ಶುದ್ಧ ಕುಡಿಯುವ ನೀರಿನ ದರ ಹೆಚ್ಚಳಕ್ಕೆ ಆಕ್ರೋಶ
ಫಿಲ್ಟರ್ ವಾಟರ್ ಮೇಲೆ ಸರಕಾರದ ಕರಿ ನೆರಳು ಶುದ್ಧ ನೀರಿಗೆ ಟೆಂಡರ್ ಹೊಣೆ: ಆರೋಗ್ಯಕ್ಕಿಲ್ಲ ಮನ್ನಣೆ
Team Udayavani, Feb 14, 2020, 3:26 PM IST
ಹಗರಿಬೊಮ್ಮನಹಳ್ಳಿ: ಗ್ರಾಮೀಣ ಪ್ರದೇಶಗಳಲ್ಲಿ ಕೇವಲ 2ರೂ ನೀಡಿ 20ಲೀಟರ್ ನೀರು ಪಡೆಯುತ್ತಿದ್ದ ಜನರಿಗೆ ಇದೀಗ ಸರಕಾರ ನೀರಿನ ದರವನ್ನು 5 ರೂಗೆ ಏರಿಸುವ ಮೂಲಕ ಗದಾಪ್ರಹಾರ ಮಾಡಿದ್ದು ಇದು ಸಾರ್ವಜನಿಕರಿಗೆ ನುಂಗಲಾರದ ತುತ್ತಾಗಿದೆ. ತಾಲೂಕಿನ 23 ಗ್ರಾಪಂಗಳ 120 ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ ಈಗಾಗಲೇ 82 ಘಟಕಗಳು ಟೆಂಡರ್ದಾರರ ಪಾಲಾಗಿದ್ದು, ಗ್ರಾಮೀಣ ಪ್ರದೇಶಗಳ ಬಡ ಜನರ ಜೇಬಿಗೆ ಕತ್ತರಿ ಬಿದ್ದಿದೆ. ಸರಕಾರ ಕುಡಿಯುವ ನೀರಿನ ದರ ಹೆಚ್ಚಿಸುವ ಮೂಲಕ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.
ಹಿಂದೆ ಸರಕಾರ ಕಲುಷಿತ ನೀರಿನಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಬಾರದೆಂದು ನೀರಿನಲ್ಲಿರುವ ಫ್ಲೋರೈಡ್ ಹೋಗಲಾಡಿಸಲು ಶುದ್ಧ ಕುಡಿವ ನೀರಿನ ಘಟಕಗಳನ್ನು ಸ್ಥಾಪಿಸಿತ್ತು. ಘಟಕಗಳ ಹೊಣೆಯನ್ನು ಸ್ಥಳೀಯ ಗ್ರಾಪಂಗಳಿಗೆ ನಿರ್ವಹಣೆ ಹೊಣೆ ವಹಿಸಿ ಕೇವಲ 2 ರೂಗೆ 20 ಲೀಟರ್ ನೀಡಲಾಗುತ್ತಿತ್ತು.
ಬಿಜೆಪಿ ಸರಕಾರ ದಿಢೀರ್ನೆ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಮೂಲಕ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಟೆಂಡರ್ದಾರರ ಮೂಲಕ ನಡೆಸಲು ಅನುವು ಮಾಡಿದ್ದರಿಂದ ಸಾರ್ವಜನಿಕರಿಗೆ ರ್ಥಿಕ ಹೊಡೆತ ಬಿದ್ದಿದೆ.
ಈಗಾಗಲೇ ಕೆಲ ಶುದ್ಧ ಕುಡಿಯುವ ನೀರಿನ ಘಟಕಗಳು ದುರಸ್ತಿಯಾದರೂ ಇಲಾಖೆ ಸರಿಪಡಿಸುವ ಗೋಜಿಗೆ ಹೋಗದೆ ನನೆಗುದಿಗೆ ಬಿದ್ದಿವೆ. ಸರಕಾರಗಳ ಆಡಳಿತದ ತಕಧಿಮಿತಕ್ಕೆ ಅಧಿಕಾರಿಗಳು ರೋಸಿ ಹೋಗಿದ್ದು ಜನರಿಂದ ತಿರಸ್ಕಾರಕ್ಕೆ ಒಳಗಾಗುತ್ತಿರುವುದು ದಿನೆದಿನೇ ಹೆಚ್ಚುತ್ತಿದೆ. ನೀರಿನ ದರ ದಿಢೀರ್ ಹೆಚ್ಚಳಕ್ಕೆ ಎಲ್ಲೆಡೆ ವ್ಯಾಪಕ ವಿರೋಧವಾಗುತ್ತಿರುವುದನ್ನು ಸರಕಾರ ಗಮನಿಸಿ ಮೊದಲಿನಂತೆ 2ರೂ. ದರದಲ್ಲಿ ಶುದ್ಧ ನೀರು ಕೊಡಬೇಕೆಂದು ಸಾರ್ವಜನಿಕರ ಒತ್ತಾಯವಾಗಿದೆ.
