್ಚಿ ಗಾಯಗೊಳಿಸಿವೆ ಎನ್ನುತ್ತಾರೆ ಇನ್ನೋರ್ವರು’. ಹೌದು, ದೊಡ್ಡಬಳ್ಳಾಪುರದಲ್ಲಿ ಬೀದಿ ನಾಯಿಗಳ ಹಾವಳಿ ದಿನದಿಂದ ದಿನಕ್ಕೆ ಏರಿಕೆ ಕಂಡು ಬಂದಿದ್ದು ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಹೇಳುತ್ತಿರುವ ಪರಿಯಿದು.!.
ಸೂಚನೆ: ಪ್ರಿಯಾಂಕ ಹೋಟೆಲ್ ಬಳಿ ಇದ್ದಾಗ ನಾಯಿ ಇದ್ದಕ್ಕಿದ್ದಂತೆ ಎಗರಿ ಕೈ ಕಚ್ಚಿದೆ. ತೀವ್ರ ಗಾಯಗೊಂಡಿರುವ ಕಾರ ಣ ಸರ್ಕಾರಿ ಆಸ್ಪತ್ರೆ ವೈದ್ಯರು ವಿಕ್ಟೋರಿ ಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವಂತೆ ಸೂಚಿಸಿದ್ದಾರೆ ಎಂದು ನಾಯಿ ಕಡಿತಕ್ಕೆ ಒಳಗಾದ ಸುಬ್ಬರಾಯಪ್ಪ ಹೇಳಿದರು. ನಗರದ ಸಮೃದ್ಧಿ ಗ್ರ್ಯಾಂಡ್ ಮುಂದೆ ಕೆಲಸದ ನಿಮಿತ್ತ ಬಂದಿರುವಾಗ ನಾಯಿ ಎದೆಗೆ ಬಾಯಿ ಹಾಕಿದ್ದು ಗಾಯಗೊಂಡಿ ದ್ದೇನೆ. ದೊಡ್ಡಬಳ್ಳಾಪುರದಲ್ಲಿ ನಾಯಿಗಳ ನಿಯಂತ್ರಣ ಮಾಡಲು ಸ್ಥಳೀಯ ಆಡಳಿತಕ್ಕೆ ಆಗುತ್ತಿಲ್ಲವೇ ಎಂದು ನಾಯಿ ಕಡಿತಕ್ಕೆ ಒಳಗಾದ ಬೆಂಗಳೂರಿನ ನಿವಾಸಿ ಪ್ರಣವ್ ಹೇಳಿದರು.
ದಾಳಿಯಿಂದ ಪಾರು ಮಾಡಿ: ನಗರದ ಗಾಣಿಗರಪೇಟೆ ನಿವಾಸಿ ರಾಜೀವ್ ಅವರ ನಾಲ್ಕು ವರ್ಷದ ಮಗಳ ಮೇಲೆ ಬೀದಿ ನಾಯಿ ದಾಳಿ ಮಾಡಿದೆ. ಬೆನ್ನಿನ ಮೇಲೆ ಕಚ್ಚಿರುವ ನಾಯಿ ಕುತ್ತಿಗೆಗೂ ಬಾಯಿ ಹಾಕಲು ಹೋಗಿತ್ತು, ತಕ್ಷಣವೇ ಸ್ಥಳೀಯರು ನಾಯಿ ದಾಳಿಯಿಂದ ಪಾರು ಮಾಡಿದ್ದಾರೆ. ನಾಯಿಗಳ ಉಪಟಳದಿಂದ ಜನರನ್ನು ಪಾರು ಮಾಡಬೇಕಿದೆ ಎನ್ನುತ್ತಾರೆ ರಾಜೀವ್.
ಕ್ರಮ ಕೈಗೊಳ್ಳಿ: ದೊಡ್ಡಬಳ್ಳಾಪುರ ನಗರದಲ್ಲಿ ಬೆಳಗ್ಗೆ ದಿನಪತ್ರಿಕೆ ವಿತರಣೆ ಮಾಡುತ್ತಿದ್ದ ಹುಡುಗರ ಮೇಲೆ ನಾಯಿಗಳ ಹಿಂಡು ದಾಳಿ ನಡೆಸುತ್ತಿವೆ. ಹಾಗೆಯೇ ಇಂತಹ ಹಲವಾರು ಪ್ರಕರಣ ಗಳು ನಡೆಯುತ್ತಿರುತ್ತವೆ. ನಾಯಿಗಳ ಉಪಟಳದ ಕುರಿತು ಪದೇ ಪದೆ ವರದಿಯಾಗುತ್ತಿದ್ದರೂ ಅಧಿಕಾರಿ ಗಳು ಯಾವುದೇ ಕ್ರಮ ಕೈಗೊಳ್ಳದೆ ಸಾರ್ವಜನಿ ಕರು ಸಂಕಷ್ಟಕ್ಕೆ ಒಳಗಾಗುವಂತಾಗಿದೆ. ಹೀಗಾಗಿ ನಗರಸಭೆ ಈ ಬಗ್ಗೆ ಕ್ರಮ ವಹಿಸದಿದ್ದರೆ ಹೋರಾಟ ನಡೆಸಬೇಕಾ ಗು ತ್ತದೆ ಎನ್ನುತ್ತಾರೆ ತಾಲೂಕು ಪತ್ರಿಕಾ ವಿತರ ಕರ ಸಂಘದ ಅಧ್ಯಕ್ಷ ಆರ್.ರಮೇಶ್.
