7 ತಾಸು ನಿರಂತರ ವಿದ್ಯುತ್ಗೆ ಆಗ್ರಹ
Team Udayavani, Aug 17, 2017, 2:10 PM IST
ಹಗರಿಬೊಮ್ಮನಹಳ್ಳಿ: ತಾಲೂಕಿನ ತಂಬ್ರಹಳ್ಳಿ ಹೋಬಳಿ ರೈತರ ಪಂಪ್ ಸೆಟ್ಗಳಿಗೆ ನಿರಂತರ 7 ತಾಸು ವಿದ್ಯುತ್ ವಿತರಣೆ ಮಾಡುವಂತೆ ಒತ್ತಾಯಿಸಿ ತಂಬ್ರಹಳ್ಳಿ ಹೋಬಳಿ ವ್ಯಾಪ್ತಿಯ ರೈತರು ಗ್ರಾಮದ ಜೆಸ್ಕಾಂ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.
ಬನ್ನಿಗೋಳ ಗ್ರಾಮದ ಮುಖಂಡ ಮೈನಳ್ಳಿ ಕೊಟ್ರೇಶ್ ಮಾತನಾಡಿ, ಈ ಹಿಂದೆ ರೈತರ ಪಂಪ್ಸೆಟ್ಗಳಿಗೆ ನೀಡುತ್ತಿದ್ದ ನಿರಂತರ 7 ತಾಸು ವಿದ್ಯುತ್ ಮುಂದುವರಿಸಬೇಕು. ಈಗ ನೀಡುತ್ತಿರುವ ಬೆಳಿಗ್ಗೆ 3 ತಾಸು ರಾತ್ರಿ 4 ತಾಸು ನೀಡುವುದರಿಂದ ರೈತರು ಬೆಳೆಗಳಿಗೆ ಸಮರ್ಪಕವಾಗಿ ನೀರು ಹಾಯಿಸಲು ಆಗುವುದಿಲ್ಲ. ಈಗಾಗಲೇ ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಅಳಿದುಳಿದ ಬೆಳೆಗಳನ್ನು ಪಂಪ್ಸೆಟ್ ನೀರಿನಿಂದ ರಕ್ಷಿಸಿಕೊಳ್ಳುವ ಅಗತ್ಯ ರೈತರಿಗಿದೆ. ಆದರೆ, ಪ್ರಸ್ತುತ ನೀಡಲಾಗುತ್ತಿರುವ ವಿದ್ಯುತ್ ಪ್ರಮಾಣದಿಂದ ಬೆಳೆಗಳಿಗೆ ನೀರು ಹರಿಸುವುದು ದುಸ್ಸಾಹಸವಾಗಿದೆ. ಕೂಡಲೇ ಸತತ 7 ತಾಸು ನಿರಂತರ ವಿದ್ಯುತ್ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಈ ಕುರಿತಂತೆ ಜೆಸ್ಕಾಂ ನಿರ್ಲಕ್ಷ ವಹಿಸಿದರೆ ಮೂರು ಪಟ್ಟಣಗಳಿಗೆ ನೀರೊದಗಿಸುತ್ತಿರುವ ಜಾಕ್ವೆಲ್ನ ವಿದ್ಯುತ್ ಮಾರ್ಗ ಕಡಿತಗೊಳಿಸಲಾಗುವುದು ಎಂದು ಎಚ್ಚರಿಸಿದರು.
ಜೆಸ್ಕಾಂ ಶಾಖಾಧಿ ಕಾರಿ ಮಂಜುನಾಥ ಮನವಿ ಸ್ವೀಕರಿಸಿ ಪ್ರತಿಕ್ರಿಯಿಸಿ, ತಂಬ್ರಹಳ್ಳಿ ಹೋಬಳಿ ರೈತರ ಪರಿಸ್ಥಿತಿಯನ್ನು ಇಲಾಖೆಯ ಇಇಯೊಂದಿಗೆ ದೂರವಾಣಿ ಮೂಲಕ ಚರ್ಚಿಸಿದರು. ಕೂಡಲೇ ನಿರಂತರ ವಿದ್ಯುತ್ ಕೊಡಿಸುವ ಭರವಸೆ ನೀಡಿದರು. ತಾಪಂ ಸದಸ್ಯ ಪಿ.ಕೊಟ್ರೇಶ್,
ಮುಖಂಡರಾದ ಮೂಲಿಮನಿ ರವಿಪ್ರಸಾದ್, ಪರ್ವತಪ್ಪ, ಆನಂದರೆಡ್ಡಿ, ಖಾಜಾವಲಿ, ಬಸವರೆಡ್ಡಿ, ಮೋಹನ್ರೆಡ್ಡಿ, ಆನೇಕಲ್ ಶಾಂತಪ್ಪ, ಅಕ್ಕಿ ಸಣ್ಣಕೊಟ್ರಪ್ಪ, ಯಂಕಾರೆಡ್ಡಿ, ಎಚ್.ವೆಂಕಪ್ಪ, ನಾಗರೆಡ್ಡಿ, ಎನ್.ದೊಡ್ಡಬಸಪ್ಪ, ಬಿ.ಮಂಜುನಾಥ, ಎ.ಬಸವರಾಜ, ರುದ್ರಪ್ಪ, ಬಿ.ಶಂಕ್ರಪ್ಪ,
ಎಸ್.ಕರಿಯಪ್ಪ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ
Bellary; ಕಾಂಗ್ರೆಸ್ ಪಕ್ಷದ ಚಿಹ್ನೆ ಚೊಂಬಿಗೆ ಬದಲಾಗಿದೆ: ಸುರೇಶ್ ಕುಮಾರ್ ವ್ಯಂಗ್ಯ
BJP ಶ್ರೀರಾಮುಲುಗೆ ಗೆಲುವು ಅನಿವಾರ್ಯ; ಕ್ಷೇತ್ರ ವಶಕ್ಕೆ ಕೈ ತವಕ
ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್
Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!
MUST WATCH
ಹೊಸ ಸೇರ್ಪಡೆ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು
Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ
Father; ಚಂದ್ರು ನಿರ್ಮಾಣದ ‘ಫಾದರ್’ ಚಿತ್ರಕ್ಕೆ ಮುಹೂರ್ತ
Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