ಕಿರಿಯ ವಯಸ್ಸಿಗೆ ಹಿರಿಯ ಸಾಧನೆ


Team Udayavani, Dec 25, 2019, 11:58 AM IST

bg-tdy-1

ಬೆಳಗಾವಿ: ಕರ್ನಾಟಕ ಲೋಕ ಸೇವಾ ಆಯೋಗ ಪರೀಕ್ಷೆ ಬರೆದ ನೇಕಾರನ ಮಗಳು ಇಲ್ಲಿಯ ಖಾಸಬಾಗ ನಿವಾಸಿ ಕಲ್ಯಾಣಿ ಕಾಂಬಳೆ ಮೊದಲ ಪ್ರಯತ್ನದಲ್ಲಿಯೇ ತೇರ್ಗಡೆಯಾಗಿ ಉಪವಿಭಾಗಾಧಿಕಾರಿ ಹುದ್ದೆಗಿಟ್ಟಿಸಿದ್ದಾಳೆ.

ಕೆಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆಯಾದ 428 ಜನರ ಪೈಕಿ ಕಲ್ಯಾಣಿ ಕಾಂಬಳೆ ಅತಿ ಚಿಕ್ಕ ವಯಸ್ಸಿನ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರಳಾಗಿದ್ದು, 23ನೇ ವಯಸ್ಸಿನಲ್ಲಿಯೇ ಉಪವಿಭಾಗಾಧಿಕಾರಿ ಹುದ್ದೆ ಅಲಂಕರಿಸಿದ್ದಾರೆ. ಮೊದಲ ಪ್ರಯತ್ನದಲ್ಲಿಯೇ ಯಶಸ್ಸು ಈಕೆಯ ಪಾಲಿಗೆ ದಕ್ಕಿದೆ. ನೇಕಾರ ತಂದೆ ವೆಂಕಟೇಶ ಕಾಂಬಳೆ ಹಾಗೂ ತಾಯಿ ಸುವರ್ಣಾ ದಂಪತಿಯ ಹಿರಿಯ ಮಗಳು ಕಲ್ಯಾಣಿ ಡಿವೈನ್‌ ಪ್ರಾವಿಡೆನ್ಸ್‌ ಕಾನ್ವೆಂಟ್‌ ಹೈಸ್ಕೂಲ್‌ ನಲ್ಲಿ ಶಾಲಾ ಅಭ್ಯಾಸ ಮಾಡಿದ್ದು, 2012-14ರಲ್ಲಿ ವಿಜ್ಞಾನ ವಿಭಾಗವನ್ನು ಬೆಂಗಳೂರಿನ ನಾರಾಯಣ ಪಿಯು ಕಾಲೇಜಿನಲ್ಲಿ ಓದಿದ್ದಾರೆ. ಹೈದ್ರಾಬಾದ್‌ನ ಉಸ್ಮಾನಿಯಾ ವಿಶ್ವವಿದ್ಯಾಲಯದ ಶ್ರೀಚೈತನ್ಯ ಡಿಗ್ರಿ ಕಾಲೇಜಿನಲ್ಲಿ 2014-17ರ ವರೆಗೆ ಪದವಿ ಮುಗಿಸಿದ್ದಾರೆ. ಪದವಿ ಓದುತ್ತಿದ್ದಾಗಲೇ ಸಿವಿಲ್‌ ಪರೀಕ್ಷೆಯ ತಯಾರಿ ನಡೆಸಿದ್ದರು.