ನಿತ್ಯ 10-15 ನಾಯಿ ಕಚ್ಚಿದ ಪ್ರಕರಣ: ನಗರದ ನಂದಿ ಆಸ್ಪತ್ರೆ ಹಿಂಭಾಗ ಮಂಜುಳಾ ಎನ್ನುವ ಮಹಿಳೆ ಕೈಗೆ ನಾಯಿ ಕಚ್ಚಿದೆ. ನಿತ್ಯ ಸರ್ಕಾರಿ ಆಸ್ಪತ್ರೆಗೆ 10ರಿಂದ 15 ನಾಯಿ ಕಚ್ಚಿದ ಪ್ರಕರಣ ಬರುತ್ತಿದ್ದು ಕಳೆದ ತಿಂಗಳು ಸುಮಾರು 500ಕ್ಕೂ ಹೆಚ್ಚು ಪ್ರಕರಣಗಳಾಗಿವೆ. ಕೆಲವರು ತೀವ್ರ ಗಾಯಗೊಂಡು ನರಗಳಿಗೆ ಹಾನಿಯಾಗಿದ್ದ ಕಾರಣ ಬೆಂಗಳೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಸೂಚಿಸಲಾಗಿದೆ. ಈ ಬಗ್ಗೆ ಸ್ಥಳೀಯ ಆಡಳಿತ ಕ್ರಮ ವಹಿಸಬೇಕಿದೆ ಎಂದು ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ವೈದ್ಯಾಧಿಕಾರಿಯಾದ ಡಾ.ಪರಮೇಶ್ ಅವರು “ಉದಯವಾಣಿ’ಗೆ ಮಾಹಿತಿ ನೀಡಿದ್ದಾರೆ.
ಬೀದಿ ನಾಯಿಗಳು ಹೆಚ್ಚಾಗುತ್ತಿರುವ ಬಗ್ಗೆ ನಾಗರಿಕರಿಂದ ದೂರು ಬರುತ್ತಿದ್ದು ನಗರಸಭೆ ಗಂಭೀರವಾಗಿ ಪರಿಗಣಿಸಿದೆ. ನಾಯಿಗಳನ್ನು ಹಿಡಿದು ಸಂತಾನ ಹರಣ ಶಸ್ತ್ರ ಚಿಕಿತ್ಸೆ ಮಾಡಲು ಟೆಂಡರ್ ಕರೆದು ಒಂದೂವರೆ ತಿಂಗಳಾಗಿದ್ದು ಇಂದಿನಿಂದಲೇ ಕಾರ್ಯಾರಂಭವಾಗಲಿದೆ. ● ಈರಣ್ಣ, ಎಇಇ, ಪರಿಸರ ವಿಭಾಗ, ನಗರಸಭೆ
ಮೊನ್ನೆ 20 ಮಂದಿಗೆ ನಾಯಿ ಕಡಿತ ನಗರದಲ್ಲಿ ತಿಂಗಳಲ್ಲೇ 500ಕ್ಕೂ ಹೆಚ್ಚು ನಾಯಿ ಕಚ್ಚಿದ ಪ್ರಕರಣ ಕಂಡು ಬಂದಿದ್ದು ಹಾಗೆಯೇ ನಗರದ ವಿವಿಧ ಭಾಗಗಳಲ್ಲಿ ಸೋಮವಾರ ರಾತ್ರಿ 9 ಮಂದಿ ಹಾಗೂ ಮಂಗಳವಾರ ಬೆಳಗ್ಗೆ 11 ಮಂದಿ ನಾಯಿ ಕಡಿತಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ನಗರದ ಕೋರ್ಟ್ ರಸ್ತೆ, ಜಿ.ರಾಮೇಗೌಡ ವೃತ್ತದ ಬಳಿ, ಪ್ರಿಯಾಂಕ ಹೋಟೆಲ್ ಬಳಿ, ಡಿ.ಕ್ರಾಸ್ ಬಸ್ ನಿಲ್ದಾಣದ ಬಳಿ ಹೀಗೆ ಹಲವು ಕಡೆ ನಾಯಿಗಳು ದಾಳಿ ನಡೆಸುತ್ತಿದ್ದು ಸಾರ್ವಜನಿಕರು ಆತಂಕಕ್ಕೀಡಾಗಿದ್ದಾರೆ.
– ಶ್ರೀಕಾಂತ ಡಿ.