ಹಂಪಿ ವಿರೂಪಾಕ್ಷೇಶ್ವರಗೆರೇಷ್ಮೆ ನೂಲಿನ ಅಲಂಕಾರ
Team Udayavani, Aug 27, 2018, 5:48 PM IST
ಹೊಸಪೇಟೆ: ನೂಲು ಹುಣ್ಣಿಮೆ ನಿಮಿತ್ತ ಐತಿಹಾಸಿಕ ಹಂಪಿಯ ಶ್ರೀ ವಿರೂಪಾಕ್ಷೇಶ್ವರ ಸ್ವಾಮಿ ಪ್ರತಿಮೆಗೆ ಭಾನುವಾರ ರೇಷ್ಮೆ ನೂಲಿನ ಅಲಂಕಾರ ಮಾಡಿ ವಿಶೇಷ ಪೂಜೆ ನೆರವೇರಿಸಲಾಯಿತು.
ಹಂಪಿ ವಿದ್ಯಾರಣ್ಯ ಪೀಠದ ಪೀಠಾಧಿಪತಿ ಶ್ರೀ ವಿದ್ಯಾರಣ್ಯ ಭಾರತಿ ಶ್ರೀಗಳು, ಶ್ರೀ ವಿರೂಪಾಕ್ಷೇಶ್ವರ ಸ್ವಾಮಿ ವಿಗ್ರಹಕ್ಕೆ ಅಭಿಷೇಕ ನಡೆಸಿ ನಂತರ ರೇಷ್ಮೆ ನೂಲಿನ ಅಲಂಕಾರ ಮಾಡಿ ವಿಶೇಷ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ಆರ್ಚಕರಿಂದ ಉಪಾಕರ್ಮ ಹೋಮ ನೆರವೇರಿತು. ಪ್ರಧಾನ ಅರ್ಚಕರಾದ ಜೆ.ಎಸ್. ಶ್ರೀನಾಥ ಶರ್ಮಾ, ಮಂಜುನಾಥ, ಪಿ.ಶ್ರೀನಿವಾಸ ಶರ್ಮಾ ಹಾಗೂ ಮುರುಳಿಧರ ಶಾಸ್ತ್ರೀಯವರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಸಂಜೆ ದೇವಾಲಯದ ಪ್ರಾಂಗಣದಲ್ಲಿ ರಜತ ನಂದಿ ವಾಹನ ಉತ್ಸವ ನಡೆಯಿತು.
ನೂಲು ಹುಣ್ಣಿಮೆ ಪ್ರಯುಕ್ತ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಹಂಪಿಗೆ ಭೇಟಿ ನೀಡಿ ಶ್ರೀ ವಿರೂಪಾಕ್ಷೇಶ್ವರ ಸ್ವಾಮಿ ಹಾಗೂ ಪಂಪಾಂಬಿಕೆ ದೇವಿ ದರ್ಶನ ಪಡೆದು ಹೂವು, ಹಣ್ಣು ಹಾಗೂ ಕಾಣಿಕೆ ಸಲ್ಲಿಸಿದರು.
ವಿರೂಪಾಕ್ಷನಿಗೆ ಐದು ದಿನಗಳ ಕಾಲ ರೇಷ್ಮೆ ನೂಲಿನ ಅಲಂಕಾರ ಮಾಡಲಾಗುತ್ತದೆ. ನಂತರ ದೇವರಿಗೆ ಸಮರ್ಪಿಸಲಾಗಿದ್ದ ರೇಷ್ಮೆ ನೂಲನ್ನು ಭಕ್ತರಿಗೆ ವಿತರಿಸಲಾಗುತ್ತದೆ. ಪ್ರಸಾದ ರೂಪದಲ್ಲಿ ಇದನ್ನು ಸ್ವೀಕರಿಸುವ ಭಕ್ತರು ದಾರಗಳನ್ನು ಧರಿಸುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ
Bellary; ಕಾಂಗ್ರೆಸ್ ಪಕ್ಷದ ಚಿಹ್ನೆ ಚೊಂಬಿಗೆ ಬದಲಾಗಿದೆ: ಸುರೇಶ್ ಕುಮಾರ್ ವ್ಯಂಗ್ಯ
BJP ಶ್ರೀರಾಮುಲುಗೆ ಗೆಲುವು ಅನಿವಾರ್ಯ; ಕ್ಷೇತ್ರ ವಶಕ್ಕೆ ಕೈ ತವಕ
ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್
Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!