- Sunday 08 Dec 2019
ಜಿಪಂ ಅಧ್ಯಕ್ಷೆ ಐಹೊಳೆ ಪತಿ ಬಂಧನ
Team Udayavani, May 18, 2019, 11:46 AM IST
ಬೆಳಗಾವಿ: ನಿವೇಶನ ಕೊಡುವುದಾಗಿ ಹೇಳಿ 2 ಲಕ್ಷ ರೂ. ಸಂಗ್ರಹ ಮಾಡಿ ವಂಚಿಸಿದ ಆರೋಪದ ಮೇರೆಗೆ ಜಿಲ್ಲಾ ಪಂಚಾಯತ ಅಧ್ಯಕ್ಷೆಯ ಪತಿ ಪ್ರಶಾಂತ ಐಹೊಳೆ ಅವರನ್ನು ಅಥಣಿ ಪೊಲೀಸರು ಶುಕ್ರವಾರ ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ಅಥಣಿ ಪಟ್ಟಣದ ಸಂಜಯ ಸಂಕಪಾಲಕರ ನೀಡಿದ ದೂರಿನ ಮೇರೆಗೆ ಪ್ರಶಾಂತ ಐಹೊಳೆ ವಿರುದ್ಧ ಐಪಿಸಿ ಸೆಕ್ಷನ್ 406, 420 ಹಾಗೂ 506 ಕಲಂ ಅಡಿ ಪ್ರಕರಣ ದಾಖಲಾಗಿತ್ತು.
ಆರೋಪಿ ಪ್ರಶಾಂತ ಐಹೊಳೆ ಮಹಾಲಕ್ಷ್ಮೀ ಎಸ್ಟೇಟ್ ಹೆಸರಿನಲ್ಲಿ ನಿವೇಶನ ಕೊಡುವುದಾಗಿ ಹೇಳಿ 2 ಲಕ್ಷ ರೂ. ಪಡೆದುಕೊಂಡಿದ್ದ. ಆದರೆ ನಿವೇಶನ ಕೊಡದೇ ತಮಗೆ ವಂಚಿಸಿದ್ದಾರೆ ಎಂದು ದೂರುದಾರ ಸಂಜಯ ಸಂಕಪಾಲಕರ ದೂರಿನಲ್ಲಿ ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಅಥಣಿ ಪೊಲೀಸರು ದಾಖಲೆಗಳ ಆಧಾರದ ಮೇಲೆ ಪ್ರಶಾಂತ ಐಹೊಳೆ ಬಂಧಿಸಿದ್ದು, ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ ಎಂದು ಎಸ್ಪಿ ಸುಧೀರಕುಮಾರ ರೆಡ್ಡಿ ತಿಳಿಸಿದ್ದಾರೆ. ಅಥಣಿಯಲ್ಲಿ ಶ್ರೀ ಮಹಾಲಕ್ಷ್ಮೀ ಟ್ರೇಡ್ ಡಿಸ್ಟ್ರಿಬ್ಯುಷನ್ ಪ್ರೈ.ಲಿ. ಎಂಬ ಕಂಪನಿ ಹೆಸರಿನಲ್ಲಿ ಠೇವಣಿ ಇಟ್ಟುಕೊಂಡು ವಾಪಸ್ಸು ನೀಡದೇ ವಂಚನೆ ಮಾಡಿರುವ ಬಗ್ಗೆಯೂ ಮೇ 6ರಂದು ಪ್ರಶಾಂತ ಐಹೊಳೆ ಹಾಗೂ ಪತ್ನಿ ಜಿಲ್ಲಾ ಪಂಚಾಯತ ಅಧ್ಯಕ್ಷೆ ಆಶಾ ಐಹೊಳೆ ವಿರುದ್ಧ ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 2011ರಲ್ಲಿ 50 ಸಾವಿರ ರೂ. ಠೇವಣಿ ಇಟ್ಟುಕೊಂಡು ನಂತರ ಆ ಮೊತ್ತವನ್ನು ವಾಪಸು ನೀಡದೇ ಠೇವಣಿದಾರರಾದ ಕಾಗವಾಡ ತಾಲೂಕಿನ ಉಗಾರ ಬಿ.ಕೆ. ಗ್ರಾಮದ ಧರೆಪ್ಪ ಸತ್ಯಪ್ಪ ಕುಸನಾಳೆ ಹಾಗೂ ದಾದಾ ಧರೆಪ್ಪ ಕುಸನಾಳೆ ಅವರಿಗೆ ವಂಚಿಸಿರುವ ಬಗ್ಗೆ ದೂರು ದಾಖಲಾಗಿತ್ತು.
ಈ ವಿಭಾಗದಿಂದ ಇನ್ನಷ್ಟು
-
ಸವದತ್ತಿ: ಡಾ.ಬಿ.ಆರ್.ಅಂಬೇಡ್ಕರರು ಸಾಮಾಜಿಕ ಸಮಾನತೆ ನಿವಾರಣೆಗಾಗಿ ಹೋರಾಡಿದ ಮಹಾನ್ ಭಾರತೀಯ ನಾಯಕರಲ್ಲೊಬ್ಬರು. ಅವರ ಆದರ್ಶಗಳನ್ನು ಪ್ರತಿಯೊಬ್ಬರು ಜೀವನದಲ್ಲಿ...
