ಕೆಪಿಟಿಸಿಎಲ್ ವಸತಿ ಗೃಹಗಳ ದುಸ್ಥಿತಿ
Team Udayavani, Dec 21, 2019, 4:16 PM IST
ರಾಯಬಾಗ: ಪಟ್ಟಣದ ಹೊರವಲಯದಲ್ಲಿರುವ ಕೆಪಿಟಿಸಿಎಲ್ ನೌಕರರ ವಸತಿ ನಿಲಯಗಳು ಸಮರ್ಪಕ ನಿರ್ವಹಣೆ ಇಲ್ಲದ್ದರಿಂದ ಹಾಳಾಗಿದ್ದು, ರಕ್ಷಣಾಗೋಡೆ ಕುಸಿದು ಬಿದ್ದು ಗಿಡಗಂಟೆ ಬೆಳೆದಿವೆ.
ಹೆಸ್ಕಾಂ ಕಚೇರಿ ಆವರಣದಲ್ಲಿ ಕೆಪಿಟಿಸಿಎಲ್ ವತಿಯಿಂದ ಸಿಬ್ಬಂದಿಗಾಗಿ ಸುಮಾರು 40 ವರ್ಷಗಳ ಹಿಂದೆ ನಿರ್ಮಿಸಿದ ಸುಮಾರು 19 ವಸತಿ ನಿಲಯಗಳಲ್ಲಿ ಬಹುತೇಕ ಮನೆಗಳು ವಾಸಕ್ಕೆ ಯೋಗ್ಯವಾಗಿಲ್ಲ. ಅಲ್ಪಸ್ವಲ್ಪ ವ್ಯವಸ್ಥಿತವಾಗಿರುವ ಮನೆಗಳಲ್ಲಿ ಈಗ 8 ಕುಟುಂಬಗಳು ನೆಲೆಸಿದ್ದು, ಇನ್ನುಳಿದ ಮನೆಗಳ ಗೋಡೆ ಬಿರುಕು ಬಿಟ್ಟಿದೆ. ಮೇಲ್ಛಾವಣಿ ಮಳೆಯಿಂದ ಸೋರುತ್ತಿವೆ. ವಸತಿ ನಿಲಯಗಳ ಸುತ್ತಮುತ್ತ ಗಿಡಗಂಟಿಗಳು ಬೆಳೆದಿದ್ದರಿಂದ ವಿಷಜಂತುಗಳ ತಾಣವಾಗಿ ಪರಿಣಮಿಸಿದ್ದು, ಈಗ ಇರುವ ಸಿಬ್ಬಂದಿ ಕುಟುಂಬ ಕೂಡಜೀವ ಭಯದಿಂದಲೇ ವಾಸಮಾಡುವಂತಾಗಿದೆ.
ಕುಸಿದ ರಕ್ಷಣಾಗೋಡೆ: ವಸತಿ ನಿಲಯಗಳ ಸುತ್ತಮುತ್ತಲಿನ ಕೌಂಪೌಂಡ ಅಲ್ಲಲ್ಲಿ ಕುಸಿದು ಬಿದ್ದಿದೆ. ಇದರಿಂದ ರಾತ್ರಿ ಹೊತ್ತು ಕಳ್ಳರ ಭಯ ಒಂದೆಡೆಯಾದರೆ, ಇನ್ನೊಂದೆಡೆ ಹಗಲಿನಲ್ಲಿ ದನಕರುಗಳ ಕಾಟದಿಂದ ವಸತಿ ನಿಲಯದಲ್ಲಿರುವ ನೌಕರರ ಕುಟುಂಬ ಬೇಸತ್ತು ಹೋಗಿವೆ. ರಕ್ಷಣಾಗೋಡೆ ಕುಸಿದು ಬಿದ್ದರಿಂದ ಮತ್ತು ಮುಖ್ಯದ್ವಾರದಲ್ಲಿ ಗೇಟ್ ಇಲ್ಲದ್ದರಿಂದ ಹೆಸ್ಕಾಂ ಇಲಾಖೆಯ ಬೆಲೆ ಬಾಳುವ ಸಾಮಗ್ರಿಗಳಿಗೂ ಕೂಡ ರಕ್ಷಣೆಯಿಲ್ಲದಂತಾಗಿದೆ.
ಕೆಪಿಟಿಸಿಎಲ್ ಮೇಲಧಿ ಕಾರಿಗಳು ಇನ್ನಾದರೂ ಎಚ್ಚೆತ್ತುಕೊಂಡು ವಸತಿ ನಿಲಯಕ್ಕೆ ರಕ್ಷಣಾಗೋಡೆ ನಿರ್ಮಿಸಿ, ಇಲಾಖೆ ಸಿಬ್ಬಂದಿಗಾಗಿ ನೂತನ ಕಟ್ಟಡ ಪುನರ್ ನಿರ್ಮಿಸಿ ಸಿಬ್ಬಂದಿ ಭಯರಹಿತ ವಾತಾವರಣದಲ್ಲಿ ನೆಲೆಸುವಂತೆ ಮಾಡಬೇಕೆಂಬುದು ಇಲ್ಲಿನ ಸಿಬ್ಬಂದಿ ಒತ್ತಾಯವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್
ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ
ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