ಸಹೋದರಿ ಅನುರಾಧಾ ಸಿವಿಲ್‌ ಇಂಜಿನಿಯರ್‌, ಸಹೋದರ ಓಂಕಾರ ಎಂಬಿಎ ಓದುತ್ತಿದ್ದು, ಇನ್ನೊಬ್ಬ ಸಹೋದರಿ ಮೃದುಲಾ 9ನೇ ತರಗತಿ ಓದುತ್ತಿದ್ದಾರೆ. ಪೋಷಕರ ಬೆಂಬಲದಿಂದಾಗಿ ಇಷ್ಟೆಲ್ಲ ಸಾಧನೆ ಸಾಧ್ಯವಾಗಿದೆ. ಇದು ನನ್ನ ಮೊದಲ ಹಂತದ ಸಾಧನೆ. ಯುಪಿಎಸ್‌ಸಿ ಪರೀಕ್ಷೆ ಬರೆದು ಸಮಾಜ ಸೇವೆ ಮಾಡಬೇಕೆಂಬ ಗುರಿ ಇಟ್ಟುಕೊಂಡಿರುವುದಾಗಿ ಕಲ್ಯಾಣಿ ಹೇಳುತ್ತಾರೆ.

ಶ್ರಮಕ್ಕೆ ತಕ್ಕ ಫಲ: ಸಮಾಜ ಸೇವೆ ಮಾಡಬೇಕೆಂಬ ಹಂಬಲದೊಂದಿಗೆ ನಾಗರಿಕ ಸೇವಾ ಪರೀಕ್ಷೆಯ ಸಿದ್ಧತೆ ನಡೆಸಿದ್ದ ಕಲ್ಯಾಣಿ ಅವರು ಡಿಗ್ರಿ ಮುಗಿಯುತ್ತಿದ್ದಂತೆ ಕೆಪಿಎಸ್‌ಸಿ ಪರೀಕ್ಷೆಗೆ ಹಾಜರಾದರು. 2017ರಲ್ಲಿ ಪರೀಕ್ಷೆ ಬರೆದು 2019ರಲ್ಲಿ ಮೌಖೀಕ ಪರೀಕ್ಷೆಯಲ್ಲಿಯೂ ತೇರ್ಗಡೆಯಾದರು. ಮೊದಲಿನಿಂದಲೂ ಸಿವಿಲ್‌ ಪರೀಕ್ಷೆಯ ಕನಸು ಕಾಣುತ್ತಿದ್ದ ಕಲ್ಯಾಣಿ ಪಟ್ಟ ಶ್ರಮಕ್ಕೆ ಈಗ ಫಲ ಸಿಕ್ಕಿದೆ. ಬೆಂಗಳೂರಿನಲ್ಲಿರುವ ಡಾ| ರಾಜಕುಮಾರ ಅಕಾಡೆಮಿಯಲ್ಲಿ ತರಬೇತಿ ಪಡೆದ ಬಳಿಕ ರಾಜ್ಯ ಸರ್ಕಾರದ ಸ್ಕಾಲರ್‌ಶಿಪ್‌ ಗೂ ಅರ್ಹರಾದರು. ದೆಹಲಿಯಲ್ಲಿ ಸುಮಾರು 6-7 ತಿಂಗಳುಗಳ ಕಾಲ ತರಬೇತಿ ಪಡೆದು ಕೆಪಿಎಸ್‌ಸಿ ಪರೀಕ್ಷೆ ಬರೆಯಲು ಮತ್ತೆ ಕರ್ನಾಟಕಕ್ಕೆ ವಾಪಸ್ಸಾಗಿ ತಯಾರಿ ನಡೆಸಿದರು.

ಐಎಎಸ್‌ ಗುರಿ: ನಿತ್ಯ 10ರಿಂದ 12 ಗಂಟೆಗಳ ಕಾಲ ಸತತ ಅಧ್ಯಯನದ ಮೂಲಕ ಈ ಸಾಧನೆ ಸಾಧ್ಯವಾಗಿದೆ. ಮೊದಲಿನಿಂದಲೂ ನಾಗರಿಕ ಸೇವಾ ಪರೀಕ್ಷೆಯ ಬಗ್ಗೆ ಆಸಕ್ತಿ ಹಾಗೂ ಹಂಬಲ ಇತ್ತು. ಈಗ ಅದು ಒದಗಿ ಬಂದಿದೆ. ಏನಾದರೂ ಸಾಧನೆ ಮಾಡಬೇಕೆಂಬ ಕನಸು ಈಡೇರಿದಂತಾಗಿದೆ. ಐಎಎಸ್‌ ಪಾಸಾಗುವ ಗುರಿ ಇದೆ ಎಂದು ತಮ್ಮ ಕನಸನ್ನು ಉದಯವಾಣಿಯೊಂದಿಗೆ ಹಂಚಿಕೊಂಡರು.

