Ballari; ಗುರು-ಶಿಷ್ಯ ಪರಂಪರೆಗೆ ವೀರಣ್ಣ ಜ್ವಲಂತ ಸಾಕ್ಷಿ


Team Udayavani, Apr 10, 2024, 1:28 PM IST

Ballari; ಗುರು-ಶಿಷ್ಯ ಪರಂಪರೆಗೆ ವೀರಣ್ಣ ಜ್ವಲಂತ ಸಾಕ್ಷಿ

■ ಉದಯವಾಣಿ ಸಮಾಚಾರ
ಬಳ್ಳಾರಿ: ದೇಶ ವೀದೇಶಗಳಲ್ಲಿ ಬಳ್ಳಾರಿಯನ್ನು ಸುವಿಖ್ಯಾತಗೊಳಿಸಿದ್ದ ರಾಘವರ ಶಿಷ್ಯ ಜೋಳದರಾಶಿ ದೊಡ್ಡನಗೌಡರು, ಮತ್ತವರ ಶಿಷ್ಯ ಸಿಡಿಗಿನಮೊಳೆ ಚಂದ್ರಯ್ಯ, ಇವರ ಶಿಷ್ಯರೇ ಬೆಳಗಲ್ಲು ವೀರಣ್ಣನವರಾಗಿದ್ದು, ಇಂದಿನ ಆಧುನಿಕ ಯುಗದಲ್ಲಿ ಗುರು-ಶಿಷ್ಯ ಪರಂಪರೆಗೆ ಜೀವಂತ ಸಾಕ್ಷಿಯಾಗಿದ್ದರು ಎಂದು ಕರ್ನಾಟಕ ಬಯಲಾಟ ಅಕಾಡೆಮಿ ಅಧ್ಯಕ್ಷ ಡಾ| ಕೆ.ಆರ್‌
.ದುರ್ಗಾದಾಸ ಹೇಳಿದರು.

ನಗರದ ರಾಘವಕಲಾ ಮಂದಿರದಲ್ಲಿ ಹಮ್ಮಿಕೊಂಡಿದ್ದ ಸ್ಮರಣಾಂಜಲಿ ಕಾರ್ಯಕ್ರಮದಲ್ಲಿ ಬೆಳಗಲ್ಲು ವೀರಣ್ಣ “ಆತ್ಮಕಥನ ನಾಟಕದ ಗೊಂಬೆ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಅವರು, ನಾಟಕ ರಂಗದಲ್ಲಿ ಸಾಕಷ್ಟು ಪಡಿಪಾಟಲು ಪಟ್ಟಿದ್ದ ಬೆಳಗಲ್ಲು ವೀರಣ್ಣನವರು, ಮನೆತನದ ಕುಲಕಸುಬು “ತೊಗಲುಗೊಂಬೆ’ ಆಟವನ್ನು ಕೈಗೆತ್ತಿಕೊಂಡು ಅದರಲ್ಲೇ ದೇಶ ವಿದೇಶಗಳಲ್ಲಿ ಪ್ರಖ್ಯಾತರಾದರು. ಅತ್ಯಂತ ಸೌಮ್ಯ, ವಿನಯವಂತರಾಗಿದ್ದರೂ ಅನ್ಯಾಯವನ್ನು ವಿರೋಧಿ ಸುವ ಮನಸ್ಥಿತಿ ಅವರಿಗಿತ್ತು ಎಂದರು.

ಪ್ರಾಧ್ಯಾಪಕ ಡಾ|ರಾಜಪ್ಪ ದಳವಾಯಿ ಮಾತನಾಡಿ, ನಾಟಕ ರಂಗದಲ್ಲೂ ಸೈ ಎನಿಸಿಕೊಂಡಿದ್ದ ಬೆಳಗಲ್ಲು ವೀರಣ್ಣನವರು,
ನಂತರ ತೊಗಲುಗೊಂಬೆ ಆಟಕ್ಕೆ ಬಂದಿದ್ದರ ನೆನಪಿನಲಿ ನಾನೇ ನಿರೂಪಿಸಿದ ಅವರ ಆತ್ಮಕಥನಕ್ಕೆ “ನಾಟಕ ಗೊಂಬೆ’ ಶೀರ್ಷಿಕೆ ನೀಡಿದೆ ಎಂದು ಹೇಳಿದರು. ಬಳ್ಳಾರಿಯಲ್ಲಿರುವ ಅದ್ಭುತ ಕಲಾವಿದರ ಜೀವನ ಗಾಥೆಯನ್ನು ಸಾಹಿತಿ ಬರಹಗಾರರು ಅವರೊಂದಿಗೆ ಅನುಸಂಧಾನ ನಡೆಸಿ ಬರೆದು ಪ್ರಕಟಿಸಬೇಕು ಎಂದ ಅವರು, ಬೆಳಗಲ್ಲು ವೀರಣ್ಣ ಸ್ಮರಣೆ ಎಂದರೆ ರಕ್ತರಾತ್ರಿ,
ತೊಗಲುಗೊಂಬೆ ಆಟ, ರಂಗಗೀತೆ ಇದ್ದಾಗಲೇ ಅದು ನಿಜವಾದ ಸ್ಮರಣೆ ಎಂದು ಗುಣಗಾನ  ಮಾಡಿದರು.

