ರಾಖಿ ಖರೀದಿಸಲು ಹಣ ಕೊಡಲಿಲ್ಲವೆಂದು ಆತ್ಮಹತ್ಯೆ
Team Udayavani, Aug 8, 2017, 10:01 AM IST
ಬೆಳಗಾವಿ: ಸಹೋದರನಿಗಾಗಿ ರಾಖಿ ಖರೀದಿಸಲು ತನ್ನ ಪತಿ 10 ರೂ. ನೀಡದ್ದಕ್ಕೆ ಮನನೊಂದ ಮಹಿಳೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ವಡಗಾವಿಯ ವಡ್ಡರ ಛಾವಣಿಯಲ್ಲಿ ಸೋಮವಾರ ನಡೆದಿದೆ. ಮಹಾದೇವಿ ಅಶೋಕ ಗೊಲ್ಲರ(23) ಆತ್ಮಹತ್ಯೆ ಮಾಡಿಕೊಂಡವರು.
ಸೋಮವಾರ ರಕ್ಷಾ ಬಂಧನಕ್ಕಾಗಿ ತವರು ಮನೆಗೆ ತೆರಳಲು ಸಿದ್ಧಳಾದ ಮಹಾದೇವಿ ರಾಖಿ ಖರೀದಿಸಲು ತನ್ನ ಪತಿ ಬಳಿ 10 ರೂ. ಕೊಡುವಂತೆ ಕೇಳಿದ್ದಾರೆ. ಆದರೆ ವಿಪರೀತ ಸಾರಾಯಿ ನಶೆಯಲ್ಲಿದ್ದ ಪತಿ ಹಣ ಕೊಡಲು ನಿರಾಕರಿಸಿದ್ದಾನೆ. ಇದೇ ವಿಷಯವಾಗಿ ಇಬ್ಬರ ಮಧ್ಯೆ ಜಗಳವಾಗಿದೆ. ನಂತರ ಜಗಳ ಮಾಡಿಕೊಂಡು ಪತಿ ಅಶೋಕ ಮನೆಯಿಂದ ಹೊರ ಹೋಗಿದ್ದಾನೆ. ಹೀಗಾಗಿ ನೊಂದ ಮಹಾದೇವಿ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಹಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hassan Pen Drive Case: ಕಾಂಗ್ರೆಸ್ ಪ್ರತಿಭಟನಕಾರರ ವಿರುದ್ಧ ಜೆಡಿಎಸ್ ದೂರು
SIT ತನಿಖೆ ಆರಂಭ: ಇಬ್ಬರು ಸಂತ್ರಸ್ತೆಯರ ಹೇಳಿಕೆ ದಾಖಲು
PM Modi ಭಾಷಣ ತಿರುಚಿದ ಆರೋಪ: ಪ್ರಿಯಾಂಕ್ ವಿರುದ್ಧ ಬಿಜೆಪಿ ದೂರು
Prajwal,ಶಾಸಕ ರೇವಣ್ಣ ಬಂಧನಕ್ಕೆ ಆಗ್ರಹ: ಬಿಜೆಪಿ-ಜೆಡಿಎಸ್ ವಿರುದ್ಧ ಕಾಂಗ್ರೆಸ್ ವಾಗ್ಧಾಳಿ
Election ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್ಡ್ರೈವ್; ಸಂಕಷ್ಟದಲ್ಲಿ ಜೆಡಿಎಸ್