ಉಪವಿಭಾಗಾಧಿಕಾರಿಗಳು: ಬೆಳಗಾವಿ ನಗರದ ಖಾಸಬಾಗನ ಕಲ್ಯಾಣಿ ಕಾಂಬಳೆ, ಸದಾಶಿವ ನಗರದ ನಿವಾಸಿ ಶ್ರವಣ ನಾಯಿಕ, ಅಥಣಿ ತಾಲೂಕಿನ ಮೋಳೆ ಗ್ರಾಮದ ಜಗದೀಶ ಅಡಹಳ್ಳಿ, ಚಿಕ್ಕೋಡಿಯ ಶ್ವೇತಾ ಮೋಹನ ಬೀಡಿಕರ, ಡಿವೈಎಸ್ಪಿಯಾಗಿ ಬೆಳಗಾವಿ ರಾಣಿ ಚನ್ನಮ್ಮ ನಗರದ ನಿವಾಸಿ ಗಜಾನನ ವಾಮನ ಸುತಾರ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿಯಾಗಿ ಹನುಮಾನ ನಗರದ ಗೋಪಾಲ ರಾಠೊಡ ಆಯ್ಕೆ ಆಗಿದ್ದಾರೆ.

ವಾಣಿಜ್ಯ ತೆರಿಗೆ ಇಲಾಖೆ ಸಹಾಯಕ ಆಯುಕ್ತರು: ಶಕೀರ ಅಹ್ಮದ ತೊಂಡಿಖಾನ್‌, ಅಥಣಿ ತಾಲೂಕಿನ ಕವಟಗೊಪ್ಪ ದ ಪ್ರವೀಣ ಲಕ್ಕಪ್ಪ ಪಾಟೀಲ, ಬೆಳಗಾವಿ ತಾಲೂಕಿನ ಮಾರಿಹಾಳದ ಸಂತೋಷ ಕಿರೇಗಾರ, ರಾಯಬಾಗ ತಾಲೂಕಿನ ಹಿಡಕಲ್‌ದ ಮೋಹನಚಂದ ಹನುಮಂತ ಕಟಗಿ, ರಾಮದುರ್ಗ ತಾಲೂಕಿನ ತೋರಣಗಟ್ಟಿಯ ಯಲ್ಲಪ್ಪ ತಿಪ್ಪಣ್ಣವರ, ಗ್ರೇಡ್‌-2 ತಹಶೀಲ್ದಾರರಾಗಿ ಖಾನಾಪುರ ತಾಲೂಕಿನ ಹಿರೇಹಟ್ಟಿಹೊಳಿಯ ಸದಾಶಿವ ಮಕ್ಕೋಜಿ, ಬೆಳಗಾವಿ ತಾಲೂಕಿನ ಬಸವನಕುಡಚಿಯ ಅನಿಲ ಬಡಿಗೇರ, ಬೈಲಹೊಂಗಲ ತಾಲೂಕಿನ ಮಹೇಶ ಪತ್ರಿ, ರಾಯಬಾಗ ತಾಲೂಕಿನ ಯಬರಟ್ಟಿಯ‌ ಶಿವಕುಮಾರ ಬಿರಾದಾರ, ಅಥಣಿ ತಾಲೂಕಿನ ಸಿದ್ಧೇವಾಡಿಯ ಸುರೇಶ ಮುಂಜೆ, ಗೋಕಾಕ ತಾಲೂಕಿನ ಅರಭಾವಿಯ ಪರಶುರಾಮ ಸತ್ತಿಗೇರಿ, ರಾಯಬಾಗ ತಾಲೂಕಿನ ವಿಠಲ ಚೌಗಲಾ, ಅಥಣಿ ತಾಲೂಕಿನ ತೇವರಟ್ಟಿ ಗ್ರಾಮದ ಕಲಗೌಡ ಪಾಟೀಲ ಆಯ್ಕೆ ಆಗಿದ್ದಾರೆ.