ಕಾರ್ಯಕ್ರಮ ಉದ್ಘಾಟಿಸಿದ ಎಂಜಿನಿಯರ್‌ ಎಂ.ಜಿ.ಗೌಡ ಮಾತನಾಡಿ, ಬೆಳಗಲ್ಲು ವೀರಣ್ಣನವರು ಅದ್ಭುತ ಜೀವನೋತ್ಸಾಹಿ. ದೇಶ ವಿದೇಶಗಳಲ್ಲಿ ಪ್ರದರ್ಶನ ನೀಡಿ ಬಂದಾಗ ತಮ್ಮ ಅನುಭವಗಳನ್ನು ನಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದರು. ಇಂಡೋನೇಷಿಯಾ ಮುಸ್ಲಿಂ ರಾಷ್ಟ್ರ ವಾದರೂ ಅಲ್ಲಿಯ ರಾಮಾಯಣ ಅಭಿಮಾನ ಅವರ ಮನಸೂರೆಗೊಂಡಿತ್ತು ಎಂದು
ಹೇಳಿದರು.

ನಮ್ಮ ತಂದೆ ಹಾಗೂ ವೀರಣ್ಣನವರದು ಅವಿನಾಭಾವ ಸಂಬಂಧ. ಶಿವದುರಂಧರ ಬಯಲಾಟದಲ್ಲಿ ತಮ್ಮ ತಂದೆನೂ ಪಾತ್ರ
ಮಾಡಿದ್ದರು. ಅದರಲ್ಲಿ ವೀರಣ್ಣನವರದು ಸ್ತ್ರೀ ಪಾತ್ರ. ಒಮ್ಮೆ ವೀರಣ್ಣನವರು ನಮ್ಮ ಮನೆಗೇ ಬಂದು ತಂದೆಯವರನ್ನು ಸನ್ಮಾನಿಸಿದ್ದು ಅವರ ಹಿರಿಮೆಯ ಸದ್ಗುಣ ಎಂದು ಅಭಿಪ್ರಾಯಪಟ್ಟರು.

ಮೈಸೂರಿನ ರಂಗಕರ್ಮಿ ಬಿ.ಎಂ. ರಾಮಚಂದ್ರ ಮಾತನಾಡಿದರು. ಹೆಜ್ಜೆ ಗೆಜ್ಜೆ ಬಯಲಾಟ ಕಲಾ ಟ್ರಸ್ಟ್‌ ಕೊಡಮಾಡುತ್ತಿರುವ
“ನಾಡೋಜ ಬೆಳಗಲ್ಲು ವೀರಣ್ಣ’ ಪ್ರಥಮ ಪ್ರಶಸ್ತಿಯನ್ನು ತೊಗಲುಗೊಂಬೆ ಕಲಾವಿದ 91 ವರ್ಷದ “ನಾರಾಯಣಪ್ಪ ಕಾರಿಗನೂರು’ ಅವರಿಗೆ ನಟರಾಜ ವಿಗ್ರಹದೊಂದಿಗೆ 11 ಸಾವಿರ ರೂ.ಚೆಕ್‌ ನೀಡಿ ಗೌರವಿಸಲಾಯಿತು. ಬಳಿಕ ಡಾ|ರಾಜಪ್ಪ ದಳವಾಯಿ, ಬಯಲಾಟ ಅಕಾಡೆಮಿ ಅಧ್ಯಕ್ಷ ಡಾ|ಕೆ.ಆರ್‌. ದುರ್ಗಾದಾಸ  ಅವರನ್ನು ಗೌರವಿಸಲಾಯಿತು.