ಹಿಂದಿನ ಸರಕಾರದವರು ನಮ್ಮ ನೀರಿನಲ್ಲಿ ಫ್ಲೋರೈಡ್ ಇದೆ ಎಂದು ಶುದ್ಧ ಕುಡಿಯುವ ನೀರನ್ನು ಕೇವಲ 2ರೂಗೆ ಕೊಟ್ಟಿದ್ರು. ಈಗ ಬಿಜೆಪಿಯವರು ಬಂದು ನಮ್ಮ ಕುಡಿಯುವ ನೀರು ಕಿತ್ತುಕೊಳ್ಳಾಕತ್ಯಾರ. 5ರೂ. ಕೊಟ್ಟು ನೀರು ಕುಡಿಯೋದು ಕಷ್ಟ ಆಗತೈತಿ.
ಪ್ರಭು ಅಡವಿ ಆನಂದೇನವಹಳ್ಳಿ
ಕಾಂಗ್ರೆಸ್ ಸರಕಾರ ಹಿಂದೆ ಶುದ್ಧ ಕುಡಿಯುವ ನೀರನ್ನು ಕೇವಲ 2 ರೂಗೆ ಕೊಡುತ್ತಿದ್ದರು. ಇನ್ನೊಂದೆಡೆ ಶುದ್ಧ ನೀರನ್ನು ದುಬಾರಿ ಮಾಡುವ ಮೂಲಕ ಜನಸಾಮಾನ್ಯರಿಗೆ ಹೊರೆ ಮಾಡಿದೆ. ಶುದ್ಧ ನೀರಿನ ಘಟಕದ ಜವಾಬ್ದಾರಿಯನ್ನು ಗ್ರಾಪಂನಿಂದ ಕಿತ್ತುಕೊಂಡು ಟೆಂಡರ್ದಾರರಿಗೆ ವಹಿಸಿರುವುದು ದುರಂತದ ಸಂಗತಿ. ಪ್ರಾದೇಶಿಕ ಪಕ್ಷದ ನೇತೃತ್ವ ವಹಿಸಿಕೊಂಡಿರುವ ದೆಹಲಿ ಸರಕಾರ ಪ್ರತಿಯೊಬ್ಬರಿಗೂ ಉಚಿತ ನೀರು ಕೊಡುತ್ತಿರುವುದನ್ನು ಬಿಜೆಪಿಯವರು ಅರಿಯಬೇಕಿದೆ. ರಾಜ್ಯದಲ್ಲಿ, ಕೇಂದ್ರದಲ್ಲಿ ಬಿಜೆಪಿ ಸರಕಾರವಿದ್ದರೂ ಜನಪರ ಆಡಳಿತ ನೀಡುವಲ್ಲಿ ಎಡವುತ್ತಿವೆ.
ಗೌರಜ್ಜನವರ ಗಿರೀಶ್,
ಗ್ರಾಪಂ ಸದಸ್ಯ ತಂಬ್ರಹ
ಸಾಕಷ್ಟು ಶ್ರಮಪಟ್ಟು ಕ್ಷೇತ್ರದಲ್ಲಿ 140 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನಿರ್ಮಿಸಲಾಗಿದೆ. ಸರಕಾರ ಟೆಂಡರ್ದಾರರ ಮೂಲಕ ಶುದ್ಧ ಕುಡಿಯುವ ನೀರಿನ ದರ ಹೆಚ್ಚಳ ಮಾಡಿದರೆ ಜನಸಾಮಾನ್ಯರಿಗೆ ನಿಲುಕದಂತಾಗಿ ಘಟಕಗಳು ನನೆಗುದಿಗೆ ಬೀಳುತ್ತವೆ. ಜಿಲ್ಲಾ ಧಿಕಾರಿ, ಸಿಇಒ ಜತೆ ಚರ್ಚಿಸಿ ಕ್ಷೇತ್ರದಲ್ಲಿ ಮೊದಲಿನಂತೆ 2ರೂ.ಗೆ 20 ಲೀಟರ್ ನೀರು ಕೊಡುವಂತೆ ಕ್ರಮ ವಹಿಸಲಾಗುವುದು.
ಎಸ್.ಭೀಮಾನಾಯ್ಕ,
ಶಾಸಕರು, ಹಗರಿಬೊಮ್ಮನಹಳ್ಳಿ.
ಸುರೇಶ ಯಳಕಪ್ಪನವರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ
Bellary; ಕಾಂಗ್ರೆಸ್ ಪಕ್ಷದ ಚಿಹ್ನೆ ಚೊಂಬಿಗೆ ಬದಲಾಗಿದೆ: ಸುರೇಶ್ ಕುಮಾರ್ ವ್ಯಂಗ್ಯ
BJP ಶ್ರೀರಾಮುಲುಗೆ ಗೆಲುವು ಅನಿವಾರ್ಯ; ಕ್ಷೇತ್ರ ವಶಕ್ಕೆ ಕೈ ತವಕ
ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್
Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!
MUST WATCH
ಹೊಸ ಸೇರ್ಪಡೆ
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