ದಲಿತ ಸಂಘಟನೆಗಳ ಬೃಹತ್ ಪ್ರತಿಭಟನೆ
Team Udayavani, Nov 17, 2019, 11:33 AM IST
ಚಿಕ್ಕೋಡಿ: ಡಾ| ಬಾಬಾಸಾಹೇಬ ಅಂಬೇಡ್ಕರ ಸಂವಿಧಾನ ರಚಿಸಿಲ್ಲ ಎನ್ನುವ ಸಿಎಂಸಿಎ ಸಂಸ್ಥೆ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಚಿಕ್ಕೋಡಿ ತಾಲೂಕು ವಿವಿಧ ದಲಿತ ಸಂಘಟನೆಗಳ ಒಕ್ಕೂಟ ಶನಿವಾರ ನಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ಉಪವಿಭಾಗಾ ಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಡಾ| ಅಂಬೇಡ್ಕರ ಅವರು ರಚಿಸಿದ ಭಾರತ ಸಂವಿಧಾನ ಕುರಿತು ಸಿಎಂಸಿಎ ಸಂಸ್ಥೆಯವರು ರಚಿಸಿದ ಕೈಪಿಡಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಿಂದ ಬಿಡುಗಡೆ ಮಾಡಿ ಸಂವಿಧಾನ ಬರೆದವರು ಅಂಬೇಡ್ಕರ ಅಲ್ಲ ಎಂದು ರಾಜ್ಯದ ಎಲ್ಲ ಶಾಲೆಗಳಿಗೆ ಸುತ್ತೋಲೆ ಹೊರಡಿಸಿ ತಪ್ಪು ಸಂದೇಶ ಬಿತ್ತಿದ್ದಾರೆ. ಇದು ಸಂವಿಧಾನ ಶಿಲ್ಪಿಗೆ ಅವಹೇಳನಕಾರಿ. ಈ ವಿವಾದ ತಾರಕಕ್ಕೆ ಏರಿದಾಗಲೇ ತಪ್ಪು ಒಪ್ಪಿಕೊಂಡು ಡಾ| ಅಂಬೇಡ್ಕರ ಸಂವಿಧಾನ ರಚಿಸಿಲ್ಲ ಎನ್ನುವ ಬದಲಾಗಿ ಅಂಬೇಡ್ಕರ ಒಬ್ಬರೇ ಸಂವಿಧಾನ ರಚಿಸಿಲ್ಲ ಅಂತ ಮತ್ತೂಂದು ಹೇಳಿಕೆ ನೀಡಿದ್ದು, ಅದು ಕೂಡಾ ಅವಹೇಳನಕಾರಿ ಎಂದು ದಲಿತ ಸಂಘಟನೆಗಳು ದೂರಿದರು.
ಕೈಪಿಡಿಯಲ್ಲಿಯೇ ಅಂಬೇಡ್ಕರ ಬಗ್ಗೆ ಇರುವ ಗೌರವಾರ್ಥ ಪದಗಳನ್ನು ಉಲ್ಲೇಖೀಸದೇ ಇರುವುದು ಖೇದಕರ ಸಂಗತಿ. ಹೀಗೆ ಅವಹೇಳನಕಾರಿ ಸುದ್ದಿ ಹರಡಿ ಅಂಬೇಡ್ಕರ ಅವರಿಗೆ ಅವಮಾನಿಸುತ್ತಿರುವ ಸಿಎಂಸಿಎ ಸಂಸ್ಥೆ ಮತ್ತು ರಾಜ್ಯ ಸರ್ಕಾರದ ಶಿಕ್ಷಣ ಇಲಾಖೆ ಆಯುಕ್ತ ಉಮಾಶಂಕರ ಇವರನ್ನು ವಜಾಗೊಳಿಸಿ ಸಿಎಂಸಿಎ ಸಂಸ್ಥೆಯನ್ನು ರದ್ದು ಪಡಿಸಬೇಕು ಹಾಗೂ ಎಲ್ಲ ಹೊಣೆಗಾರಿಕೆ ಹೊತ್ತು ಶಿಕ್ಷಣ ಸಚಿವರಾದ ಸುರೇಶಕುಮಾರ ತಕ್ಷಣ ರಾಜೀನಾಮೆ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಪ್ರತಿಭಟನೆ ಹಿನ್ನೆಲೆಯಲ್ಲಿ ಚಿಕ್ಕೋಡಿ ಸರ್ಕಲ್ ಬಂದ್ ಮಾಡಿ ಟಯರ್ಗಳಿಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದ್ದರಿಂದ ಸುಮಾರುಒಂದು ಗಂಟೆ ಕಾಲ ವಾಹನ ದಟ್ಟಣೆ ಉಂಟಾಗಿ ಪೊಲೀಸರು ಸಂಚಾರ ವ್ಯವಸ್ಥೆ ಸರಿ ಮಾಡಲು ಹರ ಸಾಹಸ ಪಟ್ಟರು. ದಲಿತ ಮುಖಂಡರಾದ, ಮಹಾವೀರ ಮೋಹಿತೆ, ಶ್ಯಾಮ ರೇವಡೆ, ಬಸವರಾಜ ಢಾಕೆ, ರಾಮಾ ಮಾನೆ, ಅಶೋಕ ಭಂಡಾರಕರ, ಸುದರ್ಶನ್ ತಮ್ಮಣ್ಣವರ, ಸುಜಾತಾ ಕಾಂಬಳೆ, ರಾವಸಾಬ ಫಕೀರೆ, ತ್ಯಾಗರಾಜ ಕದಂ ಪಾಲ್ಗೊಂಡಿದ್ದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್
PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ
Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ
Belagavi; ಕುಂದಾನಗರಿಯಲ್ಲಿ ಮೋದಿ ಸಮಾವೇಶ: ಹರಿದು ಬಂದ ಜನಸಾಗರ
Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ
MUST WATCH
ಹೊಸ ಸೇರ್ಪಡೆ
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ
BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್