ಕೆ.ವಸಂತಕುಮಾರ, ಕವಿತಾ ಗಂಗೂರ ಗೀತ ನಮನ ಕಾರ್ಯಕ್ರಮ ಪ್ರಸ್ತುತಪಡಿಸಿದರು. ಕ್ಯಾಷಿಯೋ ತಿಪ್ಪೇಸ್ವಾಮಿ ಹಾಗೂ ತಬಲಾ ವಿರುಪಾಕ್ಷಪ್ಪ ಸಾಥ್‌ ನೀಡಿದರು. ರಂಗತೋರಣ ಅಧ್ಯಕ್ಷ ಪ್ರೊ|ಆರ್‌ .ಭೀಮಸೇನ, ಕಾರ್ಯದರ್ಶಿ ಪ್ರಭುದೇವ ಕಪ್ಪಗಲ್ಲು, ಟ್ರಸ್ಟ್‌ ಅಧ್ಯಕ್ಷ ಎಚ್‌.ತಿಪ್ಪೇಸ್ವಾಮಿ ಇದ್ದರು. ಉಪನ್ಯಾಸಕ ಎ.ಎಂ.ಪಿ. ವೀರೇಶಸ್ವಾಮಿ, ಬೆಳಗಲ್ಲು ವೀರಣ್ಣರ ಕುರಿತು ಬರೆದ ಕವನ ವಾಚಿಸಿದರು. ಎಚ್‌. ತಿಪ್ಪೇಸ್ವಾಮಿ ನಿರೂಪಿಸಿದರು. ಬಯಲಾಟ ಕಲಾವಿದ ಸುಬ್ಬಣ್ಣ ವಂದಿಸಿದರು. ಶ್ರೀರಾಮಾಂಜನೇಯ
ತೊಗಲುಗೊಂಬೆ ಟ್ರಸ್ಟ್‌ನಿಂದ “ಮಹಾತ್ಮಾಗಾಂಧಿ ’ ತೊಗಲುಗೊಂಬೆ ಪ್ರದರ್ಶನ ನಡೆಯಿತು.

ಟಾಪ್ ನ್ಯೂಸ್

1-qeqewewq

Vijayapura; 33 ಲಕ್ಷ ರೂ. ಮೌಲ್ಯದ ಮಾದಕ ವಸ್ತು, ವಾಹನ ವಶ : ದೆಹಲಿ ಮೂಲದ ವ್ಯಕ್ತಿ ಬಂಧನ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

1-qwqweqwe

Navalgund:ರಾಜಾಹುಲಿ ಭರ್ಜರಿ ರೋಡ್ ಶೋ: ಜೋಶಿ ಗೆಲುವು ನಿಶ್ಚಿತ ಎಂದ ಮಾಜಿ ಸಿಎಂ

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ

s suresh kumar

Bellary; ಕಾಂಗ್ರೆಸ್ ಪಕ್ಷದ ಚಿಹ್ನೆ ಚೊಂಬಿಗೆ ಬದಲಾಗಿದೆ: ಸುರೇಶ್ ಕುಮಾರ್ ವ್ಯಂಗ್ಯ

SHriramulu (2)

BJP ಶ್ರೀರಾಮುಲುಗೆ ಗೆಲುವು ಅನಿವಾರ್ಯ; ಕ್ಷೇತ್ರ ವಶಕ್ಕೆ ಕೈ ತವಕ

ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್‌

ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್‌

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

police

Bidar; ಹಣ ಹಂಚುವ ದೂರು: ನಾಗಮಾರಪಳ್ಳಿ‌ ಮನೆಯಲ್ಲಿ ಪರಿಶೀಲನೆ

1-qeqewewq

Vijayapura; 33 ಲಕ್ಷ ರೂ. ಮೌಲ್ಯದ ಮಾದಕ ವಸ್ತು, ವಾಹನ ವಶ : ದೆಹಲಿ ಮೂಲದ ವ್ಯಕ್ತಿ ಬಂಧನ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

1-qwqweqwe

Navalgund:ರಾಜಾಹುಲಿ ಭರ್ಜರಿ ರೋಡ್ ಶೋ: ಜೋಶಿ ಗೆಲುವು ನಿಶ್ಚಿತ ಎಂದ ಮಾಜಿ ಸಿಎಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.