ವಾಣಿಜ್ಯ ತೆರಿಗೆ ಅಧಿಕಾರಿಗಳು: ಅಥಣಿ ತಾಲೂಕಿನ ಕಲ್ಲೋಳಿಯ ವಿನಯ ಪ್ರಭುದೇವ ಮಠಪತಿ, ಬೆಳಗಾವಿ ತಾಲೂಕಿನ ಮಾಸ್ತಮರಡಿಯ ಆನಂದ ಅಂಬೋಜಿ, ಗೋಕಾಕ ತಾಲೂಕಿನ ನಾಗನೂರ ಗ್ರಾಮದ ಭರತ ಸಾಗರೆ, ಅಥಣಿ ತಾಲೂಕಿನ ಕತ್ರಾಳ ಗ್ರಾಮದ ರಾಜು ಅಣ್ಣಪ್ಪ ಮುದವಿ, ಬೆಳಗಾವಿ ಹಿಂದವಾಡಿಯ ಸ್ಫೂರ್ತಿ ದೊಡಮನಿ, ಅಥಣಿ ತಾಲೂಕಿನ ಕೊಕಟನೂರ ಗ್ರಾಮದ ಭೀಮಸೇನ ಘಾಟಗೆ, ಬೆಳಗಾವಿ ತಾಲೂಕಿನ ಮಹ್ಮದಗೌಸ್‌ ನಬೀಸಾಬ ಮುಲ್ಲಾ ಆಯ್ಕೆ ಆಗಿದ್ದಾರೆ.

ಮುಖ್ಯಾಧಿಕಾರಿಗಳು: ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದ ಅಮಿತ ತಾರದಾಳೆ, ಬೆಳಗಾವಿ(ವಡಗಾಂವಿ) ಭಾಗ್ಯಶ್ರೀ ಹುಗ್ಗಿ, ಚಿಕ್ಕೋಡಿ ತಾಲೂಕಿನ ಬೋರಗಾಂವಾಡಿ ಗ್ರಾಮದ ವಿಶ್ವೇಶ್ವರ ಬಡಾರಗಾಡೆ, ಗೋಕಾಕ ವಿವೇಕಾನಂದ ನಗರ ನಿವಾಸಿ ವೆಂಕಟೇಶ ಮಾರುತಿ ನಾಗನೂರ, ಕಾಗವಾಡ ತಾಲೂಕಿನ ಜುಗೂಳ ಗ್ರಾಮದ ರವೀಂದ್ರ ಪರಸಗೌಡ ಪಾಟೀಲ, ಅಥಣಿ ತಾಲೂಕಿನ ಸಿದ್ದೇವಾಡಿ ಗ್ರಾಮದ ಅಜೀತ ಶಿರಹಟ್ಟಿ ಉತ್ತೀರ್ಣರಾಗಿದ್ದಾರೆ.

 

-ಭೈರೋಬಾ ಕಾಂಬಳೆ

ಟಾಪ್ ನ್ಯೂಸ್

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Modi (2)

Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

ಚನ್ನಮ್ಮನ ಕಿತ್ತೂರು: ಮಹಾನ್‌ ಯೋಗಿಗಳು-ಸೂಫಿ ಸಂತರ ನಾಡಿದು- ಶಿಲೇದಾರ

ಚನ್ನಮ್ಮನ ಕಿತ್ತೂರು: ಮಹಾನ್‌ ಯೋಗಿಗಳು-ಸೂಫಿ ಸಂತರ ನಾಡಿದು- ಶಿಲೇದಾರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.