-
ಬೈಲಹೊಂಗಲ: ಹಿರೇಬಾಗೇವಾಡಿ-ಸವದತ್ತಿ ಬೈಲಹೊಂಗಲ ಮಾರ್ಗವಾಗಿ ನಿರ್ಮಾಣಗೊಂಡ ನೂತನ ರಸ್ತೆಗೆ ಟೋಲ್ ಸಂಗ್ರಹ ಪ್ರಾರಂಭದ ವಿರುದ್ಧ ಬೀದಿಗಿಳಿದು ಹೋರಾಡಿದ ರೈತರ,...
-
ಬೈಲಹೊಂಗಲ: ಪಟ್ಟಣದ ಇಂದಿರಾ ನಗರದ ಸಿದ್ಧರ ಕಾಲೋನಿಯಲ್ಲಿರುವ ಅಲೆಮಾರಿ ಸುಡಗಾಡ ಸಿದ್ಧ ಸಮಾಜ ಬಾಂಧವರಿಗೆ ನಿವೇಶನ ಹಕ್ಕು ಪತ್ರ ಹಾಗೂ ಮೂಲಭೂತ ಸೌಕರ್ಯ ಕಲ್ಪಿಸಬೇಕು...
-
ಬೆಳಗಾವಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಅಂಗನವಾಡಿ ನೌಕರರ ಸಂಘದ ಕಾರ್ಯಕರ್ತರು ಗುರುವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಬೃಹತ್ ಪ್ರತಿಭಟನೆ...
-
ಬೆಳಗಾವಿ: ಈರುಳ್ಳಿ ದರ ಮುಗಿಲು ಮುಟ್ಟಿ ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ ನಗರದ ಹೊಟೇಲ್ ನಲ್ಲಿ ಬಿರ್ಯಾಣಿ ಜೊತೆಗೆ...
ಹೊಸ ಸೇರ್ಪಡೆ
-
ಕಾಂಗ್ರೆಸ್ಗೆ 5ಕ್ಕಿಂತ ಕಡಿಮೆ ಸ್ಥಾನ ಬಂದರೆ ಸಿದ್ದು ನಾಯಕತ್ವಕ್ಕೆ ಕುತ್ತು? ಉ.ಕ. ಭಾಗದಲ್ಲಿ ಬಿಜೆಪಿ ಹೆಚ್ಚು ಗೆಲ್ಲದಿದ್ದರೆ ಬಿಎಸ್ವೈಗೆ ವೈಯಕ್ತಿಕ ಹಿನ್ನಡೆ ಬೆಂಗಳೂರು:...
-
ಮಂಗಳೂರು: ಕರಾವಳಿ ರಕ್ಷಣಾ ಪಡೆಯನ್ನು ಸಜ್ಜುಗೊಳಿಸುವ ದೇಶದ ಮೊದಲ ತರಬೇತಿ ಅಕಾಡೆಮಿ ಮಂಗಳೂರಿನಲ್ಲಿ ಸ್ಥಾಪನೆಯಾಗಲಿದೆ. ಇದಕ್ಕಾಗಿ ಗ್ರಾಮಾಂತರ ಮಂಗಳೂರಿನ...
-
ಹೊಸದಿಲ್ಲಿ: ಒಂದು ದೇಶ, ಒಂದು ತೆರಿಗೆ ಶಿರೋನಾಮೆಯಲ್ಲಿ ಆರಂಭಗೊಂಡಿದ್ದ ಜಿಎಸ್ಟಿ ಸದ್ಯದಲ್ಲೇ ಗ್ರಾಹಕರಿಗೆ ಹೊರೆಯಾಗುವ ಸಾಧ್ಯತೆಗಳು ಗೋಚರಿಸಿವೆ. 2017ರ ಜುಲೈಯಲ್ಲಿ...
-
ಪು. ತಿ. ನರಸಿಂಹಾಚಾರ್, ಕೆ. ಎಸ್. ನರಸಿಂಹಸ್ವಾಮಿ, ಜಿ. ಎಸ್. ಶಿವರುದ್ರಪ್ಪ , ಎಂ. ಗೋಪಾಲಕೃಷ್ಣ ಅಡಿಗ ಮೊದಲಾದವರ ಪ್ರೇರಣೆಯಿಂದ, ತಮ್ಮದೇ ಆದ ಕಾವ್ಯಪಥವನ್ನು ರೂಪಿಸಿದ...
-
ಇತ್ತೀಚೆಗೆ ಮಹಿಳೆಯ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿವೆ. ಸರಣಿ ಅತ್ಯಾಚಾರಗಳು, ಕಿರುಕುಳಗಳು, ಕಳ್ಳತನ ಮೊದಲಾದ ಸಮಸ್ಯೆಗಳನ್ನು ಮಹಿಳೆಯರು ಎದುರಿಸುತ್ತಿ...